ಅರಸ್ಸರಂತೆ ಸಿದ್ದರಾಮಯ್ಯನವರ ರಾಜಕೀಯ ಅಂತ್ಯಕ್ಕೆ ಮಂಗಳವಾಡುತ್ತಿರುವ ಸ್ವಪಕ್ಷ-ವಿರೋಧ ಪಕ್ಷದ ನಾಯಕರು ಯಾರು? ಹೈಕಮಾಂಡೇ ರಾಜ್ಯದ ಕಾಂಗ್ರೆಸ್‌ಗೆ ಕೊನೆ ಮೊಳೆ ಹೊಡೆಯಿತೆೆ—!—? ಗರ್ಜಿಸುತ್ತಿದ್ದ ಟಗರು ಬಲಿಗೆ ಕೊರಳೊಡ್ಡಿದ್ದೇಕೆ—?

1970-80ರ ದಶಕದಲ್ಲಿ ಹಿಂದುಳಿದ ವರ್ಗದ ದೇವರಾಜು ಅರಸ್ಸು ಅವರು ಮುಖ್ಯಮಂತ್ರಿಯಾಗಿದ್ದನ್ನು ಸಹಿಸದ ಪ್ರಬಲ ಮುಂದುವರೆದ ಜಾತಿಗಳು, ಅರಸ್ಸು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುವಂತೆ ಹಿಂಬಾಗಿಲಿನ ರಾಜಕೀಯದಿಂದ ಮಣಿಸಿದರು, ಅದೇ ತಂತ್ರವನ್ನು ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿರುವ ಹಾಲಿ ಸಿದ್ದರಾಮಯ್ಯನವರನ್ನು ಸಹ ಪ್ರಬಲ-ಬಲಾಢ್ಯ ಮೇಲ್ಜಾತಿಗಳು ಹೈಕಮಾಂಡ್ ಬಳಿ ಹಿಂಬಾಗಿಲ ರಾಜಕೀಯದ ಮೂಲಕ ಸಮಾಜವಾದಿ, ಹಿಂದುಳಿದ ವರ್ಗದ ನಾಯಕನೊಬ್ಬನನ್ನು ಇಳಿಸುವ ಮೂಲಕ ಕರ್ನಾಟಕದ ಹಿಂದುಳಿದ ವರ್ಗ-ಜಾತಿಯನ್ನು ತುಳಿಯಲು ಹೊರಟಂತೆ ಮತ್ತೊಮೆ ರಾಜಕೀಯದ ಚಂಡಮಾರುತ ಬುಗಿಲೇಳುವ ಸೂಚನೆಗಳು ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದAತೆ ಕಾಣಿಸುತ್ತಾ ಇದೆ.

ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಪಕ್ಷವು 136 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಯಿತು,
ಆಗ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಮಾಡಲೇ ಒಂದು ವಾರಗಳ ಕಾಲ ಸಮಯ ತೆಗೆದುಕೊಂಡು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರುಗಳನ್ನು ಕೂರಿಸಿಕೊಂಡು ಒಂದು ಒಪ್ಪಂದಕ್ಕೆ ಬಂದು ಎರಡೂವರೆ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ, ಉಳಿದ ಎರಡೂವರೆ ವರ್ಷಗಳಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂಬ ತೀರ್ಮಾನವಾಗಿತ್ತು ಎಂಬುದು ಗಾಳಿಯಲ್ಲಿ ಗುಂಡು ಹೊಡೆದ ಮಾತಾಗಿಯೇ ಇಲ್ಲಿಯವರೆಗೂ ಉಳಿದಿದೆ.

ಆಗಾಗ ಮಾತ್ರ ಸಿದ್ದರಾಮಯ್ಯನವರೇ 5 ವರ್ಷ ನಾನೇ ಅಂತ ಹೇಳಿದರು, ಅದೇ ಮಾತನ್ನು ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಅಂತ ಸಿದ್ದರಾಮಯ್ಯ ಬೆಂಬಲಿಗ ಮಂತ್ರಿಗಳು, ಶಾಸಕರು, ಮಗ ಯತೀಂದ್ರ ಸಿದ್ದರಾಮಯ್ಯ ಹೇಳಿದರು, ಆಗಾಗ ಕೆಪಿಸಿಸಿ ಅಧ್ಯಕ್ಷರೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗರು ಇನ್ನೇನು ಮುಖ್ಯಮಂತ್ರಿ ಆಗಿಯೇ ಬಿಟ್ಟರು ಎಂಬ ಪುಕಾರವನ್ನು ಬೆಳಿಗ್ಗೆ ಸಂಜೆಯ ತನಕ ಒಂದಲ್ಲ ಒಂದು ರೀತಿಯಲ್ಲಿ ಹಬ್ಬಿಸುತ್ತಾ ಬಂದರು.

ಡಿ.ಕೆ.ಶಿವಕುಮಾರ್ ಅವರು ಮಠಗಳು, ದೇವಸ್ಥಾನಗಳಿಗೆ ದಂಡÀಯಾತ್ರೆ ಮಾಡುತ್ತಾ ಶಾಸ್ತç, ಭವಿಷ್ಯ ಕೇಳುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಾಗವಾಗಿ ಕೆಲಸ ಮಾಡಲು ಹಾಗೂ ರಾಜ್ಯದ ಅಭಿವೃದ್ಧಿಗೆ ವೇಗವಾಗಿ ತೀರ್ಮಾನ ತೆಗೆದುಕೊಳ್ಳಲು ಬಿಡುತ್ತಿರಲಿಲ್ಲ, ಅಧಿಕಾರಿ ವರ್ಗ, ತಮ್ಮ ಆಪ್ತ ಸಚಿವರು, ಶಾಸಕರು ಹಾಗೂ ತಮ್ಮ ಜಾತಿಯ ವಿರೋಧ ಪಕ್ಷಗಳ ನಾಯಕರಿಂದ ಹಿಡಿದು ತಮ್ಮ ಪಕ್ಷದ ಶಾಸಕರರಿಂದ ಸಿದ್ಧರಾಮಯ್ಯನವರನ್ನು ಬಹಿರಂಗವಾಗಿ ರಾಜಕೀಯ ನಡೆಯ ಬಗ್ಗೆ ತುಂಬಾ ಕೆಳಮಟ್ಟದ ಭಾಷೆಗಳಿಂದ ಮತ್ತು ರಾಜಕೀಯ ಕುಟಿಲ ಭಾಷೆಗಳಿಂದ ಕುಟುಕುತ್ತಾ ಬಂದರಲ್ಲದೆ, ಸಿದ್ದರಾಮಯ್ಯನವರ ಕುರ್ಚಿ ಅಲುಗಾಡುತ್ತಾ ಇದೆ, ಅವರು ಕುರ್ಚಿಯ ಬಗ್ಗೆಯೇ ಚಿಂತೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರುಗಳು ಹೀಗೆಳೆಯುವಂತೆ ಕಾಲೆಳೆಯುವಂತೆ ನೋಡಿಕೊಳ್ಳೂತ್ತಾ ಬಂದರು.

ಈ ರೀತಿಯ ಸಿದ್ದರಾಮಯ್ಯನವರ ಕಾಲೆಳೆಯುತ್ತಾ ಇದ್ದರೂ ಸಿದ್ದರಾಮಯ್ಯನವರ ಬೆಂಬಲಿಗ ಸಚಿವರಲ್ಲಿ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಕಡ್ಡಿ ತುಂಡು ಮುರಿದಂತೆ ಸಮರ್ಥನೆ ಮಾಡಿಕೊಳ್ಳುತ್ತಾ, ಸಿದ್ದರಾಮಯ್ಯನವರನ್ನು ಇಳಿಸಿದರೆ ಅದರ ಪರಿಣಾಮವನ್ನು ಹೈಕಮಾಂಡ್ ಎದುರಿಸಬೇಕಾಗುತ್ತದೆ, ಹೈಕಮಾಂಡ್ ಹೇಳಿದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಾಗುವುದಿಲ್ಲ, ಸಿದ್ದರಾಮಯ್ಯ ಶಾಸಕರಿಂದ, ಈ ರಾಜ್ಯದ ಜನರ ಆಶಯದಂತೆ, ಆಶೀರ್ವಾದಿಂದ ಮುಖ್ಯಮಂತ್ರಿ ಆಗಿರುವುದು ಎಂದು ಕಟುವಾಗಿ ಹೈಕಮಾಂಡ್‌ಗೆ ಚುರುಕು ಮುಟ್ಟಿಸಿದಾಗ, ರಾಜಣ್ಣನವರನ್ನು ಸಚಿವ ಸಂಪುಟದಿAದ ಕಿತ್ತೊಗೆದು ಒಬ್ಬ ಹಿಂದುಳಿದ ಪ್ರಭಾವಿ ಸಚಿವರನ್ನು ಒಂದು ಮಾತನ್ನು ಕೇಳದೆ ರಾಜೀನಾಮೆ ಪಡೆಯುವಂತೆ ಹೈಕಮಾಂಡ್ ಕಾರವಾಗಿ ರಾಜಣ್ಣನವರ ಆಪ್ತರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೇಳಿತು. ಇದರ ಹಿಂದೆ ಯಾರಿದ್ದರು, ಯಾವ ವರ್ಗ-ಜಾತಿ ಕೆಲಸ ಮಾಡಿತು ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಗರಡಿಯಲ್ಲಿ ಬೆಳೆದು ದೇವೇಗೌಡರನ್ನು ಮತ್ತು ಅವರ ಮಕ್ಕಳನ್ನು ಎದುರು ಹಾಕಿಕೊಂಡೇ ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು, ದೇವೇಗೌಡರ ಕುಟುಂಬಕ್ಕೆ ಸಹಿಸಲು ಆಗಲಿಲ್ಲ.

ದೇವೇಗೌಡರು ಇತ್ತೀಚೆಗೆ ತಮ್ಮ 94ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಾಗ ಈ ರಾಜ್ಯದಲ್ಲಿ ಒಬ್ಬ ಮುಖ್ಯಮಂತ್ರಿಯ ಕುರ್ಚಿ ಎಷ್ಟು ದಿನ ಉಳಿಯುತ್ತದೋ ನೋಡುತ್ತೇನೆ, ಈ ದೇವೇಗೌಡ ಏನೆಂದು ತೋರಿಸುತ್ತೇನೆ ಎಂದು ಗುಡುಗು ಹಾಕಿದ್ದರು.

ದೇವೇಗೌಡರ ಮಾತಿಗೆ ಸಿದ್ದರಾಮಯ್ಯ, ಸಿದ್ದರಾಮಯ್ಯನವರ ಮಗ ಯತೀಂದ್ರ ಅವರು ಬಿಟ್ಟರೆ, ಸಿದ್ದರಾಮಯ್ಯನವರ ಆಪ್ತ ಸಚಿವರಾಗಲಿ, ಶಾಸಕರಾಗಲಿ, ಬೇರೆ ಯಾವ ಹಿಂದುಳಿದ, ಪರಿಶಿಷ್ಠ ಜಾತಿ-ಪರಿಶಿಷ್ಠ ವರ್ಗದ ನಾಯಕರು ಸೊಲ್ಲು ಸಹ ಎತ್ತಲಿಲ್ಲ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಕೂಡಲೇ ಮೂಡಾ ನಿವೇಶನ ಅಕ್ರಮವೆಂದು ಮುನ್ನೆಲೆಗೆ ತಂದು ಸಿದ್ದರಾಮಯ್ಯನವರನ್ನು ಹೆಣೆಯಲು ಮುಂದಾರೂ ಅದು ಯಶಸ್ವಿಯಾಗದ ಕಾರಣ ವಿರೋಧ ಪಕ್ಷದ ಒಂದು ಜಾತಿಯ ನಾಯಕರುಗಳು ಆ ಜನಾಂಗದ ಸ್ವಾಮೀಜಿಯವರಿಂದ ಬಹಿರಂಗ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗದಿದ್ದರೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಹೇಳಿಸಿದರು.

ಇನ್ನ ಉತ್ತರ ಕರ್ನಾಟಕದ ಮೇಲ್ಜಾತಿ ಮಠಾಧೀಶರುಗಳು, ವಿರೋಧ ಪಕ್ಷದ, ಕಾಂಗ್ರೆಸ್ ಪಕ್ಷದ ಮೇಲ್ಜಾತಿ ನಾಯಕರುಗಳು ಹಿಂದುಳಿದ ನಾಯಕನೊಬ್ಬ ಯಾರಿಗೂ ಡೊಗ್ಗು ಸಲಾಮು ಹೊಡೆಯದೆ ಮುಖ್ಯಮಂತ್ರಿಯಾಗಿ ಜನಪ್ರಿಯತೆ ಗಳಿಸುತ್ತಿರುವುದನ್ನು ಸಹಿಸದೆ ಸಿದ್ದರಾಮಯ್ಯನವರನ್ನು ಇಳಿಸಲು ಏನೇನು ಹಿಂಬಾಗಿಲ ರಾಜಕೀಯ ಮಾಡಬೇಕೋ ಅದೆಲ್ಲಾ ಮಾಡಿದರು.

ವಿಧಾನ ಮಂಡಲ ಕಲಾಪದಲ್ಲಿ ಈ ತರಹ ಹಿಂಭಾಗಿಲ ರಾಜಕೀಯ ಮಾಡುವ ನಾಯಕರುಗಳು ಸಿದ್ದರಾಮಯ್ಯನವರ ವಿದ್ವತ್ತು ಮಾತ್ತು ಮಾತಿನ ವರಸೆಗೆ ಬಾಲ ಮುದುಡಿಕೊಂಡಿರುತ್ತಿದ್ದ ಇವರು, ತಮ್ಮ ಕ್ಷೇತ್ರಕ್ಕೆ ಹೋದ ಕೂಡಲೇ ಸಿದ್ದರಾಮಯ್ಯ ನಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ ಎಂದು ಬಾಲ ಬಿಚ್ಚಿಕೊಂಡು ಮಾತನಾಡುತ್ತಿದ್ದರು.

ಈ ಮಧ್ಯೆ ಸಿದ್ದರಾಮಯ್ಯನವರು ತುಂಬಾ ನಂಬಿದ್ದ ಬಲಗೈ ಸಚಿವರುಗಳು, ಕೊಲಂಬೋ ಸಚಿವರುಗಳು ಒಳಮೀಸಲಾತಿಯನ್ನು ಜಾರಿಗೆ ತರುವಾಗ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡದೆ ಆಯಾ ಜಾತಿಗೆ ಸೀಮಿತವಾಗುವಂತೆ ಒಳಮೀಸಲಾತಿ ಜಾರಿಯಾಗುವಂತೆ ಸಚಿವ ಸಂಪುಟ ಸಭೆಯಲ್ಲೇ ಸಿದ್ದರಾಮಯ್ಯನವರ ಮೇಲೆ ಎಗರಿ ಬಿದ್ದು, ಮುಖ್ಯಮಂತ್ರಿ ಪದವಿ ಇರಬೇಕೆಂದರೆ ನಾವು ಹೇಳಿದಂತೆ ಜಾರಿ ಮಾಡಿ ಎಂದು ಪಟ್ಟು ಹಿಡಿದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಒಳಮೀಸಲಾತಿಯನ್ನು ಜಾರಿಗೆ ತರುವಂತೆ ನೋಡಿಕೊಳ್ಳಲಾಯಿತು.

ಮೇಲ್ವರ್ಗದ ಎಲ್ಲಾ ನಾಯಕರಿಗೂ ಇದೇ ಬೇಕಿತ್ತು ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಗಿ, ಎಡಗೈ ಸಮುದಾಯವನ್ನು ಮತ್ತು ಅಲೆಮಾರಿ ಸಮುದಾಯವನ್ನು ಸಿದ್ದರಾಮಯ್ಯನವರ ವಿರುದ್ಧ ಎತ್ತಿ ಕಟ್ಟಿ ಸಾಮಾಜಿಕ ನ್ಯಾಯ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗ ಅಧಿಕಾರದ ಮದದಿಂದ ಸಾಮಾಜಿಕ ನ್ಯಾಯದ ಪರವಾಗಿಲ್ಲ ಎಂಬುದನ್ನು ಬಿಂಬಿಸುತ್ತಾ ಬಂದರು.
ಇಂತಹ ಸಮಯದಲ್ಲೂ ಕಾಂಗ್ರೆಸ್ ನ ಸಿದ್ದರಾಮಯ್ಯನವರ ಆಪ್ತ ಸಚಿವರಾಗಲಿ, ಶಾಸಕರಾಗಲಿ, ರಾಜ್ಯದ ಹಿಂದುಳಿದ ವರ್ಗದ ಜನರಾಗಲಿ ಮುಖ್ಯಮಂತ್ರಿ ಪರ ನಿಲ್ಲಲಿಲ್ಲ.

ಇದಲ್ಲದೆ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಾ ರಾಜ್ಯದ ಅಭಿವೃದ್ಧಿಯನ್ನು ಮರೆತು ನಿದ್ದೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಸಿದ್ದರಾಮಯ್ಯನವರನ್ನು ಕೀಳು ಮತ್ತು ಕೆಟ್ಟ ಭಾಷೆಯಲ್ಲಿ ಕುಟುಕುತ್ತಲೇ ಬರುತ್ತಿದ್ದಾರೆ, ಇದರ ಜೊತೆಗೆ ಜನಗಳಿಂದ ನಾವೇನು ಗ್ಯಾರಂಟಿಗಳನ್ನು ಕೊಡಿ ಅಂತ ಕೇಳಿರಲಿಲ್ಲ, ಗೃಹಲಕ್ಷಿö್ಮ ಹಣ ಬರಲಿಲ್ಲ, ವಿದ್ಯುತ್ ಕೊಡಲಿಲ್ಲ, ರಾಜ್ಯದ ಬಸ್‌ಗಳಲ್ಲಿ ಮಹಿಳೆಯರದೇ ರಾಜ್ಯಭಾರ, ಸಿದ್ದರಾಮಯ್ಯ ರಾಜ್ಯವನ್ನು ಅಭಿವೃದ್ಧಿ ಮಾಡದೆ ಭಾಗ್ಯಗಳ ರಾಮ ಎನ್ನಿಸಿಕೊಳ್ಳಲು ಹೊರಟಿದ್ದಾರೆಂದು ವಿರೋಧ ಪಕ್ಷಗಳು ಜನರಿಂದಲೇ ಸಿದ್ದರಾಮಯ್ಯನವರನ್ನು ಹೀಗೆಳೆಯುವಂತೆÉ ಹಿಂಭಾಗಿಲಿನಿAದ ಸ್ವಪಕ್ಷ-ವಿರೋಧ ಪಕ್ಷದವರು ಮಾಡಿಕೊಂಡು ಬಂದರು.

ಸಿದ್ದರಾಮಯ್ಯನವರು ಶಾಸಕರುಗಳು ನನ್ನ ಮೇಲೆ ಮುಗಿ ಬಿದ್ದು ಕುರ್ಚಿಗೆ ಕಂಟಕ ತರಬಹುದೆಂದು ಎಲ್ಲಾ ನಿಗಮ ಮಂಡಳಿ, ಅಕಾಡೆಮಿಗಳಿಗೆ ಶಾಸಕರನ್ನೇ ಅಧ್ಯಕ್ಷರನ್ನಾಗಿ ಮಾಡಿದರು, ಇದರಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಸಹ ಸಿದ್ದರಾಮಯ್ಯನವರ ಮೇಲೆ ಕೋಪಗೊಂಡು ಅವರ ಪರ ನಿಲ್ಲಲಿಲ್ಲ.

ಈ ಮಧ್ಯೆ ಡಿ.ಕೆ.ಶಿವಕುಮಾರ್ ಅವರು ದೆಹಲಿ-ಮಠಾಧೀಶರುಗಳ ಬಳಿಗೆ ದಿನ ಬೆಳಗಾದರೆ ದಂಡೆಯಾತ್ರೆ ಮಾಡುತ್ತಾ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರೂ ಶಿವಕುಮಾರ್ ಅಭಿವೃದ್ಧಿಯನ್ನು ಪಕ್ಕಕ್ಕಿಟ್ಟು ಕುರ್ಚಿಗಾಗಿ ನಿಂಬೆ ಹಣ್ಣು ಕೈಯಲ್ಲಿಡಿದು ತಿರುಗ ತೊಡಗಿದರು, ಬೆಂಗಳೂರು ಜನರು ಮುಖ್ಯಮಂತ್ರಿ ಅಭಿವೃದ್ಧಿ ಮಾಡಲಿಲ್ಲ, ಮಳೆ-ಟ್ರಾಫೀಕ್ ಸಮಸ್ಯೆ ದಿನೇ ದಿನೇ ಜನರ ಜೀವ ತೆಗೆಯುವಂತಹ ಭೀಕರ ಸಮಸ್ಯೆಯನ್ನಾಗಿ ಸೃಷ್ಠಿಸಿದ್ದರೆಂದು ಮುಖ್ಯಮಂತ್ರಿ ಜಿಬಿಎಂ ಚುನಾವಣೆ ಮಾಡಲಿಲ್ಲ ಎಂಬುದನ್ನೂ ಅವರ ಕೊರಳಿಗೆ ಕಟ್ಟಿದರು.

ಕಳೆದ ಆರು ತಿಂಗಳಿAದ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ-ಅಭಿವೃದ್ಧಿಗೆ ಕೈ ಜೋಡಿಸದೆ ಮುಖ್ಯಮಂತ್ರಿ ಕುರ್ಚಿಗಾಗಿಯೇ ಅಂತರAಗವಾಗಿ-ಬಹಿರAಗವಾಗಿ ಹೇಳಿಕೆ ಕೊಡುತ್ತಾ ಸಿದ್ದರಾಮಯ್ಯನವರ ಮನಸ್ಸಿನ ಅಭಿವೃದ್ಧಿ, ಸಾಮಾಜಿಕ ನ್ಯಾಯಕ್ಕೆ ನ್ಯಾಯ ಒದಗಿಸಲು ಅಡ್ಡಗಾಲು ಹಾಕುತ್ತಾ ನನ್ನದೇನು ಇಲ್ಲ ಎಲ್ಲಾ ಮುಖ್ಯಮಂತ್ರಿಯ ತೀರ್ಮಾನ ಎಂದು ಬಿಂಬಿಸುತ್ತಾ ಬಂದರು.

ಕೊನೆಗೆ 70-80ರ ದಶಕದಲ್ಲಿ ದೇವರಾಜು ಅರಸ್ಸು ಅವರು ಸಣ್ಣ ಜಾತಿಯ ಕೆಳ ಅಂತದ ನ್ಯಾಯಕರನ್ನೆಲ್ಲಾ ಬೆಳಸಿ ಮಂತ್ರಿ, ಶಾಸಕರು, ಲೋಕಸಭಾ ಸದಸ್ಯರನ್ನಾಗಿ ಮಾಡಿದ್ದರೂ ಕೆಳ ಜಾತಿಗಳ ನಾಯಕರು ಅರಸ್ಸು ಅವರ ಕೊನೆಗಾಲದಲ್ಲಿ ಕೈ ಹಿಡಿಯಲೇ, ಹಿಂದುಳಿದ ನಾಯಕರುಗಳಾಗಿದ್ದ ಬಂಗಾರಪ್ಪ, ವೀರಪ್ಪ ಮೊಯ್ಲಿ, ಟಿ.ಬಿ.ಜಯಚಂದ್ರ, ಕಾಗೋಡು ತಿಮ್ಮಪ್ಪ, ದಲಿತ ನಾಯಕರಾದ ಬಿ.ರಾಚಯ್ಯ, ಬಿ.ಬಸವಲಿಂಗಪ್ಪ ಅವರುಗಳು ಮುಖ್ಯಮಂತ್ರಿ ದೇವರಾಜು ಅರಸ್ಸು ಅಂದಿನ ಪ್ರಭಾವಿ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾAಧಿಯನ್ನು ಎದುರು ಹಾಕಿಕೊಂಡಿದ್ದಕ್ಕೆ ಅರಸ್ಸು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುತ್ತೇನೆ ಎಂದಾಗ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಅರಸ್ಸು ಮುಂದೆ ಹೇಳಿದ್ದವರು, ಇಂದಿರಾ ಗಾಂಧಿ ವಿರುದ್ಧ ನಿಲ್ಲಲುಸಾಧ್ಯವಿಲ್ಲ ಎಂದು ಅರಿತು ಅರಸ್ಸು ಪದ ತ್ಯಾಗ ಮಾಡಿದಾಗ ಅವರ ಪರ ನಿಲ್ಲುತ್ತೇವೆಂದು ತುಟಿ ಬಿಚ್ಚಲಿಲ್ಲ. ತುಟಿ ಬಿಚ್ಚಿದರೆ ಇವರ ರಾಜಕೀಯ ಭವಿಷ್ಯಕ್ಕೆ ಅರಸ್ಸರಂತೆ ಕಲ್ಲು ಬೀಳುತ್ತಿತ್ತು. ಮೇಲ್ಜಾತಿಯ, ಹಿಂದುಳಿದ ನಾಯಕರಿಗೆ ದೇವರಾಜು ಅರಸ್ಸು ಬಗ್ಗೆ ಪ್ರೀತಿ ಇದ್ದರೂ ಇಂದಿರಾ ಗಾಂಧಿಯ ಕಟೋರ ನಡವಳಿಕೆ ಇವರನ್ನು ಕಟ್ಟಿ ಹಾಕಿ ಅರಸ ಪರ ನಿಲ್ಲದಂತೆ ಮಾಡಿತು.

90ರ ದಶಕದಲ್ಲಿ ರಾಜಕೀಯಕ್ಕೆ ಜಾತಿಯೇ ಬೇಕೆಂಬುದನ್ನು ದೇವೇಗೌಡರು ಜಾತಿ ಮುಂದೆ ತಂದು ಮುಖ್ಯಮಂತ್ರಿಯಗುವ ಮೂಲಕ ಸಾಭೀತಾದ ಮೇಲೆ, ರಾಜಕೀಯಕ್ಕೆ ಜಾತಿಯನ್ನು ಮೇಲ್ಜಾತಿ ರಾಜಕಾರಣಿಗಳು ಪ್ರಬಲ ಅಸ್ತçವನ್ನಾಗಿ ಮಾಡಿಕೊಂಡವು, ಈ ಹಿನ್ನೆಲೆಯಲ್ಲಿಯೇ ದೇವೇಗೌಡರು, ಜೆ.ಹೆಚ್.ಪಟೇಲರು, ಎಸ್.ಆರ್.ಬೊಮ್ಮಾಯಿ, ಎಸ್.ಎಂ.ಕೃಷ್ಣ, ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಪ್ರಬಲ ಜಾತಿ ನಾಯಕರೆ ಮುಖ್ಯಮಂತ್ರಿಯಾದರು, ಅಹಿಂದ ವರ್ಗಕ್ಕೆ ಸಮಾಜವಾದಿ, ಲೋಹಿಯಾ ವಾದ ಮತ್ತು ದಲಿತ-ರೈತ ಪ್ರಭಾವದಿಂದ ಹಂತ ಹಂತವಾಗಿ ನಾಯಕರಾಗಿ ಬಂದ ಸಿದ್ದರಾಮಯ್ಯ ಪಕ್ಷ ಕಟ್ಟಿದರೂ ಮುಖ್ಯಮಂತ್ರಿಯಾಗಲಿಲ್ಲ ನಾಯಕರಂತೆ ಕಾಣಲಿಲ್ಲ. ಆಗ ಅಹಿಂದ ವರ್ಗ, ದಲಿತ ವರ್ಗದ ನಾಯಕರುಗಳು ಸಿದ್ದರಾಮಯ್ಯನವರು ನಮಗೆ ಬೆಳಕಾಗಬಹುದೆಂದು ಸಿದ್ದರಾಯ್ಯನವರ ಪರ ಗಟ್ಟಿಯಗಿ ನಿಂತವು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಗಟ್ಟಿ ನಾಯPರಾಗಿ ಬೆಳೆದು ಅಹಿಂದ ವರ್ಗದ ಸಾವಿರಾರು ನಾಯಕರನ್ನು ರಾಜಕೀಯಕ್ಕೆ ತಂದು ರಾಜಕೀಯದ ಎಲ್ಲಾ ಸವಲತ್ತುಗಳನ್ನು ಕೊಟ್ಟು ಬೆಳಿದರು. ಆದರೆ ಇಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದೆಹಲಿಯಿಂದ ರಾತ್ರೋ-ರಾತ್ರಿ ಸಿದ್ಧರಾಮಯ್ಯನವರನ್ನು ವಿಮಾನ ಹತ್ತಿಸಿ ಕಳಿಸಿದಾಗ ಇವರು ಬೆಳಸಿದ ಅಹಿಂದ ವರ್ಗ ಏಕೆ ಬಾಯಿ ಬಿಡುತ್ತಿಲ್ಲ, ಇದರ ಹಿಂದೆ ಇರುವ ಶಕ್ತಿಗಳು ಯಾವ್ಯಾವು, ಸಿದ್ದರಾಮಯ್ಯನಂತಹ ಗಟ್ಟಿ ಧ್ವನಿಯ ನಾಯಕನ ಧ್ವನಿಯನ್ನೇ ಅಡಗಿಸಿ ರಾಜೀನಾಮೆಯ ಬಾಗಿಲ ತನಕ ಕೊಂಡ್ಯೋಯ್ದವರ ರಾಜಕೀಯ ಬೆಳಕಿನ ದ್ವೀಪ ಎಷ್ಟು ದಿನ ಪ್ರಜ್ವಲಿಸಿ ಉರಿಯಲಿದೆ ಎಂಬುದನ್ನು ಕೆಲವೇ ತಿಂಗಳುಗಳಲ್ಲಿ ರಾಜ್ಯದ ಜನರೇ ಆ ಬೆಳಕಿನ ದ್ವೀಪವನ್ನು ಬೆಳಗಿಸುತ್ತಾರೋ-ಆರಿಸುತ್ತಾರೋ ಎಂಬುದು ತಿಳಿಯಲಿದೆ.

ಇಷ್ಟೇ ಅಲ್ಲದೆ 2023ರಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲೇಬೇಕೆಂದು ರಾಜ್ಯವನ್ನು ಸುತ್ತಿ ಕಾಂಗ್ರೆಸ್ ಗೆ ತಮ್ಮ ಬದ್ಧತೆ, ನೈತಿಕತೆ ಬದಿಗಿಟ್ಟು ಮತಯಾಚಿಸಿದ ಪ್ರಗತಿಪರರು, ಸಾಹಿತಿಗಳು, ಎಡಪಂಥಿಯರ, ಚಿಂತಕರ ಬಾಯಿಯನ್ನೂ ಸಿದ್ದರಾಮಯ್ಯನವರ ಪರ ಮಾತನಾಡದಂತೆ ಮಾಡಿದ ಶಕ್ತಿಗಳು ತಾವು ಎಂಬುದನ್ನು ಮತ್ತು ಸಿದ್ದರಾಮಯ್ಯನವರಿಂದ ಕೆಲ ಸಾಹಿತಿಗಳು ಅಧಿಕಾರ ಪಡೆದವರೂ ಮಾತನಾಡುತ್ತಿಲ್ಲ ಎಂಬ ಕಳಂಕ ತೊಡೆದುಕೊಳ್ಳಲು ಈಗ ಜನತೆಗೆ ಮತದಾರನಿಗೆ ಹೇಳಬೇಕಾದ ಜವಾಬ್ದಾರಿ ಪ್ರಗತಿಪರ ಸೋಗಲಾಡಿ ಸಾಹಿತಿಗಳು, ಎಡಪಂಥಿಯರು, ಚಿಂತಕರು ಈಗಲಾದರೂ ತಮ್ಮ ಆತ್ಮವಂಚನೆ ಮಾಡಿಕೊಳ್ಳದೆ ಮಾತನಾಡಿ ಸತ್ಯವನ್ನು ಈ ರಾಜ್ಯಕ್ಕೆ, ಜನರಿಗೆ ಹೇಳಬೇಕಾಗಿದೆ.

ಹಿಂದುಳಿದ ನಾಯಕ ಅರಸ್ಸರಂತೆ ಸಿದ್ದರಾಮಯ್ಯನವರ ರಾಜಕೀಯ ಅಂತ್ಯಕ್ಕೆ ಮಂಗಳವಾಡುತ್ತಿರುವ ಸ್ವಪಕ್ಷ-ವಿರೋಧ ಪಕ್ಷದ ನಾಯಕರೇ ಕಾಂಗ್ರೆಸ್‌ಗೆ ಕೊನೆ ಮೊಳೆ ಹೊಡೆದರೆ—!—? ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನAತೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವನ್ನು ನೇಪತ್ಯಕ್ಕೆ ನೂಕಲು ಎರಡು ವರ್ಷಗಳ ಮುಂಚೆಯೇ ಗುಂಡಿ ತೋಡಿದ ಹಿಂದಿನ ಚಾಣಕ್ಯನ ಆಟವನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳದೆ, ಪಕ್ಷ ಕಟ್ಟುವ ಕಾಲದಲ್ಲಿ ಮುಗ್ಗರಿಸಿ ಸ್ಮಶಾನದಲ್ಲಿನ ಶವಗಾರಕ್ಕೆ ಅದಾಗೆ ಬಿದ್ದು ಬೆಂದು ಹೋಗುತ್ತಿರುವುದಕ್ಕೆ ಹೈಕಮಾಂಡ್ ಸಹ ಅದರ ಹೊಣೆಯನ್ನು ಸಧ್ಯದಲ್ಲೇ ಅನುಭವಿಸುವ ದಿನಗಳು ದೂರವಿಲ್ಲ ಎನ್ನಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿದಿದ್ದೇನೆ ಕೂಲಿ ಕೊಡಿ ಎಂಬ ಮಾತಿಗೆ ಈಗ ಅರ್ಥ ಬಂದಿದೆಯೋ-ಅನ್ವರ್ಥವಾಗಿದೆಯೋ ಎಂಬುದು ಮೇ 28ರಂದು ಕೆಂಪು ರಶ್ಮಿಗಳೊಂದಿಗೆ ಪೂರ್ವದಲ್ಲಿ ಮೂಡುವ ಸೂರ್ಯ ರಶ್ಮಿಗಳು ಮೇಲೇರಿದಂತೆ ಬಿಸಿಲ ತಾಪ ಎಷ್ಟರ ಮಟ್ಟಿಗೆ ಏರಲಿದೆ ಅದೇ ರೀತಿ ಮುಖ್ಯಮಂತ್ರಿ ಕುರ್ಚಿಯ ಬಿಸಿಲ ತಾಪ ಏರಲಿದೆಯೇ ಎಂಬುದನ್ನು ರಾಜ್ಯದ ಜನರು ಎದುರು ನೋಡುತ್ತಿದ್ದಾರೆ, ಸೂರ್ಯ ಆಗಸದಿಂದ ಜಾರುವ ವೇಳೆಗೆ ಸಿದ್ದರಮಯ್ಯ – ಡಿ.ಕೆ.ಶಿವಕುಮಾರ್ ಈ ಇಬ್ಬರಲ್ಲಿ ಯಾರು ಜಾರಿ ಮುಳಗಲಿದ್ದಾರೆ ಎಂಬುದು ಕತ್ತಲೊಡನೆ ಸೂರ್ಯ ನಿರ್ಗಮಿಸುತ್ತಾನೋ, ಬೆಳದಿಂಗಳೊAದಿಗೆ ಚಂದ್ರ ಮೂಡುತ್ತಾನೋ ಎಂಬುದನ್ನು ಕಾದು ನೋಡಬೇಕಿದೆ.

ಸಿದ್ದರಾಮಯ್ಯನಂತಹ ಒಬ್ಬ ದಿಟ್ಟ ರಾಜಕೀಯ ಚತುರನನ್ನು, ಎದೆಗಾರಿಕೆಯ ಮಾತುಗಾರನನ್ನು, ಎಂದೂ ಮೌಢ್ಯಕ್ಕೆ ತಲೆ ಭಾಗದೆ ಶೋಷಿತರ, ತುಳಿತಕ್ಕೊಳಗಾದವರ, ಬಡವರ, ಮಹಿಳೆಯರ ಪರ, ಕಟ್ಟಕಡೆಯ ಜಾತಿಗಳಿಗೆ ಅಧಿಕಾರ ಕೊಡಲು ಸಾಮಾಜಿಕ ಬದ್ಧತೆ, ನ್ಯಾಯದ ಪರ ಎದೆಯುಬ್ಬಿಸಿ, ತೊಡೆ ತಟ್ಟಿ ಗರ್ಜಿಸುತ್ತಿದ್ದ ಟಗರೊಂದು ಬಲಿಯಾಗಲು ತನ್ನ ಕೊರಳನ್ನು ಒಡ್ಡಲು ಮುಂದಾಗಿರುವುದು ಈ ರಾಜ್ಯದ ದೌರ್ಭಾಗ್ಯವನ್ನು ಇನ್ನು ಕಣ್ಣ ಮುಂದೆ ನೋಡಬೇಕಾಗಿದೆಯೇನೋ ಎಂದು ಹಿರಿಯ ರಾಜಕೀಯ ವಿಶ್ಲೇಷಕರೊಬ್ಬರ ನೊಂದ ನುಡಿಯಾಗಿದೆ.

ವಿಶ್ಲೇಷಣೆ
-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *