ಡಿಜಿಟಲ್ ಮಾಧ್ಯಮಗಳು ಸುದ್ದಿ ಸುಧಾರಣೆ ಮಾಡಿಕೊಳ್ಳಬೇಕಿದೆ-ಶಾಸಕ ಜಿ.ಬಿ.ಜ್ಯೋತಿಗಣೇಶ್

ತುಮಕೂರು: ಮಾಧ್ಯಮವರೆಗೆ ಪತ್ರಿಕೋದ್ಯಮ ವ್ಯಾಪಕವಾಗಿ ಬೆಳೆದು ಬಂದಿದೆ, ಪತ್ರಿಕಾ ವಿತರಕರಿಂದ ಪತ್ರಿಕೆಗಳು ಜೀವಂತವಾಗಿದ್ದು ಸಂಪ್ರದಾಯಿಕ ಪತ್ರಿಕೋದ್ಯಮ ಕಣ್ಮರೆಯಾಗುತ್ತಿದೆ, ಅಂದಿನ ಮಾಧ್ಯಮ ಬರವಣಿಗೆ ಸರ್ಕಾರಗಳನ್ನೆ ಉರುಳಿಸಿದೆ, ಅಷ್ಟರ ಮಟ್ಟಿಗೆ ಪತ್ರಿಕೆಗಳು ಸದ್ದು ಮಾಡಿವೆ ಆದರೆ ಇಂದಿನ ಆಧುನಿಕ ಡಿಜಿಟಲ್ ಮಾಧ್ಯಮಗಳು ಸುದ್ದಿ ಸುಧಾರಣೆಯಲ್ಲಿ ಬದಲಾವಣೆ ಕಾಣಬೇಕಿದೆ ಎಂದು ಶಾಸಕ ಜೆ.ಬಿ.ಜ್ಯೋತಿಗಣೇಶ್ ಹೇಳಿದರು.

ಅವರಿಂದು ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ಸುದ್ದಿ ಮನೆಯಲ್ಲಿ ಪತ್ರಕರ್ತರಾಗಿ ಅತ್ಯುತ್ತಮವಾಗಿ ವರದಿ ನೀಡಿ ಹೊರಹೊಮ್ಮಿದ ನಿವೃತ್ತ ಪತ್ರಕರ್ತರಿಗೆ ಪತ್ರಿಕಾ ಭವನದಲ್ಲಿ ಸನ್ಮಾನ ಮಾಡುವ ಮೂಲಕ ಜುಲೈ ಒಂದರ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

80ರ ದಶಕದಿಂದಲೂ ಪತ್ರಿಕೆ ಗಮನಿಸಿದ್ದೇವೆ ಇಂದು ಡಿಜಿಟಲ್ ಇಂತಹ ಮಾಧ್ಯಮವನ್ನ ರಾಜಕಾರಣಿಗಳು, ಸಲೆರ್ಬೆಟಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದರು.

ಪತ್ರಕರ್ತರು ಸಮಾಜದ ಕಾವಲು ನಾಯಿಗಳಂತಾಗಿದ್ದು ವಸ್ತು ನಿಷ್ಠ ಸಮಾಜಿಕ ಕಳಕಳಿಯ ಸುದ್ದಿ ಮಾಡಬೇಕಿದೆ ಪತ್ರಕರ್ತರು ತಮ್ಮ ಘನತೆ ಗೌರವಗಳನ್ನು ಕಾಪಾಡಬೇಕಿದೆ ಪತ್ರಿಕಾರಂಗದ ಅನೇಕ ಮೇದಾವಿಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೆಕಿದೆ ಎಂದರಲ್ಲದೆ ಸಂಘದ ವತಿಯಿಂದ ದಿನಾಚರಣೆಯ ಪ್ರಯುಕ್ತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಹಿರಿಯರಿಗೆ ಗೌರವ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು..

ಹರಿಕಥಾ ವಿದ್ವಾನ್ ಡಾ.ಲಕ್ಷಣದಾಸ್ ಮಾತನಾಡಿ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿರುವುದೇ ನನ್ನ ಪುಣ್ಯ, ಅನೇಕ ಪತ್ರಕರ್ತರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿ ಮೇಲೆ ಬಂದಿದ್ದಾರೆ ಅದೇ ರೀತಿಯಾಗಿ ತಮ್ಮ ಬರಹಗಳಿಂದ ಪತ್ರಕರ್ತರು ಬಡ ಕಲಾವಿದರನ್ನು ಕಾಪಾಡಿದ್ದಾರೆ ಈಗಿನ ಪತ್ರಕರ್ತರು ಹಿರಿಯ ಆದರ್ಶಗಳನ್ನು ಪಾಲಿಸಬೇಕು, ಇಂದ್ರ ಕುಮಾರ್ ಅಂತವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಜಿಲ್ಲೆಯಲ್ಲಿ ಅನೇಕ ಸೃಜನಶೀಲ, ವಸ್ತು ನಿಷ್ಠ ಪತ್ರಕರ್ತರು ಇದ್ದಾರೆ ಇದರಿಂದಾಗಿ ಪತ್ರಿಕಾಧರ್ಮ ಉಳಿದಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ ಗೌಡ ಮಾತನಾಡಿ ಆಧುನಿಕ ಕಾಲಘಟ್ಟದ ಪತ್ರಿಕೋದ್ಯಮದಿಂದಾಗಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆನಿಸಿರುವ ಪತ್ರಿಕಾರಂಗ ತನ್ನ ಮೌಲ್ಯವನ್ನು ಕಳೆದುಕೊಳತ್ತಿದೆ ಯೂಟ್ಯೂಬ್, ವೆಬ್ ನ್ಯೂಸ್ ಸೇರಿದಂತೆ ಅನೇಕ ರೀತಿಯ ಜಾಗತಿಕ ಡಿಜಿಟಲ್ ಮಾಧ್ಯಮಗಳಿಂದಾಗಿ ಹಾದಿ ತಪ್ಪಿದ ಪತ್ರಿಕೋದ್ಯಮ ಇಂದು ಅತಂತ್ರ ಸ್ಥಿತಿಯಲ್ಲಿದೆ, ಕೆಲ ಪತ್ರಕರ್ತರು ಬೇರೆ ಬೇರೆ ವಿಚಾರಕ್ಕೆ ಕೆಟ್ಟ ಹಾದಿ ಹಿಡಿದಿದ್ದಾರೆ ಅದನ್ನ ಬಿಡಬೇಕು ವಸ್ತು ಪರಾಮರ್ಶೆಯ ಸುದ್ದಿಗಳನ್ನು ನೀಡಬೇಕು, ಪತ್ರಕರ್ತರು ಇದುವವಿರೆಗೂ ಸ್ವಾವಲಂಬಿಗಳಾಗಿಲ್ಲ, ಸಂಕಟದಲ್ಲಿದ್ದಾರೆ ಸರ್ಕಾರದ ಹಂತದಲ್ಲಿ ಪತ್ರಕರ್ತರ ವಿಚಾರಗಳು ಚರ್ಚೆಯಾಗಿ ಸರ್ಕಾರದಿಂದ ಆರೋಗ್ಯ, ಗೌರವ ಧನ, ವಸತಿ ಸೌಲಭ್ಯ ಕಲ್ಪಸಬೇಕಾಗಿದೆ ಇದರ ವಿಚಾರವಾಗಿ ಸದನದಲ್ಲಿ ಪತ್ರಕರ್ತರ ಭವಣೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ,ಎಂಬತ್ತು- ತೊಂಬತ್ತರ ದಶಕದಲ್ಲಿ ಲೈಬ್ರರಿಗಳಲ್ಲಿ ಪತ್ರಿಕೆಗಳನ್ನು ನೋಡಿ ಓದಿ ಬೆಳೆದು ಬಂದಿದ್ದೇವೆ ಟಿ.ವಿ. ಚಾನೆಲ್‍ಗಳಿಗಿಂತ ಪತ್ರಿಕೆಗಳು ವಿಭಿನ್ನವಾಗಿವೆ ಇನ್ನೂ ಐವತ್ತು ವರ್ಷಗಳ ಕಾಲ ಪತ್ರಿಕೆಗಳು ಜೀವಂತವಾಗಿರುತ್ತವೆ ಅಲ್ಲಿಯವರೆಗೂ ಪತ್ರಕರ್ತರು ವಸ್ತುನಿಷ್ಠ, ಸಾಮಾಜಿಕ ಕಳಕಳಿಯಂತಹ ಸುದ್ದಿಗಳನ್ನು ನೀಡಬೇಕು ಇದ್ದರಿಂದ ಸಮಾಜ ಸರಿದೂಗಿಸುವ ಕೆಲಸವಾಗ ಬೇಕಿದೆ ಎಂದರು.

ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಚೀ.ನಿ.ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತರುಗಳಾದ ಎಚ್. ಈ.ವೆಂಕಟೇಶಮೂರ್ತಿ, ದಿವಂಗತ ಜಿ ಇಂದ್ರಕುಮಾರ್‍ರವರ ಪತ್ನಿ ಜೆ. ಜಯಶ್ರೀರವರನ್ನು , ತಿಪಟೂರು ಸೋಮಶೇಖರ್, ಕೇಶವಮೂರ್ತಿ ಭಟ್, ಕೆ. ಬಿ. ಚಂದ್ರಮೌಳಿ, ಪೋಟೋ ಗ್ರಾಪರ್ ಟಿ.ಎಸ್. ತ್ರಿಯಂಬಕ ಇವರುಗಳನ್ನ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಪತ್ರಿಕಾ ದಿನಾಚರಣೆಯಲ್ಲಿ ತುಮಕೂರು ರೋಟರಿ ಕ್ಲಬ್ ಅಧ್ಯಕ್ಷರಾದ ರಾಜೇಶ್ವರಿರುದ್ರಪ್ಪ, ಸಂಘದ ಉಪಾಧ್ಯಕ್ಷರಾದ ಎಲ್ ಚಿಕ್ಕಿರಪ್ಪ, ಶಾನಾ ಪ್ರಸನ್ನಮೂರ್ತಿ, ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಸಿದ್ದಲಿಂಗಸ್ವಾಮಿ ಸೇರಿದಂತೆ ಪತ್ರಕರ್ತರ ಸಂಘದ ನಿರ್ದೇಶಕರುಗಳು, ಪದಾಧಿಕಾರಿಗಳು ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *