ಖಾಲಿ ನಿವೇಶನಗಳಲ್ಲಿ ಪ್ಲಾಸ್ಟಿಕ್ ಹಾಕದಂತೆ ಮನವಿ

ತುಮಕೂರು:ಅರಣ್ಯ ಇಲಾಖೆವತಿಯಿಂದ ನಗರದ ಗೊಲ್ಲಹಳ್ಳಿಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು,ಪರಿಸರ ಭಾಗ ಮನುಷ್ಯ,ಆದರೆ ಮನುಷ್ಯ ಪರಿಸರ ತನ್ನ ಭಾಗ ಎಂದು ತಿಳಿದು ಅದರ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಪ್ರಕೃತಿ ವಿಕೋಪಗಳನ್ನು ನಾವು ಕಾಣಬಹುದಾಗಿದೆ.ಪರಿಸರದ ಭಾಗವಾಗಿ ನಾವೆಲ್ಲರು ಅದನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಖಾಲಿ ಜಾಗವಿರುವುದೇ ಪ್ಲಾಸ್ಟಿಕ್,ಕಸ, ಕಡ್ಡಿ ಹಾಕಲಿಕ್ಕೆ ಎಂಬ ಮನುಷ್ಯರ ತಪ್ಪು ತಿಳುವಳಿಕೆಯಿಂದಾಗಿ,ಪರಿಸರವನ್ನು ಹಾಳು ಮಾಡುತ್ತಿದ್ದೇವೆ.ಹತ್ತಾರು ವರ್ಷವಾದರೂ ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯದೆ ಉಷ್ಣಾಂಶವನ್ನು ಹೆಚ್ಚು ಮಾಡಿ, ಅದರಿಂದ ಪ್ರಕೃತಿ ವಿಕೋಪಗಳು ಜರುಗವಂತೆ ಮಾಡುತ್ತದೆ.ಹಾಗಾಗಿ ಇದರ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಂಡು,ಸ್ವಚ್ಚತೆಯ ಜೊತೆಗೆ,ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ,ಪರಿಸರದ ಅಸಮತೋಲನವನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇ ಕಾಗಿದೆ ಎಂದು ಸಿಇಓ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ನಗರಪಾಲಿಕೆ ಆಯುಕ್ತ ದರ್ಶನ್ ಮಾತನಾಡಿ,ತುಮಕೂರು ಜಿಲ್ಲೆ ಅತ್ಯಂತ ದೊಡ್ಡ ಜಿಲ್ಲೆ.ಇಲ್ಲಿನ ಪರಿಸರ ಕಾಪಾಡಬೇಕೆಂದರೆ ನಾವುಗಳು ಹೆಚ್ಚು ಹೆಚ್ಚು ಮರಗಳನ್ನು ನಡೆಬೇಕಾಗುತ್ತದೆ. ಅದರಲ್ಲಿ ಸಕಲ ಜೀವರಾಶಿಗಳಿಗೆ ಮೇವು ಒದಗಿಸುವ ಗಿಡ ಮರಗಳನ್ನು ನೆಟ್ಟು ಪ್ರಾಣಿ ಪಕ್ಷಿಗಳಿಗೆ ಆಹಾರ ದೊರೆಯುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪರಿಸರಕ್ಕೆ ಪೂರಕವಾದ ಹೊಂಗೆ,ಹುಣಸೆ ಇನ್ನಿತರ ಮರಗಳನ್ನು ಬೆಳೆಸಿ, ಆ ಮೂಲಕ ಪ್ರಕೃತಿಯ ಎಲ್ಲಾ ಜೀವರಾಶಿಗಳು ನೆಮ್ಮದಿಯ ಬದುಕಿಗೆ ಅವಕಾಶ ನೀಡಬೇಕೆಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ,ಡಿಎಫ್‍ಓಗಳಾದ ಅನುಪಮ,ಸಾಮಾಜಿಕ ವಲಯ ಡಿಎಫ್‍ಓ ನಾಗರಾಜು,ಎಸಿಎಫ್ ಮಹೇಶ್ ಮಾಲಗತ್ತಿ,ಆರ್.ಎಫ್.ಓ ಪವಿತ್ರ,ಇಓ ಜೈಪಾಲ್, ಎನ್.ಸಿ.ಸಿ.ಲೆಪ್ಟಿನೆಂಟ್ ಪ್ರದೀಪಕುಮಾರ್, ಹವಲ್ದಾರ್ ಚಂದ್ರಶ್ರೇಷ್ಟ,ಗ್ರಾಪ ಉಪಾಧ್ಯಕ್ಷ ಸಂಪತ್ತ್‍ಕುಮಾರ್,ಸದಸ್ಯರಾದ ಬಸವರಾಜು, ಅಸೀಫ್‍ವುಲ್ಲಾ ಖಾನ್, ಎನ್.ಸಿ.ಸಿ. ಕೆಡೆಟ್, ಶಾಲಾ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *