ರಾಜಕೀಯ ಅಧಿಕಾರ ಎಲ್ಲಾ ಕ್ರಾಂತಿಗಳಿಗೂ ಕೀಲಿ ಕೈಅಂಬೇಡ್ಕರ್ ಅವರ ವಾಕ್ಯ ಪಾಲಿಸಿ : ಮುರುಳೀಧರ್ ಹಾಲಪ್ಪ

ತುಮಕೂರು : ಭಾರತ ದೇಶದ ಕಟ್ಟ ಕಡೆಯ ಪ್ರಜೆಗೂ ಸಮಾನವಾದ ಅವಕಾಶ, ಶಿಕ್ಷಣ ಸಮಾನತೆಯ ಹಕ್ಕು ಸಿಗುವಂತಾಗಬೇಕಾದರೆ ಭಾರತ ರತ್ನ ಸಂವಿಧಾನ ಶಿಲ್ಪಿ ಸೋಷಿತರ ಧ್ವನಿಯಾಗಿ ಜ್ಞಾನದ ಬೆಳಕು ಹರಿಸಿದ ಅಂಬೇಡ್ಕರ್ ಅವರು ಹೇಳಿರುವಂತೆ ಎಲ್ಲಾ ಕ್ರಾಂತಿಗಳಿಗೂ ರಾಜಕೀಯ ಅಧಿಕಾರವೇ ಅಂತಿಮ ಇದನ್ನು ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಕೂಡ ಅಂಬೇಡ್ಕರ್ ಅವರ ವಾಕ್ಯವನ್ನು ಪಾಲನೆ ಮಾಡಬೇಕು ಎಂದು ರಾಜ್ಯ ಕೆ.ಪಿ.ಸಿ.ಸಿ ಉಪಾಧ್ಯಕ್ಷ ಹಾಗೂ ಹಾಲಪ್ಪ ಪ್ರತಿμÁ್ಠನದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಅವರು ತಿಳಿಸಿದರು.

ತುಮಕೂರು ನಗರ ಹೊರವಲಯದ ದಿಬ್ಬೂರು ಬಳಿ ಇರುವ ಹಾರೋನಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಸ್ವಾಭಿಮಾನಿ ಸೇನೆ ವತಿಯಿಂದ ನಡೆದ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮತದಾನದ ಹಕ್ಕು ಕೇವಲ ತೆರಿಗೆ ಪಾವತಿದಾರರಿಗೆ ಮಾತ್ರವಿತ್ತು ಆದರೆ ಭೀಮರಾವ್ ಅವರ ಪರಿಶ್ರಮದಿಂದಾಗಿ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕು ಸಿಕಂತಾಗಿ ಪ್ರತಿಯೊಬ್ಬರು ಗೌರವಯುತವಾಗಿ ಜೀವನ ಕಟ್ಟಿಕೊಳ್ಳವಂತಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಆಹಾರದ ಅಭದ್ರತೆಯ ಕಾಡ ತೊಡಗಿದ್ದ ಕಾಲಘಟ್ಟದಲ್ಲಿ ಹಸಿರು ಕ್ರಾಂತಿ ಹರಿಕಾರರಾಗಿ ದೇಶದ ಮುಂಚೂಣಿಗೆ ಬಂದ ಬಾಬು ಜಗಜೀವನ್ ರಾಮ್ ಅವರ ಚಿಂತನೆ ದೇಶದ ಜನರ ಹಸಿವನ್ನ ನೀಗಿಸಿದೆ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಅವರು ನೀಡಿರುವ ಕೊಡುಗೆ ಅಪಾರವಾಗಿದ್ದು ಆದರೆ ಇತಿಹಾಸಕಾರರು ಇದನ್ನ ಗುರುತಿಸುವಲ್ಲಿ ವಿಫಲರಾಗಿದ್ದಾರೆ ಅಸ್ಪೃಶ್ಯ ಸಮುದಾಯದಲ್ಲಿ ಜನಿಸಿದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಇಂತಹ ಮಾಹಿತಿಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದರು.

ಅಂಬೇಡ್ಕರ್ ಜಯಂತಿಯನ್ನು ರಿಯಲ್ ಎಸ್ಟೇಟ್ ದಂದೆಕೋರರು, ಕ್ರಷರ್ ಮಾಲೀಕರು, ವೈನ್ ಶಾಪ್ ಮಾಲೀಕರಿಗೆ ಸೀಮಿತಗೊಳಿಸಬಾರದು ಬದಲಾಗಿ ಶಿಕ್ಷಣ ಮತ್ತು ಬಡವರಿಗೆ ಸಹಾಯ ಮಾಡುವ ಮನಸ್ಸು ಉಳ್ಳ ಸಮರ್ಥರನ್ನು ಜೊತೆಗಿಟ್ಟುಕೊಂಡು ಜಯಂತಿ ಆಚರಿಸಬೇಕು ಪ್ರತಿನಿತ್ಯ ನನ್ನ ಮನೆಯ ಬಾಗಿಲಿಗೆ ನೂರಾರು ಬಡವರು ಅನೇಕ ರೀತಿಯ ಸಮಸ್ಯೆಗಳನ್ನ ಹೇಳಿಕೊಂಡು ಬರುತ್ತಾರೆ ನನ್ನ ಕೈಯಲ್ಲಾದ ಸಹಾಯವನ್ನು ನಾನು ಕೂಡ ಮಾಡುತ್ತಿದ್ದೇನೆ ಅಂಬೇಡ್ಕರ್ ಅವರ ಪೇ ಬ್ಯಾಕ್ ಟು ಸೊಸೈಟಿ ಆಶಯದಂತೆ ಬಡವರಿಗೆ ಸಹಾಯ ಮಾಡುತ್ತಿದ್ದೀನಿ ಎಂದು ಹಾಲಪ್ಪ ತಿಳಿಸಿದರು.

ಕಾರ್ಯಕ್ರಮದ ದಿವ್ಯಾ ಸಾನಿಧ್ಯ ವಹಿಸಿದ್ದ ಬೆಳ್ಳಾವೆ ಕಾರದ ಮಠದ ವೀರ ಬಸವ ಸ್ವಾಮೀಜಿ ಮಾತನಾಡಿ
ಮನುಷ್ಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳವಂತಾಗಲು ಅಂಬೇಡ್ಕರ್ ಅವರ ಕೊಟ್ಟ ಸಮಾನತೆಯ ಸಂವಿಧಾನ ಇಂದು ಸಹಕಾರಿಯಾಗಿದೆ ಅಂಬೇಡ್ಕರ್ ಅವರು ಬಯಸಿದಂತೆ ಶಿಕ್ಷಣವಂತಾದರೆ ಉದ್ಯೋಗ ಅನ್ನ ಸಮಾನತೆ ಇಂದು ಎಲ್ಲರಿಗೂ ಮೈಗೊಡುತ್ತಿದೆ ಇಂತಹ ಅಂಬೇಡ್ಕರ್ ಜಯಂತಿ ಗಳಿಗೆ ಸ್ವಾಮೀಜಿಗಳಿಗೆ ಹೋಗಬಾರದೆಂಬ ತಾಕಿತ್ತು ಬರುತ್ತದೆ ಆದರೆ ಕಾರದ ಶ್ರೀಗಳು ಬಸವಣ್ಣನವರ ಅನುಯಾಯಿಗಳು ಅನುಭವ ಮಂಟಪದ ವಾಣಿಯಂತೆ ನಾನು ಕೂಡಾ ಶೋಷಿತರ ಪರವಾಗಿ ದಲಿತರ ಕೇರಿಗಳಿಗೆ ಹೋಗುವ ಕೆಲಸ ಮಾಡುತ್ತೇನೆ ಎಂದರು.

ಮಾಜಿ ನಗರ ಸಭಾಧ್ಯಕ್ಷ ಹಾಗೂ ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಮುಖಂಡ ನರಸಿಯಪ್ಪ ಅವರು ಮಾತನಾಡಿ ಶೋಷಿತರು ಇಂದು ಐಎಎಸ್ ಕೆಎಎಸ್ ಸೇರಿದಂತೆ ಉನ್ನತಮಟ್ಟದ ಪದವಿಗಳನ್ನು ಪಡೆಯುತ್ತಿದ್ದಾರೆ ಆದರೆ ಇದು ಹೆಚ್ಚಾಗಬೇಕಿದೆ ನಮ್ಮ ಕಾಲಘಟ್ಟದಲ್ಲಿ ನಾವು ಶಿಕ್ಷಣ ವಂಚಿತರಾಗಿ ಮಂಡಿಪೇಟೆಯಲ್ಲಿ ಮೂಟೆ ಹೊತ್ತು ಜೀವನ ನಡೆಸಿದ್ದೇವೆ ಹಾಗಾಗಿ ಅಂಬೇಡ್ಕರ್ ಅವರು ಹೇಳಿದಂತೆ ಎಲ್ಲರೂ ಕೂಡ ಶಿಕ್ಷಣವಂತರಾಗಿ ಜ್ಞಾನವಂತರಾದರೆ ಶೋಷಿತರೆ ದೇಶವನ್ನು ಆಳಬಹುದಾಗಿದೆ ಹಾಗಾಗಿ ನಾವು ಒಗ್ಗಟ್ಟಿನಿಂದ ಮುನ್ನಡೆದರೆ ದೇಶವನ್ನ ಆಳಬಲ್ಲ ಸಾಮಥ್ರ್ಯವನ್ನು ಪಡೆಯುತ್ತೇವೆ ಎಂದು ತಿಳಿಸಿದರು.

ಅಂಬೇಡ್ಕರ್ ಜಯಂತಿಯಲ್ಲಿ ಹಾಲಪ್ಪ ಅವರ ಗುಣಗಾನ

ಶಾಸಕರು, ಸಂಸದರ ಮನೆ ಮುಂದೆ ಸಮಸ್ಯೆಗಳನ್ನು ಹೊತ್ತು ಬರುವ ಜನರನ್ನು ಕಾಣುತ್ತೇವೆ ಆದರೆ ಮುರಳೀಧರ್ ಹಾಲಪ್ಪ ಅವರು ಯಾವುದೇ ರಾಜಕೀಯ ಅಧಿಕಾರ ಲಾಭದಾಯಕ ಹುದ್ದೆಯನ್ನು ಹೊಂದಿಲ್ಲ ಆದರೂ ಪ್ರತಿನಿತ್ಯ ಇವರ ಮನೆ ಮುಂದೆ ನೂರಾರು ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಾರೆ ಆದರೆ ಹಾಲಪ್ಪ ಅವರು ಅವರಿಗೆಲ್ಲ ಬರೀ ಕೈಯಲ್ಲಿ ಕಳಿಸದೇ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ಸ್ಥಳದಲ್ಲಿ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಇದು ಅಧಿಕಾರವಂತ ಅಭ್ಯರ್ಥಿಗಳಿಗೆ ಮಾತ್ರ ಸಾಧ್ಯ ಆದರೆ ಹಾಲಪ್ಪ ಅವರಿಗೆ ಯಾವುದೇ ಅಧಿಕಾರವಿಲ್ಲದಿದ್ದರೂ ಅತ್ಯುತ್ತಮವಾದ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಹೀಗಾಗಿ ಮುಂದಿನ ದಿನಗಳಲ್ಲಿ ಇವರಿಗೆ ರಾಜಕೀಯ ಅಧಿಕಾರ ದೊರೆತರೆ ಅಂಬೇಡ್ಕರ್ ಅವರು ಕಂಡ ಕನಸು ನನಸಾಗುತ್ತದೆ ಜನರು ಚುನಾವಣಾ ಸಂದರ್ಭದಲ್ಲಿ ಇಂತಹ ಅಭ್ಯರ್ಥಿಗಳನ್ನು ಮುಖ್ಯವಾಹಿನಿಗರ ನಿನಗೆ ತಂದು ನಿಲ್ಲಿಸಿದರೆ ಸಮಾಜ ಇನ್ನಷ್ಟು ಅಭಿವೃದ್ಧಿಯನ್ನು ಹೊಂದುತ್ತದೆ ಎಂದು ಕಾಂಗ್ರೆಸ್ ಮುಖಂಡ ಶಿವಾಜಿ ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಆಯೋಜಕ ಜಿಲ್ಲಾ ಕಾಂಗ್ರೆಸ್ ಎಸ್ ಸಿ ವಿಭಾಗದ ಮಾಧ್ಯಮ ವಕ್ತಾರ ಮತ್ತು ಡಿಎಸ್‍ಎಸ್ ರಾಜ್ಯ ಉಪಾಧ್ಯಕ್ಷ ಹರೀಶ್ ಜಿ ಕಟ್ಟೆಮನೆ ಅವರು ಮಾತನಾಡುತ್ತಾ ಜೀತ ಪದ್ಧತಿಯಲ್ಲಿ ಇರುತ್ತಿದ್ದ ಶೋಷಿತರು ಇಂದು ರಾಜಭೀದಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಕೆಚ್ಚೆದೆಯಿಂದ ಧೈರ್ಯವಾಗಿ ಜಯಂತಿಗಳನ್ನು ಆಚರಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂದರೆ ಇದಕ್ಕೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ ಹೀಗಾಗಿ ಗ್ರಾಮೀಣ ಪ್ರದೇಶದ ಶೋಷಿತ ಸಮುದಾಯಗಳು ಅಂಬೇಡ್ಕರ್ ಅವರ ಸಮ ಸಮಾಜವಾದ ಸಮಾನತೆ ಶಿಕ್ಷಣ ರಾಜಕೀಯ ಅಧಿಕಾರವನ್ನು ಹೊಂದಿದಾಗ ಅವರ ಆಶಯಗಳು ಈಡೇರುತ್ತವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಜಿ.ನಿಂಗರಾಜು, ಬೆಸ್ಕಾಂ ಸಹಾಯಕ ಇಂಜಿನಿಯರ್ ಕೀರಣ್ ಕುಮಾರ್,ಮಹೇಶ್ವರಿ ಬಿಲ್ಡರ್ಸ್ ಮತ್ತು ಡೆವಲಪರ್ ಮಾಲೀಕ ಎನ್ ಶ್ರೀನಿವಾಸ್, ಡಿ ಎಸ್.ಎಸ್. ಮುಖಂಡ ಬಂಡೆ ಕುಮಾರ್, ಮುಖ್ಯ ಭಾಷಣಕಾರರಾದ ತುಮಕೂರು ವಿವಿಯ ಬಿ.ಎಂ.ಗಂಗಾಧರ್, ವಕೀಲರಾದ ಬೆಲದಮಡು ಬಿ.ಟಿ.ಶ್ರೀನಿವಾಸ್, ಕೌತಮಾರನಹಳ್ಳಿ ಕಾಂತರಾಜು, ಕಟ್ ಲೈಟ್ ಪೆÇೀಟೋ ವಿಡಿಯೋಗ್ರಪಿ ಮುಖ್ಯಸ್ಥ ರಾಮಕೃಷ್ಣ, ಹೇಮಂತ್ ಕುಮಾರ್, ನಾಗರಾಜು, ಬಸವರಾಜು, ರಾಕೇಶ್ ಸೇರಿದಂತೆ ಗಜಾನನ ಗೆಳೆಯರ ಬಳಗದ ಮುಖಂಡರು ಭಾಗವಹಿಸಿದ್ದರು.

ರಂಗಭೂಮಿ ಕಲಾವಿದ ಕೌತಮಾರನಹಳ್ಳಿ ಕಾಂತರಾಜು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *