ಅಪಘಾತ : ಸ್ಥಳದಲ್ಲೇ ಐದು ಮಂದಿ ಸಾವು

ತುಮಕೂರು : ಹಿರೇಹಳ್ಳಿಯ ದೇವರ ಹೊಸಹಳ್ಳಿ ಬಳಿ ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಐದು ಮಂದಿ ಮೃತಪಟ್ಟಿದ್ದಾರೆ.

ಮೃತಪಟ್ಟವರು ಚಳ್ಳಕೆರೆ ತಾಲ್ಲೂಕಿನವರು ಎಂದು ಹೇಳಲಾಗಿದ್ದು, ಶಿರಾದಿಂದ ಬೆಂಗಳೂರಿಗೆ ಹೊರಟಿದ್ದ ವಿಜಯಲಕ್ಷ್ಮಿ ಎಂಬ ಖಾಸಗಿ ಬಸ್ ಡಿವೈಡರ್‍ಗೆ ಡಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗೋವಿಂದನಾಯ್ಕ(58) ತಿಪ್ಪಮ್ಮ(52) ದಿನೇಶ್(12) ಪಿಂಕಿ) ಹಾಗೂ ವಾಹನ ಚಾಲಕ ಕುಣಿಗಲ್ ಮೂಲದ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶ್ರೀಕಂಠಪ್ಪ, ಮಂಜುನಾಥ್, ಪುಟ್ಟಮ್ಮ, ಭಗ್ಯಮ್ಮ, ಮಂಜುನಾರ್ಥ, ಕರಿಯಮ್ಮ, ಮಂಜುಳಾ ಅವರುಗಳು ಗಾಯಗೊಂಡಿದ್ದಾರೆ.

ಈ ಸಂಬಂಧ ಕ್ಯಾತ್ಸಂದ್ರ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *