
E = mc2 ಇದೊಂದು ಸಾಪೇಕ್ಷ ಸಿದ್ಧಾಂತದ ಸೂತ್ರ ಈ ಸೂತ್ರವನ್ನು ಕಂಡು ಹಿಡಿದವರು ಅಲ್ಬರ್ಬ್ ಐನ್ ಸ್ಟೀನ್ ಅವರು. ಐನ್ ಸ್ಟೀನ್ ಜಗತ್ತಿನ ಪ್ರಸಿದ್ಧ ವಿಜ್ಞಾನಿಯಾದರೂ ತುಂಬಾ ಸರಳವಾಗಿದ್ದರು, ಆದರೆ ಅವರು ಕಂಡು ಹಿಡಿದ
E = mc2 ಸೂತ್ರವು ಇಡೀ ಜಗತ್ತನ್ನು ನಾಶ ಮಾಡುವ, ಆಳುವ ಶಕ್ತಿಯನ್ನು ಕೊಟ್ಟು ಬಿಟ್ಟಿತು.
ಜರ್ಮನಿಯು ಜಪಾನಿನ ಮೇಲೆ ಯುದ್ದ ಎಂಬ ನೆಪದಲ್ಲಿ ನ್ಯೂಕಿಯರ್ ಬಾಂಬ್ ಹಾಕಿದಾಗಲೇ E = mc2 ಸೂತ್ರವು ಜಗತ್ತನ್ನು ನಾಶ ಮಾಡುವಂತಹವುದು ಎಂದು ತಿಳಿದಾಗ ಐನ್ ಸ್ಟೀನ್ ಅವರು ಅಹಿಂಸಾ ಮೂಲಕ ಹೋರಾಟ ನಡೆಸುತ್ತಿದ್ದ ಮಹಾತ್ಮ ಗಾಂಧಿಯನ್ನು ಭೇಟಿ ಮಾಡಲು ಇಚ್ಚಿಸಿದ್ದೇನೆ, ಈ ಭೂಮಿಯ ಮೇಲೆ ಗಾಂಧಿಯಂತಹವರು ಇದ್ದರು ಅಂದರೆ ….. ಮುಂದಿನ ಪೀಳಿಗೆಯು ನಂಬುವುದೇ ಕಷ್ಟವಾಗುತ್ತದೆ, ಆದ್ದರಿಂದ ನಾನು ಅವರನ್ನು ಭೇಟಿ ಮಾಡಬೇಕು, ಮಾತನಾಡಬೇಕು ಐನ್ ಸ್ಟೀನ್ ಎಂದುಕೊಂಡರೂ, ಕೊನೆಗೂ ಒಬ್ಬರನೊಬ್ಬರನ್ನು ಭೇಟಿ ಮಾಡಲು ಸಾಧ್ಯವೇ ಆಗಲಿಲ್ಲ.
ಜಗತ್ತಿನ ಬಲಿಷ್ಠ ರಾಷ್ಟ್ರಗಳು ಈಗ E = mc2 ಸೂತ್ರದ ಮೂಲಕ ನ್ಯೂಕ್ಲಿಯರ್ (ಅಣು ಬಾಂಬ್) ಬಾಂಬ್ ತಯಾರಿಸಿಕೊಂಡು ಸಣ್ಣ-ಪುಟ್ಟ ದೇಶಗಳು ಅಣು ಬಾಂಬ್ ಹೊಂದುವುದು ಅಪರಾಧ ಅಂತ ಘೋಷಿಸಿ, ಆ ರಾಷ್ಟ್ರಗಳ ಮೇಲೆ ಯುದ್ಧ ಸಾರಿ ಮುಗ್ಧ ಜನರನ್ನು, ಮಕ್ಕಳನ್ನು ಕೊಲ್ಲುತ್ತಾ, ಸಂಪತ್ಭರಿತ ಸಣ್ಣ ರಾಷ್ಟ್ರಗಳ ಸಂಪತ್ತು ಮತ್ತು ತೈಲವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಜಗತ್ತನ್ನು ಆಳಲು ಮುಂದಾಗಿದ್ದಾವೆ.
ಈ ರೀತಿ ಜಗತ್ತನ್ನು ಆಳಲು ಹೊರಟ ಬಲಿಷ್ಠ ಬಂಡವಾಳಶಾಹಿ ರಾಷ್ಟ್ರಗಳು ಸಣ್ಣ ಪುಟ್ಟ ದೇಶಗಳನ್ನು ನ್ಯೂಕ್ಲಿಯರ್ ಬಾಂಬ್ ಹೊಂದಬೇಡಿ, ಹೊಂದಿದರೆ ನಾವು ಅಣುಬಾಂಬ್ ಹಾಕಿ ಕೊಲ್ಲುತ್ತೇವೆ ಎಂದು ಯುದ್ಧ ಸಾರಿ ನಾಶ ಮಾಡುತ್ತಾ ಇವೆ.
1988ರಲ್ಲಿ ತುಮಕೂರಿನ (ಈಗಿನ ವಿಜ್ಞಾನ ವಿಶ್ವ ವಿದ್ಯಾಲಯ ವಿಜ್ಞಾನ ಕಾಲೇಜು) ವಿಜ್ಞಾನ ಕಾಲೇಜುನಲ್ಲಿ ನಾನು ಪಿಸಿಎಂಬಿಯಲ್ಲಿ ಓದಲು ಸೇರಿದೆ, ನಮಗೆ ಭೌತವಿಜ್ಞಾನದಲ್ಲಿ

Angular Velocity ಮತ್ತು Motion and Velocity ಬಗ್ಗೆ ಉಪನ್ಯಾಸಕರಾದ ವಿ.ನಾಗೇಶ್ ಪಾಠ ಮಾಡುತ್ತಿದ್ದರು.
ಮೊದಲ ಪಿಯುಸಿಯ ತರಗತಿಗೆ ಭೌತವಿಜ್ಞಾನದ ಒಂದು ಭಾಗಕ್ಕೆ ವಿ.ನಾಗೇಶ್ ಅವರು ಪಾಠ ಮಾಡಲು ಬಂದು, ಅವರು ಸಾಮಾನ್ಯ ಉಪನ್ಯಾಸಕರಂತೆ ಬರದೆ, ಸುಮಾರು 6 ಅಡಿಯಿದ್ದ ಸುಂದರವಾದ ಕೃಷ್ಣ ವರ್ಣದ ನಾಗೇಶ್ ಅವರನ್ನು ನೋಡಿದರೆ ಭಯಯುಂಟಾದರೂ ಎಂದೂ ಮಕ್ಕಳಿಗೆ ಭಯ ಬರುವಂತೆ ಪಾಠ ಮಾಡಿದವರಲ್ಲ, ಬೈದವರಲ್ಲ, ಕೆಲವೊಮ್ಮೆ ಹುಸಿ ಕೋಪ ಮಾಡಿಕೊಂಡು ಬೈಯ್ದದ್ದು ಬಿಟ್ಟರೆ, ಬೇರೆ ಉಪನ್ಯಾಸಕರಂತೆ ಗಟ್ಟಿ ಭಾಷೆಯಲ್ಲಿ ಎಂದೂ ಬೈಯ್ದವರಲ್ಲ.
ಅವರು ಮೊದಲ ತರಗತಿಗೆ ಬರುವಾಗಲೇ ಬಿಳಿ ಸೀಮೆ ಸುಣ್ಣದ ಜೊತೆಗೆ ಐದಾರು ಬೇರೆ ಬೇರೆ ಬಣ್ಣದ ವಸ್ತಗಳನ್ನೆಲ್ಲಾ ಜೊತೆಗೆ ದಾರ, ಜಾಮಿಟ್ರಿ ವಸ್ತಗಳನ್ನೆಲ್ಲಾ ಹೊತ್ತು ತಂದಿದ್ದರು.
ಬಂದವರೆ ಪರಿಚಯ ಮಾಡಿಕೊಂಡು ಬೋರ್ಡ್ ಮೇಲೆ ಕಲರ್ ಸೀಮೆ ಸುಣ್ಣದದಿಂದ ಬೋರ್ಡ್ ಮೇಲೆ Angular Velocity ವಿವಿಧ ಬಣ್ಣದ ಸೀಮೆ ಸುಣ್ಣದಲ್ಲಿ ಬರೆದು Motion and Velocity and Speed ಅಂತ ಬರೆದರು, ಅವರ ಅಕ್ಷರಗಳು ಮುತ್ತು ಪೋಣಿಸಿದಂತೆ ಮುತ್ತಿಕ್ಕುವಂತಿದ್ದವು, ಸುಂದರವಾಗಿ ಬರೆದ ಕೂಡಲೇ ಇಡೀ ತರಗತಿಯ ವಿದ್ಯಾರ್ಥಿಗಳು ನಿಬ್ಬೆರಗಾಗಿ ಕೂತು ಬಿಟ್ಟರು.

When a particle rotates about an axis, it undergoes angular displacement. The rate of change of angular displacement of a particle with time is called angular velocity ಹೇಳುವಾಗ, ಪಾಠ ಮಾಡುವಾಗ ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಕೆಲವೇ ಸೆಕೆಂಡುಗಳಲ್ಲಿ ಬರೆದು Velocity ಮತ್ತು Speed (ವೇಗ) ಇದೆಯಲ್ಲಾ ಇದು ವಿಜ್ಞಾನಿಗಳು ಸೂರ್ಯನ ಸುತ್ತಾ ಸುತ್ತುವ ಹಾರಿಸುವ ರಾಕೆಟ್ ಗಳ ವೇಗ, ಭೂಮಿ, ಚಂದ್ರ, ಸೂರ್ಯ ಸುತ್ತುವ ವೇಗವನ್ನು ಕಂಡು ಹಿಡಿಯುವುದು Angular velocity is a vector quantity which measures the rotational rate, that refers how fast an object rotates or revolves about a point. ಎಂಬುದನ್ನು ಎಂತಹ ದಡ್ಡನಿಗೂ ಕೆಲವೇ ನಿಮಿಷಗಳಲ್ಲಿ ಅರ್ಥವಾಗುವಂತೆ ಬರೆದು ವಿವರಿಸಿ ಬಿಟ್ಟರು.
ಪಿಯುಸಿಯಲ್ಲಿ ಎರಡೂ ವರ್ಷ ಅವರು ನಮಗೆ ಭೌತಶಾಸ್ತ್ರದ ಯಾವುದಾದರೂ ಒಂದು ಭಾಗ ಪಾಠ ಮಾಡುತ್ತಿದ್ದರು, ನನಗೆ ಅರ್ಥವಾಗದೆ ಇದ್ದುದ್ದನ್ನು ಭೌತಶಾಸ್ತ್ರದ ವಿಭಾಗದ ಅವರ ಕೊಠಡಿಗೆ ಹೋಗಿ ಕೇಳಿ ಹೇಳಿಸಿಕೊಳ್ಳುತ್ತಿದ್ದೆ.
ಪದವಿಗೆ ಸೇರಿಕೊಂಡ ಮೇಲೆ ವಿ.ನಾಗೇಶ್ ಮತ್ತು ಎಂ.ಎನ್.ನಾಗರಾಜು ಅವರು ಎನ್ಎಸ್ಎಸ್ ವಿಭಾಗದ ಮುಖ್ಯಸ್ಥರಾದರು, ನಾಗೇಶ್ ಸರ್ ನನ್ನನ್ನು ಕರೆದು ನೀನು ಎನ್ಎಸ್ಎಸ್ ಗೆ ಸೇರಿಕೋ ಅಂದರು. ಎನ್ಎಸ್ಎಸ್ ಗೆ ಸೇರಿಕೊಳ್ಳಲು ಮತ್ತೊಂದು ಕಾರಣವಿದೆ, ಶನಿವಾರ ಕಾಲೇಜಿನಲ್ಲಿ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರಿಗೆ ಎನ್.ಎಸ್.ಎಸ್.ಕಾರ್ಯ ಚಟುವಟಿಕೆಯ ಅಂಗವಾಗಿ ಮರ ಗಿಡಗಳಿಗೆ ನೀರು ಹಾಕುವುದು, ಗಾರ್ಡನ್ ಕೆಲಸ ಮಾಡುವುದು, ಹೂವಿನ ಗಿಡ, ಅಲಂಕಾರಿಕ ಗಿಡ ಬೆಳಸುವುದು ಮಾಡಬೇಕಾಗಿತ್ತು, ನಮ್ಮ ಈ ಶ್ರಮಕ್ಕೆ ಹೋಟೆಲ್ ಒಂದರಲ್ಲಿ ಮಸಾಲೆ ದೋಸೆ ಕಾಫಿ-ಟೀ ಕುಡಿಯಲು ಒಂದು ಕ್ಯೂಪನ್ ಕೊಡುತ್ತಿದ್ದರು.
ಆಗಿನ ಕಾಲಕ್ಕೆ ಮಸಾಲೆ ದೋಸೆ ಎಂದರೆ ನಮ್ಮಂತಹವರಿಗೆ ಗಗನ ಕುಸುಮವಾಗಿದ್ದರಿಂದ ಎನ್ .ಎಸ್ ಎಸ್. ಮೂಲಕ ಆ ಆಸೆ ತೀರಿಸಿಕೊಂಡಿದ್ದಾಯಿತು.
ಈಗ E= mc2 Theory of relativity, ಗೆ ಬರೋಣ, ಪದವಿಗೆ ಬಂದ ಮೇಲೆ E = mc2 Theory of relativity, ವಿ.ನಾಗೇಶ್ ಅವರೇ ಪಾಠ ಮಾಡಿದ್ದರು.
ಅದರ ಅರ್ಥವೇನೆಂದರೆ.
E= Energy – ಶಕ್ತಿ: ವಸ್ತುವಿನಲ್ಲಿರುವ ಒಟ್ಟು ಶಕ್ತಿ.
M= (Mass – ದ್ರವ್ಯರಾಶಿ: ವಸ್ತುವಿನ ತೂಕ ಅಥವಾ ಅದರಲ್ಲಿರುವ ವಸ್ತು.
C= (Speed of light – ಬೆಳಕಿನ ವೇಗ: ಇದು ಬೆಳಕು ಚಲಿಸುವ ವೇಗ (ಸುಮಾರು ಸೆಕೆಂಡಿಗೆ 3,00,000 ಕಿ.ಮೀ.)
ಸಮೀಕರಣದ ಪ್ರಮುಖ ಅಂಶಗಳು:
ರೂಪಾಂತರ (Interchangeable): ದ್ರವ್ಯರಾಶಿಯನ್ನು ಶಕ್ತಿಯಾಗಿ ಮತ್ತು ಶಕ್ತಿಯನ್ನು ದ್ರವ್ಯರಾಶಿಯಾಗಿ ಬದಲಾಯಿಸಬಹುದು.
ಅಪಾರ ಶಕ್ತಿ: ಬೆಳಕಿನ ವೇಗವು ತುಂಬಾ ಹೆಚ್ಚಾಗಿರುವುದರಿಂದ, ಸಣ್ಣ ಪ್ರಮಾಣದ ವಸ್ತುವೂ ಸಹ (ಉದಾಹರಣೆಗೆ 1 ಗ್ರಾಂ) ಅಪಾರ ಪ್ರಮಾಣದ ಶಕ್ತಿಯನ್ನು ಹೊಂದಿರುತ್ತದೆ.
ಇದು ಎಲ್ಲಿ ಬಳಕೆಯಾಗುತ್ತದೆ?
ಪರಮಾಣು ಶಕ್ತಿ (Nuclear Energy): ನ್ಯೂಕ್ಲಿಯರ್ ರಿಯಾಕ್ಟರ್ಗಳಲ್ಲಿ ಮತ್ತು ಪರಮಾಣು ಬಾಂಬ್ಗಳಲ್ಲಿ (Atomic Bomb) ಈ ಸೂತ್ರದ ತತ್ವವನ್ನು ಬಳಸಲಾಗುತ್ತದೆ. ಇಲ್ಲಿ ಸ್ವಲ್ಪ ಪ್ರಮಾಣದ ದ್ರವ್ಯರಾಶಿಯು ದೊಡ್ಡ ಪ್ರಮಾಣದ ಶಕ್ತಿಯಾಗಿ ಬಿಡುಗಡೆಯಾಗುತ್ತದೆ.
ಸೂರ್ಯನ ಶಕ್ತಿ: ಸೂರ್ಯ ಮತ್ತು ಇತರ ನಕ್ಷತ್ರಗಳಲ್ಲಿ ನಡೆಯುವ ನ್ಯೂಕ್ಲಿಯರ್ ಫ್ಯೂಷನ್ (Nuclear Fusion) ಕ್ರಿಯೆಯಿಂದಾಗಿ ದ್ರವ್ಯರಾಶಿಯು ಶಕ್ತಿಯಾಗಿ ಬದಲಾಗುತ್ತದೆ, ಇದರಿಂದ ನಮಗೆ ಬೆಳಕು ಮತ್ತು ಶಾಖ ಸಿಗುತ್ತದೆ.
ಈ ಸಮೀಕರಣವನ್ನು ಐನ್ ಸ್ಟೀನ್ ಅವರು 1905 ರಲ್ಲಿ ತಮ್ಮ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ ಮಂಡಿಸಿದರು. ಇದನ್ನು ಭೌತಶಾಸ್ತ್ರದ ಅತ್ಯಂತ ಪ್ರಭಾವಶಾಲಿ ಸೂತ್ರವೆಂದು ಪರಿಗಣಿಸಲಾಗಿದೆ . ಕ್ರಿಯೆಯಿಂದಾಗಿ ದ್ರವ್ಯರಾಶಿಯು ಶಕ್ತಿಯಾಗಿ ಬದಲಾಗುತ್ತದೆ, ಇದರಿಂದ ನಮಗೆ ಬೆಳಕು ಮತ್ತು ಶಾಖ ಸಿಗುತ್ತದೆ.
ಈ ಸಮೀಕರಣವನ್ನು ಐನ್ ಸ್ಟೀನ್ ಅವರು 1905 ರಲ್ಲಿ ತಮ್ಮ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ ಮಂಡಿಸಿದರು. ಇದನ್ನು ಭೌತಶಾಸ್ತ್ರದ ಅತ್ಯಂತ ಪ್ರಭಾವಶಾಲಿ ಸೂತ್ರವೆಂದು ಪರಿಗಣಿಸಲಾಗಿದೆ . ಎಂದು ಸರಳವಾಗಿ ವಿವರಿಸಿದ್ದು ಇಂದಿಗೂ ನನ್ನ ಕಿವಿಗಳಲ್ಲಿ ಇನ್ನೂ ಗುಯ್ ಗುಡುತ್ತಾ ಇದೆ.
ಈಗ ಈ ಸೂತ್ರವನ್ನೆ ಬಳಸಿ ಅಣುಬಾಂಬ್ (ನ್ಯೂಕ್ಲಿಯರ್ ಬಾಂಬ್) ತಯಾರಿಸಿ ಭೂಮಿಯ ವಿನಾಶಕ್ಕೆ ಮುಂದಾಗಿರುವುದು ವಿಷಾದಕರ.
ಇಂತಹ ಮೇಷ್ಟರು ಪದವಿಯಲ್ಲಿ ನನಗೆ ಎನ್ಎಸ್ಎಸ್ ಸೇರು ಎಂದು ಯಾವುದಕ್ಕಾಗಿ ಹಳೆಇದರೋ ಗೊತ್ತಿಲ್ಲ, ಸೇರಿದ್ದಕ್ಕೆ ಕೆಲ ನೈತಿಕ ಮೌಲ್ಯಗಳನ್ನು ಕಳಿತುಕೊಂಡೆ. ಅವರು ಬೆಂಗಳೂರಿನಿಂದ ತುಮಕೂರಿಗೆ ರೈಲಿನಲ್ಲಿ ಬರುತ್ತಿದ್ದರಿಂದ ಬೆಳಗಿನ ವೇಳೆ ಆಟೋ ಅಥವಾ ಬಸ್ಸಿಗೆ ಕಾಯದೆ ವೇಗದ ನಡಿಗೆಯ ಮೂಲಕ ಕಾಲೇಜು ತಲುಪುತ್ತಿದ್ದರು.

ಎನ್ಎಸ್ಎಸ್ ದಿನವಾದ ಶನಿವಾರ ಅವರು 5ಗಂಟೆಯ ತನಕ ನಮ್ಮ ಜೊತೆ ಇರುತ್ತಿದ್ದರು, 5ಗಂಟೆಯ ನಂತರ ವೆಂಕಟಾಚಲ ಬಾ ಅನ್ನೋರು ಅವರನ್ನು ಸೈಕಲ್ ನಲ್ಲಿ ಕೂರಿಸಿಕೊಂಡು ರೈಲ್ವೆ ನಿಲ್ದಾಣಕ್ಕೆ ಬಿಡುತ್ತಿದ್ದೆ, ರೈಲು ತಡ ಎಂದು ತಿಳಿದ ದಿನ ಆಗಿನ ಪ್ರಸಿದ್ಧ ಹೋಟೆಲ್ ಎಂದು ಹೆಸರು ಪಡೆದಿದ್ದ ನಂಜುಂಡೇಶ್ವರ ಹೋಟೆಲ್ ನಲ್ಲಿ ದೋಸೆ, ಕಾಫಿ ಕೊಡಿಸುತ್ತಿದ್ದರು, ಸಂಕೋಚ ಬೇಡ ಏನಾದರೂ ತಗೋ ಅನ್ನೋರು, ಇನ್ನೊಂದು ಮಸಾಲೆ ದೋಸೆ ತಿನ್ನುವ ಆಸೆ ಇದ್ದರೂ ಮೇಷ್ಟ್ರು ಎಲ್ಲಿ ತಿಂಡಿಪೋತ ಶಿಷ್ಯ ಅಂದುಕೊಳ್ಳುತ್ತಾರೆ ಅಂತ ಈಗಲೇ ಹೊಟ್ಟೆ ತುಂಬಿದೆ ಸಾರ್ ಅನ್ನುತ್ತಿದ್ದೆ.

ನನ್ನ ಮತ್ತು ಮೇಷ್ಟ್ರ ಸ್ನೇಹ ಎನ್ಎಸ್ಎಸ್ ಕ್ಯಾಂಪ್ ನಿಂದ ಬಹಳ ಗಟ್ಟಿಯಾಯಿತು, ವಿದ್ಯಾರ್ಥಿಗಳ ಗುಂಪಿಗೆ ದೇವರಾಜು ಎಂಬುವವರು ಒಮ್ಮೆ ಎನ್.ಎಸ್.ಎಸ್ ಚಟುವಟಿಕೆಗಳ ನಾಯಕನಾಗಿದ್ದನು, ತುಂಬಾ ಯಶಸ್ವಿಯಾಯಿತು (ಲೀಡರ್) ಆತನ ಕಾಲದಲ್ಲಿ ನಡೆದ ಎನ್ಎಸ್ಎಸ್ ಕ್ಯಾಂಪ್ ತುಂಬಾ ಹೆಸರು ಗಳಿಸಿತು. ಏಕೆಂದರೆ ಆಗಿನ ಕಾಲಕ್ಕೆ ಪತ್ರಿಕೆಗಳಲ್ಲಿ ಸುದ್ದಿ ಮತ್ತು ಪೋಟೋ ಬರುವಂತೆ ನನ್ನ ನೇತೃತ್ವದಲ್ಲಿ ಮಾಡಲಾಯಿತು.

ಪತ್ರಿಕೆಯಲ್ಲಿ ಬರಲು ಮೂಲ ಕಾರಣ 1990ರಲ್ಲಿ ನಾವು ಪ್ರಜಾಪ್ರಗತಿಯ ಪತ್ರಿಕೆ ಹಂಚುವಿಕೆ ಮತ್ತು ಸುದ್ದಿ ಬರೆದು ತಂದು ಕೊಡುವಿಕೆಯನ್ನು ನಮಗೆ ತೋಚಿದಂತೆ ಮಾಡುತ್ತಿದ್ದೆ, ಅಲ್ಲಿದ್ದ ಡೆಸ್ಕ್ ವರದಿಗಾರರು ಅದನ್ನು ತಿದ್ದಿ-ತೀಡಿ ನಮಗೆ ಕೊಟ್ಟರೆ ಮಾತ್ರ ನಾಳಿನ ಪತ್ರಿಕೆ ಹಂಚುವುದಾಗಿ ಬೆದರಿಕೆ ಹಾಕುತ್ತಿದ್ದರಿಂದ ಬೇರೆ ದಾರಿ ಕಾಣದೆ ಮಾಡಿ ಕೊಡುತ್ತಿದ್ದರು, ಅದನ್ನು ಜೆರಾಕ್ಸ್ ಮಾಡಿಸಿ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ ಹಾಗೂ ಸ್ಥಳೀಯ ಪತ್ರಿಕೆಗಳಾದ ಪ್ರಜಾಪ್ರಗತಿ, ವಿಜಯವಾಣಿ, ತುಮಕೂರು ವಾರ್ತೆ, ಸೊಗಡು ಪತ್ರಿಕೆಗಳಿಗೆ ಕೊಟ್ಟು ಬರುತ್ತಿದ್ದೆ, ಆಗಿನ ಕಾಲಕ್ಕೆ ಸುದ್ದಿಯೇ ಇರುತ್ತಿರಲಿಲ್ಲ, ಒಂದು ಸುದ್ದಿ ತಂದು ಕೊಟ್ಟರೆ ಪತ್ರಿಕೆಯವರಿಗೆ ಆನಂದದ ಜೊತೆಗೆ 2ರೂಪಾಯಿ ಕಾಫೀನೂ ಕೊಡಿಸಿ ನಾಳೆಯ ಸುದ್ದಿಯನ್ನೂ ತಂದು ಕೊಡು ಎಂದು ಪೂಸಿ ಹೊಡೆಯುತ್ತಿದ್ದರು.
ಯಾಕೆ ಹೀಗೆ ಸುದ್ದಿಗೆ ಪೂಸಿ ಹೊಡೆಯುತ್ತಾರೆ ಅಂತ ನಾನು ಪೂರ್ಣ ಕಾಲಿಕ ವರದಿಗಾರನಾದ ಮೇಲೆಯೇ ಸುದ್ದಿಗೆ ಎಷ್ಟೊಂದು ಬರವಿದ್ದಿತೆಂದು ಗೊತ್ತಾದದ್ದು, ಈಗಿನ ಪತ್ರಕರ್ತರಿಗೆ ಒಂದು ಸಣ್ಣ ಸುದ್ದಿಯ ಮಹತ್ವವೂ ಗೊತ್ತಿಲ್ಲ, ಈಗ ಬರುವ ಸುದ್ದಿಗಳನ್ನು ಇಡಲು ಪುಟಗಳೇ ಸಾಲುವುದಿಲ್ಲ, ಅಂದು ಪುಟಗಳಿದ್ದರೂ ಸುದ್ದಿಗಳೇ ಇರಲಿಲ್ಲ, ಪುಟ ತುಂಬಿಸಲು ಐದಾರು ಜನ ವರದಿಗಾರರಿದ್ದರೂ ಆಗುತ್ತಿರಲಿಲ್ಲ.

ಈ ರೀತಿ ಎನ್ಎಸ್ಎಸ್ ಸುದ್ದಿ ಪತ್ರಿಕೆಗಳಲ್ಲಿ ಬರುತ್ತಿರುವುದನ್ನು ನೋಡಿದ ಅಂದಿನ ಪ್ರಾಂಶುಪಾಲರಾಗಿದ್ದ ಪ್ರೊ.ಜಿ.ತಿಪ್ಪಯ್ಯನವರು ಕಾಲೇಜಿನ ಎನ್.ಎಸ್.ಎಸ್.ಘಟಕದ ಮುಖ್ಯ ಸಂಯೋಜನಾಧಿಕಾರಿಯಾದ ಎಂ.ಎನ್.ನಾಗರಾಜು ಹಾಗೂ ಸಹಾಯಕ ಸಂಯೋಜನಾಧಿಕಾರಿಯಾಗಿದ್ದ ವಿ.ನಾಗೇಶ್ ಅವರನ್ನು ಕರೆದು ಅಭಿನಂದಿಸಿದ್ದಾರೆ, ಬಂದ ಕೂಡಲೇ ನನ್ನ ಬಾಚಿ ತಬ್ಬಿಕೊಂಡು ನೀನು ನನಗೆ ಗೌರವ ತಂದೆ ಶಿಷ್ಯ ಎಂದು ಎಲ್ಲರ ಎದುರಿಗೆ ಬೆನ್ನು ತಟ್ಟಿದರು.
ಆಗಿನ ಎನ್ಎಸ್ಎಸ್ ಶಿಬಿರಗಳಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಎಂಬ ಬೇದಭಾವವಿಲ್ಲದೆ ಸಾಂಸ್ಕøತಿಕ ಮತ್ತು ಸ್ವಚ್ಛತಾ ಕಾರ್ಯಗಳಲ್ಲಿ ಭಾಗವಹಿಸಿತ್ತಿದ್ದೆವು, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಎನ್ಎಸ್ಎಸ್ ಸಹಾಯಕ ಸಂಯೋಜಕರಾಗಿದ್ದ ವಿ.ನಾಗೇಶ್ ಅವರು ವಿಷ್ಣವರ್ಧನ್ ಅವರ ನಾಗರ ಹಾವು ಚಲನ ಚಿತ್ರದ “ಬಾರೆ ಬಾರೆ ಚೆಂದದ ಚೆಲುಮೆಯ ತಾರೆ” ಹಾಡನ್ನು ಸಾಂಸ್ಕøತಿಕ ಎನ್.ಎಸ್.ಎಸ್.ಎಸ್. ಸಹ ಶಿಬಿರಾಧಿಕಾರಿಗಳು ಹಾಗೂ ಉಪನ್ಯಾಸಕರಾದ ವಿ.ನಾಗೇಶ್ ಹಾಡನ್ನು ಹಾವ-ಭಾವದೊಂದಿಗೆ ಹಾಡಿ ಮನರಂಜಿಸುತ್ತಿದ್ದರು. ಮೇಷ್ಟರು ಹಾಡುವುದಕ್ಕೆ ವಿದ್ಯಾರ್ಥಿಗಳೆಲ್ಲಾ ಕುಣಿದು ಕುಪ್ಪಳಿಸುತ್ತಿದ್ದರು.
ಸ್ವಚ್ಚತಾ ಕಾರ್ಯದಲ್ಲೂ ಅಷ್ಟೇ ಎಂ.ಎನ್.ನಾಗರಾಜು, ನಾಗೇಶ್ ಅವರುಗಳು ಗುದ್ದಲಿ, ಪಿಕಾಶಿ ಇಡಿದು ನಮ್ಮನ್ನೆಲ್ಲ ಹುರಿದುಂಬಿಸುತ್ತಿದ್ದರು, ಸಂಜೆ ಯಾವುದಾದರೂ ಒಂದು ವಿಷಯದ ಬಗ್ಗೆ ಅತಿಥಿಗಳು ಬಂದು ಮಾತನಾಡುತ್ತಿದ್ದರು, ಇಲ್ಲಿ ಅತಿಥಿಗಳನ್ನು ಸ್ವಾಗತಿಸಲು, ಹೂಗುಚ್ಚ ನೀಡಲು ಹುಡುಗರು, ಹುಡುಗಿಯರ ಮಧ್ಯೆ ತುಂಬಾ ಪೈಪೋಟಿ ನಡೆಯುತ್ತಿತ್ತು ಆಗ ಮೇಷ್ಟರುಗಳೆ ಎರಡು ಸಮಾನ ಗುಂಪು ಮಾಡಿ ಇಂತಿಹವರು ಇಂತಹದನ್ನು ಮಾಡಿ ಎಂದು ಸಮಾದಾನ ಮಾಡೋರು.
ಶಿಬಿರ ಮುಗಿದು ಮಾರನೇ ದಿನ ಕಾಲೇಜಿಗೆ ಹೋಗಲು ಮನಸ್ಸೆ ಬರುತ್ತಿರಲಿಲ್ಲ, ಕಾಲೇಜಿನಲ್ಲಿ ನಾವು ವಿದ್ಯಾರ್ಥಿಗಳು, ಅವರು ಉಪನ್ಯಾಸಕರು, ನಾವು ಬೆಂಚ್ ಮೇಲೆ ಕುಳಿತರೆ ಮೇಷ್ಟ್ರರುಗಳು ಡಯಸ್ ಮೇಲೆ ನಿಂತು ಪಾಠ ಮಾಡೋರು, ಥೂ ಮೇಷ್ಟರು ಮಾತನಾಡಲು ಸಿಗುತ್ತಿರಲಿಲ್ಲ ಅವರಿಗೆ ಪಾಠ ಮುಗಿಸುವ ಧಾವಂತ, ನಮಗೆ ಮಾತನಾಡುವ ಧಾವಂತ, ಇದಲ್ಲದೆ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ಶಿಬಿರದ ಕಾಲದಲ್ಲಿ ಹಿಂದುಳಿದ ಪಾಠಗಳನ್ನು ಸಂಜೆ ಸ್ಫೆಷಲ್ ಕ್ಲಾಸ್ ಬೇರೆ ಮಾಡೋರು, ಆಗ ಅಯ್ಯೋ ಎನ್ಎಸ್ಎಸ್ಗೆ ಸೇರದಿದ್ದರೂ ಆಗುತ್ತಿತ್ತು ಅನ್ನಿಸೋದು.
ಅದೆಷ್ಟು ಬೇಗ 3 ವರ್ಷ ಕಳೆದೋಯಿತು ಎನ್ನುವುದೇ ತಿಳಿಯಲಿಲ್ಲ, ಹಕ್ಕಿಗಳಂತೆ ಹಾರುತ್ತಾ ಪದವಿಯ ಮೂರು ವರ್ಷಗಳನ್ನು ಯೌವನದ ಅಲೆಯಲ್ಲಿ ಸಿಲುಕಿ ಪ್ರಮ ಪತ್ರಗಳನ್ನು ಬರೆದುಕೊಂಡು, ಹಾಡು ಹಾಡಿಕೊಂಡು ಕಳೆದು ಹೋಗಿದ್ದು ತಿಳಿಯಲ್ಲೇ ಇಲ್ಲ, ನಮ್ಮ ಕೊನೆಯ ವರ್ಷದ ಪದವಿಯ ಪರೀಕ್ಷೆ ಮುಗಿಯುವ ಹಂತದಲ್ಲೇ ವಿ.ನಾಗೇಶ್ ಸಾರ್ ಬೆಂಗಳೂರಿನ ಗ್ಯಾಸ್ ಕಾಲೇಜಿಗೆ ವರ್ಗಾವಣೆಯಾಗಿರುವುದು ನನಗೆ ಬರಸಿಡಿಲಿನಂತೆ ಬಂದು ತಟ್ಟಿತು.
ಅವರ ಕೊಠಡಿಗೆ ಹೋಗಿ ಅವರ ಮುಂದೆ ನಿಂತು ಬಳ ಬಳ ಅತ್ತು ಬಿಟ್ಟೆ, ಸಮಾದಾನ ಮಾಡಿ ನಿನ್ನದು ಪದವಿ ಮುಗಿದಿದೆ, ನನ್ನದೂ ಈ ಕಾಲೇಜಿನ ಅವಧಿ ಮುಗಿದಿದೆ ಎಂದು ಸಮಾದಾನ ಮಾಡಿ ಸಂಜೆ ಬಾ ಅಂದರು, ನಾನು ಸಂಜೆ ಹೋಗಲೇ ಇಲ್ಲ, ಅವರ ಮುದ್ದಾದ ಅಕ್ಷರಗಳು ನನ್ನ ಕಣ್ಣ ಮುಂದೆ ಸ್ಕ್ರಾಲ್ನಂತೆ ಕಾಣುತ್ತಿದ್ದವು, ಅವರ ಅಕ್ಷರ, ಪಾಠ ಮಾಡುತ್ತಿದ್ದನ್ನೇ ಒಂದು ಸಣ್ಣ ಲೇಖನ ಬರೆದು ಪತ್ರಿಕೆಗಳಿಗೆ ಕೊಟ್ಟೆ, ಅದು ಮಾರನೇ ದಿನ ಎಲ್ಲಾ ಪತ್ರಿಕೆಗಳಲ್ಲಿ ಬಂದಿದ್ದನ್ನು ಮೇಷ್ಟರಿಗೆ ತೆಗೆದುಕೊಂಡು ಹೋಗಿ ಕೊಟ್ಟೆ, ಅವರು ಓದಿ, ಗುಡ್ ಎಂದರು, ನಾನು ಸುಮ್ಮನೆ ಮೌನವಾಗಿ ಬಂದೆ.

ನಮ್ಮ ಪದವಿ ಮುಗಿದ್ದರಿಂದ ಕಾಲೇಜಿಗೆ ಹೋಗುವುದು ಅಷ್ಟಾಗಿ ಇರಲಿಲ್ಲ, ವಾರ ಬಿಟ್ಟು ಕಾಲೇಜಿಗೆ ಹೋದಾಗ ಭೌತಶಾಸ್ತ್ರದ ಅಟೆಂಡರ್ ನನ್ನ ನೋಡಿದವನೇ ಓಡೋಡಿ ಬಂದು ಒಂದು ಕವರ್ ಕೊಟ್ಟರು, ಅದನ್ನು ಬಿಚ್ಚಿ ನೋಡಿದಾಗ ಒಂದೇ ಸಲಕ್ಕೆ ತಲೆ ತಿರುಗಿ ಬೀಳುವಂತಾಯಿತು, ಸ್ವಲ್ಪ ಸಾವರಿಸಕೊಂಡು ಓದಿದಾಗ ಇಡೀ ಪ್ರಪಂಚದ ನೋಬಲ್ ವ್ಯಕ್ತಿಗಳ ನೋಬಲ್ ವ್ಯಾಕ್ಯಗಳನ್ನು ನನ್ನ ಮೇಷ್ಟ್ರರಾದ ನಾಗೇಶ್ ಅವರು ಬರೆದಿದ್ದರು, ಮೊದಲಿಗೆ ಪ್ರೀತಿಯ ವೆಂಕಟಾಚಲ.ಹೆಚ್.ವಿ.ರವರಿಗೆ ಎಂದು ಬರೆದದದನ್ನು ಮತ್ತಷ್ಟು ಕಸಿ-ವಿಸಿಗೆ ಒಳ ಪಡುವಂತೆ ಮಾಡಿತ್ತು, ನಾನು ಬಹು ವಚನ ಬಳಸುವಷ್ಟು ದೊಡ್ಡವನೇ ಅಂತ ಅನ್ನಿಸಿ ಕಣ್ಣಾಲಿಗಳು ನೀರಾಗಿ ಮೌನಕ್ಕೆ ಜಾರಿದೆ.
ಆ ನಂತರ ನನ್ನ ಅವರ ಭೇಟಿ ಅಷ್ಟು ಇರಲಿಲ್ಲ, ಸಂಕ್ರಾಂತಿ, ಯುಗಾದಿ, ಆಯುಧ ಪೂಜೆ ಹಬ್ಬಗಳಲ್ಲಿ ಅವರೇ ಅವರ ಮುದ್ದಾದ ಕೈಗಳಿಂದ ಆಯಾ ಹಬ್ಬದ ಚಿತ್ರಗಳನ್ನು ಬರೆದು ನನ್ನ ವಿಳಾಸಕ್ಕೆ ಅಂಚೆ ಮೂಲಕ ಕಳಿಸುತ್ತಿದ್ದರು.
ಇಂತಹ ಗುರುಗಳನ್ನು ನೋಡಬೇಕೆಂದು ಬೆಂಗಳೂರಿನ ಅವರ ಮನೆಗೆ ಹೋಗಿ ಮನೆಗೆ ಬುದ್ಧನ ಪುಸ್ತಕ ನೀಡಿ, ಸನ್ಮಾನಿಸಿ ನನ್ನ ಮನಸ್ಸಿನ ತಳ-ಮಳ, ಹೊಯ್ದಾಟವನ್ನು ಇಲ್ಲವಾಗಿಸಿಕೊಂಡೆ ನನಗೆ ಪ್ರಪಂಚದ ನೋಬಲ್ ವ್ಯಕ್ತಿಗಳ ವ್ಯಾಕಗಳನ್ನು ನೀಡುವುದರ ಮೂಲಕ ನನಗೆ ನೋಬಲ್ ನೀಡಿದ ನಾಗೇಶ್ ಮೇಷ್ಟರು ಈಗ ನಿವೃತ್ತಿಯ ಜೀವನ ನಡೆಸುತ್ತಾ ದಿನವೂ ನನಗೆ ಬೆಳಗಿನ ಶುಭಾಶಯ ಹೇಳುವ ಗುರುಗಳು ನೂರು ವರ್ಷ ಆರೋಗ್ಯದಿಂದ ಇರಲೆಂದು ಬುದ್ಧನಲ್ಲಿ ಪ್ರಾರ್ಥಿಸುತ್ತೇನೆ.
ಅಂತಹ ಗುರುಗಳು ಸಿಕ್ಕಿ ಐನ್ಸ್ಟೀನ್ ಅವರ E = mc2 Theory of relativity, ಪ್ರಪಂಚ ನಾಶದ ಸೂತ್ರದ ಅರ್ಥವನ್ನು ತಿಳಿಸುತ್ತಾ ನನಗೆ ಅರಿವಿಲ್ಲದಂತೆ ನನ್ನನ್ನು ಬುದ್ಧ ಮತ್ತು ಗಾಂಧಿಯ ಮಾರ್ಗವಾದ ಶಾಂತಿಯ ಹಾದಿಯಲ್ಲಿ ಸುಳ್ಳು, ಮೋಸ, ವಂಚನೆ, ಕೋಪ ಯಾವುದೂ ನಿನ್ನದಲ್ಲ ನೀನು ನೀನಾಗಿ ಬದುಕು ಎಂದು ಬುದ್ಧನಂತೆ ಪ್ರೀತಿ, ಕುರುಣೆ, ಮೈತ್ರಿಯನ್ನು ನನಗೆ ಕಲಿಸಿದ ಗುರುಗಳಿಗೆ ಗುರು ವಂದನೆಗಳು, ಸದಾ ನೀವು ಹಾಕಿ ಕೊಟ್ಟ ಹಾದಿಯಲ್ಲಿ Angular Velocity, ಮೇಷ್ಟರಿಗೆ ಬುದ್ಧ ಪ್ರೀತಿಯಿಂದ ಹೇಳಲಷ್ಟೇ ಸಾಧ್ಯ.

ಹಾಗೆಯೇ ಅಂದಿನ ವಿಜ್ಞಾನ ಕಾಲೇಜು, ಇಂದಿನ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜನ್ನು ನಾನು ಮರೆಯಲು ಸಾಧ್ಯವಿಲ್ಲ, ತುಮಕೂರಿನ ಈ ಕಲ್ಲು ಕಟ್ಟಡದ ಕಲಾ ಮತ್ತು ವಿಜ್ಞಾನ ಕಾಲೇಜ್ ಅಂದರೆ ಒಂದು ಕಾಲದಲ್ಲಿ ಇಡೀ ರಾಜ್ಯವೇ ನಡುಗುತ್ತಿತ್ತು ಅಂತಹ ಶ್ರೇಷ್ಠ ಉಪನ್ಯಾಸಕರುಗಳು ತಮ್ಮ ವಿದ್ವತ್ತಿನಿಂದ ವಿಜ್ಞಾನಿ, ವೈದ್ಯ, ಇಂಜಿನಿಯರ್, ಕೃಷಿ ವಿಜ್ಞಾನಿ, ಕನ್ನಡ ಪಂಡಿತರು, ಇಂಗ್ಲೀಷ್ ಪಂಡಿತರು, ಜಿಯಾಲಾಜಿಸ್ಟ್ ಗಳು, ಶ್ರೇಷ್ಠ ಶಿಕ್ಷಣ ತಜ್ಞರು, ತತ್ವಜಾನಿಗಳು, ಬರಹಗಾರರು, ಕಲಾವಿದರು, ನೃತ್ಯಗಾರರು, ಚಲನಚಿತ್ರ ನಟರು, ರಾಜಕಾರಣಿಗಳು, ಸೇರಿದಂತೆ ಸಣ್ಣ ರೈತನಿಂದ ಹಿಡಿದು ದೊಡ್ಡ ವಿಜ್ಞಾನಿಯಾಗುವಂತಹ ಜ್ಞಾನವನ್ನು ಈ ಕಾಲೇಜು ನೀಡಿರುವಂತಹವುದು, ಅಂದಿನ ಕಾಲಕ್ಕೆ ಅಂದಿನ ಉಪನ್ಯಾಸಕರು ಬರೀ ಪಠ್ಯದ ವಿಷಯವನ್ನಷ್ಟೇ ಹೇಳದೆ ಜಗತ್ತಿನ ನೀತಿ ಪಾಠ, ಜಗತ್ತಿನ ಹೋರಾಟ, ಜಗತ್ತಿನಲ್ಲಿ ನಡೆಯುತ್ತಿರುವ ತಿಕ್ಕಾಟದ ಜೊತೆಗೆ ಬಹು ಮುಖ್ಯವಾಗಿ ಬದುಕಿನ ಮೌಲ್ಯಗಳ ಪಾಠವನ್ನು ಇಲ್ಲಿ ಕಲಿಸುತ್ತಿದ್ದರು.
ಆ ಕಾಲಘಟಕೆ ಹುಟ್ಟಿಕೊಂಡಿದ್ದ ರೈತ ಚಳುವಳಿ, ದಲಿತ ಚಳುವಳಿ, ರೈತ ಚಳುವಳಿ, ಬಂಡಾಯ ಚಳುವಳಿಯ ಜೊತೆಗೆ ಅಂತರ್ಜಾತಿ ವಿವಾಹ ಮೂಲಕ ಜಾತಿ ನಿರ್ಮೂಲನೆ, ಧರ್ಮ ನಿರ್ಮೂಲನೆಗೆ ಹಾಗೂ ಸಮಾಜವಾದಿ, ಜೆಪಿ ಚಳುವಳಿ, ಜೊತೆಗೆ ಅಂದಿನ ಕಾಲದಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಕಾಲೇಜು ವಿದ್ಯಾರ್ಥಿಗಳ ಮೂಲಕ ಅಂದಿನ ನೈತಿಕತೆಯಡಿ ದೊಡ್ಡ ಚಳುವಳಿ ರೂಪಿಸಿದ ಉಪನ್ಯಾಸಕರುಗಳು, 80ರ ದಶಕದಲ್ಲಿ ವಿದ್ಯಾರ್ಥಿಗಳ ಸಮಸ್ಯೆಯನ್ನು ವಿದ್ಯಾರ್ಥಿ ಚಳುವಳಿ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದು ಇದೇ ಕಾಲೇಜಿನ ಉಪನ್ಯಾಸಕರುಗಳ ಪ್ರಗತಿ ಪರ ಚಿಂತನೆಗಳಿಂದ ಎಂಬುದನ್ನು ಇಂದಿಗೂ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹೇಳಿಕೊಂಡು ಹೊಟ್ಟೆ ತುಂಬಾ ನಗುತ್ತಾ ಖುಷಿ ಪಟ್ಟು ನಾವು ಇಂತಹ ಸ್ಥಾನಕ್ಕೆ ಬರಲು ಇಂತಿಂತಹ ಮೇಷ್ಟ್ರುಗಳು ಕಾರಣ ಎಂದು ನೆನಪಿಸಿಕೊಳ್ಳುತ್ತಾರೆ.
ಈಗ ಕಂಪ್ಯೂಟರ್ ಮತ್ತು ಮೊಬೈಲ್ ಯುಗ ಪ್ರಾರಂಭವಾದ ಮೇಲೆ ಮೇಷ್ಟರು ಮತ್ತು ವಿದ್ಯಾರ್ಥಿಗಳ ಸಂಬಂಧ ಪಾಠದ ಕೊಠಡಿಗೆ ಸೀಮಿತವಾಗಿ, ಆ ಮೇಷ್ಟರು ಪಾಠ ಮಾಡಿದಿದ್ದರೇನಂತೆ ಮೊಬೈಲ್ ನಲ್ಲೇ ಓದಿಕೊಳ್ಳುತ್ತೇನೆ ಎಂದು ತಮ್ಮ ಬೆರಳ ತುದಿಯ ಪ್ರಪಂಚ ನೋಡುತ್ತಾ ತಮ್ಮ ಬದುಕಿನ-ಜೀವನದ ಪಾಠದ ಗುರುಗಳಿಗೂ ಇವರಿಗೂ ಸಂಬಂಧ ಸೂರ್ಯ-ಚಂದ್ರ-ಭೂಮಿ ಹೇಗೆ ಅವುಗಳ ಸುತ್ತ ತಿರುಗುವಂತೆ ತಮ್ಮ ಸುತ್ತ ತಿರುಗುತ್ತಾ ಬದುಕಿನ ಪ್ರಪಂಚವನ್ನು ಮರೆತು, ಜೀವ-ಜೀವನ ಎರಡನ್ನೂ ಹಾಳು ಮಾಡಿಕೊಳ್ಳುತ್ತಿರುವವರಿಗೆ ಯಾವ ರೀತಿಯ ಮೇಷ್ಟ್ರು-ಶಿಷ್ಯರು ಬೇಕೆಂಬುದನ್ನು ಕೆಲವೆ ದಿನಗಳಲ್ಲಿ ಕೃತಕ ಬುದ್ಧಿ ಮತ್ತೆ ಯಂತ್ರವೇ (Artificial Intelligence-AI) ಹೇಳಬೇಕಾದ ಸನ್ನಿವೇಶಕ್ಕೆ ನಮ್ಮನ್ನು ತಂದೊಡ್ಡಿದೆ ಇನ್ನು ಮುಂದೆ ಎಲ್ಲಾ ಕೆಲಸ AI ಮಾಡಲಿದೆಯಂತೆ ಕಾದು ನೋಡೋಣ.

ಇಂತಹ ಕಾಲೇಜು ಕಟ್ಟಡವನ್ನು 11-8-1966ರಂದು ಅಂದಿನ ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ವಿ.ವಿ.ಗಿರಿ ಅವರು ಉದ್ಘಾಟನೆ ಮಾಡಿರುವ ಉದ್ಘಾಟನೆ ಮಾಡಿರುವ ಕಲ್ಲು ಕಾಲೇಜಿನ ಮುಖ್ಯಧ್ವಾರದಲ್ಲೇ ನಮ್ಮ ಕಣ್ಣಿಗೆ ಬೀಳುತ್ತದೆ.
ಇಂತಹ ಕಾಲೇಜಿನಲ್ಲಿ ನಾನು ನನ್ನ ಸಹ ಪಾಟಿಗಳು ನಡೆಸಿದ ಹೋರಾಟ, ನಾನು ಅಂದಿನ ಗ್ರಂಥಾಲಾಯದಲ್ಲಿ ಓದಿದ, ಅನ್ನ ಕರೇನಾ ರವೀಂದ್ರ ನಾಥರ ಕೃತಿಗಳು, ಶೇಕ್ಸ್ ಫೀಯರ್, ಮಾಕ್ಸಿ ಗೋರ್ಕಿ ಅವರ ‘ದಿ ಮದರ್, ಲಿಯೋ ಟಾಲ್ಸ್ಟಾಯಿ ಅವರ ಬರಹಗಳು, ಕುವೆಂಪು, ಪ್ರಪಂಚದ ಅಗ್ರಗಣ್ಯ ಸಾಹಿತ್ಯಗಳ ಪುಸ್ತಕಗಳ ಜೊತೆಗೆ ಲಂಕೇಶ್ ಪತ್ರಿಕೆ, ಸುಧಾ ಪತ್ರಿಕೆಗಳನ್ನು ಓದಿ ಇತರ ವಿದ್ಯಾರ್ಥಿಗಳಿಂತ ಭಿನ್ನವಾದ ಜ್ಞಾನ ಬೆಳಸಿಕೊಂಡು ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಹಾಗೂ ಇತರ ಸ್ಪರ್ಧೆಗಳಲ್ಲಿ ಬಹುಮಾನ ತರುತ್ತಿದದ್ದು, ಎಂದೂ ಯಾವುದಕ್ಕೂ ರಾಜೀಯಾಗದೆ ಪ್ರಾಂಶುಪಲರ ಜೊತೆಗೂ ಹಾಸ್ಟಲ್ ಮತ್ತಿತರೆ ವಿಷಯಕ್ಕೆ ವಾಗ್ವಾದ ಮರೆಯಲು ಸಾಧ್ಯವಿಲ್ಲ, ಆಗಿನ ಗ್ರಂಥಪಾಲಕರಾಗಿದ್ದ ಹಳ್ಳಿಕೇರಿ ಅವರು ನೀನು ಯಾವಾಗಲೂ ಕಥೆ, ಕಾದಂಬರಿ ಓದುತ್ತೀಯ ಪಾಸಾಗಿದ್ದೀಯ ಅಂತ ಕೇಳುತ್ತಾ ಇದ್ದದ್ದು ಇನ್ನೂ ನನ್ನ ಕಿವಿಯಲ್ಲಿ ಹಾಗೆ ಇದೆ.
ಹುಡುಗಿಯರ ವೆನಿಟಿ ಬ್ಯಾಗಿನಿಂದಲೇ ದುಡ್ಡು ಕದ್ದು ಹೋಟೆಲ್ ನಲ್ಲಿ ತಿಂಡಿ ಕೊಡಿಸಿ ಬಿಲ್ ನೀಡಿ ಅವರಿಗೆ ಹೇಳಿ ಗೊಳೆಂದು ಎಲ್ಲರೂ ನಕ್ಕಿದ್ದು, ಅದ್ಭುತವಾದ ಪ್ರೇಮ ಪತ್ರಗಳ ಮೂಲಕ ಕವಿಯಾಗಿ ಪತ್ರಿಕೆಗಳಲ್ಲಿ ಆ ಕವನಗಳು ಪ್ರಕಟಗೊಳ್ಳಲು, ಇಂದು ಪತ್ರಕರ್ತನಾಗಿ ಉತ್ತಮ ಬರಹಗಾರನೆಂದು ಗುರುತಿಸಿಕೊಳ್ಳುವ ತನಕ ಅಂದಿನ ಕಲ್ಲು ಕಟ್ಟಡದ ವಿಜ್ಞಾನ ಕಾಲೇಜೇ ಕಾರಣ.
ನನ್ನ ಗುರುಗಳು ಹೇಳಿದಂತೆ ಬುದ್ಧನ ದಾರಿಯಲ್ಲಿ ನಡೆಯುವಾಗ ನನಗೆ ಸಾಕಷ್ಟು ತೊಂದರೆಗಳು ಎದುರಾಗಿವೆ, ಅವುಗಳನ್ನು ನನ್ನ ಗುರುಗಳು ಹೇಳಿದಂತೆ ಬುದ್ಧನ ಹಾದಿಯಲ್ಲಿ ದಿಟ್ಟವಾಗಿ ಎದುರಿಸಿ ಪ್ರಾಮಾಣಿಕವಾಗಿ ಸತ್ಯವನ್ನು ಹೇಳಿದಾಗ, ಪ್ರಶ್ನಿಸಿದಾಗಿ, ಕಟುವಾಗಿ ಹೇಳಿದಾಗ, ಖಂಡಿಸಿದಾಗ ಇವನು ದೂರ್ವಾಸ ಮುನಿ ಎಂದು ನನ್ನನ್ನು ದೂರ ಮಾಡಿಕೊಂಡರೆ ಮತ್ತೆ ಕೆಲವರು ನನ್ನ ಬಾಚಿ ತಬ್ಬಿಕೊಂಡಿದ್ದಾರೆ ಜಗತಿಗೆ ಬುದ್ಧ, ಗಾಂಧಿಯಂತೆ ನಿನ್ನಂತಹವರು ಬೇಕು, ನಾವಿದ್ದೇವೆ ಅಂತ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ಈಗಲೂ ನನಗೆ ಹಣ, ಆಸ್ತಿ ಮತ್ತು ಒಡವೆಗಳ ಮೇಲೆ ನನಗೆ ಅಷ್ಟಾಗಿ ಆಸೆಯಿಲ್ಲ, ಬದುಕಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಗಳಿಸುತ್ತಾ ನನಗೆ ಬೇಕೆನಿಸಿದ್ದನ್ನು ಬರೆಯುತ್ತಾ ಖುಷಿಯಾಗಿ ಇದ್ದುದರಲ್ಲಿ ತೃಪ್ತಿಯಾಗಿದ್ದೇನೆ, ನಾನು ಯಾರ ಜೊತೆಯೂ ಎಂದಿಗೂ ಮೌಢ್ಯ, ಅರಿವಿಲ್ಲದ, ಮುಗ್ಧರ ಜೊತೆ ವಾಗ್ವಾದವಾಗಲಿ, ಚರ್ಚೆಯನ್ನಾಗಲಿ ಮಾಡಿಲ್ಲ, ಮಾಡುವುದಿಲ್ಲ ಇದಕ್ಕೆಲ್ಲಾ ನನಗೆ ನನ್ನ ವಿಜ್ಞಾನ ಕಾಲೇಜಿನಲ್ಲಿ ನನಗೆ ವಿಜ್ಞಾನ ಪಾಠ ಹೇಳಿದ್ದರ ಜೊತೆಗೆ, ಜೀವನದ ಮೌಲ್ಯದ ಪಾಠ ಹೇಳಿದ ಉಪನ್ಯಾಸಕರ ಕೊಡುಗೆ ಮೌಂಟ್ ಎವರೆಷ್ಟ್ ಗಿಂತ ಎತ್ತರವಾದದ್ದು.
ನಾನು ಸಹ ಇಂತಹ ಶ್ರೇಷ್ಠ ಕಾಲೇಜಿನಲ್ಲಿ ಶ್ರೇಷ್ಠ ಉಪನ್ಯಾಸಕರ ಬೋಧನೆಯಿಂದ ಒಬ್ಬ ಕಲ್ಮಶವಿಲ್ಲದ ಪತ್ರಕರ್ತನಾಗಿರಲು ಸಾಧ್ಯವಾಗಿದೆ, ನನ್ನಲ್ಲಿ ಅಂತಹ ಕಲ್ಮಶವಿದ್ದರೆ ನನ್ನ ಗುರುಗಳು ನನ್ನನ್ನು ಕ್ಷಮಿಸಲಿ. ನನಗೆ ನಾಗೇಶ್ ಮೇಷ್ಟ್ರು ಕನ್ನಡದಲ್ಲಿ ಮುದ್ದಾಗಿ ಅವರ ಸಹಿ, ಅವರ ಮುದ್ದಾದ ಅಕ್ಷರಗಳು ತುಂಬಾ ಖುಷಿಯಾಗಿ ಇಷ್ಟವಾಗಿದೆ.
ನಮ್ಮ ಗುರುಗಳಾದ ವಿ.ನಾಗೇಶ್, ಎಂ.ಎನ್.ನಾಗರಾಜು ಅವರ ಕಾಲದ ಎನ್.ಎಸ್.ಎಸ್. ದಿನಗಳಲ್ಲಿ ವಿಜ್ಞಾನ ಕಾಲೇಜಿನ ಮುಂಭಾಗದ ಕಾಡಿನಂತಹ ಉದ್ಯಾನವನ್ನು ಸ್ವಚ್ಚಗೊಳಿಸಿ ಉದ್ಯಾನವನದಲ್ಲಿ ನಾವೇ ಬೆಳಸಿದ ಮರ-ಗಿಡಗಳನ್ನು ಇಂದಿನ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಇದರ ಮಹತ್ವ ತಿಳಿಯದೆ ಕಾಡಿನಂತಿದ್ದ ಉದ್ಯಾನವನದ ಗಿಡ-ಮರಗಳನ್ನು ಕಡಿದು ವಾಹನಗಳ ಪಾರ್ಕಿಂಗ್, ರಸ್ತೆ, ಕುಳಿತುಕೊಳ್ಳುವ ಆಸನಗಳನ್ನು ಹಾಕಿ ಪರಿಸರ ಉಳಿಸಿ ಎಂಬ ಒಣ ಪಾಠವನ್ನು ವಿಶ್ವ ವಿದ್ಯಾನಿಲಯದ ಉಪನ್ಯಾಸಕರು ಹೇಳುತ್ತಿರುವುದು ದು:ಖ, ನೋವಿನ ಸಂಗತಿ, ಯಾಕೆಂದರೆ ಈಗಿನಂತೆ ಅಂದು ಗಿಡಗಳಿಗೆ ಹಾಕಲು ಪೈಪ್ ಸೌಲಭ್ಯವಿರಲಿಲ್ಲ, ಬಿಂದಿಗೆಗಳಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರುಳು ಪೈಪೋಟಿ ಮೇಲೆ ನೀರು ತಂದು ಬೆಳಸಿದ್ದು ಈ ವಿಶ್ವ ವಿದ್ಯಾಲಯದ ಏಸಿ ಕೊಠಡಿಯಲ್ಲಿ ಕೂತು ಬೌಥಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರದ ಮಹತ್ವ ತಿಳಿದಿಲ್ಲವೋ ಅಥವಾ ಬಂದೆ ಪುಟ್ಟ ಹೋದೆ ಪುಟ್ಟ ಅನ್ನುವವರೋ ಅದನ್ನು ವಿವಿಯ ಆಡಳಿತ ಮಂಡಳಿ ಹೇಳಬೇಕಾಗಿದೆ. ಕೇಳಿದರೆ ವಾಕಿಂಗ್ ಟ್ರಾಕಿನಲ್ಲಿ ಮರ ಬೆಳೆಸಿದ್ದೇವೆ ಎನ್ನುತ್ತಾರೆ.

ಪ್ರೊ.ನಾಗೇಶ್ ಮೇಷ್ಟ್ರರಿಗೂ ನನ್ನಂತಹವನು ಯಾವುದಾದರೂ ವಿವಿಯಲ್ಲಿ ಪ್ರೊಪೆಸರ್ ಆಗ ಬೇಕೆಂಬ ಅಭಿಲಾಷೆ, ಅಭಿಮಾನ ಇತ್ತು, ಅದನ್ನು ಈಡೇರಿಸಲಾಗದೆ ಬರಹಗಾರ, ಪತ್ರಕರ್ತನಾಗಿ ಬಿಟ್ಟೆ, ಇದಕ್ಕೆ ನನ್ನ ಪ್ರಗತಿ ಪರ ಆಲೋಚನೆ, ಆ ನಿಟ್ಟಿನ ಗೆಳೆಯರ ಸಹವಾಸವೂ ಕಾರಣವಿರಬಹುದು, ಇತ್ತೀಚೆಗೆ ನನ್ನ ಬರಹಗಳನ್ನು ನೋಡಿ ಅವರು ನನಗೆ ಅಭಿನಂದಿಸಿದ್ದಾರೆ, ಖುಷಿ ಪಟ್ಟಿದ್ದಾರೆ, ನೀನು ಯಾವುದಾದರೂ ವಿವಿಯಲ್ಲಿ ಅಧ್ಯಾಪಕನಾಗಿದ್ದರೆ ನಾಲ್ಕು ಗೋಡೆಗಳ ಮಧ್ಯೆಯಷ್ಟೆ ಇರಬೇಕಿತ್ತು ಈಗ ನೀನು ಸಹ ಒಬ್ಬ ಬರಹಗಾರನಾಗಿ ಗುರುತಿಸಿಕೊಂಡಿರುವುದು ಖುಷಿಯಾಗಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
ಈಗ ನಾನು ಸಹ ವಿಶ್ವ ವಿದ್ಯಾಲಯ ಸಮಾರಂಭಗಳಿದ್ದಾಗ ವಿವಿಯ ವಿಜ್ಞಾನ ಕಾಲೇಜಿನ ಮುಖ್ಯಧ್ವಾರಕ್ಕೆ ಹೋದಾಗ ಮನಸ್ಸಿನಲ್ಲೇ ನಮಸ್ಕರಿಸಿ ಒಳ ಹೋಗುತ್ತೇನೆ.
ಇಂತಹ ಕಾಲೇಜನ್ನು ನಾನು ಬದುಕಿರುವ ತನಕ ಮರೆಯಲು ಸಾಧ್ಯವಿಲ್ಲ, ಅಲ್ಲಿಗೆ ಹೋದಾಗ ಅಲ್ಲಿಯ ತರಗತಿಗಳು, ನನ್ನ ಪಿಯು, ಪದವಿಯ ಗೆಳೆಯರು, ಉಪನ್ಯಾಸಕರುಗಳು ಸದಾ ನನಗೆ ನೆನಪಾಗುತ್ತಿರುತ್ತಾರೆ. ಈ ಭಾಗ್ಯ ಎಷ್ಟು ಜನಕ್ಕೆ ಇದೆಯೋ ಗೊತ್ತಿಲ್ಲ.
-ವೆಂಕಟಾಚಲ.ಎಚ್.ವಿ.