ಅಟ್ಟಿಕಾ ಬಾಬು ಹೇಳಿಕೆ ಶುದ್ದ ಸುಳ್ಳು : ಡಾ. ಷಫಿ ಅಹ್ಮದ್

ತುಮಕೂರು: ಅಟ್ಟಿಕಾ ಬಾಬು ತುಮಕೂರು ನಗರದಿಂದ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯಲು ಷಫಿ ಅಹ್ಮದ್ ಜೊತೆ ಚರ್ಚಿಸಿ ಆಶಿರ್ವಾದ ಪಡೆದಿದ್ದೇನೆ ಎಂದು ನಿನ್ನೆ ಹೇಳಿಕೆ ನೀಡಿರುವುದು ಶುದ್ದ ಸುಳ್ಳು. ಈ ರೀತಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದು ಅಟ್ಟಿಕಾ ಬಾಬುಗೆ ಶೋಭೆ ತರುವುದಿಲ್ಲ ಎಂದು ಮಾಜಿ ಶಾಸಕ ಡಾ. ಷಫಿ ಅಹ್ಮದ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಜೆ.ಡಿ.ಎಸ್ ಪಕ್ಷದಿಂದ ಕಳಕ್ಕಿಯುವ ಇಂಗಿತ ವ್ಯಕ್ತಪಡಿಸಿರುವ ಅಟ್ಟಿಕಾ ಬಾಬು ನನ್ನ ಆಶೀರ್ವಾದವಿದೆ ಎಂದು ತಿಳಿಸಿದ್ದು, ಈ ಮಾತು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇನೆ. ಜೆಡಿಎಸ್ ಪಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕುಟುಂಬದವರೇ ಆದ ಡಾ. ರಫೀಕ್ ಅಹ್ಮದ್ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದು, ಈ ಹಿಂದೆ ಶಾಸಕರಾಗಿ ತುಮಕೂರು ನಗರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಿದ್ದಾರೆ. ಡಾ. ರಫೀಕ್ ಅಹ್ಮದ್ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಆಗಿರುವಾಗ, ಅಟ್ಟಿಕಾ ಬಾಬುಗೆ ನಾನು ಆಶೀರ್ವಾದ ಮಾಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಮಾಜಿ ಶಾಸಕ ಡಾ. ಷಫಿ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *