ತುಮಕೂರು: ನೀಟ್ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರದ ವಿರುದ್ದ ಜೂನ್ 02 ರ ಮಂಗಳವಾರ ಬೆಳಗ್ಗೆ 10-30ಕ್ಕೆ ನಗರದ ಟೌನ್ಹಾಲ್ ವೃತ್ತದಲ್ಲಿ ಎನ್.ಎಸ್.ಯು.ಐ ಹಾಗೂ ಯೂತ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 2017 ರಿಂದ ಇದುವರೆಗೂ ಹಲವು ಬಾರಿ ಎನ್.ಟಿ.ಎ ನೀಟ್,ಎಸ್.ಎಸ್.ಸಿ ಹಾಗೂ ಯುಜಿ ಪ್ರವೇಶ ಪರೀಕ್ಷೆಯನ್ನು ಸಮರ್ಥವಾಗಿ ನಡೆಸಲು ಸಂಪೂರ್ಣ ವಿಫಲವಾಗಿದೆ.ಇದರ ಹೊಣೆ ಹೊರಬೇಕಾದ ಶಿಕ್ಷಣ ಸಚಿವರು ಇದುವರೆಗೂ ಮೌನಕ್ಕೆ ಶರಣಾಗಿದ್ದಾರೆ.ಶಿಕ್ಷಣ ಸಚಿವರ ರಾಜೀನಾಮೆ ಪಡೆಯಬೇಕಾಗಿದ್ದ ಪ್ರಧಾನಮಂತ್ರಿಗಳು ವಿದೇಶಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದು, ದೇಶದ ಯುವಜನರನ್ನು ವಂಚಿಸುತಿದ್ದಾರೆ. ಆಂಧ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಬ್ಲಾಕ್ಲೀಸ್ಟ್ ನಲ್ಲಿ ಇದ್ದ ಕಂಪನಿಗಳಿಗೆ ಪರೀಕ್ಷೆ ನಡೆಸುವ ಜವಾಬ್ದಾರಿ ನೀಡಿ, ಇಡೀ ವ್ಯವಸ್ಥೆಯನ್ನು ಹಾಳು ಮಾಡಿದೆ.ಹಾಗಾಗಿ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಜನಸಾಮಾನ್ಯರ ಸಮಸ್ಯೆಗಳಾದ ಬೆಲೆ ಹೆಚ್ಚಳವನ್ನು ವಿರೋಧಿಸಿ ಜೂನ್ 02ರಂದು ಎನ್.ಎಸ್.ಯು.ಐ ಮತ್ತು ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕೇAದ್ರ ಸರಕಾರದ ನಿರ್ಲಕ್ಷದಿಂದ ರೋಸಿ ಹೋಗಿರುವ ಯುವಜನರ ತಾಳ್ಮೆಯ ಕಟ್ಟೆ ಒಡೆದಿದೆ.ಹಾಗಾಗಿ ಕಾಕ್ರೋಚ್ ಜನತಾಪಾರ್ಟಿ ಎಂಬ ಸಾಮಾಜಿಕ ಜಾಲತಾಣದ ಗ್ರೂಪ್ಗೆ 21 ಲಕ್ಷಕ್ಕೂ ಅಧಿಕ ಯುವಜನರು ತಮ್ಮ ಬೆಂಬಲ ಸೂಚಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.ಆದರೆ ಇದರಿಂದ ಎಚ್ಚೆತ್ತಂತೆ ಕೇಂದ್ರ ಸರಕಾರ ಕಂಡು ಬರುತ್ತಿಲ್ಲ.ಇಂದಿಗೂ ನೀಟ್,ಎಸ್.ಎಸ್.ಸಿ ಹಾಗೂ ಯುಜಿ ಪ್ರವೇಶ ವೈಫಲ್ಯವನ್ನು ಜಾತಿ,ಧರ್ಮದ ಆಧಾರದಲ್ಲಿಯೇ ಸಮರ್ಥಿಸಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡು.ಕೇಂದ್ರದ ಈ ಯುವಜನ ವಿರೋಧಿ ಧೋರಣೆಯನ್ನು ಜನರ ಮುಂದಿಡುವ ನಿಟ್ಟಿನಲ್ಲಿ ಈ ಪ್ರತಿಭಟನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ಹಿರಿಯ ಮುಖಂಡರಾದ ಕೆಂಚಮಾರಯ್ಯ ಮಾತನಾಡಿ,ನೀಟ್ ಹಗರಣದಿಂದಾಗಿ ಯುವಜನರ ಆತ್ಮಸ್ಥೆರ್ಯವೇ ಕುಸಿದಿದೆ. ನೀಟ್ ಪರೀಕ್ಷೆ ಬರೆದ 23 ಲಕ್ಷ ವಿದ್ಯಾರ್ಥಿಗಳಲ್ಲಿ ಅಭದ್ರತೆ ಕಾಡುತ್ತಿದೆ.ಇದಕ್ಕೆ ಕೇಂದ್ರ ಸರಕಾರವೇ ನೇರ ಹೊಣೆ.ಆದ್ದರಿಂದ ಕೇಂದ್ರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ.ಈ ನಿಟ್ಟಿನಲ್ಲಿ ಎನ್.ಎಸ್.ಯು.ಐ ಸಕ್ರಿಯವಾಗಿ ಪ್ರತಿಭಟನೆಯಲ್ಲಿ ತೊಡಗಿಕೊಂಡು, ದೇಶದ ಯುವಜನರಿಗೆ ಮಾರಕವಾಗಿರುವ ಕೇಂದ್ರದ ನಡೆಯ ವಿರುದ್ದ ದೊಡ್ಡ ಹೋರಾಟ ನಡೆಸಲು ಮುಂದಾಗಿದ್ದಾರೆ.ಯುವಜನರ ಈ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲಿಸಲಿದೆ ಎಂದರು.
ಹಿರಿಯರಾದ ರೇವಣ್ಣ ಸಿದ್ದಯ್ಯ ಮಾತನಾಡಿ,ಇಂದಿನ ಯುವಜನರಲ್ಲಿ ಸಾಮಾಜಿಕ ಕಾಳಜಿ ಎಂಬುದೇ ಇಲ್ಲದಾಗಿದೆ. ಉದ್ಯೋಗವಿಲ್ಲದೆ ಬಳಲುತ್ತಿರುವ ಯುವಜನತೆ,ಒಂದು ಪರೀಕ್ಷೆಯನ್ನು ಸಮರ್ಥವಾಗಿ ನಡೆಸಲಾಗದ ಕೇಂದ್ರದ ವಿರುದ್ದ ದ್ವನಿ ಎತ್ತಬೇಕಾಗಿದೆ.ಬಡತನ,ನಿರುದ್ಯೋಗ, ಬೆಲೆ ಹೆಚ್ಚಳದ ವಿರುದ್ದದ ಈ ಹೋರಾಟ ಇತರರಿಗೆ ಮಾದರಿಯಾಗಬೇಕು ಎಂದರು.
ಯುವಜನ ಮುಖಂಡ ಪ್ರಕಾಶ್ ಮಾತನಾಡಿ,ದೇಶದ ಜನರು ಎದುರಿಸುತ್ತಿರುವ ನಿರುದ್ಯೋಗ, ಬಡತನ ಇನ್ನಿತರ ವಿಷಯಗಳ ಕಡೆಯಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಮತ್ತು ಬಿಜೆಪಿಯೇತರ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಎಸ್.ಐ.ಆರ್. ನಡೆಸುತ್ತಿದೆ.ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಯೊಂದು ಸಮಸ್ಯೆಯನ್ನು ಧರ್ಮ,ಜಾತಿ ಆಧಾರದಲ್ಲಿ ಬಿಂಬಿಸುವ ಕೆಲಸ ನಡೆಯುತ್ತಿದೆ.ಇದರ ವಿರುದ್ದ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ.ಸೋಷಿಯಲ್ ಮೀಡಿಯಾ ದಲ್ಲಿ ಒಂದು ಕಾಮೆಂಟ್ ಹಾಕುವ ಮೊದಲು ಹತ್ತಾರು ಬಾರಿ ಪರಿಶೀಲಿಸಿ ಮುನ್ನೆಡೆಯಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ,ಎನ್.ಎಸ್.ಯು.ಐ ಎಂಬುದು ಒಂದು ಪ್ರಬಲವಾದ ಸಂಘಟನೆ, ಆದರೆ ಇತ್ತೀಚಿನ ದಿನಗಳಲ್ಲಿ ಯುವಜನರು ಇದರಿಂದ ವಿಮುಖರಾಗಿ ದೇಶದ ಸಮಸ್ಯೆಗಳ ಕಡೆಗೆ ಗಮನಹರಿಸುತ್ತಿಲ್ಲ. ಹಾಗಾಗಿ ದೇಶದ ಜಲ್ವಂತ ಸಮಸ್ಯೆಗಳ ಬಗ್ಗೆ ಯುವಜನರನ್ನು ಸೆಳೆಯುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ ನಡೆಸುವ ಈ ಹೋರಾಟದಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ನೈತಿಕ ಸ್ಥೆöÊಯ ತುಂಬುವ ಕೆಲಸ ಮಾಡಲಿದ್ದೇವೆ ಎಂದರು.
ಸಭೆಯಲ್ಲಿ ಮುಖಂಡರುಗಳಾದ ಗೋವಿಂದೇಗೌಡ, ರೈತ ಸಂಘದ ರಾಚಪ್ಪ,ರಾಜಣ್ಣ,ಎನ್.ಎಸ್.ಯು.ಐನ ಮಹಮದ್ ಕೈಫ್,ಜೈನ್, ಮನೋಹರ್, ಗಗನದೀಪ್, ಗಗನ್ ಶ್ರೀನಿವಾಸ್, ಅರುಣ್ಕುಮಾರ್, ದೇವರಾಜು,ಕುಶಾಲ್,ದಿಲೀಪ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದರು.