ತುಮಕೂರು : ತುಮಕೂರು ಗ್ರಾಮಾಂತರ ಕ್ಷೇತ್ರವು ಪಂಚರತ್ನ ಯಾತ್ರೆಯ ಸ್ವಾಗತಕ್ಕೆ ಮಧುಮಗಳಂತೆ ಸಿಂಗಾರಗೊಂಡಿದ್ದು, ರಾಜ್ಯದಲ್ಲಿ ಯಾರೂ ಮಾಡಿರದ ರೀತಿಯಲ್ಲಿ ಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಗುವುದು ಎಂದು ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ಹೇಳಿದರು.
ಅವರಿಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿಸೆಂಬರ್ 29ರ ಗುರುವಾರದಂದು ಪಂಚರತ್ನ ಯಾತ್ರೆಯು ಕ್ಷೇತ್ರಕ್ಕೆ ಆಗಮಿಸಲಿದ್ದು, ಸ್ವಾಗತಕ್ಕೆ ಸಕಲ ಸಿದ್ದತೆಯನ್ನು ಕಾರ್ಯಕರ್ತರುಗಳು ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಗುರುವಾರದಂದು ನಡೆಯುವ ಪಂಚರತ್ನ ಯಾತ್ರೆಯು ಹೆಬ್ಬೂರು, ನಾಗವಲ್ಲಿ, ಹೊನ್ನುಡಿಕೆ ,ಹೊನ್ನಡಿಕೆ ಹ್ಯಾಂಡ್ ಪೆÇೀಸ್ಟ್ ಗೂಳೂರು, ಪಂಡಿತನಹಳ್ಳಿ , ಉರ್ಡಿಗೆರೆ ಬೆಳಗುಂಬ ಮಾರ್ಗವಾಗಿ ಯಲ್ಲಾಪುರದವರೆಗೂ ಪಂಚರತ್ನ ರಥಯಾತ್ರೆ ಸಾಗಲಿದ್ದು ಯಾತ್ರೆ ಯುದ್ಧಕ್ಕೂ ವಿವಿಧ ಜಾನಪದ ಕಲಾತಂಡಗಳು ಸೇರಿದಂತೆ 50,000ಕ್ಕೂ ಹೆಚ್ಚು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪಂಚರತ್ನ ರಥ ಯಾತ್ರೆಗೆ ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರು ಸ್ನೇಹಿತರು ರೈತ ಸಮುದಾಯ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಸಾರ್ವಜನಿಕರಿಂದ ಅದ್ದೂರಿ ಸ್ವಾಗತಕ್ಕೆ ಸಿದ್ದಗೊಂಡಿದ್ದು
ಯಾತ್ರೆಯು ಹೆಬ್ಬೂರಿಗೆ ಆಗಮಿಸಿದಾಗ 25000ಕ್ಕೂ ಹೆಚ್ಚು ಜನರಿಂದ ಸ್ವಾಗತ ಕೋರಲಾಗುವುದು,ಬೇರೆ ತಾಲ್ಲೂಕಿಗಿಂತ ನಿರೀಕ್ಷೆ ಮೀರಿ ಮಾಜಿ ಮುಖ್ಯಮಂತ್ರಿಗಳಿಗೆ ವಿಶೇಷ ಸ್ವಾಗತ ಕೋರಲು ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ, ಅವರು ಹೆಬ್ಬೂರಿಗೆ ಯಾತ್ರೆ ಆಗಮಿಸಿದಾಗ É ಪ್ಯಾರಾ ಗ್ಲೈಡಿಂಗ್ ಮೂಲಕ ಹೂ ಮಳೆ ಸುರಿಸುವ ಮೂಲಕ ಸ್ವಾಗತ ಕೋರಲಾಗುವುದು ಎಂದರು.
ಮೊಟ್ಟ ಮೊದಲಿಗೆ ದೇಶದ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿಯವರಿಗೆ ಇಂತಹ ಅದ್ದೂರಿ ಸ್ವಾಗತ ಕೋರಿದರು ಎನ್ನುವಂತೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಬ್ಬದ ವಾತಾವರಣವನ್ನ ನಿರ್ಮಾಣ ಮಾಡಲಾಗುವುದು ಈ ಮೂಲಕ ಹೊಸ ವμರ್Áಚರಣೆಯನ್ನ ಪಂಚರತ್ನ ಯಾತ್ರೆಯ ಮೂಲಕ ಆಚರಿಸಲು ಗ್ರಾಮಾಂತರ ಕ್ಷೇತ್ರದ ಜನರು ಕಾತುರರಾಗಿದ್ದಾರೆ ಎಂದರು.
ಯಾತ್ರೆಯ ಸಂದರ್ಭದಲ್ಲಿ ಬಲೂನ್ ಶೋ ,ಅಂಬ್ರೆಲಾ ಶೋ, ವಿವಿಧ ಕಲಾತಂಡಗಳೊಂದಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯಲ್ಲಾಪುರದಲ್ಲಿ ವೇದಿಕೆಯ ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯ ಮಾಹಿತಿ ಸೇರಿದಂತೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ರವರ ನಡೆದು ಬಂದ ಹಾದಿ ಹಾಗೂ ಪಂಚರತ್ನ ಯಾತ್ರೆಯ ಮಾಹಿತಿಯನ್ನ ಎಲ್ಇಡಿ ಲೈಟ್ ಶೋ ಮೂಲಕ ಸಾರ್ವಜನಿಕರಿಗೆ ತಿಳಿಸುವ ಕಾರ್ಯಕ್ರಮದ ಜೊತೆಗೆ ಸಂಗೀತ ಸಂಜೆ ಸಹ ನಡೆಯಲಿದೆ ಎಂದರು.
ಪಂಚರತ್ನ ರಥಯಾತ್ರೆಯ ಉದ್ದಕ್ಕೂ ವಿವಿಧ ರೀತಿಯಲ್ಲಿ ಸ್ವಾಗತ ಕೋರಲು ಪಕ್ಷದ ಕಾರ್ಯಕರ್ತರು ಮುಖಂಡರು ಸಜ್ಜಾಗಿದ್ದು 200ಕ್ಕು ಹೆಚ್ಚು ಜೆಸಿಬಿ ಮೂಲಕ ಹೂ ಮಳೆ ಸುರಿಸಲಾಗುವುದು ಹಾಗೂ ಒಂದು ಲಕ್ಷ ದೀಪೆÇೀತ್ಸವ ಕಾರ್ಯಕ್ರಮ , 500 ಆಟೋ ಹಾಗೂ 500 ಕಾರ್ ಗಳ ಮೂಲಕ ಅದ್ದೂರಿಯಾಗಿ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯನ್ನ ನಡೆಸಲು ಸಕಲ ಸಿದ್ಧತೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ತುಮಕೂರಿನ ಯಲ್ಲಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ್ಲ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಹಾಲನೂರು ಅನಂತ್ ಕುಮಾರ್, ಟಿ ಆರ್ ನಾಗರಾಜು, ಚೆಲುವರಾಜು ಹಾಜರಿದ್ದರು.