ತುಮಕೂರು ಜಿಲ್ಲಾ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ಹಿರಿಯ ವಕೀಲರೂ ಆದ ಕೆ.ಎನ್ ಬಸವರಾಜು ಮಾ.10ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ, ಓರ್ವ ಪುತ್ರ, ತಾಯಿ ಮತ್ತು ಅಪಾರ ವಕೀಲ ಸ್ನೇಹಿತರನ್ನು ಅಗಲಿದ್ದಾರೆ.
ಇವರು ಕೆಎಸ್ಆರ್ಟಿಸಿ ತುಮಕೂರು ಘಟಕದ ಕಾನೂನು ಸಲಹೆಗಾರರಾಗಿದ್ದರು. ಸಿವಿಲ್ ಪ್ರಕರಣಗಳನ್ನು ಬಗೆಹರಿಸಿ ಹೆಸರು ಮಾಡಿದ್ದರು ಎಂದು ಅವರ ಸ್ನೇಹ ಬಳಗ ಸ್ಮರಿಸಿದೆ.
ವಕೀಲರ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಯಲ್ಲಿ ಇವರ ಸ್ನೇಹಿತರಾದ ನವೀನ್ ನಾಯಕ್ ಮತ್ತು ಬಸವರಾಜು ಅಪಾರವಾದ ಪರಿಶ್ರಮವಿದೆ. ಅನೇಕ ಸಾಮಾಜಿಕ ಚಿಂತನೆಗಳು ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
ಮೃತರ ಸ್ನೇಹಿತ ವಕೀಲರಾದ ಜಿ.ಮಂಜುನಾಥ್, ಕಿರಣ್ ಕುಮಾರ್(ಡಿಪಿಕೆ), ಕೆ. ನವೀನ್ ನಾಯಕ್, ಏಸಾನ್ ಅಹಮದ್, ಜಫ್ರುಲ್ಲಾ ಖಾನ್, ಪಿ.ಮಹೇಶ್, ಈ.ಶಿವಣ್ಣ, ಶ್ವೇತ, ಸುಚಿತ್ರ, ಕವಿತಾ ಸಂತಾಪ ಸೂಚಿಸಿದ್ದಾರೆ.