ತುಮಕೂರಿನಲ್ಲಿ ಆರ್ಭಟಿಸಿದ ಮಳೆ-ಸಂಕಷ್ಠಕ್ಕೆ ಸಿಲುಕಿದ –ಜನ-ಜಾಣುವಾರು-ಬೀದಿ ನಾಯಿಗಳು

ತುಮಕೂರು : ತುಮಕೂರಿನಲ್ಲಿ ಗುಡುಗು-ಸಿಡಿಲ ಸಹಿತ ಜೋರು ಮಳೆಗೆ ರಸ್ತೆ-ಚರಂಡಿಗಳೆಲ್ಲಾ ಕೆರೆಯಂತಾದವು, ಬಹಳ ದಿನಗಳಿಂದ ಬಿಸಿಲು ಧಗೆಗೆ ಬಸವಳಿದಿದ್ದ ಜನತೆ ಇಂದಿನ ಮಳೆಯಿಂದ ಹರ್ಷಗೊಂಡರಾದರೂ ಮಳೆಯ ಅಬ್ಬರಕ್ಕೆ ಎಲ್ಲೆಲ್ಲಿ ಇದ್ದರೋ ಅಲ್ಲಿಯೇ ಜಾಗ ಬಿಟ್ಟು ಕದಲಲಿಲ್ಲ.

ಹಲವಾರು ದಿನಗಳಿಂದ ಬೇರೆಡೆಯೆಲ್ಲಾ ಮಳೆಯಾದರೂ ತುಮಕೂರಿಗೆ ಜೋರಾದ ಮಳೆ ಬಿದ್ದಿರಲಿಲ್ಲ, ಬೆಳಿಗ್ಗೆಯಿಂದಲೇ ಮಬ್ಬು ಸೆಕೆಯ ಕಾರಣ, ಮಳೆ ಬರುವ ಸೂಚನೆ ಕಾಣಿಸುತ್ತಿತ್ತು ಸುಮಾರು ನಾಲ್ಕೂವರಗೆ ಪ್ರಾರಂಭವಾದ ಮಳೆ 6.30ರ ತನಕ ರಭಸವಾಗಿ ಸುರಿಯಿತು.

ಮಳೆಯ ಜೊತೆಗೆ ಗಿಡುಗು, ಮಿಂಚು, ಸಿಡಿಲ ಆರ್ಭಟವು ಎದೆ ಝಲ್ಲೆನಿಸುತ್ತಿತ್ತು.

ಜೋರು ಮಳೆ ಸುರಿದ ಕಾರಣ ನಗರದ ಚಂರAಡಿಗಳೆಲ್ಲಾ ತುಂಬಿ, ರಸ್ತೆಗಳೆಲ್ಲಾ ಹೊಳೆಯಂತಾಗಿದ್ದವು, ವಾಹನ ಸವಾರರು ಬೆಂಗಳೂರಿನಲ್ಲಿ ಆದ ಮಳೆಯ ದುರಂತವನ್ನು ನೆನದು, ಎಲ್ಲಿಯೂ ಕಾಂಪೌAಡ್,, ಹಳೆ ಮನೆ ಮತ್ತು ಮರಗಳ ಬಳಿ ನಿಲ್ಲದೆ ಮಳೆಯಲ್ಲೆ ನೆನೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು.

ಮಳೆಯಿAದ ಶೆಟ್ಟಿಹಳ್ಳಿ ಅಂಡರ್ ಪಾಸ್, ಕಾಲ್ ಟೆಕ್ಸ್ ಅಂಡರ್ ಪಾಸ್, ಯಲ್ಲಾಪುರದ ಅಂಡರ್ ಪಾಸ್ ಗಳಲ್ಲಿ ನೀರು ನಿಂತಿದ್ದರAದ ವಾಹನಗಳು, ವಾಹನ ಸವಾರರು ತೊಂದರೆಗೊಳಗಾದರು.

ಮಳೆಗಾಲ ಪ್ರಾರಂಭವಾದರು ತುಮಕೂರು ನಗರದಲ್ಲಿ ಚರಂಡಿಗಳನ್ನು ಸ್ವಚ್ಚ ಮಾಡದಿರುವುದರಿಂದ ನೀರು ಸರಾಗವಾಗಿ ಹರಿಯಯದೆ ರಸ್ತೆಗೆ ಹರಿಯುತ್ತಿರುವುದು ಕಂಡು ಬಂದಿತು, ತುಮಕೂರು ಸಹ ಬೆಂಗಳೂರಿನAತೆ ಜಲಪ್ರಳಯವನ್ನು ಎದರಿಸುವ ದಿನಗಳು ದೂರವಿಲ್ಲ ಎಂದು ನಾಗರೀಕರು ಮಾತನಾಡಿಕೊಳ್ಳುತ್ತಿದ್ದರು.

ಮಿಂಚು-ಗುಡುಗು-ಸಿಡಿಲಿನಿAದ ಭಯಗೊಂಡ ಬೀದಿ ನಾಯಿಗಳು ಮನೆ, ಅಂಗಡಿಗಳ ಒಳಗೆ ಹೋಗಿ ಆಶ್ರಯ ಕೇಳುತ್ತಿದ್ದವು.

ಮಳೆಯಿಂದ ಜನ-ಜಾನುವಾರು-ಬೀದಿ ನಾಯಿಗಳು ಸಂಕಷ್ಟಕ್ಕೆ ಸಿಲುಕಿ ಎತ್ತ ಸಾಗಲು ಆಗದೆ ಪರದಾಡುತ್ತಿರುವುದು ಕಂಡು ಬಂದಿತು.

ಮಳೆಯ ಅವಾಂತರ ಕೇಳಲು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ನಗರದ ರಸ್ತೆಗಳೆಲ್ಲಾ ಗುಡಿ ಬಿದ್ದಿವೆ, ಚರಂಡಿಗಳು ಕಟ್ಟಿಕೊಂಡಿವೆ, ಅಧಿಕಾರಿಗಳು ಇದ್ಯಾವುದನ್ನು ಕ್ಯಾರೆ ಅನ್ನುತ್ತಿಲ್ಲ.

Leave a Reply

Your email address will not be published. Required fields are marked *