ತುಮಕೂರು: ಕೆಳ ಜಾತಿಯ ವ್ಯಕ್ತಿಯನ್ನು ಮದುವೆಯಾದಳು ಎಂಬ ಕಾರಣಕ್ಕೆ ತಂದೆಯೇ ಗರ್ಭೀಣಿ ಮಗಳನ್ನೇ ಕೊಲ್ಲುವಾಗ, ಭಾರತದ ಸಂಸ್ಕøತಿ, ಪರಂಪರೆ ಎಷ್ಟು ಎತ್ತರಕ್ಕೆ ಬೆಳೆದು ಎನು ಪ್ರಯೋಜನ ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ ಅವರು, ಭಾರತೀಯ ಸಂಸ್ಕøತಿ, ಪರಂಪರೆಯ ಹೆಸರಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಅನುಭವಿಸುವ ನೋವು, ಸಂಕಷ್ಟಗಳ ಬಗ್ಗೆ ಮಾತನಾಡದಿರುವುದು ಯಾವ ಭಾರತೀಯತೆ.ಇದೇನಾ ನಿಮ್ಮ ಸಹೋದರ,ಸಹೋದರಿಯನ್ನು ನಡೆಸಿ ಕೊಳ್ಳುವ ರೀತಿ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠವತಿಯಿಂದ ಆಯೋಜಿಸಿದ್ದ “ತಲ್ಲಣಸದಿರುವ ಮನವೇ”ಸಂಸ್ಕøತಿ ಚಿಂತನ ಚಾರಣ ಕಾರ್ಯಕ್ರಮ ಉದ್ಘಾಟಿಸಿ, ಉದ್ಯೋಗ ಸಿರಿ ಯೋಜನೆಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಆರ್ಹತೆಗಳಿದ್ದರೂ ಜಾತಿಯ ಕಾರಣಕ್ಕೆ ಅವಕಾಶದಿಂದ ವಂಚಿಸುವುದು ಎಷ್ಟು ಸರಿ. ಡಾ.ಜಿ.ಪರಮೇಶ್ವರ್ ಒಳ್ಳೆಯ,ಸಜ್ಜನ,ವಿದ್ಯಾವಂತ,ಆದರೆ ಎಸ್ಸಿ ಜಾತಿಯಲ್ಲಿ ಹುಟ್ಟಿದ್ದಾನೆ ಎಂಬ ನೆಪ ಮಾಡಿ, ಮುಖ್ಯಮಂತ್ರಿಯಿಂದ ವಂಚಿಸಲಾಗುತ್ತಿದೆ. ನನ್ನಂತೆಯೇ ಆರ್ಹತೆ ಇರುವ ಸಮುದಾಯದ ಪ್ರತಿಭಾವಂತರು ಉನ್ನತ ಹುದ್ದೆಗಳಿಂದ ವಂಚಿತರಾಗಿದ್ದಾರೆ. ಇದನ್ನು ಯಾವ ಸಂಸ್ಕøತಿ, ಪರಂಪರೆ ಎನ್ನಬೇಕು ಎಂದು ತನ್ನನ್ನೇ ತಾನೇ ಉದಾಹರಿಸುವ ಮೂಲಕ ದೇಶದಲ್ಲಿರುವ ಜಾತಿಯತೆಯ ಕರಾಳ ಮುಖವನ್ನು ತೆರೆದಿಟ್ಟರು.
ದೇಶದ ಸ್ವಾತಂತ್ರ, ಸಮಾನತೆಗಾಗಿ ಹೋರಾಟ ಮಾಡಿದ ಗಾಂಧೀಜಿಯ ಹೆಸರನ್ನು ಹೇಳಲು ಹಿಂಜರಿಯುವಂತಹ ಮಟ್ಟಕ್ಕೆ ಇಳಿದಿದ್ದೇವೆ. ಇದು ಯಾವ ಭಾರತ ಎಂದು ಪ್ರಶ್ನಿಸಿದ ಡಾ.ಜಿ.ಪರಮೇಶ್ವರ್, ಎಐ ಯುಗದಲ್ಲಿರುವ ನಾವು ಬುದ್ದ, ಬಸವ, ಗಾಂಧಿ ಹೇಳಿದ ಸಮಾನತೆಯ ಬಗ್ಗೆ ಮಾತನಾಡುತಿದ್ದೇವೆಯೇ ಹೊರತು ಅದನ್ನು ಅನುಸರಿಸುತ್ತಿಲ್ಲ. ವಿದ್ಯಾವಂತರು, ಪದವಿಧರರ ಸಂಖ್ಯೆ ಹೆಚ್ಚಾದಂತೆ ಅಸಮಾನತೆ ತೊಲಗಬೇಕಿತ್ತು. ಆದರೆ ಅದು ಮತ್ತೊಂದು ರೂಪದಲ್ಲಿ ನಮ್ಮೊಳಗೆ ಬೇರೂರುತ್ತಿದೆ. ವೇದಿಕೆಗಳಲ್ಲಿ ಮಾತನಾಡುವ ರೀತಿಯಲ್ಲಿ ನಾವು ನಡೆದುಕೊಳ್ಳುತ್ತಿಲ್ಲ. ನಮ್ಮ ನಡತೆ ಸರಿ ಹೋಗದೆÀ ಸಮಾನತೆ ಎಂಬುದು ಸಾಧ್ಯವಿಲ್ಲ ಎಂದರು.
ಸಮಾಜದಲ್ಲಿ ಸಮಾನತೆತರಲು ಹಲವರು ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸಾಲಿಗೆ ಕಾಗಿನೆಲೆ ಕನಕ ಗುರುಪೀಠ ಸಹ ಒಂದು ಹೆಜ್ಜೆ ಮುಂದಿರಿಸಿದೆ.ಇದು ಕಠಿಣ ಹಾದಿ,ಇಂತಹ ಸ್ವಾಮೀಜಿಗಳ ಸಂಖ್ಯೆ ಹೆಚ್ಚಬೇಕು.ನಮ್ಮಲ್ಲಿ ಆದರ್ಶಗಳಿಗೆ, ವಿಚಾರಧಾರೆಗಳಿಗೆ ಕೊರತೆಯಿಲ್ಲ. ಆದರೆ ಅವುಗಳನ್ನು ಪಾಲಿಸುತ್ತಿಲ್ಲ. ಮನುಷ್ಯತ್ವ, ಮಾನವೀಯತೆ ಕಲಿಸುವ ಕೆಲಸ ಆಗಬೇಕು. ಸಮಾಜದ ಪರಿವರ್ತನೆಯಲ್ಲಿ ತೊಡಗುವವರನ್ನು ನಾನು ಎಂದಿಗೂ ಗೌರವಿಸುತ್ತೇನೆ. ಹಾಗಾಗಿ ಕಾಗಿನೆಲೆ ಗುರುಪೀಠದ ಎಲ್ಲಾ ಕಾರ್ಯಗಳಿಗೆ ಬೆಂಬಲವಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪ್ರಸ್ತುತ ಭಾರತ ಮತ್ತು ಗಾಂಧೀ ಚಿಂತನೆಗಳ ಪ್ರಸುತ್ತತೆ ಎಂಬ ವಿಷಯ ಕುರಿತು ಮಾತನಾಡಿದ ಪತ್ರಕರ್ತ ದಿನೇಶ್ ಅಮೀನಮಟ್ಟು, ಒಂದು ಕಾಲದಲ್ಲಿ ಭಾರತದ ರಾಜಕೀಯ ಸ್ವಾತಂತ್ರ, ಗ್ರಾಮ ಸ್ವರಾಜ್, ಅಸ್ಪøಷ್ಯತೆ ನಿವಾರಣೆ, ಕೋಮು ಸೌಹಾರ್ಧತೆಗಾಗಿ ಹೋರಾಟ ಮಾಡಿದ ಗಾಂಧೀಜಿ, ಇಂದು ಯಾರಿಗೂ ಬೇಡದ ನಾಯಕನಾಗಿದ್ದಾರೆ. ಮುಸ್ಲಿಂರ ಪರ ಎಂಬ ಕಾರಣಕ್ಕೆ ಹಿಂದುಗಳು,ಪಾಕಿಸ್ಥಾನ ವಿಭಜನೆಗೆ ಕಾರಣ ಎಂಬ ಕಾರಣಕ್ಕೆ ಮುಸ್ಲಿಂರು,ಅಂಬೇಡ್ಕರನ್ನು ವಿರೋಧಿಸಿದ್ದರು ಎಂದು ದಲಿತರು ಗಾಂಧೀಜಿಯನ್ನು ದೂರ ಇಟ್ಟಿದ್ದಾರೆ. ಆದರೆ ಗಾಂಧೀಜಿ ಅವರು ಪ್ರತಿಪಾದಿಸಿದ ಸ್ವಾತಂತ್ರ, ಸಮಾನತೆ, ಅಸ್ಪøಷ್ಯತೆ ನಿವಾರಣೆ ಮತ್ತು ಕೋಮು ಸೌಹಾರ್ಧತೆ ಇವುಗಳು ಇಂದಿಗೂ ಪೂರ್ಣಗೊಂಡಿಲ್ಲ. ಧರ್ಮ ತಪ್ಪಲ್ಲ, ಆದರೆ ಧರ್ಮದ ಹೆಸರಿನಲ್ಲಿ ಕೋಮುವಾದಿಯಾಗುವುದು ತಪ್ಪು. 1927ರಲ್ಲಿ ಅತಿ ಅಸಮಾನತೆಯಿಂದ ಕೂಡಿದ ಮನುಸೃತಿಯನ್ನು ಅಂಬೇಡ್ಕರ್ ಸುಟ್ಟು ಹಾಕಿ, ಅದರ ಸ್ಥಾನದಲ್ಲಿ ಸಂವಿಧಾನವನ್ನು ತಂದು,ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಕನಸು ಕಂಡರು.ಆದರೆ ಮನುಸೃತಿಯನ್ನು ಮತ್ತೆ ಹುಟ್ಟು ಹಾಕುವ ಪ್ರಯತ್ನ ಈ ದೇಶದಲ್ಲಿ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಸ್ಪøಷ್ಯತೆ ಇಲ್ಲವೆಂದು ಕೆಲವರಿದ್ದಾರೆ. ಆದರೆ ಜಾತಿ ಗಣತಿಯನ್ನು ವಿರೋಧಿಸುತ್ತಾರೆ. ಅಸ್ಪøಷ್ಯತೆ ಈ ದೇಶಕ್ಕೆ ಅಂಟಿದ ರೋಗ. ಮೊದಲು ರೋಗವಿದೆ ಎಂಬು ಒಪ್ಪಿಕೊಳ್ಳಬೇಕು. ತದ ನಂತರ ಅದರ ಪರಿಹಾರಕ್ಕೆ ಪ್ರಯತ್ನಿಸಬೇಕೇ ಹೊರತು, ರೋಗವೇ ಇಲ್ಲ ಎಂಬುದು ಸರಿಯಲ್ಲ. ಅಸ್ಪøಷ್ಯತೆ ಆಗೋಚರವಾಗಿ ವ್ಯಾಪಕವಾಗಿ ಹರಡಿದೆ. ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲ್ಲುವುದು ಇಂದಿಗೂ ಕಷ್ಟವಿದೆ. ಗಾಂಧೀಜಿಯ ಕೈಯಲ್ಲಿನ ಕೋಲು ನೋಡಿದಾಗ ಭಯ ಮಾಯವಾಗಿ, ಭದ್ರತೆ ನಮ್ಮನ್ನು ಆವರಿಸುತಿತ್ತು. ಇಂದು ಕೋಲು ಹಿಡಿದು ಮೆರವಣಿಗೆ ಹೊರಟರೆ ಭಯ ನಮ್ಮನ್ನು ಆವರಿಸುತ್ತದೆ. ಅಹಿಂದ ಎಂಬ ಘೋಷಣೆ ಕೇವಲ ರಾಜಕೀಯ ಲಾಭಕ್ಕೆ ನಡೆದರೆ ಪ್ರಯೋಜನವಿಲ್ಲ. ಅದು ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಸಾಹಿತ್ಯಕ, ಸಾಂಸ್ಕøತಿಕ ವಲಯಗಳನ್ನು ಆವರಿಸಿಕೊಳ್ಳಬೇಕು.ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ದಿನೇಶ ಅಮೀನಮಟ್ಟು ತಿಳಿಸಿದರು.
ಕನಕದಾಸರ ಸಾಮಾಜಿಕ ಮತ್ತು ಅಧ್ಯಾತ್ಮಿಕತೆಗಳ ಅನುಸಂಧಾನ ಎಂಬ ವಿಷಯ ಮಂಡಿಸಿ ಮಾತನಾಡಿದ ಪ್ರೊ.ನಾಗೇಂದ್ರಕುಮಾರ್, ಭಕ್ತಿಗಳಲ್ಲಿ ಎರಡು ವಿಧ, ಶ್ರೀಮಂತರದ್ದು ಮತ್ತು ಬಡವರದ್ದು, ಕನಕದಾಸರ ಪ್ರಕಾರ ಭಕ್ತಿ ಎಂಬುದು ಏಕತೆ, ಭವ ಮೀರಿದ ಭಕ್ತಿ, ಸಮುದಾಯಗಳ ಒಳಗೆ ಬಂಧಿಸಲ್ಪಟ್ಟಿರುವ ಸಮಾಜ ಸುಧಾರಕರಗಳನ್ನು ಬಿಡುಗಡೆಗೊಳಿಸಬೇಕಿದೆ. ರಕ್ಷಿಸು ನಮ್ಮನ್ನು ಅನವರತ ಎಂದು ಎಲ್ಲರನ್ನು ಒಳಗೊಂಡಿದ್ದು ಕನಕದಾಸ ಕೊರಿಕೆಯಾಗಿದೆ, ಆಹಂಕಾರವನ್ನು ಬಿಟ್ಟವನೇ ನಿಜವಾದ ಭಕ್ತಿ ಎಂದು ಅವರು ಪ್ರತಿಪಾದಿಸಿದರು
ಶ್ರೀದೇವಿ ಚಾರಿಟಬಲ್ ಟ್ರಸ್ಟ್ನಡಾ.ರಮಣ್ ಹುಲಿನಾಯ್ಕರ್ ಮಾತನಾಡಿ, ಸಮಾಜವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆತರಬೇಕೆಂಬ ಉದ್ದೇಶದಿಂದ ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿವರ್ಷ ಒಂದೂವರೆ ಕೋಟಿಯಿಂದ ಎರಡು ಕೋಟಿ ರೂ.ಗಳ ಸ್ಕಾಲರ್ಶಿಫ್ ನೀಡುತ್ತಾ ಬಂದಿದ್ದೇವೆ. ಈ ವರ್ಷ 22 ವಿದ್ಯಾರ್ಥಿಗಳಿಗೆ ಈ ಪುರಸ್ಕಾರ ಲಭಿಸಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮಿಜೀ ಆಶೀರ್ವಚನ ನೀಡಿದರು. ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿಗಳ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತ್ತು.
ವೇದಿಕೆಯಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್, ಶಾಂತದುರ್ಗಾದೇವಿ ಹುಲಿನಾಯ್ಕರ್, ತಲ್ಲಣಿಸದಿರುವ ಮನವೇ ಕಾರ್ಯಕ್ರಮದ ಸಂಚಾಲಕರಾದ ಡಾ.ಮಂಜಪ್ಪ ಮಾಗೋಡಿ ಮತ್ತಿತರರು ಉಪಸ್ಥಿತರಿದ್ದರು.