ಕುಂಚಿಟಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡದೆ ಅನ್ಯಾಯ-ಸರಿಪಡಿಸಲು ಆಗ್ರಹ

ತುಮಕೂರು : ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಲ್ಲಿ ಕುಂಚಿಟಿಗರ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಕುಂಚಿಟಿಗರ ಕಾರ್ಯದರ್ಶಿ ಆರ್.ಕಾಮರಾಜು ಎಚ್ಚರಿಸಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ
ಕಾಂಗ್ರೆಸ್ ಸರ್ಕಾರ ದಲ್ಲಿ ಸಚಿವ ಸಂಪುಟ ಕ್ಕೆ, 25 ಲಕ್ಷ ಕುಂಚಿಟಿಗರಿಗೆ ಅನ್ಯಾಯವನ್ನು ಖಂಡಿಸುತ್ತೇವೆ. ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ.
ತುಮಕೂರು ಜಿಲ್ಲೆಯ 8 ಕ್ಷೇತ್ರದಲ್ಲಿ ನಿರ್ಣಾಯಕ ಮತಗಳಿವೆ ಎಂದರು

80ರ ದಶಕದಲ್ಲಿ 6 ಜನ ಶಾಸಕರು, ಇಬ್ಬರು ಎಂ.ಪಿ.ಗಳಿದ್ದರು, ಆದಾದ ನಂತರ ಕುಂಚಿಟಿಗರನ್ನು ವ್ಯವಸ್ಥಿತವಾಗಿ ಮುಗಿಸಲು ಹೊರಟಿದ್ದಾರೆ.
ಟಿಬಿಜೆ ಸ್ವತಂತ್ರವಾಗಿ ಆಯ್ಕೆಯಾಗಿ ಕಾಂ ಸೇರಿದವರು, ಸಚಿವ ಸಂಪುಟದಲ್ಲಿ ಸಚಿವರಾಗಿ ಸರ್ಕಾರಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ.
ಇದನ್ನು ಸರಿಪಡಿಸಲು ಆಗ್ರಹಿಸಿದ ಕಾಮರಾಜು, ಶಿರಾಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋದರು, ಭದ್ರಾ ಮೇಲ್ದಂಡೆ ಯೋಜನೆ ತಂದರು.
ಟಿಬಿಜೆ ಅವರಿಗೆ ಸಚಿವ ಸ್ಥಾನ ತಪ್ಪಿರುವುದು ರಾಜಕೀತ ಷಡ್ಯಂತರ, ಸಚಿವ ಸ್ಥಾನ ನೀಡದಿದ್ದರೆ ಮುಂದಿನ ಲೋಕಸಭೆಯಲ್ಲಿ ಅದರ ಪರಿಣಾಮ ಎದುರಿಸಬೇಕಾಗಿದೆ ಎಂದು ಎಚ್ಚರಿಸಿದರು.

ಕುಂಚಿಟಿಗ ಸಮುದಾಯದ ಏಕೈಕ ಶಾಸಕ ಜಯಚಂದ್ರ ಅವರು ಸಂಪುಟ ಸೇರುವುದು ಖಚಿತ ಎಂದು ಸಮುದಾಯದ ಭಾವಿಸಿತ್ತು, ಕಾಂಗ್ರೆಸ್ ನ ಹಿರಿಯ ಶಾಸಕರಾಗಿರುವ ಇವರಿಗೆ ಉನ್ನತ ಸ್ಥಾನಮಾನ ಕೊಡುತ್ತಾರೆ ಎಂಬ ಭಾವನೆ ಇತ್ತು ಅದನ್ನು ಕಾಂಗ್ರೆಸ್ ಹುಸಿಗೊಳಿಸಿದೆ ಎಂದರು.

ಜಯಚಂದ್ರ ಅವರು ಕಾಂಗ್ರೆಸ್ ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪಕ್ಷ ನಿಷ್ಠೆ ತೋರಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಲ್ಲ. ಕಾರ್ಯವೈಖರಿ , ಸಚಿವರಾಗಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ,ಅವರ ಸೇವೆ ಪರಿಗಣಿಸದೆ, ನಿರೀಕ್ಷೆ ಹುಸಿ ಮಾಡಿದೆ. ಇಡಿ ಸಮಾಜಕ್ಕೆ ಅನ್ಯಾಯ, ದ್ರೋಹ ಮಾಡಿದೆ ಎಂದರು.

ತುಮಕೂರು, ಚಿತ್ರದುರ್ಗ ಲೋಕಸಭೆ ಕ್ಷೇತ್ರಗಳಲ್ಲಿ ಕುಂಚಿಟಿಗರ ಮತಗಳು ನಿರ್ಣಾಯಕ ವಾಗಿವೆ.
ಕುಂಚಿಟಿಗರ ಸಾಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು.
ಕುಂಚಿಟಿಗರು ಇರುವ ಕಡೆಯೇ ಮೀಸಲು ಕ್ಷೇತ್ರಗಳನ್ನು ಮಾಡಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್.ಎಲ್.ಗೋವಿಂದರಾಜು, ಪರ್ವತಪ್ಪ ಮಾತನಾಡಿದರು.

ಸಂಘದ ಅಧ್ಯಕ್ಷರಾದ ನೇತಾಜಿ ಶ್ರೀಧರ್,ಉಪಾಧ್ಯಕ್ಷರಾದ ಅಶೋಕಕುಮಾರ್,ಕಾರ್ಯದರ್ಶಿ ಎಂ.ರಾಜಕುಮಾರ್, ಮಾಜಿ ಕಾರ್ಯದರ್ಶಿ ದೊಡ್ಡಲಿಂಗಪ್ಪ,ಖಜಾಂಚಿ ಎಸ್.ಸತೀಶ್,ಜಂಟಿ ಕಾರ್ಯದರ್ಶಿ ಸಿ.ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *