
ತುಮಕೂರು:ಖಾಸಗಿ ಅನುದಾನರಹಿತ ಶಾಲೆಗಳ ಸಮಸ್ಯೆ ನಿವಾರಣೆಗೆ ಸರ್ಕಾರಗಳು ಸರಿಯಾದ ಪ್ರಯತ್ನ ಮಾಡಲಿಲ್ಲ. ಅವೈಜ್ಞಾನಿಕ ಕಾನೂನು, ನಿಯಮಗಳ ಮೂಲಕ ಸಮಸ್ಯೆಗಳನ್ನು ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟದರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಈ ಬಾರಿಯಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತ್ರಅಭ್ಯರ್ಥಿಯಾಗಿತಾವುಸ್ಪರ್ಧೆ ಮಾಡುವುದಾಗಿ ಇಂಗಿತವ್ಯಕ್ತಪಡಿಸಿ, ಶಿಕ್ಷಣ ಕೇತ್ರದಿಂದವಿಧಾನ ಪರಿಷತ್ತಿಗೆಆಯ್ಕೆಯಾದಯಾರೊಬ್ಬರೂ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿಲ್ಲ. ಈ ಕಾರಣದಿಂದಒಕ್ಕೂಟದ ಪ್ರತಿನಿಧಿಯಾಗಿತಾವುಚುನವಣೆಗೆಸ್ಪರ್ಧಿಸಲುಒಕ್ಕೂಟದ ಸಭೆಯಲ್ಲಿಒಮ್ಮತದಿಂದತೀರ್ಮಾನ ಮಾಡಲಾಗಿದೆಎಂದು ಹೇಳಿದರು.
ಹಲವು ವರ್ಷಗಳಿಂದ ಖಾಸಗಿ ಶಾಲೆ ಶಿಕ್ಷಕರು, ಆಡಳಿತ ಮಂಡಳಿಗಳು ನೋವು ಉಂಡಿವೆ. ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಯಾವ ವಿಧಾನಪರಿಷತ್ ಸದಸ್ಯರು ಸ್ಪಂದಿಸಲಿಲ್ಲ, ಕೋವಿಡ್ ಸಂಕಷ್ಟ ಕಾಲದಲ್ಲಿಟೀಚರ್ಸ್ ವೆಲ್ಫೇರ್ ಫಂಡ್ ಬಳಸಿ ಕಷ್ಟಕ್ಕೆ ನೆರವಾಗಿರಿಎಂದುಒಕ್ಕೂಟದಿಂದ ಮನವಿ ಮಾಡಿದರೂಅದರಲ್ಲಿ ಕೇವಲ ಬಿಡಿಗಾಸು ಬಳಸಲಾಯಿತು. ನಮ್ಮ ವಿವಿಧ ಸಮಸ್ಯೆಗಳ ಬಗ್ಗೆ ಕಲಾಪದಲ್ಲಿಚರ್ಚೆ ಮಾಡಲು ಮನವಿ ಮಾಡಿದರೂ ವಿಧಾÀನಪರಿಷತ್ ಸದಸ್ಯರು ನಿರ್ಲಕ್ಷ ಮಾಡಿದರು.ಇವರು ನಮ್ಮ ಸಮಸ್ಯೆಗೆ ಸ್ಪಂದಿಸುವುದಿಲ್ಲ, ನಮ್ಮ ನೋವಿನ ಧ್ವನಿಯಾಗಲು ನಮ್ಮ ಪ್ರತಿನಿಧಿ ಇರಬೇಕು ಎಂಬ ಕಾರಣಕ್ಕೆ ನಾನು ಪಕ್ಷೇತ್ರಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆಎಂದು ಹೇಳಿದರು.
ಇಷ್ಟು ವರ್ಷಗಳಿಂದರಾಜ್ಯದಲ್ಲಿ ಸರಿಯಾದಶಿಕ್ಷಣ ನೀತಿಜಾರಿಯಾಗಲಿಲ್ಲ, ಬಜೆಟ್ನಲ್ಲಿ ಶಿಕ್ಷಣ ಮತ್ತುಆರೋಗ್ಯಕ್ಷೇತ್ರಕ್ಕೆಆದ್ಯತೆಎಂದು ಹೇಳುವ ಸರ್ಕಾರಗಳು ಶಿಕ್ಷಣಕ್ಕೆ ಅಂತಹ ಮಹತ್ವಕೊಡುವಲ್ಲಿ ವಿಫಲವಾಗಿವೆ. ಶಿಕ್ಷಣದ ಮಹತ್ವ ಹಾಗೂಚಿಂತನೆಯಕಾಳಜಿ ಇಲ್ಲದವರಿಂದಇಂದು ಶಿಕ್ಷಣ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಲೋಕೇಶ್ ತಾಳಿಕಟ್ಟೆ ಹೇಳಿದರು.
ತಾವು ಶಿಕ್ಷಕನಾಗಿ, ಶಿಕ್ಷಣ ಸಂಸ್ಥೆ ಕಟ್ಟಿಅದರ ಕಷ್ಟಗಳನ್ನು ಅನುಭವಿಸುತ್ತಿರುವುದರಿಂದ ಈ ಕ್ಷೇತ್ರದ ಪೂರ್ಣ ಸಮಸ್ಯೆಯಅರಿವಿದೆಎಂದು ಹೇಳಿದರು.
ರುಪ್ಸಾದರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಉಮಾಶಂಕರ್, ಉಮಾಪತಯ್ಯ, ಮುಖಂಡರಾದ ಚಂದ್ರಕಾಂತಭಂಡಾರಿ, ಗೋವಿಂದರಾಜು ಇತರರು ಭಾಗವಹಿಸಿದ್ದರು.