ಭದ್ರಮೇಲ್ದಂಡೆ ಯೋಜನೆಗೆ ಕಾಯ್ದಿರಿಸಿರುವ 5300 ಕೋಟಿ ಹಣ ಬಿಡುಗಡೆ ಮಾಡಿಸಿ ಜಿಲ್ಲೆಯ ಋಣ ತೀರಿಸುವಂತೆ ವಿ.ಸೋಮಣ್ಣಗೆ ಕಾಡಶೆಟ್ಟಿಹಳ್ಳಿ ಸತೀಶ್ ಆಗ್ರಹ

ತುಮಕೂರು : ಕೇಂದ್ರ ಸರ್ಕಾರ 5300 ಕೋಟಿ ರೂ.ಗಳನ್ನು ಭದ್ರಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ ಹಣ ತೆಗೆದಿರಿಸಿದ್ದು, ಕೇಂದ್ರ ಸರ್ಕಾರದ ಜಲಸಂಪನ್ಮೂಲ ರಾಜ್ಯ ಸಚಿವರೂ, ತುಮಕೂರು ಜಿಲ್ಲೆಯ ಸಂಸದರೂ ಆಗಿರುವ ವಿ.ಸೋಮಣ್ಣ ಅವರು ಹಣ ಬಿಡುಗಡೆ ಮಾಡಿಸುವ ಮೂಲಕ ಈ ಜಿಲ್ಲೆಯ ಋಣ ತೀರಿಸುವಂತೆ ಪಂಚಾಯತ್ ರಾಜ್ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ಆಗ್ರಹಿಸಿದರು.

ಅವರು ತುಮಕೂರಿನಲ್ಲಿ 3 ದಿಗಳ ಕಾಲ ನಡೆದ ಪುಸ್ತಕ ಸಂತೆಯಲಿ 15ನೇ ಗೋಷ್ಠಿಯಲ್ಲಿ ತುಮಕೂರು ಜಿಲ್ಲೆಯ ನೀರಾವರಿ ಯೋಜನೆಗಳು ಎಂಬ ವಿಷಯದ ಮೇಲೆ ಮಾತನಾಡುತ್ತಾ, 2023-24ರ ಬಜೆಟ್ ನಲ್ಲಿ ಭದ್ರಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು 5300 ಕೋಟಿ ಹಣವನ್ನು ತೆಗೆದಿರಿಸಿದ್ದು, ಸಂಸತ್ತಿನಲ್ಲೂ ಅನುಮೋದನೆ ಸಿಕ್ಕದೆ. ಆದರೆ ಇಲ್ಲಿಯತನಕ ಆ ಹಣವನ್ನು ಬಿಡುಗಡೆ ಮಾಡಿಲ್ಲ, ಮಾನ್ಯ ಲೋಕಸಭಾ ಸದಸ್ಯರಾದ ಸೋಮಣ್ಣವರಿಗೆ ಕೇಳುತ್ತೇನೆ ರೈಲ್ವೆ ರಾಜ್ಯ ಸಚಿವರ ಜೊತೆಗೆ, ನೀರಾವರಿ ಜಲಸಂಪನ್ಮೂಲ ಸಚಿವರೂ ಆಗಿದ್ದೀರಿ, ನಿಮಗೆ ಜವಾಬ್ದಾರಿ ಇದ್ದರೆ, ಈ ಜೆಲ್ಲೆಯ ಜನ ಗೆಲ್ಲಿಸಿದ್ದಾರೆ, ಕೇಂದ್ರ ಸರ್ಕಾರ ಭದ್ರಮೇಲ್ದಂಡೆ ಯೋಜನೆಗೆ ಕಾಯ್ದಿರಿಸಿರುವ ಹಣವನ್ನು ತಕ್ಷಣ ಬಿಡುಗಡೆಗೊಳಿಸುವ ಮೂಲಕ ಈ ಜಿಲ್ಲೆಯ ಜನರ ಋಣ ತೀರಿಸಿ, ಭದ್ರಾಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮುಂದಾಗುವಂತೆ ಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವ ವಿ.ಸೋಮಣ್ಣನವರನ್ನು ಒತ್ತಾಯಿಸಿದರು.

ಭದ್ರಾಮೇಲ್ದಂಡೆ ಯೋಜನೆ ಬಹಳ ದೊಡ್ಡ ಯೋಜನೆಯಾಗಿರುವುದರಿಂದ ರಾಜ್ಯ ಸರ್ಕಾರವೊಂದೇ ಮುಗಿಸಲು ಬಹಳ ಕಷ್ಟವಾಗುತ್ತದೆ, ಈ ಯೋಜನೆ ಜಾರಿಯಾಗದಿದ್ದರೆ ಶಿರಾ, ಮಧುಗಿರಿ, ಪಾವಗಡ ತಾಲ್ಲೂಕುಗಳಿಗೆ ನೀರಿನ ಬರ ಎದುರಿಸಬೇಕಾಗುತ್ತದೆ ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಹೇಮಾವತಿ, ಎತ್ತಿನಹೊಳೆ, ಭದ್ರಮೇಲ್ದಂಡೆ ಪ್ರಮುಖ ಮೂರು ನೀರಾವರಿ ಯೋಜನೆಗಳು ಆಗಿವೆ ಎಂದು ಹೇಳಿದರು.

ಹೇಮಾವತಿ, ಎತ್ತಿನಹೊಳೆ, ಭದ್ರಮೇಲ್ದಂಡೆ ಮತ್ತು ಕೆರೆಗಳು ಸೇರಿದಂತೆ ನಾಲ್ಕು ನೀರಾವರಿ ಆಶ್ರಯಗಳ ಮೂಲಕ ತುಮಕೂರು ಜಿಲ್ಲೆಯ ರೈತರು ವ್ಯವಸಾಯ ಮಾಡುತ್ತಿದ್ದೇವೆ, ಹೇಮಾವತಿ ವಿಷಯದಲ್ಲಿ ಎಲ್ಲಾ ಪಕ್ಷದ ನಾಯಕರು ಜಿಲ್ಲೆಯ ರೈತರ ಜೊತೆ ನಿಲ್ಲಬೇಕು, ಈಗಿನ ರಾಜಕಾರಣಿಗಳು ಎಕ್ಸ್ ಪ್ರೆಸ್ ಕೆನಾಲ್ ಬಗ್ಗೆ ತಾತ್ಕಾಲಿಕವಾಗಿ ಮಾತನಾಡುತ್ತಾರೆ, ಯಾಕೆಂದರೆ ಅಧಿಕಾರದ ಆಸೆಗೋಸ್ಕರ, ಈ ಜಿಲ್ಲೆಯ ಜನ ಮತದಾನ ಮಾಡಿದ್ದಾರೆ, ರಾಜಕೀಯ ಶಕ್ತಿ ತುಂಬಿದ್ದಾರೆ, ಸಮಾಜ ನಿಮ್ಮನ್ನು ಗುರುತಿಸುವಂತಹ ಸ್ಥಿತಿಗೆ ತಂದಿದ್ದಾರೆ, ಯಾವುದೋ ತಾತ್ಕಾಲಿಕವಾದ ರಾಜಕೀಯ ಬೆನಿಫಿಟ್‍ಗೋಸ್ಕರ ನೀವು ನಾವೇ ಮುಂದೆ ನಿಂತು ಆ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಹೇಳುತ್ತೀರಲ್ಲ ಇದು ಎಷ್ಟರ ಮಟ್ಟಿಗೆ ಸರಿ ಎಂದು ಹೆಸರೇಳದೆ ಕಂದಾಯ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಿಗೆ ಪರೋಕ್ಷವಾಗಿ ಪ್ರಶ್ನಿಸಿದರು.

ಎಕ್ಸ್ ಪ್ರೆಸ್ ಕೆನಾಲ್ ನ್ನು 2018ರಲ್ಲಿ ಕಾಂಗ್ರೆಸ್ ಜೊತೆಯ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರು ಜಾರಿ ಮಾಡುವ ಪ್ರಯತ್ನವನ್ನು ಮಾಡಿದರು, ನಂತರ ಬಂದ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಕಾಲದಲ್ಲಿ ಎಕ್ಸ್ ಪ್ರೆಸ್ ಕೆನಾಲ್ ವೈಜ್ಞಾನಿಕ ಯೋಜನೆಯಲ್ಲ ಅವೈಜ್ಞಾನಿಕ ಎಂದು ಹೇಳಿ ತಾಂತ್ರಿಕ ವರದಿ ಯಾರು ಕೊಟ್ಟಿದ್ದರೋ ಅದೇ ನೀರವರಿ ತಜ್ಞ ಇಂಜಿನಿಯರ್ ಈಗಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಎಕ್ಸ್ ಪ್ರೆಸ್ ಕೆನಾಲ್ ವೈಜ್ಞಾನಿಕ ಯೋಜನೆ ಅಂತ ವರದಿಯನ್ನು ಕೊಟ್ಟಿದ್ದಾರೆ, ಹಾಗಾದರೆ ಸರ್ಕಾರ ಬದಲಾದ ಕೂಡಲೇ ಯೋಜನೆ ಹೇಗೆ ವೈಜ್ಞಾಕವಾಯಿತು ಎಂಬುದನ್ನು ಜಿಲ್ಲೆಯ ಜನತೆಗೆ ತಿಳಿಸಬೇಕಿದೆ ಎಂದರು.

ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಬಿಟ್ಟು ಕುಣಿಗಲ್ ನಾಲೆಯಲ್ಲಿ 12 ಕಡೆ ಇರುವ ಅಡಚಣೆಯನ್ನು ಸರಿಪಡಿಸಿದರೆ ಕುಣಿಗಲ್‍ಗೆ 3 ಟಿಎಂಸಿ ನೀರು ಸರಾಗವಾಗಿ ಹರಿಯಲಿದೆ, ಇದನ್ನು ಬಿಟ್ಟು ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಜಾರಿಗೆ ಈ ಜಿಲ್ಲೆಯ ರಾಜಕಾರಣಿಗಳು ಮುಂದಾದರೆ ರೈತರ ಬಹು ದೊಡ್ಡ ಹೋರಾಟವನ್ನು ಎದುರಿಸಬೇಕಾಗುತ್ತದೆ, ಅಲ್ಲದೆ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯ ಜಾರಿಯ ಹೆಸರಿನಲ್ಲಿ ರೈತರ ರಕ್ತದ ಕೋಡಿ ಹರಿಸಲು ಮುಂದಾಗಬೇಡಿ ಎಂದು ಕಾಡಶೆಟ್ಟಿಹಳ್ಳಿ ಸತೀಶ್ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯ ಪರ ರಾಜಕಾರಣಿಗಳಿಗೆ ಕಿವಿ ಮಾತೇಳಿದರು.

ತುಮಕೂರು ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಈಗಾಗಲೇ ರೂಪಿಸಲಾಗಿದೆ, ಈ ಹಿನ್ನೆಲೆಯಲ್ಲಿ ನೀರಾವರಿ ಯೋಜನೆಗಳ ಸಾಧಕ-ಬಾಧಕಗಳನ್ನು ನೋಡಿದಾಗ, ಬೆಳಗಾವಿ ಜಿಲ್ಲೆ ಬಿಟ್ಟರೆ, ಅತಿ ಎರಡನೇ ದೊಡ್ಡ ಜಿಲ್ಲೆ ತುಮಕೂರು ಆಗಿದೆ, ತುಮಕೂರು ಜಿಲ್ಲೆ ಒಣ ಬೇಸಾಯ ಕೃಷಿ, ಮಳೆಯಾಶ್ರಿತ ಜಿಲ್ಲೆಯಾಗಿತ್ತು, ಜಿಲ್ಲೆಯಲ್ಲಿ ಪ್ರಮುಖ ನದಿಗಳು ಹರಿಯುವುದಿಲ್ಲ, ಬೇರೆ ಜಿಲ್ಲೆಗಳ ನೀರನ್ನು ಬಳಸಿ ವ್ಯವಸಾಯ ಮಾಡುವ ಸ್ಥಿತಿಯಲ್ಲಿದ್ದೇವೆ ಎಂದರು.

ತುಮಕೂರು ಜಿಲ್ಲೆಯ ನೀರಾವರಿ ಇತಿಹಾಸವನ್ನು ಒಮ್ಮೆ ಮುಲುಕು ಹಾಕಿದಾಗ 1789ರಲ್ಲಿ ಸುಮಾರು 1642 ಕೆರೆಗಳಿದ್ದವು ಎಂದು ವರದಿಯಲ್ಲಿದೆ, ಅಂದರೆ ಕೆರೆ ಆಶ್ರಯಾಧಾರಿತ ಕೃಷಿ ಬೂಮಿಯನ್ನು ಹೊಂದಿತ್ತು, 1954ರ ಗೆಜೆಟ್ ನಲ್ಲಿ ಕೆರೆಗಳ ಸಂಖ್ಯೆ 1171 ಆಗಿದೆ, ಇತ್ತೀಚಿನ ದಿನಗಳಲ್ಲಿ ಕೆರೆಗಳು ಬಹಳಷ್ಟು ಕಣ್ಮರೆಯಾಗಿವೆ ಎಂದರು.

ಈಗ ಯಾವ ರೀತಿಯ ನೀರಾವರಿ ವ್ಯವಸ್ಥೆಯನ್ನು ಹೊಂದಿದ್ದೇವೆ ಎಂದರೆ ಹಾಸನ ಜಿಲ್ಲೆ ಗೋರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ನೀರನ್ನು ಕಾಲುವೆಯ ಮೂಲಕ ಹರಿಸಿ ವ್ಯವಸಾಯಕ್ಕೆ ಬಳಸುವ ಪ್ರಯತ್ನವನ್ನು ಕಳೆದ 30 ವರ್ಷಗಳಿಂದ ಮಾಡುತ್ತಿದ್ದೇವೆ. ತುಮಕೂರು ಜಿಲ್ಲೆಯ ಒಟ್ಟಾರೆ ಸುಮಾರೂ ಒಂದೂವರೆ ಲಕ್ಷ ಎಕ್ಟೇರ್ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದೇವೆ, ಅದರಲ್ಲಿ ಶೇಕಡ 30%ರಷ್ಟು ಮಾತ್ರ ಹೇಮಾವತಿ ನೀರಿನ ಆಶ್ರಯದಿಂದ ಕೃಷಿ ಮಾಡುತ್ತಿದ್ದು, ಮಿಕ್ಕಿದ್ದೆಲ್ಲಾ ಮಳೆಯಾಶ್ರಿತ ಕೃಷಿಯಾಗಿದೆ ಎಂದು ತಿಳಿಸಿದರು.

ಈ ಹಿನ್ನಲೆಯಲ್ಲಿ ಹೇಮಾವತಿ ಜಲಾಶಯದ ನೀರನ್ನು ಪ್ರಮುಖವಾಗಿ ತೆಗೆದುಕೊಂಡಾಗ 2,37 ಸಾವಿರ ಎಕರೆಗೆ 24ಟಿಎಂಸಿ ನೀರಿನ ಯೋಜನೆಯನ್ನು ತಯಾರು ಮಾಡಲಾಗಿದೆ, ಈ 24 ಟಿಎಂಸಿ ನೀರನ್ನು ತುಮಕೂರು ಜಿಲ್ಲೆ ಮತ್ತು ನಾಗಮಂಗಲ ತಾಲ್ಲೂಕಿಗೆ ಹಂಚಿಕೆ ಮಾಡಲಾಗಿದೆ, ಆದರೆ ಇದೂವರೆವಿಗೂ 24ಟಿಎಂಸಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ, ಈಗಾಗಲೇ 30 ವರ್ಷಗಳನ್ನು ಕಳೆದಿದ್ದೇವೆ ಎಂದರು.

ಈಗ ಭಯವೇನೆಂದರೆ ಅಣೆಕಟ್ಟು ಕೃಷಿ ಇದೆಯಲ್ಲಾ ಒಂದು ಸಂಕಷ್ಟವನ್ನು ಎದರಿಸುವಂತಾಗಿದೆ, ವರ್ಷಗಳು ಕಳೆದಂತೆ ಹೇಮಾವತಿ ಜಲಾಶಯ ಮತ್ತು ಜಿಲ್ಲೆಯ ಕೆರಗಳಲ್ಲಿ ಹೂಳು ತುಂಬಿಕೊಳ್ಳುತ್ತಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗುತ್ತಾ ಬರುತಾ ಇದೆ, ಈಗಾಗಲೇ 30 ವರ್ಷಗಳನ್ನು ಕಳೆದಿದ್ದೇವೆ ಹೇಮಾವತಿ ಅಣೆಕಟ್ಟಿನಲ್ಲಿ ತುಂಬಾ ಹೂಳು ತುಂಬಿರುವುದರಿಂದ 27ಟಿಎಂಸಿ ಸಂಗ್ರಹದ ಜಲಾಶಯದಲ್ಲಿ ಹಲವಾರು ಟಿಎಂಸಿ ನೀರು ಕಡಿಮೆಯಾಗಿದೆ. ಇದರಿಂದ ನೀರಿನ ತೊಂದರೆಯಾಗುತ್ತಾ ಇದೆ, ನಾಳೆ ಏನೆಂಬುದು ಗೊತ್ತಾಗುತ್ತಿಲ್ಲ ಎಂದರು.

ಹಾಗೆಯೇ ಜಿಲ್ಲೆಯ ಯೋಜನೆಯನ್ನೇ ಪರಿಪೂರ್ಣಗೊಳಿಸದೆ ಇರುವುದರಿಂದ ನೀರಾವರಿ ಸಮಸ್ಯೆಯಲ್ಲಿ ಇದ್ದೇವೆ, ಹೇಮಾವತಿ ನೀರಾವರಿಗೆ ತಿಪಟೂರು ತಾಲ್ಲೂಕಿನ ಸ್ವಲ್ಪ ಭಾಗ, ತುರುವೇಕೆರೆ ಬಹುತೇಕ, ಗುಬ್ಬಿ ಸ್ವಲ್ಪಭಾಗ, ಚಿಕ್ಕನಾಯಕನಹಳ್ಳಿ, ತುಮಕೂರು, ಕುಣಿಗಲ್ ತಾಲ್ಲೂಕುಗಳ ಅರ್ಧ ಭಾಗ ಮಾತ್ರ ಸೇರಿವೆ. ತುಂಗಾಭದ್ರ ಮೇಲ್ದಂಡೆ, ಎತ್ತಿನ ಹೊಳೆ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ, ಇದರಿಂದ ನೀರಾವರಿ ಸಮಸ್ಯೆಯಿಂದ ನಲುತ್ತಿದ್ದೇವೆ ಎಂದು ಹೇಳಿದರು.

ಹೇಮಾವತಿ ಬಂತು ಅನ್ನುವ ಕಾರಣಕ್ಕೆ ವ್ಯವಸಾಯದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿಕೊಂಡಿದ್ದೇವೆ, ಜಿಲ್ಲೆಯ ಕೃಷಿ ಭೂಮಿಯಲ್ಲಿ ರಾಗಿ, ದ್ವಿದಳ ಧಾನ್ಯ, ಬೇಳೆ ಕಾಳುಗಳು, ಎಣ್ಣೆ ಕಾಳುಗಳನ್ನು ಬೆಳೆಯುತ್ತಿದ್ದೆವು, ಇವುಗಳನ್ನು ಧಿಕ್ಕರಿಸಿ ಸಂಪೂರ್ಣವಾಗಿ ವಾಣಿಜ್ಯ ಬೆಳೆಗಳಾದ ತೆಂಗು ಮತ್ತು ಅಡಿಕೆ ಬೆಳೆಗೆ ಬದಲಾಗಿದ್ದೇವೆ, ಹೇಮಾವತಿ ನೀರಿನಿಂದ ವಾಣಿಜ್ಯ ಬೆಳೆ ಬೆಳೆಯುತ್ತಿದ್ದೇವಾ! ಅಂತ ನೋಡಿದರೆ ಇಲ್ಲ, ಹೇಮಾವತಿ ನಂಬಿಕೊಂಡು ಅಡಿಕೆ-ತೆಂಗನ್ನು ಬೆಳೆಯುತ್ತಿದ್ದೇವೆ ಎಂದು ಹೇಳಿದರು.

ಇವತ್ತಿನ ಪರಿಸ್ಥಿತಿ ನೋಡಿದರೆ ಹೇಮಾವತಿ ನೀರಿನಿಂದಲೇ ಬೆಳೆ ಬೆಳೆಯುತ್ತಿದ್ದೇವಾ ಇಲ್ಲ, ಹೋರಾಟ ಮಾಡಿ ಹೇಮಾವತಿಯನ್ನು ತಂದ ಮೇಲೂ ಹೆಚ್ಚು ಮಳೆ ಬಿದ್ದಾಗ ನಾಲೆಯಲ್ಲಿ ಹೆಚ್ಚು ನೀರು ಹರಿದಾಗ ಹೋರಾಟಗಳನ್ನು ಮಾಡಿ ತೂಬುಗಳನ್ನು ಎತ್ತಿ ಕೆರೆಗಳನ್ನು ತುಂಬಿಸಿಕೊಂಡು, ಅದರ ಮೂಲಕ ಬೋರ್‍ವೆಲ್‍ಗಳನ್ನು ರೀಚಾರ್ಜ್ ಮಾಡಿಕೊಂಡು ಅಡಿಕೆ-ತೆಂಗನ್ನು ಬೆಳೆಯುತ್ತಿದ್ದೇವೆ ಎಂದರು.

ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಹೇಮಾತಿ ನಾಲೆಗೆ ಭೂತ ಬಂದು ನಿಂತಿದೆ ಅದೇ “ಲಿಂಕ್ ಕೆನಾಲ್” ಭೂತ. ಇದರ ಬಗ್ಗೆ ಯೋಚನೆ ಮಾಡಬೇಕಿದೆ, ಯಾಕೆಂದರೆ ಈ 30ವರ್ಷಗಳಲ್ಲಿ 24ಟಿಎಂಸಿ ನೀರನ್ನು ಬಳಸಲಿಕ್ಕೆ ಸಾಧ್ಯವಾಗಿಲ್ಲ, ಕುಣಿಗಲ್‍ನ ಥೈಲ್ಯಾಂಡ್‍ಗೆ ನೀರು ಕೊಡಲಿಕ್ಕೆ ಆಗಿಲ್ಲ, ಇದಲ್ಲದೆ ಕೊನೆಯ ಹಂತದ 35ಕಿ.ಮೀ. ನಾಲೆಯನ್ನೇ ಮಾಡಿಲ್ಲ, ನೀರು ಹೋಗುವುದಿಲ್ಲ ಅಂತ ಹೇಳಿ ಅವೈಜ್ಞಾಜಿಕ ಲಿಂಕ್ ಕೆನಾಲ್ ಒಂದನ್ನು 72ನೇ ಕಿ.ಮೀ.ನಿಂದ ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಕುಣಿಗಲ್‍ಗೆ ಬರಬೇಕಾದ ನೀರನ್ನು ಬಿಡುತ್ತೇವೆ ಎನ್ನುತ್ತಿದ್ದಾರೆ, ಆದರೆ ವಾಸ್ತವವೇ ಬೇರೆ ರಾಮನಗರದ ಶ್ರೀರಂಗಂ ಏತ ನೀರಾವರಿಗೆ ಹರಿಸಲು ಏತ ನೀರಾವರಿಗೆ ಬೇಕಾದ ಪೈಪ್ ಲೈನ್, ಪಂಪು ಹೌಸ್ ಮಾಡಿಕೊಂಡು ಕೆನಾಲ್ ಆಗಿಲ್ಲ ಅದಕ್ಕೆ ನೇರವಾಗಿ ಎಕ್ಸ್ ಪ್ರೆಸ್ ಕೆನಾಲ್ ಮೂಲಕ ನೀರನ್ನು ತೆಗೆದುಕೊಂಡು ಹೋಗುತ್ತಿದ್ದೇವೆಂಬ ಭೂತವನ್ನು ಬಿಟ್ಟಿದ್ದಾರೆ. ಇದು ನಮ್ಮ ರೈತರಿಗೆ ಸವಲಾಗಿದೆ. ಈ ಎಕ್ಸ್‍ಪ್ರೆಸ್ ಕೆನಾಲ್ ಬಗ್ಗೆ ರೈತರು ಎಚ್ಚತ್ತುಕೊಳ್ಳಬೇಕಿದೆ ಎಂದರು.

ಎತ್ತಿನ ಹೊಳೆ ಪಶ್ಚಿಮಘಟ್ಟಗಳ ನೀರಿನಿಂದ ಏತ ನೀರಾವರಿ ಮೂಲಕ ನಮ್ಮ ಭಾಗ, ಚಿಕ್ಕಬಳ್ಳಾಪುರ, ಕೋಲಾರ ಭಾಗಗಳಿಗೆ ನೀರು ಕೊಡುವ ಯೋಜನೆಯಾದರೂ, ಈ ಯೋಜನೆ ದಿನದಿಂದ ದಿನಕ್ಕೆ ಜಮೀನು ಭೂಸ್ವಾಧೀನ ನಿಧಾನವಾಗಿರುವುದರಿಂದ ಯೋಜನೆಯ ವೆಚ್ಚ ಹೆಚ್ಚಾಗುತ್ತಾ ಇರುವುದರಿಂದ ಇನ್ನಷ್ಟು ವರ್ಷಗಳು ವಿಳಂಭವಾಗಲಿದೆ ಎಂದರು.

ಮೂರನೆಯದು ಭದ್ರಮೇಲ್ದಂಡೆ ಯೋಜನೆ, ಈ ಯೋಜನೆ ನಿಜಲಿಂಗಪ್ಪನವರ ಕಾಲದ್ದು, 50ರ ದಶಕದ ಯೋಜನೆ, ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಪ್ರಾರಂಭ ಮಾಡಲಾಯಿತು, ಅಂದು 2 ಸಾವಿರ ಕೋಟಿ ಇದ್ದದ್ದು ಇವತ್ತು 25ಸಾವಿರ ಕೋಟಿಯಾಗಿದೆ, ಈ ಯೋಜನೆಯನ್ನು 2028ರಷ್ಟರಲ್ಲಿ ಮುಗಿಸಬೇಕು, ಇನ್ನೂ 20ಸಾವಿರ ಕೋಟಿ ಹಣ ಬೇಕು, ಹಾಗಾದರೆ ಮುಗಿಯುವುದು ಯಾವಾಗ, ಈ ಹಿನ್ನಲೆಯಲ್ಲಿ ನಮಗೆ ಹೇಮಾವತಿಯ ನೀರು ಅಗತ್ಯವಾಗಿರುವುದರಿಂದ ಎಕ್ಸ್ ಪ್ರೆಸ್ ಕೆನಾಲ್ ನ್ನು ಎಲ್ಲರೂ ವಿರೋಧಿಸಬೇಕಾಗಿದೆ ಎಂದರು.

ಗೋಷ್ಠಿಯಲ್ಲಿ ಕೆಂಟಲಗೆರೆ ಗುರುಪ್ರಸಾದ್, ಅಮ್ಮನಘಟ್ಟಶಂಕರಪ್ಪ, ದುಗ್ಗೇನಹಳ್ಳಿ ಸಿದ್ದೇಶ್ ಪ್ರತಿಕ್ರಿಯೆ ನೀಡಿದರು. ಅಧ್ಯಕ್ಷತೆಯನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮನು ಬಳಿಗಾರ್ ವಹಿಸಿದ್ದರು.

Leave a Reply

Your email address will not be published. Required fields are marked *