ಪ್ರತಿಭೆ-ಕೌಶಲ್ಯ ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತವಾದುದಲ್ಲ-ನಾಹೀದಾ ಜಮ್ ಜಮ್

ತುಮಕೂರು : ಪ್ರತಿಭೆ ಮತ್ತು ಕೌಶಲ್ಯ ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತವಾದುದಲ್ಲ. ಅದನ್ನು ನಮಗೆ ಪ್ರೇರಣೆಯಾಗಿ ತೋರಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್ ರವರು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹೀದಾ ಜಮ್ ಜಮ್ ಅವರು ಹೇಳಿದರು.

  ಕನ್ನಡ ಮತ್ತು ಸಂಸ್ಕøತಿ ಇಲಾಖೆ, ತುಮಕೂರು ವಿಶ್ವ ವಿದ್ಯಾನಿಲಯ, ಡಾ:ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ, ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ “ಭಾರತರತ್ನ ಡಾ: ಬಿ.ಆರ್.ಅಂಬೇಡ್ಕರ್ ಓದು” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಅಂಬೇಡ್ಕರ್ ರವರ ಸಂವಿಧಾನದ ಕಾರಣಕ್ಕಾಗಿಯೇ ಸ್ವತಂತ್ರ ನಂತರದ ಭಾರತವು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಾಗಾಗಿ ಅಂಬೇಡ್ಕರ್ ರವರ ನೈಜ ಆಶಯ, ಕಾನೂನುಗಳನ್ನು ಅನುμÁ್ಠನ ಮಾಡಲು ಇಂದಿನ ಯುವಜನರು ಇದನ್ನು ನೈತಿಕ ಮಾರ್ಗ ಎಂದು ತಿಳಿದು ಸಂವಿಧಾನದ ರಕ್ಷಣೆಗೆ ಸನ್ನದ್ಧರಾಗಿರಬೇಕು ಎಂದು ತಿಳಿಸಿದರು.

 ಇಂದಿನ ಯುವಕರಿಗೆ ಅವಕಾಶಗಳು ವಿಪುಲವಾಗಿದ್ದು, ಅವುಗಳನ್ನು ಬಳಸಿಕೊಳ್ಳುವಲ್ಲಿ ಸದಾ ಜಾಗ್ರತೆಯಿಂದ ಕ್ರಿಯಾಶೀಲರಾಗಬೇಕಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಪರಿಪೂರ್ಣವಾಗಿ ಅರ್ಥವಾಗಬೇಕಾದರೆ ರೆಡ್ ಕಾರ್ ಥಿಯರಿಯಂತಹ ಉನ್ನತ ಮಟ್ಟದ ಜ್ಞಾನದ ಅವಶ್ಯಕತೆ ಇರುತ್ತದೆ ಎಂದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗುಬ್ಬಿ ತಾಲ್ಲೂಕಿನ ದಂಡಾಧಿಕಾರಿಗಳಾದ ಆರತಿ ಬಿ. ಅವರು ಮಾತನಾಡಿ, ಅಂಬೇಡ್ಕರ್ ರವರ ಶ್ರಮದ ಫಲವಾಗಿ ಈ ದೇಶದ ಶೋಷಿತರಲ್ಲಿ ಸಾಕ್ಷರತೆಯ ಸಂಖ್ಯೆ ಹೆಚ್ಚಾಗಿದೆ. ಡಾ: ಬಿ.ಆರ್.ಅಂಬೇಡ್ಕರ್ ರವರ ಪುಸ್ತಕ ಮತ್ತು ಜ್ಞಾನ ದಾಹದ ಕಾತುರತೆ ಇಂದಿನ ಯುವಕರಿಗೆ ಆದರ್ಶವಾಗಬೇಕಿದೆ. ಡಾ: ಬಿ.ಆರ್.ಅಂಬೇಡ್ಕರ್ ರವರ ಕೊಡುಗೆಗಳು ಕೇವಲ ಸಂವಿಧಾನಕ್ಕೆ ಮಾತ್ರ ಸೀಮಿತವಾಗಿರದೇ ಆರ್ಥಿಕ ತತ್ವಜ್ಞಾನ, ಭಾμÁ ಜ್ಞಾನ, ರಾಜಕೀಯ ಇನ್ನೂ ಹಲವಾರು ಕ್ಷೇತ್ರಗಳಿಗೆ ವಿಪುಲವಾದ ಚಿಂತನೆಗಳನ್ನು ನೀಡಿ ನವ ಭಾರತವನ್ನು ನಿರ್ಮಾಣ ಮಾಡಲು ಭದ್ರಬುನಾದಿ ಹಾಕಿದ್ದಾರೆ. ಅನಗತ್ಯವಾಗಿ ಸಂವಿಧಾನವನ್ನು ವಿಮರ್ಶಿಸದೇ ಜಗತ್ತಿನಲ್ಲಿಯೇ ಶ್ರೇಷ್ಠವಾದ ಮಾನ್ಯತೆ ಪಡೆದ ಸಂವಿಧಾನದ ನೈಜ ಆಶಯಗಳನ್ನು ಅನುμÁ್ಠನ ಮಾಡಲು ಭಾರತೀಯರೆಲ್ಲರೂ ಶ್ರಮಿಸಬೇಕು ಎಂದರು.

ಕಲಾಶ್ರೀ ಡಾ: ಲಕ್ಷ್ಮಣ್ ದಾಸ್, ತುಮಕೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ: ಜ್ಯೋತಿ, ರಾಜ್ಯಶಾಸ್ತ್ರದ ಮುಖ್ಯಸ್ಥ ಡಾ: ಮನೋಹರ್ ಬಾಬು, ಪ್ರಾಂಶುಪಾಲರಾದ ಡಾ: ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕವಿಗಳು ಹಾಗೂ ಪ್ರಾಧ್ಯಾಪಕ ಡಾ: ಓ. ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳಾದ ಸುರೇಶ್ ಕುಮಾರ್ ಡಿ.ವಿ., ತುಮಕೂರು ವಿಶ್ವ ವಿದ್ಯಾನಿಲಯದ ಸಂಶೋಧನಾ ಸಹಾಯಕ ಡಾ: ಲಕ್ಷ್ಮೀರಂಗಯ್ಯ ಕೆ.ಎನ್. ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *