ತುಮಕೂರು:ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ 2ಎ ಮೀಸಲಾತಿ ದೊರೆಯುತ್ತಿದ್ದು,ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ 2ಎ ಮೀಸಲಾತಿ ದೊರೆಯುಬೇಕೆಂಬುದು ಜನಾಂಗದ ಬಹುದಿನದ ಒತ್ತಾಯವಾಗಿದೆ.ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರಲು ಶ್ರಮಿಸುವುದಾಗಿ ವಿಧಾನಪರಿಷತ್ ಸದಸ್ಯ ರಮೇಶಬಾಬು ತಿಳಿಸಿದ್ದಾರೆ.
ನಗರದ ಶ್ರೀಸಿದ್ದಿವಿನಾಯಕ ಸಮುದಾಯಭವನದಲ್ಲಿ ಜಿಲ್ಲಾ ಬಲಿಜ ಸಂಘ(ರಿ),ತುಮಕೂರು ಹಾಗೂ ಶ್ರೀಯೋಗಿ ನಾರೇಯಣ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀಶ್ರೀಶ್ರೀ ಯೋಗಿನಾರೇಯಣ ಯತೀಂದ್ರರ 191ನೇ ವರ್ಷದ ಜೀವ ಸಮಾಧಿ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದ ಅವರು,ಶಿಕ್ಷಣದಲ್ಲಿ 2ಎ ಮೀಸಲಾತಿಯಿಂದ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ.ಇದೇ ಮೀಸಲಾತಿ ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ದೊರೆತರೆ ನಮ್ಮ ಸಮುದಾಯದ ಜನರು ಸರಕಾರಿ ಉದ್ಯೋಗ ಪಡೆಯುವವರ ಸಂಖ್ಯೆ ಹೆಚ್ಚಲಿದೆ.ಅಲ್ಲದೆ ಸ್ಥಳೀಯ ಸಂಸ್ಥೆಗಳಿಂದ ಸಂಸತ್ವರೆಗೆ ಸಮಾಜದ ಜನರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲು ಸಹಕಾರಿಯಾಗಲಿದೆ ಎಂದರು.
ಸ್ಪೂರ್ತಿ ಡೆವಲ್ರ್ಸ್ನ ಮಾಲೀಕರು, ನಮ್ಮ ಸಮಾಜದವವರಾದ ಎಸ್.ಪಿ.ಚಿದಾನಂದ ಅವರು ಬಹಳ ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದಾರೆ.ಅವರು ಮನಸ್ಸು ಬದಲಾಯಿಸಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೇಟ್ ಕೊಡಿಸುವ ನಿಟ್ಟಿನಲ್ಲಿ ಪಕ್ಷದ ಹಿರಿಯರ ಜೊತೆಗೆ ಮಾತನಾಡಲು ಸಿದ್ದ.ತುಮಕೂರು ನಗರ ವಿಧಾನಸಭಾ ಕ್ಷೇತ್ರ ಹಾಗೆಯೇ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದ ಮತದಾರರ ಸಂಖ್ಯೆ ಹೆಚ್ಚಿವೆ. ಈ ಹಿಂದೆ ಸಿ.ಎಂ.ಭಾಸ್ಕರಪ್ಪ ಅವರ ಗೆಲುವಿಗೆ ಇದೇ ಕಾರಣ.ರಾಜ್ಯದಲ್ಲಿ ಸಚಿವ ಸಂಪುಟದ ವಿಸ್ತರಣೆ ಚಾಲ್ತಿಯಲ್ಲಿದೆ.ನಮ್ಮವರೇ ಆದ ಎಂ.ಆರ್. ಸೀತಾರಾಮ್ ಶೇ100ಕ್ಕೆ ನೂರಷ್ಟು ಮಂತ್ರಿಯಾಗಲಿದ್ದಾರೆ. ಅವರೊಂದಿಗೆ ಸಹ ಉದ್ಯೋಗ ಮತ್ತು ರಾಜಕೀಯದಲ್ಲಿ 2ಎ ಮೀಸಲಾತಿ ಕುರಿತು ಸರಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಲಾಗುವುದು ಎಂದು ರಮೇಶ್ಬಾಬು ನುಡಿದರು.
ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಎನ್.ಗೋವಿಂದರಾಜು ಮಾತನಾಡಿ,ಹಿರಿಯರ ಹೋರಾಟದ ಫಲವಾಗಿ ಕೈತಪ್ಪಿದ್ದ 2ಎ ಮೀಸಲಾತಿ ಶೈಕ್ಷಣಿಕ ವಲಯದಲ್ಲಿ ದೊರಕಿದೆ. ಇದನ್ನು ಬಳಸಿಕೊಂಡು ಮಕ್ಕಳು ಒಳ್ಳೆಯ ವಿದ್ಯಾವಂತರಾಗಿ, ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು.ನಮ್ಮ ಸಮುದಾಯದ ಜನರು ಗ್ರಾಮೀಣ ಭಾಗದಲ್ಲಿ ತೀರ ಹಿಂದುಳಿದಿದ್ದಾರೆ.ಇಂದಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶಿಕ್ಷಣ ಕೈಗೆಟುಕಲಾರದ ಸ್ಥಿತಿಯಲ್ಲಿದೆ.ಹಾಗಾಗಿ ಸ್ಪೂರ್ತಿ ಚಿದಾನಂದರವರು ಕನಿಷ್ಠ ಪ್ರತಿ ತಾಲೂಕಿನಲ್ಲಿ ಒಂದು ಅಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯನ್ನು ತೆರೆದು, ಸಮುದಾಯ ಮಕ್ಕಳು ಭರಿಸಬಹುದಾದ ಶುಲ್ಕದಲ್ಲಿ ಒಳ್ಳೆಯ ಶಿಕ್ಷಣ ಪಡೆಯುವಂತಹ ವ್ಯವಸ್ಥೆ ಮಾಡಲಿ. ಇದರಿಂದ ಲಕ್ಷಾಂತರ ತಾಯಂದಿರ ಕನಸು ನನಸಾಗಲಿದೆ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಸ್ಪೂರ್ತಿ ಚಿದಾನಂದ, ಜನಾಂಗದ ಸರ್ವತೋಮುಖ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು 1975 ರಲ್ಲಿ ಜಿಲ್ಲಾ ಬಲಿಜ ಸಂಘ(ರಿ)ವನ್ನು ಆಸ್ಥಿತ್ವಕ್ಕೆ ತರಲಾಯಿತು.1982ರಲ್ಲಿ ಸಂಘ ಸ್ವಂತ ಕಟ್ಟಡ ಹೊಂದಿ ಕಾರ್ಯನಿರ್ವಹಿಸುತ್ತಿದೆ. ಸಂಘ ಜನಾಂಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪುರುಷ ಮತ್ತು ಮಹಿಳೆಯರ ಹಾಸ್ಟಲ್, ಯೋಗಿ ನಾರೇಯಣ ಪತ್ತಿನ ಸಹಕಾರ ಸಂಘ ತೆರೆದು ಜನರನ್ನು ಅರ್ಥಿಕವಾಗಿ ಸಧೃಡಗೊಳಿಸಲು ನಿರಂತರವಾಗಿ ಪ್ರಯತ್ನ ನಡೆಸಲಾಗುತ್ತಿದೆ.ಸಣ್ಣ ಸಣ್ಣ ಸಮುದಾಯಗಳು ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಬಹಳ ಸಾಧನೆ ಮಾಡಿವೆ.ಎಐ ಬುದ್ದಿವಂತಿಕೆಗಿಂತ ನಿಮ್ಮ ಜ್ಞಾನ ಹೆಚ್ಚಾಗಬೇಕು.ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ.ಮೆಡಿಕಲ್, ಇಂಜಿನಿಯರಿಂಗ್ ಕ್ಷೇತ್ರಗಳಷ್ಟೇ ಉದ್ಯೋಗ ನೀಡಲ್ಲ. ಇತರೆ ಕ್ಷೇತ್ರಗಳತ್ತಲೂ ಸಮುದಾಯದ ಯುವಜನರು ಗಮನಹರಿಸಬೇಕು. ಸಮುದಾಯದ ವತಿಯಿಂದ ಪ್ರತಿವರ್ಷ ನಡೆಯುವ ಪ್ರತಿಭಾ ಪುರಸ್ಕಾರಕ್ಕೆ ಒಂದು ಕೋಟಿಯ ದತ್ತಿ ನೀಡಿ ಇಡುವ ಚಿಂತನೆಯಿದ್ದ, ನಮ್ಮ ಕಡೆಯಿಂದ 10 ಲಕ್ಷ ರೂಗಳ ಧೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ಜಯದೇವ ಹೃದ್ರೋಗ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಡಾ.ನಟರಾಜಶೆಟ್ಟಿ ಮಾತನಾಡಿ,ಕಠಿಣ ಪರಿಶ್ರಮವೇ ನಿಮ್ಮನ್ನು ಸಾಧನೆ ಮೆಟ್ಟಿಲಿಗೆ ತೆಗೆದುಕೊಂಡು ಹೋಗುತ್ತದೆ.ನಿಮ್ಮ ಗಮನ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಇರಲಿ.ಶಿಕ್ಷಣವೆಂಬುದು ದುಬಾರಿಯಾಗಿರುವ ಈ ಕಾಲದಲ್ಲಿ ಮೇರಿಟ್ ಮೇಲೆ ನಿಮ್ಮ ಗಮನ ಇರಲಿ,ರೋಗ ಮುಕ್ತ ಜೀವನ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರಾದ ಟಿ.ಆರ್.ಆಂಜನಪ್ಪ ಮಾತನಾಡಿ,ಶಿಕ್ಷಣ ಇಂದು ಅತಿ ಅವಶ್ಯಕವಾಗಿದೆ.ಹಾಗಾಗಿ ಪೋಷಕರು ತಮಗೆ ಎಂತಹದ್ದೇ ಕಷ್ಟವಿದ್ದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಸರಕಾರ ಹಾಗೂ ಸಂಘ ಸಂಸ್ಥೆಗಳು ನಿಮ್ಮ ಜೊತೆ ಕೈಜೋಡಿಸಲಿವೆ. ಹಾಗೆಯೆ ಸಮುದಾಯವೂ ಸಹ ಪ್ರತಿಭಾವಂತರ ವಿದ್ಯಾಭ್ಯಾಸಕ್ಕೆ ಕೈಜೋಡಿಸಲಿದೆ.ತಾವುಗಳು ಒಳ್ಳೆಯ ಗುರಿಯೊಂದಿಗೆ ಮುನ್ನೆಡೆದರೆ ಎಲ್ಲವೂ ಸಾಧ್ಯ. ಇಂದಿನ ಯೋಗಿ ನಾರೇಯಣ ಯತೀಂದ್ರರ 191ನೇ ಜೀವ ಸಮಾಧಿ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಇದೇ ವೇಳೆ ಸಮಾಜದ ಏಳಿಗೆಗಾಗಿ ದುಡಿದ ಹಿರಿಯರು, 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳು,ಸಿಎ ಪರೀಕ್ಷೆ ಪಾಸು ಮಾಡಿದ ಪೂರ್ಣೀಮ,ಸದರನ್ ರೈಲ್ವೆ ಅಭಿವೃದ್ದಿ ಮಂಡಳಿ ಸದಸ್ಯ ಲಕ್ಷಿ್ಮನಾರಾಯಣ್ ಅವರುಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಬಲಿಜ ಸಂಘದ ಕಾರ್ಯದರ್ಶಿಟಿ.ಆರ್.ಹೆಚ್ ಪ್ರಕಾಶ್, ಹಿರಿಯ ಲೇಖಕ ಎಂ.ಡಿ.ಶ್ರೀನಿವಾಸ್, ತಾಲೂಕು ಅಧ್ಯಕ್ಷರುಗಳಾದ ಶಂಕರಪ್ಪ, ಪದ್ಮನಾಭ್, ಶಂಕರನಾರಾಯಣ, ರಾಮಚಂದ್ರಪ್ಪ, ಶ್ರೀರಂಗಪ್ಪ, ನಂಜುಂಡಪ್ಪ, ಲಕ್ಷ್ಮಣಪ್ಪ, ಎನ್.ಪದ್ಮನಾಭ್, ವಿಶ್ವನಾಥ್, ಎಸ್.ಎಸ್.ರಂಗನಾಥ್, ಗಿರೀಶ್, .ಪ್ರಕಾಶ್ ಮತ್ತಿತರರು ವೇದಿಕೆಯಲ್ಲಿದ್ದರು.