ಕಾಂಗ್ರೆಸ್ ಅಂದರೆ ಜಾತಿವಾದಿ-ಭ್ರಷ್ಟಚಾರದ ಪಕ್ಷ-ಜೆ.ಪಿ.ನಡ್ಡಾ

ತುಮಕೂರು : ಕಾಂಗ್ರೆಸ್ ಅಂದರೆ ಜಾತಿವಾದಿ, ಭ್ರಷ್ಟಚಾರದ ಪಕ್ಷ, ಆ ಪಕ್ಷವನ್ನು ಜನ ದೇಶದಲ್ಲಿ ತಿರಸ್ಕರಿಸಿದ್ದಾರೆ, ಕರ್ನಾಟಕದಲ್ಲೂ ಅದನ್ನು ತಿರಸ್ಕರಿಸುತ್ತಾರೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಅವರಿಂದು ತುಮಕೂರಿನ ಸಿದ್ಧಿ ವಿನಾಯಕ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ತುಮಕೂರು ಮತ್ತು ಮಧುಗಿರಿ ಶಕ್ತಿಕೇಂದ್ರಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಭಾರತದಲ್ಲಿ 9 ತಿಂಗಳು ಮುಂದೆಯೇ ಎರಡನೇ ವಾಕ್ಸಿನ್ ನೀಡಲಾಗಿದೆ. ಈ ವಿಚಾರವನ್ನ ಕರ್ನಾಟಕದ ಜನರಿಗೆ ತಿಳಿಸಬೇಕಿದೆ. ಉಕ್ರೇನ್ ಯುದ್ದದ ನಡುವೆ ಸಿಲುಕಿದ ಮಕ್ಕಳನ್ನು ಭಾರತಕ್ಕೆ ಕರೆತಂದಿದ್ದು ನಮ್ಮ ಹೆಮ್ಮೆಯ ಪ್ರಧಾನಿ. ಕಾಂಗ್ರೆಸ್‍ನವರು ದಲಿತರ ಬಗ್ಗೆ ಮಾತ್ನಾಡ್ತಾರೆ,ಆದರೆ ಅವರಿಗೆ ಯಾಕೆ ಭಾರತ ರತ್ನ ತಡವಾಗಿ ಕೊಟ್ಟರು..? ಮೋದಿ ದಲಿತ ವ್ಯಕ್ತಿಯನ್ನು ರಾಷ್ಟಪತಿಯನ್ನಾಗಿ ಮಾಡಿದ್ದಾರೆ, ಆದಿವಾಸಿ ಮಹಿಳೆಯನ್ನು ಈಗ ರಾಷ್ಟ್ರಪತಿಯನ್ನಾಗಿ ಮಾಡಿದ್ದಾರೆ ಇದು ದೇಶದ ಇತಿಹಾಸದಲ್ಲಿಯೇ ಮೊದಲನೆಯದು ಎಂದು ಹೇಳಿದರು

ಎಡೆಯೂರು ಸಿದ್ಧಲಿಂಗೇಶ್ವರ, ಗೊರವನಹಳ್ಳಿ ದೇವಾಲಯ ಸ್ಮರಿಸಿದ ನಡ್ಡಾ ಶಕ್ತಿ ಕೇಂದ್ರದಲ್ಲಿ ಪ್ರಾಮಾಣಿಕ ಕಾರ್ಯಕರು ಹೆಚ್ಚಾಗಿದ್ದಾರೆ. ಮತದಾರರ ಬಳಿ ನೇರವಾಗಿ ಹೋಗಿ ಅವರಿಗೆ ಬಿಜೆಪಿ ಸಾಧನೆಗಳನ್ನು ತಿಳಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ನರೇಂದ್ರ ಮೋದಿ ಈ ದೇಶದ ರಾಜಕೀಯ ವ್ಯವಸ್ಥೆ, ಚರಿತ್ರೆಯನ್ನು ಬದಲಾಯಿಸಿದ್ದಾರೆ ಎಂದು ಹೇಳಿದರು.

ತುಮಕೂರು ಮಧುಗಿರಿ ಶಕ್ತಿ ಕೇಂದ್ರಗಳ ಪ್ರಮುಖ ಸಭೆಯಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊಟ್ಟ ಮೊದಲನೆಯಾಗಾಗಿ ಇಷ್ಟು ಜನ ಸೇರಿರುವುದಕ್ಕೆ ಖುಷಿಯಾಗಿದೆ, ನಾನು ಬರುವುದು ತಡವಾಗಿದೆ ಕ್ಷಮಿಸಿ ಎಂದು ಮಾತು ಆರಂಭಿಸಿದರು. ನೀರಾಗಾಗಿ, ಜಾತಿ ವಿಚಾರವಾಗಿ ಸೇರಿದಂತೆ ಹಲವು ವಿಷಯಗಳಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತಿತ್ತು ಅದು ಬಿಜೆಪಿಯಿಂದ ಬದಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಚುನಾವಣೆಗೆ ಹೋಗಲು ಪ್ರತಿಯೊಂದು ರಿಪೆÇೀರ್ಟ್ ಕಾರ್ಡ್ ಇದೆ. ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠವಾಗಬೇಕು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ. ದಲಿತ, ಹಿಂದುಳಿದ ಸೇರಿದಂತೆ ಎಲ್ಲಾ ಸಮುದಾಯಗಳನ್ನು ಒಟ್ಡುಗೂಡಿಸುವ ಹಾಗೂ ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕಿದೆ. ಕಾಂಗ್ರೆಸ್ ನವರಿಗೆ ಓದು ಬರಹದ ಜ್ಞಾನ ಕಡಿಮೆ ಇದೆ ಎಂದು ವ್ಯಂಗ್ಯವಾಡಿದರು. ಮುಕ್ತ ಚರ್ಚೆಗೆ ಬನ್ನಿ ನಾವು ಉತ್ತರ ಕೊಡುತ್ತೆವೆ ಎಂದು ಸವಾಲು ಹಾಕಿದ ನಡ್ಡಾ ತುಮಕೂರು ಜಿಲೆಯ 11 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *