ಮುರಳೀಧರ ಹಾಲಪ್ಪನವರಿಗೆ ರಾಜ್ಯ ರಾಜಕೀಯದಲ್ಲಿ ಹೆಚ್ಚಿನ ಸ್ಥಾನ,ಮಾನ ಸಿಗಲೆಂದು ಆಶೀರ್ವದಿಸಿದ ನೊಣವಿನಕೆರೆ ಅಜ್ಜಯ್ಯ ಗುರುಗಳು

ತುಮಕೂರು: ಸಮಾಜದ ಸೇವೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಮುರಳೀಧರ ಹಾಲಪ್ಪನವರಿಗೆ ಮುಂದಿನ ದಿನಗಳಲ್ಲಿ ಭಗವಂತ ಸ್ಥಾಮಾನ ಕಲ್ಪಿಸಿ ಅವರ ಸೇವೆ ಸಮಾಜಕ್ಕಾಗಿ ಮುಡುಪಾಗಿರಲೆಂದು ಆಶೀರ್ವದಿಸುತ್ತಿದ್ದೇವೆ, ನಮ್ಮ ಗುರುಗಳು ಸಂಕಲ್ಪಕ್ಕೆ ಮಾಡಿದ್ದಾರೆ, ಗುರು ಅಜ್ಜಯ್ಯ ನ ಅನುಗ್ರಹವೂ ಇದೆ ಎಂದು ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿಗಳು ನುಡಿದರು.

ಅವರು ಜೂನ್ 11ರ ಗುರುವಾರ ಬೆಳಿಗ್ಗೆ ಕರ್ನಾಟಕ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷರು ಹಾಗು ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ ಹಾಲಪ್ಪ ಅವರ ಮನೆಯ ಭೇಟಿ ನೀಡಿ, ಮುರುಳೀಧರ ಹಾಲಪ್ಪ ಹಾಗು ಕಲ್ಪನಾ ಮುರುಳೀಧರ ಹಾಲಪ್ಪ ಅವರ 40ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶೀಗಳು, ಮುರುಳೀಧರ ಹಾಲಪ್ಪ ಅವರಿಗೆ ರಾಜ್ಯ ರಾಜಕೀಯದಲ್ಲಿ ಹೆಚ್ಚಿನ ಸ್ಥಾನ,ಮಾನ ಸಿಗಲಿ ಎಂದು ಹಾರೈಸಿದರು.

ಮುರುಳೀಧರ ಹಾಲಪ್ಪ ಅವರು ಅವರದೇ ದಾಟಿಯಲ್ಲಿ ಯವಕರು, ಮಹಿಳೆಯರು, ರೈತರು, ಕಾರ್ಮಿಕರು ಹಾಗು ಜನಸಾಮಾನ್ಯರ ಸೇವೆ ಮಾಡುತ್ತಾ, ಅರಿವಿನ ಜೊತೆಗೆ, ಸೇವೆಯಲ್ಲಿಯೂ ತೊಡಗಿದ್ದಾರೆ. ಅವರು ಮಠದ ಹಳೆಯ ಭಕ್ತರು, ತಮ್ಮ ಮನೆಯ ಪಾದ ಪೂಜೆಗೆ ಬರುವಂತೆ ನಮ್ಮನ್ನು ಭಕ್ತಿಪೂರ್ವಕವಾಗಿ ಆಹ್ವಾನಿಸಿದ್ದರು, ಅವರ ಕೋರಿಕೆಯಂತೆ ಇಂದು ಅವರ ಸ್ವಗೃಹಕ್ಕೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿದ್ದೇನೆ. ಅವರು ತಮ್ಮ ರಾಜಕೀಯ ಉನ್ನತ್ತಿಗಾಗಿ ಕೆಲ ಸಂಕಲ್ಪಗಳನ್ನು ಮಾಡಿಕೊಂಡಿದ್ದರು, ಅವರ ಸಂಕಲ್ಪಕ್ಕೆ ಗುರು ಅಜ್ಜಯ್ಯನ ಅನುಗ್ರಹವೂ ಆಗಿದೆ. ಮುಂದೆ ಉತ್ತರೋತ್ತರವಾಗಿ ಬೆಳೆಯಲಿದ್ದಾರೆ. ಅವರು ಮತ್ತು ಅವರ ಮನೆಯವರು ಮತ್ತಷ್ಟು ಜನ ಸೇವೆಯಲ್ಲಿ ತೊಡಗುವಂತಾಗಲಿ ಎಂದು ಶುಭ ಆಶೀರ್ವದಿಸಿರುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳಿಗೆ ಗುರುವಿನ ಅನುಗ್ರಹವಾಗಿದೆ. ಅವರ ಎಲ್ಲಾ ಸಂಕಷ್ಟಗಳು ದೂರವಾಗಲಿವೆ. ಮೇಲಿಂದ ಆಡಿಸುತ್ತಿರುವ ಖಾತೆ ಖ್ಯಾತೆ ಸುಖಾಂತ್ಯವಾಗಲಿದೆ. ಡಿ.ಕೆ.ಶಿವಕುಮಾರ್ ಅವರಿಗೆ ನಿಭಾಯಿಸುವ ಶಕ್ತಿ ಇದೆ. ಗೆದ್ದು ಬರಲಿದ್ದಾರೆ ಎಂಬ ವಿಶ್ವಾಸವನ್ನು ಸ್ವಾಮೀಜಿ ವ್ಯಕ್ತ ಪಡಿಸಿದರು.

ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ ಹಾಲಪ್ಪ ಮಾತನಾಡಿ, ನೊಣವಿನಕೆರೆ ಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂದವಿದೆ. ತಮ್ಮ ಪೂರ್ವಜರು ಕಾಡುಸಿದ್ದೇಶ್ವರ ಮಠಕ್ಕೆ ನಡೆದುಕೊಳ್ಲುತ್ತಿದ್ದರು. ಇಂದಿಗೂ ಅದು ಮುಂದುವರೆದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಲಹೆಯಂತೆ ನಾನು ಗುರುಗಳನ್ನು ನಮ್ಮ ಮನೆಗೆ ಪಾದಪೂಜೆಗೆ ಬರುವಂತೆ ಮಠಕ್ಕೆ ಹೋಗಿ ಅಹ್ವಾನಿಸಿದ್ದೆ. ಅವರು ಇಂದು ಆಗಮಿಸಿ, ನಮ್ಮ ಪೂಜೆ ಸ್ವೀಕರಿಸಿ ಆಶೀರ್ವದಿಸಿದ್ದಾರೆ.ಜಿಲ್ಲೆಯ ಸಮಗ್ರ ಅಭಿವೃದ್ದಿಯಾಗಬೇಕು.

ಮುಖ್ಯಮಂತ್ರಿ,ಉಪಮುಖ್ಯಮಂತ್ರಿಗಳು ಜಿಲ್ಲೆಗೆ ಒಳ್ಳೆಯ ಯೋಜನೆಗಳನ್ನು ತಂದು ಅಭಿವೃದ್ದಿ ಪಡಿಸಲು ಆಶೀರ್ವದಿಸುವಂತೆ ಕೇಳಿಕೊಂಡಿದ್ದೇನೆ. ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿ ನಡೆಸಿದ್ದೇನೆ. ಜನರ ಆಶೀರ್ವಾದದ ಜೊತೆಗೆ, ಗುರುಗಳ ಅನುಗ್ರಹವೂ ಅಗತ್ಯವಿದೆ ಎಂದರು.

ನೂತನ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ಅವರುಗಳು, ನಾಡಿನಲ್ಲಿರುವ ಬಡತನ,ನಿರುದ್ಯೋಗ ಹೋಗಲಾಡಿಸಲು ಕಾರ್ಯಕ್ರಮ ರೂಪಿಸಲಿ ಎಂಬುದು ನಮ್ಮ ಒತ್ತಾಸೆಯಾಗಿದೆ. ಅಜ್ಜಯ್ಯನ ಕೃಪೆಯಿಂದ ಅದು ಮುಂದಿನ ಎರಡು ವರ್ಷಗಳಲ್ಲಿ ಈಡರಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಈ ವೇಳೆ ಮುರುಳೀಧರ ಹಾಲಪ್ಪ ಅವರ ಪತ್ನಿ ಕಲ್ಪನಾ ಮುರುಳೀಧರ ಹಾಲಪ್ಪ, ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್, ಅರಕೆರೆ ಶಂಕರ್ , ಮಾಜಿ ಶಾಸಕ ಲಕ್ಕಪ್ಪ , ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *