
ತುಮಕೂರು : ರೋಟರಿ ತುಮಕೂರು ಪ್ರೇರಣಾ 2023-24ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 2ರಂದು ಸಂಜೆ 6ಗಂಟೆಗೆ ಎಸ್ಐಟಿ ಇಂಜಿನಿಯರ್ ಕಾಲೇಜಿನ ಬಿರ್ಲಾ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷರಾದ ಜನಾರ್ಧನ್ ಜಿ.ಎನ್.ಅವರು ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪದಗ್ರಹಣ ಸಮಾರಂಭದಲ್ಲಿ ಪದಗ್ರÀಹಣ ಅಧಿಕಾರಿಯಾಗಿ 2014-15 ರ ಜಿಲ್ಲಾ ಪಾಲಕರಾದ ರೂ. ಮಹದೇವ ಪ್ರಸಾದ್, ಮುಖ್ಯ ಅತಿಥಿಯಾಗಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು (ಶಿಕ್ಷಣ) ಡಾ.ಜಿ. ದೇವರಾಜ್, ರೋಟರಿಯ ವಲಯ ಪಾಲಕರಾದ ಎಂ.ಎಸ್.ಉಮೇಶ್ ಮತ್ತು ಸಹಾಯಕ ಪಾಲಕರಾದ ರೋಟರೇಯನ್ ಶ್ರೀನಿವಾಸಮೂರ್ತಿರವರು ಪ್ರೇರಣಾ ಮಾಸಿಕ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ,ಕಾರ್ಯಕ್ರಮದಲ್ಲಿ 2022-23 ರ ಅಧ್ಯಕ್ಷರಾದ ರಾಜಶೇಖರನ್, ಕಾರ್ಯದರ್ಶಿಗಳಾದ ಮುದ್ದುಕೃಷ್ಣ, . ಉಮಾಮಹೇಶ ಎ, ಪ್ರೇರಣ ಟ್ರಸ್ಟ್ನ ಅಧ್ಯಕ್ಷರಾದ, ಮಲ್ಲಿಕಾರ್ಜುನ ಮಲೇಹಳ್ಳಿ, ಕ್ಲಬ್ ಮಾರ್ಗದರ್ಶಕರಾದ ಪ್ರಕಾಶ್ ಎಂ.ಎಸ್. ,ಜಿಲ್ಲಾ ಕಾರ್ಯದರ್ಶಿ ರೊ. ಗಣೇಶ್ ಬಾಲಕೃಷ್ಣರವರು ಹಾಜರಿರುತ್ತಾರೆ ಎಂದು ತಿಳಿಸಿದರು.
ಜುಲೈ 1ರಂದು ಶಿಕ್ಷಣ ವಿಭಾಗದಲ್ಲಿ ವಿವಿಧ ಜಿಲ್ಲೆಯ ಮಕ್ಕಳಿಗೆ ಆರಂಭಿಕ ಉತ್ಸಾಹ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ರೋಟರಿ ತುಮಕೂರು ಪ್ರೇರಣ ಸಂಸ್ಥೆಯು ಅಕ್ಟೋಬರ್ 2021 ರಲ್ಲಿ ರೋಟರಿ ತುಮಕೂರಿನ ಪ್ರಾಯೋಜಕತ್ವದಲ್ಲಿ ಪ್ರಾರಂಭವಾಗಿ ಸತತ ಎರಡು ವರ್ಷಗಳಿಂದ ಹಲವಾರು ಸಮಾಜ ಮುಖಿ ಕೆಲಸಗಳನ್ನು ನಿರ್ವಹಿಸಿತ್ತಾ ಬಂದಿದೆ, ಅವುಗಳಲ್ಲಿ ವಿಶೇಷವಾಗಿ ಗೋರಕ್ಷ ಯೋಜನೆ, ಜೀವನಾಮೃತ, ವೈದ್ಯಕೀಯ ಚಿಕಿತ್ಸಾ ಶಿಬಿರ, ಜೀವನ ಚಕ್ರ, ರೋಟರಿ ನೋಂದಣಿ, ಶಿಕ್ಷಕರಿಗೆ ರಾಷ್ಟ್ರ ನಿಮಾತೃ ಪ್ರಶಸ್ತಿ, ವೊಕೇಶನಲ್ ಎಕ್ಸಲೆಂಟ್ ಪ್ರಶಸ್ತಿ, ಪ್ರೇರಣಾ ಕರುನಾಡೋತ್ಸವ, ವಿಶೇಷ ಸಾಧನಾ ಪಶಸ್ತಿ, ತ್ಯಾಗಟೂರಿನ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ ಮತ್ತು ವಿಶೇಷವಾಗಿ 100% ಗೀವಿಂಗ್ ಕ್ಲಬ್ ಮತ್ತು ಶೇಕಡಾ 100 ರಷ್ಟು ಸದಸ್ಯರನ್ನು ಪ್ರೇರಣ ತಂಡಕ್ಕೆ ಸೇರ್ಪಡೆಗೊಳಿಸಿದ ಯೋಜನೆಗಳಿಗೆ ಜಿಲ್ಲಾ ಪಾಲಕರ ಮನ್ನಣೆಗಳು ದೊರೆತಿರುವುದು ಅತೀವ ಸಂತಸ ನೀಡಿದ್ದು, ಎಲ್ಲಾ ವಿಭಾಗಗಳಲ್ಲೂ ಕಾರ್ಯನಿರ್ವಹಿಸಿದ್ದಕ್ಕೆ ಬೆಂಗಳೂರಿನಾಚಿಗಿನ ಸಣ್ಣ ಕ್ಲಬ್ಗಳಲ್ಲಿ ರನ್ನರ್ ಅಪ್ ವಿನ್ನರ್ ಪ್ರಶಸ್ತಿಯನ್ನು ಪಡೆದಿರುವುದು ಹೊಸದಾದ ಸಂಸ್ಥೆಯೊಂದಕ್ಕೆ ಮತ್ತು ಮುಂದಿನ ತಂಡಕ್ಕೆ ಮತ್ತಷ್ಟು ಶಕ್ತಿ ನೀಡಿದೆಯೆಂದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ 2023-24ರ ಕಾರ್ಯದರ್ಶಿ ಉಮಾಮಹೇಶ್.ಎ., ಖಜಾಂಚಿ ಸುರೇಶ್ ತೊಗಟವೀರ ಜಿ.ಎನ್., ಮತ್ತು 2022-23 ರ ಅಧ್ಯಕ್ಷರಾದ ರಾಜಶೇಖರನ್, ಕಾರ್ಯದರ್ಶಿಗಳಾದ ಮುದ್ದುಕೃಷ್ಣ, ಪ್ರಕಾಶ್ ಉಪಸ್ಥಿತರಿದ್ದರು.