ಮಾಜಿ ಶಾಸಕ ಡಾ.ರಫೀಕ್ ಅಹಮದ್ ಹುಟ್ಟು ಹಬ್ಬ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಆಚರಣೆ

ತುಮಕೂರು: ಮಾಜಿ ಶಾಸಕರು ಹಾಗೂ ಎಐಸಿಸಿ ಅಲ್ಪಸಂಖ್ಯಾತರ ಘಟಕದ ಸಂಚಾಲಕರಾದ ಡಾ.ಎಸ್.ರಫೀಕ್ ಅಹಮದ್ ಅವರ 56ನೇ ಹುಟ್ಟು ಹಬ್ಬದ ಅಂಗವಾಗಿ ಡಾ.ರಫೀಕ ಅಹಮದ್ ಸ್ನೇಹ ಬಳಗದವತಿಯಿಂದ ಜಿಲ್ಲಾ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು, ಬ್ರಡ್ ವಿತರಿಸುವ ಮೂಲಕ ಸರಳವಾಗಿ ಆಚರಿಸಿದರು.

ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರಡ್ ವಿತರಿಸಿ ಮಾತನಾಡಿದ ಡಾ.ರಫೀಕ್ ಅಹಮದ್ ಸ್ನೇಹ ಬಳಗದ ಮೆಹಬೂಬ್ ಪಾಷ,ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 2013 ರಿಂದ 2018ರವರೆಗೆ ಶಾಸಕರಾಗಿ ಕೆಲಸ ಮಾಡಿದ್ದ ರಫೀಕ್ ಅಹಮದ್ ಅವರು ಸ್ಮಾರ್ಟ್ಸಿಟಿಯಂತಹ ಯೋಜನೆಗೆ ತುಮಕೂರು ನಗರ ಆರ್ಹವಾಗಲು ಶ್ರಮವಹಿಸಿದ್ದರು. ಅಲ್ಲದೆ ತುಮಕೂರು ನಗರ ಶೈಕ್ಷಣಿಕವಾಗಿ, ಅರ್ಥಿಕವಾಗಿ ಬೆಳೆವಣಿಗೆ ಹೊಂದಲು ತಮ್ಮ ಆದ ಶ್ರಮವನ್ನು ಡಾ.ರಫೀಕ್ ಅಹಮದ್ ಹಾಕಿದ್ದರು.

ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ತುಮಕೂರು ನಗರದ ಸರ್ವತೋಮುಖ ಅಭಿವೃದ್ದಿ ತನ್ನದೇ ಆದ ಕೊಡುಗೆಯನ್ನು ಡಾ.ರಫೀಕ್ ಅಹಮದ್ ನೀಡಿದ್ದಾರೆ. ಅವರ ಹುಟ್ಟು ಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷವೂ ಡಾ.ರಫೀಕ್ ಅಹಮದ್ ಸ್ನೇಹ ಬಳಗ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಆಚರಿಸಲಾಗುತ್ತಿದೆ.ಅಧಿಕಾರ ಇಲ್ಲದಿದ್ದರೂ ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ಡಾ.ರಫೀಕ್ ಅಹಮದ್ ಅವರಿಗೆ ದೇವರು ಆಯುಷ್ಯು, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಆಟೋ ರಾಜು ಮಾತನಾಡಿ,ಇಂದು ನಾವು ಹಣ್ಣು ಹಂಪಲು ಹಂಚಿದ ಆಸ್ಪತ್ರೆಯ ಸಹ ನಿರ್ಮಾಣವಾಗಿರುವುದು ಸ್ಮಾರ್ಟ್ಸಿಟಿ ಅನುದಾನದಲ್ಲಿ, ಇದರ ರೂವಾರಿಗಳು ಡಾ.ರಫೀಕ್ ಅಹಮದ್, ನಗರಕ್ಕೆ ಸುಮಾರು 1200 ಕೋಟಿ ರೂಗಳ ಯೋಜನೆ ತಂದು ನಗರದ ಸಮಗ್ರ ಅಭಿವೃದ್ದಿ ಶ್ರಮಿಸಿದ ಜನಪ್ರತಿ, ಅವರು ಮತ್ತಷ್ಟು ಅಧಿಕಾರ ಪಡೆಯುವಂತಹ ಅವಕಾಶ ದೊರೆಯಲಿ ಎಂದು ಶುಭ ಹಾರೈಸಿದರು.

ಈ ವೇಳೆ ಮುಖಂಡರಾದ ಮಹಮದ್ ಜೈದ್, ಮೆಹಬೂಬ್ ಪಾಷ, ರಾಜಣ್ಣ, ಆಸ್ಗರ್, ಅದೀಂ ಅಹಮದ್, ಸಾಧಿಕ್, ಜಿಯಾವುಲ್ಲಾ, ನಾಶಿರ್, ಆದಿಲ್, ಮಹಿಳಾ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಗಳ, ಶಹಾಬುದ್ದಿನ್, ಮಹಮದ್ ಆಲಿ, ಶಾವಿದ್, ಸುವರ್ಣ ಕರ್ನಾಟಕ ಕಾರ್ಮಿಕ ಪರಿಷತ್‍ನ ಅಧ್ಯಕ್ಷರಾದ ಸಾಧಿಕ್ ಪಾಷ, ಉಪಾಧ್ಯಕ್ಷ ಸೋಹೇಲ್ ಪಾಷ, ಪ್ರಧಾನ ಕಾರ್ಯದರ್ಶಿ ಶಹಬಾಜ್, ಜಿಯಾವುಲ್ಲಾ ಬಾಬು, ಮಹಮದ್ ಉಬೇದುಲ್ಲಾ, ರವಿ, ನಟರಾಜ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *