ತುಮಕೂರು : ತುಮಕೂರು ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ-73 ಬಿ.ಹೆಚ್. ರಸ್ತೆಯ ಶೆಲ್ ಪೆಟ್ರೋಲ್ ಬಂಕ್ನಿಂದ ಬಟವಾಡಿವರೆಗೆ ಬಿ.ಹೆಚ್. ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಕಾಮಗಾರಿಯನ್ನು ಸುಗಮವಾಗಿ ಮತ್ತು ಅಪಘಾತ ರಹಿತವಾಗಿ ನಡೆಸಲು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಭದ್ರತೆಯನ್ನು ಕೈಗೊಳ್ಳುವ ಉದ್ದೇಶದಿಂದ ಭಾರಿ ಹಾಗೂ ಮಧ್ಯಮ ಸರಕು ಸಾಗಾಣಿಕೆ ವಾಹನಗಳ ರಸ್ತೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಆದೇಶಿಸಿದ್ದಾರೆ.
ಈ ಆದೇಶವು ಮೇ 1 ರಿಂದ ಕಾಮಗಾರಿ ಪೂರ್ಣಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ. ಕುಣಿಗಲ್ ಕಡೆಯಿಂದ ಮಧುಗಿರಿ/ಶಿರಾ ಕಡೆಗೆ ಹೋಗುವ ಭಾರಿ & ಮಧ್ಯಮ ಸರಕು ಸಾಗಾಣಿಕೆ ವಾಹನಗಳು ಕುಣಿಗಲ್ ಜಂಕ್ಷನ್-ಗುಬ್ಬಿರಿಂಗ್ ರಸ್ತೆ ಜಂಕ್ಷನ್-ದಿಬ್ಬೂರು ಸರ್ಕಲ್-ಶಿರಾ ಗೇಟ್ 80 ಅಡಿ ರಸ್ತೆಯ ಮೂಲಕ ಹೋಗಬೇಕು.
ತಿಪಟೂರು ಕಡೆಯಿಂದ ಮಧುಗಿರಿ-ಶಿರಾ ಕಡೆಗೆ ಹೋಗುವ ಭಾರಿ & ಮಧ್ಯಮ ಸರಕು ಸಾಗಾಣಿಕೆ ವಾಹನಗಳು ಗುಬ್ಬಿರಿಂಗ್ ರಸ್ತೆ ಜಂಕ್ಷನ್- ದಿಬ್ಲೂರು ಸರ್ಕಲ್-ಶಿರಾ ಗೇಟ್ 80 ಅಡಿ ರಸ್ತೆಯ ಮೂಲಕ ಹೋಗಬೇಕು.
ಶಿರಾ-ಮಧುಗಿರಿ ಕಡೆಯಿಂದ ತಿಪಟೂರು-ಕುಣಿಗಲ್-ಮದ್ದೂರು-ಮೈಸೂರು ಕಡೆಗೆ ಹೋಗುವ ಭಾರಿ & ಮಧ್ಯಮ ಸರಕು ಸಾಗಾಣಿಕೆ ವಾಹನಗಳು ಶಿರಾ ಗೇಟ್ 80 ಅಡಿ ರಸ್ತೆ-ದಿಬ್ಬೂರು ಸರ್ಕಲ್- ಗುಬ್ಬಿರಿಂಗ್ ರಸ್ತೆ ಜಂಕ್ಷನ್ ಮೂಲಕ ಹೋಗಬೇಕು.
ತಿಪಟೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಭಾರಿ & ಮಧ್ಯಮ ಸರಕು ಸಾಗಾಣಿಕೆ ವಾಹನಗಳು ಗುಬ್ಬಿರಿಂಗ್ ರಸ್ತೆ ಜಂಕ್ಷನ್-ಕುಣಿಗಲ್ ಜಂಕ್ಷನ್- ಜಾಸ್ ಟೋಲ್ ಎನ್ಹೆಚ್ 48 ರಸ್ತೆ ಮೂಲಕ ಹೋಗಬೇಕು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣ ದಿಂದ ಬೆಂಗಳೂರು ಕಡೆಗೆ ಹೋಗುವ ಕೆಎಸ್ಆರ್ಟಿಸಿ ಬಸ್ಗಳು ಅಶೋಕ ರಸ್ತೆ-ಕೋಡಿ ಸರ್ಕಲ್-ಕೋತಿ ತೋಪು-ಹನುಮಂತಪುರ ರಸ್ತೆ ಮೂಲಕ ಹೋಗುವಂತೆ ಆದೇಶಿಸಲಾಗಿದೆ.
ಸಾರ್ವಜನಿಕರು ಹಾಗೂ ವಾಹನ ಚಾಲಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಿದೆ. ತಪ್ಪಿದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.