ರಾಹುಲ್ ಗಾಂಧಿಗೆ ಅವಹೇಳನ ಉಡಪಿ ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯ

ತುಮಕೂರು : ನೀಟ್ ಹಗರಣ ಖಂಡಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರ ನಡೆ ಖಂಡನೀಯ. ಸರಕಾರ ಕೂಡಲೇ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವಿರೋಧಪಕ್ಷದ ನಾಯಕನಿಗೆ ಸಂವಿಧಾನದ ಅಡಿಯಲ್ಲಿ ಅದರದ್ದೇ ಘನತೆ, ಗೌರವವಿದೆ.ಅದನ್ನು ಮರೆತು, 1992ರಲ್ಲಿ ಬಾಬರಿ ಮಸೀದಿ ದ್ವಂಸ ಮಾಡಿದಂತೆ, ನಿಮ್ಮ ಕುಟುಂಬವನ್ನು ದ್ವಂಸ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿರುವುದು ಜನಪ್ರತಿನಿಧಿಯಾಗಿರುವ ಅವರಿಗೆ ಶೋಭೆ ತರುವಂತಹದ್ದಲ್ಲ. ಹಾಗಾಗಿ ಇಂದು ಅವರ ವಿರುದ್ದ ಕಾನೂನು ಕ್ರಮಕ್ಕೆ ಆಗಹಿಸಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಸರಕಾರ ಅವರ ವಿರುದ್ದ ದ್ವೇಷ ಭಾಷಣ ತಡೆ ಕಾಯ್ದೆ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನೆಹರು ಮನೆತನ ದೇಶಕ್ಕಾಗಿ ತಮ್ಮ ತನು. ಮನ, ಪ್ರಾಣ, ಆಸ್ತಿ ಪಾಸ್ತಿ ಎಲ್ಲವನ್ನು ಆರ್ಪಿಸಿದೆ. ಬಿಜೆಪಿಯವರ ರೀತಿ ಗಾಂಧಿಯನ್ನು ಕೊಂದ, ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟ ಕುಟುಂಬವಲ್ಲ. ಅಂತಹ ವ್ಯಕ್ತಿಗೆ ಕೊಲೆ ಬೆದರಿಕೆ ಹಾಕಿರುವುದು ಖಂಡನೀಯ.ದ್ವೇಷ ಭಾಷಣವನ್ನೇ ತಮ್ಮ ಪ್ರಚಾರದಲ್ಲಿ ಅಳವಡಿಸಿಕೊಂಡಿರುವ ಬಿಜೆಪಿಯ ನಾಯಕರು, ಈ ದೇಶದ ಸ್ವಾತಂತ್ರಕ್ಕೆ, ಅಭಿವೃದ್ದಿಗೆ ನಿಮ್ಮ ಕೊಡುಗೆ ಏನು ಎಂಬುದನ್ನು ಬಹಿರಂಗ ಪಡಿಸಬೇಕು ಎಂದರು.

ರಾಹುಲ್ ಗಾಂಧಿ ಅವರು ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಸಿದರು.ಇಂತಹ ನಾಯಕನನ್ನು ಹತ್ಯೆ ಮಾಡುವುದಾಗಿ ಬಹಿರಂಗ ಹೇಳಿಕೆ ನೀಡುವ ಮಟ್ಟಕ್ಕೆ ಬಿಜೆಪಿಯ ದ್ವೇಷ ಬೆಳೆದಿದೆ.ಇದಕ್ಕೆ ಕೇಂದ್ರ ಸರಕಾರದ ಕುಮ್ಮಕ್ಕು ಇದೆ ಎಂಬುದಕ್ಕೆ ಯಾವುದೇ ಸಾಕ್ಷಿ ಬೇಕಿಲ್ಲ.ಇಲ್ಲದಿದ್ದರೆ ಇಷ್ಟು ಹೊತ್ತಿಗೆ ತಮ್ಮ ಶಾಸಕರ ವಿರುದ್ದ ಕ್ರಮ ಕೈಗೊಳ್ಳುತ್ತಿದ್ದರು. ವಿಪರ್ಯಾಸ ಎಂದರೆ, ಅಂತಹವರನ್ನೇ ಹಾರ ಹಾಕಿ ಬರ ಮಾಡಿಕೊಂಡಿರುವುದು ಈ ದೇಶದ ಪ್ರಜಾಪ್ರಭುತ್ವವನ್ನು ಅಣಕಿಸಿದಂತಿದೆ ಎಂದು ಇಕ್ಬಾಲ್ ಅಹಮದ್ ತಿಳಿಸಿದರು.
ಈ ದೇಶದ ಬಡ ಜನರ ಅಭಿವೃದ್ದಿಗಾಗಿ ಪಂಚವಾರ್ಷಿಕ ಯೋಜನೆಗಳನ್ನು ತಂದು, ಕೈಗಾರಿಕೆ, ನೀರಾವರಿ, ಕೃಷಿ ಎಲ್ಲ ಕ್ಷೇತ್ರಗಳ ಬೆಳವಣಿಗೆಗೆ ಕಾಂಗ್ರೆಸ್ ಕಾರಣವಾಗಿದೆ.ಆದರೆ ನೋಟು ಅಮಾನ್ಯೀಕರಣ, ಜನರ ಜೀವ ಹಿಂಡುವ ಜಿ.ಎಸ್.ಟಿ., ಎಸ್.ಐ.ಆರ್,ಬೆಲೆ ಹೆಚ್ಚಳ, ನಿರುದ್ಯೋಗ ಸಮಸ್ಯೆಗಳನ್ನು ತಂದು, ದೇಶವನ್ನು ಮತ್ತಷ್ಟು ಪಾತಾಳಕ್ಕೆ ಬಿಜೆಪಿ ತಳ್ಳುತ್ತಿದೆ. ಇದರ ಬಗ್ಗೆ ಬಿಜೆಪಿ ನಾಯಕರು ಎಂದು ಮಾತನಾಡಿಲ್ಲ. ವಿದ್ಯಾರ್ಥಿಗಳ ಬೆಂಬಲ ವ್ಯಕ್ತಪಡಿದ್ದರಿಂದ ಮುಜುಗರಕ್ಕೆ ಒಳಗಾಗಿ ಹತ್ಯೆ ಮಾಡುವ ಮಾತುಗಳನ್ನಾಡುತ್ತಿದ್ದಾರೆ.ಇಂತಹವರ ವಿರುದ್ದ ಕೇಂದ್ರ ಮತ್ತು ರಾಜ್ಯ ಸರಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಹಿರಿಯರಾದ ಕೆಂಚಮಾರಯ್ಯ ಮಾತನಾಡಿ, ಒರ್ವ ವಿರೋಧ ಪಕ್ಷದ ನಾಯಕನಿಗೆ ಕೊಲೆ ಬೆದರಿಕೆ ಹಾಕಿದವನಿಗೆ ಜೈಕಾರ ಹಾಕಿ ಸ್ವಾಗತಿಸುವ ಭಾರತದಲ್ಲಿ ನಿಜವಾಗಿಯೂ ಅಂತರಿಕ ತುರ್ತು ಪರಿಸ್ಥಿತಿ ಇದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ವಿರೋಧಪಕ್ಷದ ನಾಯಕನೆಂದರೆ μÁಡೋ ಪ್ರಧಾನಮಂತ್ರಿ ಇದ್ದಂತೆ.ಕಾಂಗ್ರೆಸ್ ಪಕ್ಷ ಹಾಗೂ ಅದರ ಮುಖಂಡರು ಈ ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನದ ಮೇಲೆ ಕಟ್ಟಿದ ಭಾರತದಲ್ಲಿ ನಿಂತುಕೊಂಡು ಬಿಜೆಪಿಯಲ್ಲಿ ಯುವಜನತೆಯಲ್ಲಿ ರಾಷ್ಟ್ರಭಕ್ತಿಯ ಹುಸಿ ಭ್ರಮೆಯನ್ನು ಬಿತ್ತಿ,ದೇಶವನ್ನು ಹಿಂದೂ-ಮುಸ್ಲಿಂ ಎಂದು ಒಡೆಯಲು ಹೊರಟಿದ್ದಾರೆ.ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತು, ಈ ದೇಶದ ಮತದಾರರಿಗೆ, ಸಾರ್ವಜನಿಕರಿಗೆ ಮಾಡಿದ ಅಪಮಾನ.ಹಾಗಾಗಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದರು.

ಈಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ನಿಂಗರಾಜು ಮತ್ತು ಹಿಂದುಳಿದ ವರ್ಗಗಳ ವಿಭಾಗದ ಗುರುಪ್ರಸಾದ್ ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ರೈತ ವಿಭಾಗದ ಜಿ.ಎಲ್.ಗೌಡ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಯಾಜ್, ಮುಖಂಡರಾದ ವಾಲೆಚಂದ್ರು,ಅಲ್ಪಸಂಖ್ಯಾತರ ಘಟಕದ ಇರ್ಫಾನ್,ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಅನಿಲ್,ಕಾರ್ಮಿಕ ವಿಭಾಗದ ಅಧ್ಯಕ್ಷ ವಿ.ಎಸ್.ಸೈಯದ್ ದಾದಾಪೀರ್,ಸೇವಾದಳದ ಭೈಲಪ್ಪ, ತಿಪಟೂರು ತಾಲೂಕಿನ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *