ನಿವೃತ್ತ ಮುಖ್ಯೋಪಾಧ್ಯಾಯರುಪ್ರಗತಿಪರ ಕೃಷಿಕರರಾಗಿದ್ದ ಗೋವಿಂದಯ್ಯ ನಿಧನ

ತೀರಾ ಇತ್ತೀಚಿನವೆರೆಗೂ ಪಾದರಸದಂತೆ ಹೊಲ, ತೋಟ ಎಂದೆಲ್ಲ ಖುಷಿಯಿಂದ ಓಡಾಡುತ್ತಿದ್ದ ಗೋವಿಂದಯ್ಯ ಅವರು, ಪ್ರತಿಯೊಬ್ಬ ಮಕ್ಕಳು, ಮೊಮ್ಮಕ್ಕಳ ಹೆಸರಿನಲ್ಲಿ ಗಿಡ ನೆಟ್ಟಿದ್ದರು. “ಬೇಸಾಯವೇ ಬದುಕು” ಎಂಬ ಮಾತಿಗೆ ಪೂರಕವಾಗಿದ್ದ ಅವರು, ಶಿಕ್ಷಕ ವೃತ್ತಿಯಲ್ಲೂ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು.

ತುಮಕೂರು : ಮಧುಗಿರಿ ತಾಲ್ಲೂಕಿನ ಐಡಿ ಹಳ್ಳಿ ಯ ನಿವೃತ್ತ ಮುಖ್ಯೋಪಾಧ್ಯಾಯ ಪ್ರಗತಿಪರ ಕೃಷಿಕರರಾಗಿದ್ದ
ಕವಯತ್ರಿ ಹಾಗೂ ಕಲೇಸಂ ಮಾಜಿ ಅಧ್ಯಕ್ಷರಾದ ಜಿ. ಮಲ್ಲಿಕಾ ಬಸವರಾಜು ತಂದೆ ಗೋವಿಂದಯ್ಯ ಅವರು ಮೇ 19ರ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ನಿವೃತ್ತ ಶಿಕ್ಷಕರಾಗಿದ್ದ ಅವರು, ಕೃಷಿ ಹಾಗೂ ವೃಕ್ಷಪ್ರೇಮಿ. ಬಹುತೇಕ ಹಳ್ಳಿಯಲ್ಲೇ ಬದುಕು ನಡೆಸಿದ ಅವರು, ಮಲ್ಲಿಕಾ ಬಸವರಾಜು ಸೇರಿದಂತೆ ಮೂವರು ಪುತ್ರರು, ಒಬ್ಬ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೇ 20ರ ಬೆಳಿಗ್ಗೆ ಐಡಿ ಹಳ್ಳಿಯ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಯಿತು.

Leave a Reply

Your email address will not be published. Required fields are marked *