ಗುಬ್ಬಿ : ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನಗರೊತ್ತಾನದ ಅಡಿಯಲ್ಲಿ 9+5=14ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಶಾಸಕರು ಮತ್ತು ಸ್ಥಳಿಯ ಆಡಳಿತದ ಮಧ್ಯೆ ಜಟಾ-ಪಟಿ ಪ್ರಾರಂಭವಾಗಿದೆ.
ಚುನಾವಣಾ ಸಂದರ್ಭದಲ್ಲಿ ಬಂದ ಈ ಅನುದಾನವನ್ನು ಶಾಸಕರು ನನ್ನದೇ ಅಭಿವೃದ್ಧಿಯ ಕೊಡುಗೆ ಎಂಬಂತೆ ಬಿಂಬಿಸಿಕೊಂಡು ಸಂಚರಿಸಲು ಯೋಗ್ಯವಲ್ಲದ ರಸ್ತೆಗಳ ಇಕ್ಕಲೆಗಳಲ್ಲಿ ಶಾಸಕರ ಪ್ಲೆಕ್ಸ್ಗಳನ್ನು ಕಟ್ಟಿ ವ್ಯವಸ್ಥೆಯನ್ನು ಅಣಕಿಸುವಂತೆ ಇದು ನನ್ನ ಅಭಿವೃದ್ಧಿ ಎಂದು ಬೀಗುತ್ತಿದ್ದ ಶಾಸಕರ ಪಟಾಲಂಗೆ ಮುಟ್ಟಿ ನೋಡಿಕೊಳ್ಳುವಂತೆ ಗುಬ್ಬಿ ಪಟ್ಟಣಪಂಚಾಯ್ತಿ ಆಡಳಿತ ಪರ್ಯಾಯ ಗುದ್ದಲಿ ಪೂಜೆ ಮಾಡುವುದರ ಮೂಲಕ ಬಿಸಿ ಮುಟ್ಟಿಸಿದೆ.
ಇಲ್ಲಿಯ ತನಕ ಜಲಜೀವನ್ ಮಿಷನ್ ಮತ್ತು ಈ ವಿಶೇಷ ಅನುಧಾನ ನನ್ನ ಕೊಡುಗೆ ಎಂದು ಸಾರುತ್ತಿದ್ದ ಶಾಸಕರಿಗೆ ಇಂದು ಭ್ರಮನಿರಸನವಾಗಿದೆ. ಗುಬ್ಬಿಯಲ್ಲಿ ಯಾರು ಕೇಳುವವರಿಲ್ಲ ಅವಸರವಾಗಿ ಈ ಕಾಮಗಾರಿಯನ್ನು ಮುಗಿಸಿ ಚುನಾವಣೆಯಲ್ಲಿ ಪೋಜ್ ಕೊಡುವ ಇರಾದೆಗೆ ಕಲ್ಲು ಬಿದ್ದಿದೆ.
ಮುಖ್ಯ ಗುತ್ತಿಗೆದಾರರು ಹೊರತಾಗಿ ಅನಧಿಕೃತ ವ್ಯಕ್ತಿಗಳು ಕೆಲಸ ಮಾಡುತ್ತಿರುವುದು ಗುಣಮಟ್ಟದ ಕಾಮಗಾರಿಯ ಬಗ್ಗೆ ಗುಬ್ಬಿ ಜನತೆ ಅನುಮಾನ ವ್ಯಕ್ತಪಡಿಸಿದ್ದಾರೆ.