ಜಮೀನಿನ ಬಗ್ಗೆ ಕಾನೂನು ಅರಿವು, ಹಕ್ಕುಗಳು ಮತ್ತು ದಾಖಲಾತಿಗಳ ಹಕ್ಕುಗಳು, ಕಾನೂನು ರೈತರು ತಿಳಿದಿರಬೇಕು-ನಿವೃತ್ತ ಕೆಎಎಸ್ ಅಧಿಕಾರಿ.ಕೆ.ಎನ್.ಲಿಂಗಪ್ಪ

ತುಮಕೂರು : ರೈತರು ಜಮೀನು, ಭೂಮಿ ಹೊಂದಿರುವುದಷ್ಟೇ ಅಲ್ಲ, ತಮ್ಮ ಜಮೀನಿನ ಬಗ್ಗೆ ಕಾನೂನು ಅರಿವು, ಹಕ್ಕುಗಳು ಮತ್ತು ದಾಖಲಾತಿಗಳ ಬಗ್ಗೆ ಸರ್ಕಾರ ಕೈಗೊಂಡಿರುವ ಯೋಜನೆಗಳ ಭೂ ಸುಧಾರಣೆ ಬಗ್ಗೆ ರೈತರು ತಿಳಿದುಕೊಳ್ಳುವುದಲ್ಲದೆ, ತಮ್ಮ ಹಕ್ಕನ್ನು ತಾವೇ ಪಡೆಯುವ ಜ್ಞಾನವನ್ನು ಪಡೆದಾಗ ಮಾತ್ರ ಭೂ ಒಡೆತನ ಹೊಂದಿದ್ದಕ್ಕೆ ಸಾರ್ಥಕವಾಗುತ್ತದೆಂದು ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ಹೇಳಿದರು.

ಅವರಿಂದು ಶಿರಾ ತಾಲ್ಲೂಕಿನ ಗುಮ್ಮನಹಳ್ಳಿಯ ಲೋಹಿಯಾ ಸಮಾತಾ ವಿದ್ಯಾಲಯದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ನಾಯಕತ್ವದ ಶಿಬಿರದಲ್ಲಿ ಭೂಮಿ ಮತ್ತು ಭೂ ಕಂದಾಯ ಕಾನೂನುಗಳು, ರೈತರ ಹಕ್ಕಗಳು ಮತ್ತು ಪರಿಹಾರ ವಿಷಯ ಕುರಿತು ಮಾತನಾಡಿದರು.

ಭೂಕಂದಾಯ ಇತಿಹಾಸವು ಕೇವಲ ತೆರಿಗೆಗಳ ಸಂಗ್ರಹಣೆಯ ಕಥಾನಕವಲ್ಲ; ಅದು ಸಮಾಜದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ವಿಕಾಸಗೊಂಡಿದ್ದರ ಪ್ರತಿಬಿಂಬವಾಗಿದೆ. ಭೂಮಿ ಎಂಬ ಸಂಪತ್ತು ಮಾನವ ಸಂಸ್ಕøತಿಯಲ್ಲಿ ಮಹತ್ವ ಹೊಂದಿದೆ. ಪ್ರಾಚೀನ ಕೃಷಿ ಆರ್ಥಿಕತೆಯಿಂದ ಪ್ರಸ್ತುತ ಆಡಳಿತ ವ್ಯವಸ್ಥೆಗಳವರೆಗೆ ಭೂಮಿ ಮತ್ತು ಭೂಕಂದಾಯ ವ್ಯವಸ್ಥೆಗಳ ನಿರ್ವಹಣೆ, ಆಳ್ವಿಕೆ, ನೀತಿಗಳು ಮತ್ತು ವ್ಯಕ್ತಿಗಳ ಜೀವನವನ್ನು ಶಾಶ್ವತವಾಗಿ ರೂಪಿಸುತ್ತವೆ ಎಂದರು.

ಆಧುನಿಕ ಯುಗವು ಭೂಕಂದಾಯ ಆಡಳಿತದಲ್ಲಿ ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ಪರಿಚಯಿಸುತ್ತದೆ. ತಂತ್ರಜ್ಞಾನದ ಆಗಮನವು ಕರ್ನಾಟಕದಲ್ಲಿ ‘ಭೂಮಿ’ ಯೋಜನೆಯಂತಹ ಡಿಜಿಟಲೀಕರಣ ಉಪಕ್ರಮಗಳ ಮೂಲಕ ಭೂ ದಾಖಲೆಗಳ ನಿರ್ವಹಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಇ – ಆಡಳಿತದ ವೇದಿಕೆ ಪಾರದರ್ಶಕತೆಯನ್ನು ಹೆಚ್ಚಿಸಿದೆ, ಭ್ರμÁ್ಟಚಾರವನ್ನು ಕಡಿಮೆ ಮಾಡಿದೆ ಮತ್ತು ಭೂಮಾಲೀಕರಿಗೆ ಅವರ ದಾಖಲೆಗಳು ಸುಲಭವಾಗಿ ದೊರಕುವುದರಿಂದ ಅವರಿಗೆ ಸಬಲೀಕರಣ ನೀಡಿದೆ. ಆದಾಗ್ಯೂ, ಭೂ ಅತಿಕ್ರಮಣ ವಿವಾದಗಳು ಮತ್ತು ನಗರೀಕರಣದಂತಹ ಸಮಸ್ಯೆಗಳು ಸವಾಲುಗಳನ್ನು ಒಡ್ಡುತ್ತಲೇ ಇವೆ. ಕೃತಿಯು ಈ ಸಮಕಾಲಿನ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಚರ್ಚಿಸಲು ಪ್ರಯತ್ನಿಸಿದೆ ಎಂದು ಹೇಳಿದರು.

ಕಂದಾಯ ಇಲಾಖೆ ಬಗ್ಗೆ ಹೇಳುವುದಾದರೆ, ನನ್ನ ಅಭಿಪ್ರಾಯದಂತೆ, ವಸ್ತು ಸಂಗ್ರಹಣೆ ಸರಳವಾದ ವಿಷಯವಲ್ಲ. ಬೃಹತ್ತಾಗಿ ಬೆಳೆದು ನಿಂತಿರುವ ಇಲಾಖೆ ಕುರಿತು ಲಾಗಾಯ್ತಿನಿಂದ ಸಮಕಾಲಿನವರೆಗೆ ವಿಷಯ ಸಂಗ್ರಹಣೆಯ ತೊಡಕಿನದು. ಎದುರಾಗುವ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು, ಕಾಲವನ್ನೂ ಹೊಂದಿಸಿಕೊಂಡು ಪುಸ್ತಕವೊಮದನ್ನು ಹೊರ ತಂದಿದ್ದು, ಮೆಚ್ಚಿನ ಇಲಾಖೆಗೆ ಇದು ನನ್ನ ಆಳಿಲು ಸೇವೆ ಎಂದು ವಿನಮ್ರನಾಗಿ ಹೇಳಲು ಇಷ್ಟಪಡುತ್ತೇನೆ ಎಂದರು.

ಇ-ಜಮಾಬಂದಿ ಜಾರಿ

ಮಾರ್ಚ್ 12, 25 ರಂದು ವಿಧಾನ ಪರಿಷತ್ ನಲ್ಲಿ ಪ್ರಶೋತ್ತರ ಸಮಯದಲ್ಲಿ ಕಂದಾಯ ಸಚಿವರು, ಇ-ಜಮಾ ಬಂಧಿ ಜಾರಿಯ ಬಗ್ಗೆ, ಗ್ರಾಮ, ತಾಲ್ಲೂಕು ಮಟ್ಟದ ಭೂದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ದಗೊಳಿಸುವ ವಿಧಾನದ ಜಮಾಬಂದಿ ಪ್ರತಿಕ್ರಿಯೆಯನ್ನು ವೇಗವಾಗಿ ನಿರ್ವಹಿಸಲು ಇ-ಜಮಾಬಂದಿ ತಂತ್ರಾಂಶವನ್ನೂ ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಜಮಾಬಂದಿ ಒಂದು ಸರಕಾರಿ ಪ್ರಕ್ರಿಯೆಯಾಗಿದ್ದು, ಇದನ್ನು ಪ್ರತಿವರ್ಷ ಭೂಮಿಯ ದಾಖಲೆಗಳ ಪರಿಶೀಲನೆಗಾಗಿ ಹಮ್ಮಿಕೊಳ್ಳಲಾಗುತ್ತದೆ. ಇದು ಜನರಿಂದ ನಡೆಯುವ ಗ್ರಾಮ ಪಂಚಾಯತ್‍ನ ವಾರ್ಷಿಕ ಆದಾಯ ಮತ್ತು ವೆಚ್ಚಗಳ ಭೌತಿಕ ಮತ್ತು ಆರ್ಥಿಕ ಲೆಕ್ಕ ಪರಿಶೀಲನೆಯಾಗಿದೆ. ಇ ಜಮಾಬಂದಿ ಎಂದರೆ ಜಮಾಬಂದಿಯ ಆನ್‍ಲೈನ್ ಆವೃತ್ತಿ ಆಗಿದ್ದು, ಇದು ಹಕ್ಕುಗಳ ದಾಖಲೆ ಅಥವಾ ಭೂ ಮಾಲೀಕತ್ವದ ದಾಖಲೆಗಳಿಗೆ ಅಧಿಕೃತ ದೃಢೀಕರಣವನು ನೀಡುತ್ತದೆ. ಹರಿಯಾಣ ಸೇರಿದಂತೆ ಇತರ ರಾಜ್ಯಗಳ ಈಗಾಗಲೇ ವಿದ್ಯುನಾನ ಆವೃತ್ತಿಯನ್ನು ಅಭಿವೃದ್ಧಿಪಡಿಸಿ ಯಶಸ್ವಿ ಆಗಿವೆ ಎಂದು ತಿಳಿಸಿದರು.

ನಾಗರಿಕರಿಗೆ ಯೋಜನೆಗಳ ನಿಖರ ಮಾಹಿತಿ ಒದಗಿಸುವುದು, ಸಾರ್ವಜನಿ ಕುಂದುಕೊರತೆ, ಪರಿಹಾರ ಹಾಗೂ ಗ್ರಾಮ ಪಂಚಾಯತ್‍ಗಳ ಸಂದನಶೀಲ ಆಡಳಿತ ಅಗತ್ಯ ಕ್ರಮ ಕೈಗೊಳ್ಳುವುದು ಜಮಾಬಂದಿ ಪ್ರಕ್ರಿಯೆಯ ಉದ್ದೇಶ. ಜಮಾಬಂದಿ ಲೆಕ್ಕಿಗರು ಸರಕಾರ ಮತ್ತು ಸ್ಥಳೀಯ ಆಡಳಿತ ಜಮಾಬಂದಿದ ವೇಳಾಪಟ್ಟಿ ಪ್ರಕಟಿಸುತ್ತದೆ. ಲೆಕ್ಕಗರು ಗ್ರಾಮಸ್ಥರ ಸಹನಿಯೋಗದೊಂದಿಗೆ ಭದಾಖಲೆಗಳನ್ನು ಪರಿಶೀಲಿಸುತ್ತಾರೆ. ಯಾವುದೂ ಭೂಸ್ವಾಮ್ಯ ವಾರಸು ಹಕ್ಕು ಅಥವ ದಾಖಲೆ ತಿದ್ದುಪಡಿ ಈ ಹಂತದಲ್ಲಿ ಮಾಡಬಹುದು. ಗ್ರಾಮ ಲೆಕ್ಕಿಗರಿಗೆ ನೀಡಿರುವ ಆರ್.ಟಿ.ಸಿಗಳ ನಕಲುಗಳಲ್ಲಿ ನಮೂದಿಸಿದ ವಿಸ್ತೀರ್ಣ ಮತ್ತು ಗ್ರಾಮದ ಆಕಾರ್‍ಬಂದ್ ವಹಿಯಲ್ಲಿ ನಮೂದಿಸಿರುವ ವಿಸ್ತೀರ್ಣಕ್ಕೆ ಪರಸ್ಪರ ತಾಳೆಯಿರುವುದರ ಪರಿಶೀಲನೆ ಮಾಡಬಹುದು ಎಂದು ತಿಳಿಸಿದರು.

ಭೂಸ್ವಾಧೀನದ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಲು ಪ್ರೊ.ರವಿವರ್ಮಕುಮಾರ್ ಆಗ್ರಹ

ಆಶಯ ನುಡಿಗಳನ್ನಾಡಿದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಅವರು ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿ ದರೋಡೆಯಾಗುತ್ತಾ ಇದೆ, ಭೂಸ್ವಾಧೀನ ಪ್ರಕ್ರಿಯೆಗಳನ್ನೆಲ್ಲಾ ನಡೆಸುವ ಮೊದಲು ಸರ್ಕಾರ ಮಾಡಬೇಕಾದ ಪ್ರಪ್ರಥಮ ಕೆಲಸವೇನೆಂದರೆ ಇದುವರೆವಿಗೂ ಕೈಗಾರಿಕಾ ಪ್ರದೇಶಕ್ಕೆ ಎಷ್ಟು ರೈತರನ್ನು ಒಕ್ಕಲೆಬ್ಬಿಸಿದೆ, ಅಂತಹ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡದ್ದ ಭೂಮಿ ಯಾರ ಒಡೆತನದಲ್ಲಿದೆ, ರೈತರನ್ನು ಒಕ್ಕಲೆಬ್ಬಸಿದ ಮೇಲೆ ಆ ರೈತರ ಬದುಕೇನಾಯಿತು ಎಂಬುದನ್ನು ತಿಳಿಸಬೇಕು.

ಎಲ್ಲಾಕ್ಕಿಂತ ಮುಖ್ಯವಾಗಿ ಇಷ್ಟು ಅಮೂಲ್ಯವಾದ ಭೂಮಿಯನ್ನು ವಶಪಡಿಸಿಕೊಂಡು ಯಾರಿಗೆ ಕೊಟ್ಟಿದೆ, ಸರ್ಕಾರಕ್ಕೆ ಬದ್ಧತೆ ಇದ್ದರೆ ತಕ್ಷಣವೇ ಶ್ವೇತಪತ್ರ ಹೊರಡಿಸಬೇಕೆಂದು ಪ್ರೊ.ರವಿವರ್ಮಕುಮಾರ್ ಆಗ್ರಹಿಸಿದರು. ಅಲ್ಲಿಯವರೆಗೆ ಯಾವುದೇ ಭೂಸ್ವಾಧೀನಕ್ಕೆ ಕೈಹಾಕಬಾರದು, ಸಮಗ್ರ ಮಾಹಿತಿಯನ್ನು ರಾಜ್ಯದ ರೈತರಿಗೆ, ಜನರಿಗೆ ತಿಳಿಸುವ ತನಕ ಯಾವುದೇ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಬಾರದು, ಅದರ ಬಗ್ಗೆ ವಿವಿರವಾದ ಅಧ್ಯಯನ ಮಾಡಿ ಸಮಾಜಕ್ಕೆ ತಿಳಿಸಬೇಕೆಂದು ಒತ್ತಾಯಿಸಿದರು.

ಈಗೇನಾಗಿದೆ ಎಂದರೆ ಅಭಿವೃದ್ಧಿ ಅಂದಕೂಡಲೇ ರೈತರನ್ನು ಒಕ್ಕಲೆಬ್ಬಿಸುವುದು ಅನ್ನುವಂತಾಗಿದೆ. ರೈಲ್ವೆಗೆ ಇರಬಹುದು, ಹೆದ್ದಾರಿಗೆ ಇರಬಹುದು, ರಸ್ತೆಗೆ ಇರಬಹುದು ಅಥವಾ ಕೈಗಾರಿಕೆಗೆ ಜಾಗ ಕೊಡುವ ವಿಚಾರ ಇರಬಹುದು ರೈತರನ್ನೇ ಗುರಿಪಡಿಸಬೇಕೆ?, ಇದಕ್ಕೆ ಬೇರೆ ಪರಿಹಾರವಿಲ್ಲವೇ, ರೈತರನ್ನು ಒಕ್ಕಲೆಬ್ಬಿಸಿ ಎಷ್ಟು ಉದ್ಯೋಗ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು, ಇದು ರೈತರ ಹಕ್ಕು, ಇದರ ತನಿಖೆ ಅಧ್ಯಯನವಾಗಲಿ, ತನಿಖೆಯಾಗಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಶಿರಾ ತಹಶೀಲ್ದಾರ್ ಮಾತನಾಡಿ 8 ಸಾವಿರಕ್ಕೂ ಹೆಚ್ಚು ಜನರಿಗೆ ಕಂದಾಯ ಇಲಾಖೆಯ ಭೂ ಒಡತನಕ್ಕೆ ಸಂಬಂಧಿಸಿದೆ, ಖಾತೆ, ಸಾಗುವಳಿ ಚೀಟಿ, ಪೌತಿ ಖಾತೆಗಳನ್ನು ಸಮಸ್ಯೆಗಳನ್ನು ಪರಿಹಾರ ಮಾಡಿ ರೈತರಿಗೆ ನೆರವು ನೀಡಿರುವುದಾಗಿ ತಿಳಿಸಿದರು.

ಶಿಬಿರದಲ್ಲಿ ರೈತ ಹೋರಾಟಗಾರರಾದ ಶ್ರೀಮತಿ ಅನುಸೂಯಮ್ಮ, ದೊ.ರಂಗನಾಥಗೌಡ, ಪೂಜಾರಪ್ಪ, ಕೆ.ಟಿ.ಗಂಗಾಧರ್, ರಾಮಕೃಷ್ಣ ನೀರಕಲ್ಲು ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *