ತುಮಕೂರು:ಸಣ್ಣ ಸಣ್ಣ ಸಮಾಜಗಳು ಒಗ್ಗಟ್ಟು ಪ್ರದರ್ಶಿಸದಿದ್ದರೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವುದು ಕಷ್ಟ ಸಾಧ್ಯ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ,ಜಿಲ್ಲಾಪಂಚಾಯಿತಿ,ಮಹಾನಗರಪಾಲಿಕೆ,ಕಸಾಪ,ತುಮಕೂರು ಜಿಲ್ಲಾ ಮಡಿವಾಳ ಸಂಘದವತಿಯಿಂದ ಆಯೋಜಿಸಿದ್ದ ಶ್ರೀಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಸರಕಾರದ ಸವಲತ್ತುಗಳನ್ನು ಪಡೆಯಬೇಕೆಂದರೆ,ನಮ್ಮಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು.ಶೋಷಿತ ಸಮುದಾಯಗಳು ಒಗ್ಗಡದಿದ್ದರೆ ಮುಂದಿನ ಭವಿಷ್ಯ ಕುಂಠಿತವಾಗಲಿದೆ ಎಂದು ಎಚ್ಚರಿಸಿದರು.
ನನಗೆ ತಿಳಿದಿರುವಂತೆ ತುಮಕೂರು ಗ್ರಾಮಾಂತರದಲ್ಲಿ ಎಲ್ಲಿಯೂ ಮಡಿವಾಳ ಮಾಚಿದೇವರ ಸಮುದಾಯ ಭವನಗಳಿಲ್ಲ. ಹಾಗಾಗಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮಾಚಿದೇವ ಸಮುದಾಯ ಭವನವನ್ನು 2 ಕೋಟಿ ರೂಗಳಲ್ಲಿ ನಿರ್ಮಿಸಿ ಕೊಡಲಿದ್ದೇವೆ.ಇಲ್ಲದಿದ್ದ ಪಕ್ಷದಲ್ಲಿ ನನ್ನ ಸ್ವಂತ ಖರ್ಚಿನಲ್ಲಿಯೇ ನಿರ್ಮಿಸಿಕೊಡಲು ಸಿದ್ದರಿರುವುದಾಗಿ ಭರವಸೆ ನೀಡಿದರಲ್ಲದೆ, ಕಾರ್ಯಕ್ರಮದ ಖರ್ಚಿಗಾಗಿ ಇಂದು 50 ಸಾವಿರ ರೂಗಳ ಧೇಣಿಗೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುವುದರಿಂದ ಕ್ಷೇತ್ರದ ನೂರಾರು ಜನರಿಗೆ ಅನುಕೂಲ ವಾಗಲಿದೆ.ಸರಕಾರ ಈ ನಿಟ್ಟಿನಲ್ಲಿ ಸರಕಾರದ ಸವಲತ್ತು ನೀಡುವಾಗ ತಳಸಮುದಾಯಗಳಿಗೆ ಮೊದಲ ಅದ್ಯತೆ ನೀಡಬೇಕು.ನಾನು ನಿಮ್ಮ ಸುಖಃದಲ್ಲಿ ಭಾಗಿಯಾಗುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದರೆ ನಿಮ್ಮ ಕಷ್ಟದಲ್ಲಿ ಖಂಡಿತ ನಿಮ್ಮ ಜೊತೆಗೆ ಇರುತ್ತೇನೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅಭಯ ನೀಡಿದರು.
ತುಮಕೂರು ಉಪವಿಭಾಗಾಧಿಕಾರಿ ನಟರಾಜ್ ಮಾತನಾಡಿ,ಈ ನಾಡಿನಲ್ಲಿ ನಡೆಯುತ್ತಿದ್ದ ಅನಾಚಾರ, ಶೋಷಣೆಯನ್ನು 12ನೇ ಶತಮಾನದಲ್ಲಿಯೇ ಶರಣರು ತಮ್ಮ ವಚನಗಳ ಮೂಲಕವೇ ತಿದ್ದೀ, ತೀಡುವ ಕೆಲಸ ಮಾಡಿದರು.ಆದರೆ ಇಂದಿಗೂ ಸಮಾಜದಲ್ಲಿ ಸುಧಾರಣೆ ಎಂಬುದು ಕಂಡು ಬಂದಿಲ್ಲ.ಜಾತಿಯತೆ, ಅಸ್ಪøಷ್ಯತೆ,ಶಿಕ್ಷಣದಿಂದ ವಚಿಸುವ ಕೆಲಸ ನಡೆದಿದೆ.ಹಾಗಾಗಿ ಸಮಾಜದಿಂದ ಸರಿದಾರಿಗೆ ತರುವ ಕೆಲಸವನ್ನು ಎಲ್ಲಾ ಶೋಷಿತ ಸಮಾಜಗಳು ಒಗ್ಗೂಡಿ ಮಾಡಬೇಕಾಗಿದೆ ಎಂದರು.
ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿವಿ ಪ್ರಾಧ್ಯಾಪಕ ಡಾ.ಕೊಟ್ರೇಶಿ ಮಾತನಾಡಿ, ಓರ್ವ ಶಾಸಕನಿಲ್ಲ. ಹಾಗಾಗಿ ಎಲ್ಲಾ ತಳ ಸಮುದಾಯಗಳು ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ವಿಷ್ಣುವರ್ಧನ್, ರೈತ ಕವಿ ಡಾ.ಪಿ.ಶಂಕರಪ್ಪ,ಪತ್ರಕರ್ತ ನವೀನ್ ಕಿಲಾರ್ಲಹಳ್ಳಿ, ಎನ್.ಗಂಗಾಧರ್ ಮಡಿವಾಳ್,ಕಲಾವಿದರಾದ ಟಿ.ಎಲ್.ಕಾಂತರಾಜ್,ವೆಂಕಟಪ್ಪ, ಕುಲಕಸುಬುದಾರರಾದ ಶ್ರೀಮತಿ ಲಕ್ಷ್ಮಮ್ಮ,ಜಾನಪದ ಕಲಾವಿದೆ ಶ್ರೀಮತಿ ಲಕ್ಷ್ಮಮ್ಮ ಅವರುಗಳನ್ನು ಅಭಿನಂದಿಸಲಾಯಿತು.
ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷ್ಮಣ್,ತಾಲೂಕು ಅಧ್ಯಕ್ಷ ಬಿ.ಕೆಂಪನರಸಯ್ಯ,ಹೆಚ್.ದೇವೇಂದ್ರಪ್ಪ,ಚಿ.ನಿ.ಪುರುಷೋ ತ್ತಮ್,ಶಾಂತಕುಮಾರ್,ಹೆಚ್.ಎಂ.ಸೀನಯ್ಯ,ಬಿ.ವೆಂಕಟರಾಮಯ್ಯ,ಬಿ.ಚಿಕ್ಕಣ್ಣ,ಆರ್.ಕೃಷ್ಣಮೂರ್ತಿ,ಕೆ.ಎ.ಗೋವಿಂದರಾಜು,ಆರ್.ಕೆಂಪರಾಮಯ್ಯ,ಜಿ.ಆರ್.ಚನ್ನಬಸವಣ್ಣ,ಟಿ.ಎಸ್.ಲೋಕೇಶ್,ಎಂ.ಎಲ.ಆನಂದಮೂರ್ತಿ,ಎಸ್.ಕಾರಿಯಪ್ಪ,ಯದುಕುಮಾರ್ ಮತ್ತಿತರರು ಉಪಸ್ಥಿತರಿದ್ದರು