ಗ್ರಾಮೀಣಾಭಿವೃದ್ಧಿಯಲ್ಲಿ ಯುವ ಶಕ್ತಿಯ ಪಾತ್ರ ಹಿರಿದಾದುದು

ತುಮಕೂರು: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುವಲ್ಲಿ ಎನ್.ಎಸ್.ಎಸ್. ಪಾತ್ರ ಹಿರಿದಾದುದು ಎಂದು ತುಮಕೂರು ವಿವಿ ಪ್ರಾಂಶುಪಾಲರಾದ ಪ್ರೊ.ಶ್ರೀನಿವಾಸ ಎಸ್. ಅವರು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ವತಿಯಿಂದ ಇತ್ತೀಚಿಗೆ “ಸಾಮಾಜಿಕ ಮತ್ತು ಪರಿಸರ ಸುಸ್ಥಿರತೆಯಲ್ಲಿ ಯುವಶಕ್ತಿಯ ಪಾತ್ರ” ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಶಿಬಿರದಲ್ಲಿ ಮಾತನಾಡಿದರು.

ಎನ್.ಎಸ್.ಎಸ್. ಸಂಯೋಜಕರಾದ ಪ್ರೊ. ಬಗ್ಗನಡು ನಾಗಭೂಷಣ್ ಅವರು ಮಾತನಾಡಿ ಗ್ರಾಮೀಣಾಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ ಹಾಗೂ ಈ ವಿಶೇಷ ಶಿಬಿರದ ಮಹತ್ವದ ಕುರಿತು ಹೇಳಿದರು.

ಒಂದು ವಾರದ ಕಾಲ ನಡೆದ ಈ ಶಿಬಿರದಲ್ಲಿ ಗ್ರಾಮದ ನೈರ್ಮಲ್ಯೀಕರಣಕ್ಕಾಗಿ ವಿದ್ಯಾರ್ಥಿಗಳಿಂದ ನಿರಂತರ ಶ್ರಮದಾನ, ವಿವಿಧ ವಿಷಯಗಳ ಕುರಿತು ತಜ್ಞರಿಂದ ವಿಶೇಷ ಉಪನ್ಯಾಸಗಳು ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಪೂರಕವಾದ ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಶಿಬಿರದ ಅಧಿಕಾರಿಗಳಾದ ಪ್ರೊ. ಶೇಟ್ ಪ್ರಕಾಶ್, ಡಾ. ಭಾಗ್ಯಲಕ್ಷ್ಮಿ ಎಂ. ಮತ್ತು ಡಾ. ನಾರಾಯಣ ಗಾಂವ್ಕರ್ ಇದ್ದರು.

Leave a Reply

Your email address will not be published. Required fields are marked *