ತುಮಕೂರು:ಅಕ್ಷರ ವಂಚಿತ ಸಮುದಾಯಗಳ ಅಂಬೇಡ್ಕರ್ ಆಶಯದಂತೆ ಶಿಕ್ಷಣ ಪಡೆದು ಬಂದ ವ್ಯಕ್ತಿಗಳ ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಗಮನಿಸಿದರೆ ನಿಜಕ್ಕೂ ನಾಚಿಕೆ ಎನಿಸುತ್ತದೆ.ಮಾಜಿ ಶಿಕ್ಷಣ ಮಂತ್ರಿ ಎನ್.ಮಹೇಶ್, ಸಂಸದ ಶ್ರೀನಿವಾಸ ಪ್ರಸಾದ್,ಹೆಚ್.ವಿಶ್ವನಾಥ್ ಇವರುಗಳು ಅಂಬೇಡ್ಕರ್,ಲೋಹಿಯ ಚಿಂತನೆಗಳನ್ನು ಅಮೂಲಾಗ್ರವಾಗಿ ಓದಿ,ಅರಗಿಸಿ ಕೊಂಡ ವರು.ಆದರೆ ಇಂದು ಅವರ ಸ್ಥಿತಿ ಏನಾಗಿದೆ. ಶತಶತಮಾನಗಳಿಂದ ತಳ ಸಮುದಾಯಗಳ ಬಲವರ್ಧನೆಯನ್ನು ವಿರೋಧಿ ಸುವವರ ಜೊತೆ ಸೇರಿರುವುದು ಏನನ್ನು ಸೂಚಿಸುತ್ತದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕನ್ನಡಭವನದಲ್ಲಿ ಆರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಲಜಂಬು ಲಿಂಕ್ಸ್ ಮತ್ತು ಅಲೇಖ್ಯ ಪ್ರಕಾಶನ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಉಪನ್ಯಾಸಕ ಹಾಗೂ ವಿಮರ್ಶಕ ಡಾ.ರವಿಕುಮಾರ್ ನೀಹ ಅವರ ಅರಸು ಕುರನ್ಗರಾಯ ಎಂಬ ಐತಿಹಾಸಕ ಪುಸಕ್ತ ಲೋಕಾರ್ಪಣೆಗೊಳಿಸಿ ಮಾತನಾ ಡುತಿದ್ದ ಅವರು,ಶಿಕ್ಷಣ ಪಡೆದಿರುವ ನಮ್ಮಗಳ ನಡೆ,ಅಂಬೇಡ್ಕರ್ ಆಶಯದ ವಿವೇಕಯುತ ನಡೆಯಾಗಿದೆಯೇ, ನಮ್ಮ ಬದುಕು ಹಸನಾಗಿದೆಯೇ ಎಂಬುದನ್ನು ನೋಡಿದರೆ ನಿಜಕ್ಕೂ ನಿರಾಸೆಯಾಗುತ್ತದೆ ಎಂದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಶಿಕ್ಷಣ,ಸಂಘಟನೆ,ಹೋರಾಟ ಎಂಬ ಶಬ್ದಗಳ ಮರು ವ್ಯಾಖ್ಯಾನದ ಅಗತ್ಯವಿದೆ ಎಂದು ಹಿರಿಯ ಸಂಸ್ಕೃತಿ ಚಿಂತಕ ಹಾಗು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ,ಸಂಶೋಧಕರಿಗೆ ತಾಳ್ಮೆ ಅತಿಮುಖ್ಯ. ಒಂದು ಅಕರದ ಹಿಂದೆ ಸಂಶೋಧನೆಗೆ ಇಳಿದಾಗ ಅದಕ್ಕೆ ಪೂರಕವಾಗಿ ಹಲವಾರು ಜನರನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಿ,ಅದನ್ನು ಅಕ್ಷರ ರೂಪಕ್ಕೆ ಇಳಿಸುವುದಕ್ಕೆ ನಿಜಕ್ಕೂ ತಾಳ್ಮೆ ಬೇಕು.ನಾನು ಅಧಿಕಾರಿಯಾಗಿ ಕೆಲಸ ನಿಮಿತ್ತು ಈ ಜಾಗದಲ್ಲಿ ಸಾಕಷ್ಟು ಬಾರಿ ಒಡಾಡಿದ್ದೇನೆ.ಇವುಗಳನ್ನು ಗಮನಿಸಿಲ್ಲ.ಈ ಕೃತಿಯನ್ನು ಓದಿದ ನಂತರ ಮತ್ತೊಮ್ಮೆ ಆ ಜಾಗದಲ್ಲಿ ಹೋಗಿ ಇವುಗಳನ್ನು ನೋಡುವ ಮನಸ್ಸಾಗಿದೆ.ಕೃತಿ ತುಂಬ ಆಸಕ್ತಿಕರವಾಗಿದೆ.ಓದಿಸಿಕೊಂಡು ಹೋಗುತ್ತದೆ.ಭಾಷೆಯೂ ಸರಳವಾಗಿದೆ.ಇದು ಕೃತಿಗೆ ಹೆಚ್ಚು ಘನತೆಯನ್ನು ನೀಡುತ್ತದೆ ಎಂದರು.
ಕೃತಿಯ ರಚನೆಕಾರ ಡಾ.ರವಿಕುಮಾರ ನೀಹ ಮಾತನಾಡಿ,ನಮ್ಮ ತಾಯಿ ಹಾಡುತ್ತಿದ್ದ ಜನಪದ ಹಾಡುಗಳಲ್ಲಿ ಕೇಳುತ್ತಿದ್ದ ಚರಿತ್ರೆಯಿಂದ ಆಚೆಗಿರುವ ದಲಿತ ರಾಜ ಕುರನ್ಗರಾಯನ ಕುರಿತು ಮೊದಲು ನಾಟಕ ಬರೆಯಲು ಆರಂಭಿಸಿದೆ.ಆ ನಂತರದಲ್ಲಿ ನಿಜವಾಗಿಯೂ ಇಂತಹ ಒಬ್ಬ ರಾಜ ಇದ್ದನೆ ಎಂಬ ಕುತೂಹಲದಿಂದ ಸಂಶೋಧನೆಗೆ ಇಳಿದಾಗ ಅನೇಕ ನಿಜ ಸಂಗತಿಗಳ ನಮ್ಮ ಮುಂದೆ ತೆರೆದುಕೊಂಡವು.ಗೆಳೆಯರ ಸಹಕಾರ ಮತ್ತು ಪ್ರೋತ್ಸಾಹದಿಂದ ಹತ್ತಾರು ಬಾರಿ ಸಿದ್ದರಬೆಟ್ಟದ ಸುತ್ತಮುತ್ತ ಓಡಾಡಿ,ಹಿರಿಯರನ್ನು ಮಾತನಾಡಿಸಿ,ಸ್ಥಳಪರಿಶೀಲನೆ ನಡೆಸಿದ ಮೇಲೆ ಕಂಡು ಬಂದ ಸತ್ಯವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದೇನೆ.ಇದೇ ಅಂತಿಮವಲ್ಲ.ಆರAಭವಷ್ಟೇ,ನನ್ನAತಹ ಅನೇಕರಿಗೆ ಸಂಶೋಧನೆ ನಡೆಸಲು ಸಾಕಷ್ಟು ಅವಕಾಶವಿದೆ.ಈ ಕುರಿತು ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳು ಹೊರಬರುವ ನಿರೀಕ್ಷೆ ಇದೆ ಎಂದರು.
ಸಿದ್ದರಬೆಟ್ಟದ ಮೂಲಕ ಹಾದು ಹೋದ ಅನೇಕ ವಿದೇಶಿ ಇತಿಹಾಸಕಾರರು ಕುರುನ್ಗುರಾಯನ ಬಗ್ಗೆ ಉಲ್ಲೇಖಿಸಿಲ್ಲ. ಇದರ ಹಿಂದಿನ ಸತ್ಯ ಏನು ಎಂದು ತಿಳಿಯುವ ನಿಟ್ಟಿನಲ್ಲಿ ಪ್ರಯತ್ನ ಇದಾಗಿದೆ.ನನಗೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಅಭಿನಂದನೆ ಸಲ್ಲಿಸುವುದಾಗಿ ಡಾ.ರವಿಕುಮಾರ್ ನೀಹ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,೨೫೦ವರ್ಷಗಳ ಹಿಂದೆ ಚರಿತ್ರೆಯಲ್ಲಿ ಹುದುಗಿ ಹೋಗಿದ್ದ ರಾಜನೊಬ್ಬನ ಬಗ್ಗೆ ಸಂಶೋಧನೆ ನಡೆಸಿ,ಅದನ್ನು ಜನರಿಗೆ ತಿಳಿಸುವ ಕೆಲಸ ಮಾಡಿರುವುದು ತುಂಬ ಅಭಿನಂದನೀಯ ಕೆಲಸ.ಸಿದ್ದರಬೆಟ್ಟ,ಬೂದುಗವಿ,ಕುರಂಕೋಟೆ ಬಹಳ ಐತಿಹ್ಯವಿದೆ.ಇವುಗಳ ಬಗ್ಗೆಯೂ ಬೆಳಕು ಚೆಲ್ಲುವ ಅಗತ್ಯವಿದೆ. ಕೃತಿಯನ್ನು ಓದಿ ನಮ್ಮ ಅನಿಸಿಕೆಯನ್ನು ತಿಳಿಸುವ ಮೂಲಕ ಮತ್ತಷ್ಟು ಪ್ರೇರೆಪಣೆ ನೀಡುವ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಶೋಧಕರಾದ ಡಾ.ಅರಡಿ ಮಲ್ಲಯ್ಯ,ಡಾ.ನೇ ರಂ ನಾಗರಾಜು,ಸೂರ್ಯ ಆಸ್ಪತ್ರೆಯಡಾ.ಲಕ್ಷ್ಮೀಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.