ತುಮಕೂರು : ಹಾಸ್ಯ ಭರಿತ ದೃಶ್ಯಗಳನ್ನು ನೋಡುವುದರ ಮೂಲಕ ನಿಮ್ಮ ಮನಸ್ಸಿನ ಉದ್ವೇಗವನ್ನು ದೂರ ಮಾಡಲು ಸಾಧ್ಯ. ನೀವೇ ನಿಮ್ಮ ಮನಸ್ಸಿನ…
Author: MYTHRI NEWS
ಬಾಲಕನೊಂದಿಗೆ ರಾಹುಲ್ ಪಾದಯಾತ್ರೆ ಮಧ್ಯೆ ರಸ್ತೆಯಲ್ಲಿಯೇ ಪುಶ್ ಅಫ್
ತುಮಕೂರು: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹಲವು ವೈರಲ್ ಫೋಟೋ ವಿಡಿಯೋಗಳಿಗೆ ಸಾಕ್ಷಿಯಾಗುತ್ತಿದೆ. ಅದೇ ರೀತಿ ಈಗ ರಾಹುಲ್…
ರಾಗಾ ಯಾತ್ರೆ ಕಲಾಕೃತಿಗಳ ಮೆರಗು ಸಿ.ಬಿ.ಶಶಿಧರ್ ನೇತೃತ್ವದಲ್ಲಿ ವಿನೂತನ ಪ್ರಯತ್ನ
ತುಮಕೂರು: ರಾಹುಲ್ ಗಾಂಧಿ ನೇತೃತ್ವದ ಐಕ್ಯತಾ ನಡಿಗೆ ಕಲ್ಪತರು ನಾಡಿನಲ್ಲಿ ಸಂಚರಿಸುತ್ತಿದ್ದು, ತಿಪಟೂರು ಕಾಂಗ್ರೆಸ್ ಮುಖಂಡ, ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ (ಟುಡಾ ಶಶಿಧರ್) ಯಾತ್ರೆಗೆ ಕಲಾಕೃತಿಗಳ ಅರ್ಥಪೂರ್ಣ ಮೆರಗು ನೀಡಿದ್ದಾರೆ. ಸಿ.ಬಿ.ಶಶಿಧರ್ ಬೆಂಗಳೂರಿನ ಬಿ.ಕಲ್ಚರ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಐಕ್ಯತಾ ಯಾತ್ರಾ ವಿಷಯಾಧಾರಿತ ಕಲಾಕೃತಿಗಳ ಪ್ರದರ್ಶನ ಗಮನ ಸೆಳೆದಿದೆ. ಸೋಮವಾರ ಹುಳಿಯಾರಿನ ಕೆಂಚಮ್ಮದೇವಸ್ಥಾನ ಕಟ್ಟೆಯಲ್ಲಿ ರಾಹುಲ್ ಗಾಂಧಿ ಈ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದರು. ಕಲಾಕೃತಿಗಳ ಪ್ರದರ್ಶನದ ಬಗ್ಗೆ ಮಾತನಾಡಿದ ಶಶಿಧರ್, ಕರ್ನಾಟಕವನ್ನು ಪ್ರವೇಶಿಸಿರುವ ಯಾತ್ರೆಗೆ ಸಾಂಸ್ಕೃತಿಕ ಪ್ರಜ್ಞೆಯ ನೆಲೆಯಲ್ಲಿ ಚಿತ್ರಕಲಾವಿದರು ಸ್ಪಂದಿಸುತ್ತಿರುವುದು ಹೆಮ್ಮೆಯ ವಿಷಯ. ಭಾರತ್ ಜೋಡೋ ಯಾತ್ರೆಯ ವಿಷಯದ ಮೇಲೆ ಚಿತ್ರಕಲಾವಿದರಿಂದ ಕಲಾಕೃತಿಗಳನ್ನು ರೂಪಿಸಿ ಅವುಗಳ ಪ್ರದರ್ಶನ ನಡೆಸುವುದು ನಮ್ಮ ಸಾಮಾಜೊ- ಧಾರ್ಮಿಕ ಜವಬ್ದಾರಿ ಎಂದು ಹೇಳಿದರು. ರಾಜಕೀಯ ಭಯೋತ್ಪಾದನೆಯು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿದೆ. ನಾಗರಿಕರು ಅಜೆಂಡಾಗಳು ಮತ್ತು ಪಿತೂರಿಗಳಿಗೆ ಬಲಿಯಾಗಿದ್ದಾರೆ. ಸಮುದಾಯಗಳನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ದೇಶವಾಸಿಗಳ ಮನಸ್ಸು ಮತ್ತು ಹೃದಯಗಳನ್ನು ಒಂದುಗೂಡಿಸುವುದು ಇಂದಿನ ಅಗತ್ಯವಾಗಿದೆ. ‘ಭಾರತ್ ಜೋಡೋ ಯಾತ್ರೆ’ ದೇಶಾದ್ಯಂತ ವ್ಯಾಪಕವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ, ಇದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು. ಇದೀಗ ರಾಜಕೀಯ, ಸಾಮಾಜಿಕ ಮತ್ತು ಮುಖ್ಯವಾಗಿ ಸಾಂಸ್ಕೃತಿಕ ಬದಲಾವಣೆಗಳು ನವಜಾಗರಣಕ್ಕೆ ಸಜ್ಜಾಗಬೇಕಿದೆ. ಈಗ ನಡೆಯುತ್ತಿರುವ “ಭಾರತ್ ಜೋಡೋ ಯಾತ್ರೆ” ನವಜಾಗರಣ ಯುಗಕ್ಕೆ ಉತ್ತಮ ಆರಂಭ ಒದಗಿಸಿದೆ. ಈ ಪ್ರಯತ್ನದಲ್ಲಿ ಈ ಒಂದು ಹೆಜ್ಜೆ “ದ ರಿನಾಯಸೆನ್ಸ್” ಮನಸುಗಳ ಬೆಸೆಯಲು ನಾಡಿನ ಚಿತ್ರಕಲಾವಿದರ ಸ್ಪಂದನೆ ಸಿಕ್ಕಿರುವುದು ಸಂತಸದ ವಿಷಯವೆಂದರು. ರಾಹುಲ್ ಗಾಂಧಿ ಮೂಲಕ ಈ ಪ್ರದರ್ಶನಕ್ಕೆ ಚಾಲನೆ ಸಿಕ್ಕಿರುವುದು ಸಾರ್ಥಕಭಾವ ಮೂಡಿಸಿದೆ. ಕಲಾಕೃತಿಗಳ ಪ್ರದರ್ಶನವನ್ನು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಆಯೋಜಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು.
ರಾಹುಲ್ ಜೊತೆ ಹೆಜ್ಜೆ ಹಾಕಿದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಸಾಥ್ ನೀಡಿದ ಮಾಜಿ ಶಾಸಕ ಡಾ.ರಫೀಕ್ಅಹ್ಮದ್
ತುಮಕೂರು : ಅಕ್ಟೋಬರ್ 8ರಂದು ಮಾಯಸಂದ್ರಕ್ಕೆ ಆಗಮಿಸಿದ ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರ ಜೊತೆ ಉಚ್ಛಾಟಿತ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್…
ಮೈತ್ರಿನ್ಯೂಸ್ ಪಡೆದು ಪೋಟೋ ತೆಗೆಸಿಕೊಂಡ ಕೇರಳ ಕಾಂಗ್ರೆಸ್ ಕಾರ್ಯಕರ್ತರು
ತುಮಕೂರು:ಕೇರಳದಿಂದ ಬುಲೆಟ್ ಬೈಕ್ನಲ್ಲಿ ಭಾರತ ಜೋಡೋ ಯಾತ್ರೆಯ ಜೊತೆಯಲ್ಲಿ ಆಗಮಿಸಿತ್ತಿರುವ ಇಬ್ಬರು ಗೆಳೆಯರು ಮೈತ್ರಿನ್ಯೂಸ್ನ ರಾಹುಲ್ಗಾಂಧಿಯವರು ಬಾಲಕನೊಬ್ಬನನ್ನು ತಬ್ಬಿಕೊಂಡಿರುವ ಆಕರ್ಷಕ ತಲೆಬರಹದ…
ಕಲ್ಪತರು ನಾಡಿನಲ್ಲಿ ಯಶಸ್ಸು ಕಂಡ ಭಾರತ ಜೋಡೋ ಯಾತ್ರೆ – Save Sparrow(Gubbi-135)Constituency ಎದ್ದು ಕಂಡ ಫಲಕ
ತುಮಕೂರು: ಕಲ್ಪತರು ನಾಡಿಗೆ ಆಗಮಿಸಿರುವ ಭಾರತ ಜೋಡೋ ಯಾತ್ರೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ರಾಹುಲ್ ಗಾಂಧಿ ಹೆಜ್ಜೆ ಹಾಕಿದ ದಾರಿಯ ಇಕ್ಕಲೆಗಳಲ್ಲಿ…
ಹಿಂಸಾಚಾರ, ದ್ವೇಷದಿಂದ ಮಾನಸಿಕವಾಗಿ ವಿಭಜನೆಯಾಗುತ್ತಿರುವ ಭಾರತವನ್ನು ಒಗ್ಗೂಡಿಸುವುದೇ ಭಾರತ ಜೋಡೋ ಯಾತ್ರೆಯ ಮುಖ್ಯ ಉದ್ದೇಶ, 2024 ರ ಚುನಾವಣೆ ಅಲ್ಲ: ರಾಹುಲ್ ಗಾಂಧಿ
ತುರುವೇಕೆರೆ: ‘ಭಾರತವನ್ನು ಒಂದು ಗೂಡಿಸುವುದು ಭಾರತ ಜೋಡೋ ಯಾತ್ರೆಯ ಪ್ರಮುಖ ಉದ್ದೇಶವೇ ಹೊರತು, 2024ರ ಚುನಾವಣೆ ನಮ್ಮ ಗುರಿಯಲ್ಲ. ಹಿಂಸಾಚಾರ, ದ್ವೇಷದಿಂದ…
ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಶೂ ಲೇಸ್ಗಳನ್ನು ಕಟ್ಟಿರುವ…
ಸಂಪತ್ತು ಲೂಟಿ ಮಾಡಿದ ಬಿಜೆಪಿ ವಿರುದ್ಧ ಹಾಗೂ ಯುವಕರ ಒಗ್ಗೂಡಿಸುವ ನಿಟ್ಟಿನಲ್ಲಿ ಈ ಭಾರತ್ ಜೋಡೋ ಯಾತ್ರೆ : ಜಿ.ಎಸ್.ಪ್ರಸನ್ನಕುಮಾರ್.*
ಗುಬ್ಬಿ: ಯುವಕರನ್ನು ಒಗ್ಗೂಡಿಸಿ ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟ ರಾಹುಲ್ ಗಾಂಧಿ ಅವರು ಪಕ್ಷಾತೀತ ಐಕ್ಯತಾ ಪಾದಯಾತ್ರೆಯನ್ನು ಬೃಹತ್…