ತುಮಕೂರು ಜಿಲ್ಲೆಗೆ ಕೆಲಸಕ್ಕೆ ಬರುವ ಸರ್ಕಾರಿ ಅಧಿಕಾರಿಗಳು ಹೆದರಿಕೊಂಡು ಬರುವ ಅಗತ್ಯವಿಲ್ಲ

ತುಮಕೂರು: ತುಮಕೂರು ಜಿಲ್ಲೆಗೆ ಕೆಲಸಕ್ಕೆ ಬರುವವರು ಯಾರೂ ಹೆದರಿಕೊಂಡು ಬರುವ ಅಗತ್ಯವಿಲ್ಲ. ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಧೈರ್ಯವಾಗಿ ಕೆಲಸ ಮಾಡಲು ಉತ್ತಮ ಅವಕಾಶ ಹಾಗೂ ವಾತಾವರಣ ಸಿಗುತ್ತದೆ. ಯಾರಿಗೂ ತೊಂದರೆ ಮಾಡದೆ, ಎಲ್ಲರನ್ನೂ ಸ್ನೇಹದಿಂದ ನೋಡಿಕೊಳ್ಳುವುದು ನಮ್ಮ ಜಿಲ್ಲೆಯ ಶೈಲಿ ರಾಜ್ಯ ಜಂಟಿ ಸಾರಿಗೆ ಆಯುಕ್ತರಾದ ಗಾಯಿತ್ರಿ ದೇವಿ
ಎಂದು ತಿಳಿಸಿದರು.

ನಗರದ ಆರ್.ಟಿ.ಓ. ಕಚೇರಿಯಲ್ಲಿ ನಡೆದ ಆರ್‍ಟಿಓ ಅಧಿಕಾರಿ ಎ.ವಿ.ಪ್ರಸಾದ್ ಅವರ ನಿವೃತ್ತಿ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ತುಮಕೂರು ಭಾಗದಲ್ಲಿ ಪ್ರತಿನಿತ್ಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಬರಲಿರುವ ವಿಮಾನ ನಿಲ್ದಾಣ, ಕ್ರೀಡಾಂಗಣ (ಸ್ಟೇಡಿಯಂ), ಅಂತಾರಾಷ್ಟ್ರೀಯ ಮಟ್ಟದ ಫುಡ್ ಪಾರ್ಕ್ ಹಾಗೂ ಹೆಚ್.ಎ.ಎಲ್ (ಯೋಜನೆಗಳನ್ನು ಅವರು ಉಲ್ಲೇಖಿಸಿದರು ತುಮಕೂರು ಜಿಲ್ಲೆಯು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಹಲವು ಮಹಾನ್ ವ್ಯಕ್ತಿಗಳನ್ನು ನೀಡಿದೆ. ನಡೆದಾಡುವ ದೇವರೆನಿಸಿದ ಸಿದ್ದಗಂಗಾ ಶ್ರೀಗಳು, ನ್ಯಾಯಾಂಗ ಕ್ಷೇತ್ರದಲ್ಲಿ ಹೆಸರು ಮಾಡಿದ ನಿಟ್ಟೂರು ಶ್ರೀನಿವಾಸರಾವ್, ಶಿಕ್ಷಣ ಕ್ಷೇತ್ರದ ಶಿಕ್ಷಣ ಭೀಷ್ಮ ಗಂಗಧಾರಯ್ಯ ಅವರು ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಈ ಮಣ್ಣಿಗೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತಿಯಾದ ಆರ್ ಟಿಒ ಅಧಿಕಾರಿ ಎ. ವಿ. ಪ್ರಸಾದ್ ಅವರು ಮಾತನಾಡಿ 2024ರ ಆಗಸ್ಟ್ 16ರಂದು ತುಮಕೂರಿಗೆ ಬಂದಾಗ ಹಲವರು ಈ ಸ್ಥಳಕ್ಕೆ ಹೋಗದಂತೆ ಸಲಹೆ ನೀಡಿದ್ದರು. ಆದರೆ ಇಲ್ಲಿ ಬಂದಮೇಲೆ ಜನರು ಅತ್ಯಂತ ಒಳ್ಳೆಯವರು ಹಾಗೂ ಸಹಕಾರ ನೀಡುವವರು ಎಂಬುದು ತಿಳಿಯಿತು. ನಿಯಮಗಳಿಗೆ ಅನುಗುಣವಾಗಿ ಕೆಲಸ ಮಾಡುವಲ್ಲಿ ಸಾರ್ವಜನಿಕರು ಯಾವುದೇ ವಿರೋಧ ವ್ಯಕ್ತಪಡಿಸದೆ ಸಹಕರಿಸಿದರು, ಟ್ರ್ಯಾಕ್ಟರ್‍ಗಳ ನೋಂದಣಿ ಸೇರಿದಂತೆ ಇಲಾಖೆಯ ಕೆಲಸಗಳನ್ನು ವ್ಯವಸ್ಥಿತಗೊಳಿಸಲಾಯಿತು ಸಾರ್ವಜನಿಕರು ತಾವೇ ಸ್ವತಃ ಬಂದು ಇನ್ಸ್ಪೆಕ್ಷನ್ ಮಾಡಿಸಿಕೊಂಡು ನೋಂದಣಿ ಮಾಡಿಸುವ ಮಟ್ಟಿಗೆ ಜಾಗೃತಿ ಮತ್ತು ಸುಧಾರಣೆ ಬಂದಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಕಚೇರಿಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಯಿತು ಶ್ರೀ ಶಿವಕುಮಾರ ಸ್ವಾಮೀಜಿಗಳ ಪವಿತ್ರ ಭೂಮಿಯಾದ ತುಮಕೂರಿನಲ್ಲಿ ತಮ್ಮ ಸುದೀರ್ಘ ವೃತ್ತಿಜೀವನದ ಕೊನೆಯ ಹಂತದ ಸೇವೆಯನ್ನು ಪೂರೈಸಿ ನಿವೃತ್ತಿಯಾಗುತ್ತಿರುವುದು ಅತ್ಯಂತ ಸಂತೋಷ ಮತ್ತು ತೃಪ್ತಿ ತಂದಿದೆ ಎಂದು ಅವರು ಹೇಳಿದರು.

ಹಿರಿಯ ವಾಹನ ನಿರೀಕ್ಷಕ ಎಸ್. ಷರೀಫ್ ಅವರು ಮಾತನಾಡಿ ಎ. ವಿ. ಪ್ರಸಾದ್ ಅವರು ಎರಡು ವರ್ಷಗಳ ತಮ್ಮ ಸೇವಾವಧಿಯಲ್ಲಿ ಇಲಾಖೆ ಹಾಗೂ ಸಿಬ್ಬಂದಿಯಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ. ಅಧಿಕಾರಿಗಳು ತಾತ್ಕಾಲಿಕವಾಗಿ ಬಂದು ಹೋಗುತ್ತಾರೆ, ಆದರೆ ಈ ಕಚೇರಿ ಮತ್ತು ಇಲಾಖೆಯ ಏಳಿಗೆಯ ಹೊಣೆ ಸಿಬ್ಬಂದಿಯ ಮೇಲಿರುತ್ತದೆ. ಇದನ್ನು ತಮ್ಮ ಸ್ವಂತ ಕಚೇರಿ ಎಂದು ಭಾವಿಸಿ ಮುನ್ನಡೆಸಬೇಕು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಎಲ್ಲರೂ ಒಟ್ಟಾಗಿ ಕಷ್ಟ-ಸುಖಗಳನ್ನು ಹಂಚಿಕೊಂಡು ಕೆಲಸ ಮಾಡಿದ್ದೇವೆ. ಇವತ್ತು ಪ್ರಸಾದ್ ಅವರ ಕರ್ತವ್ಯದ ಕೊನೆಯ ದಿನವಾಗಿದ್ದರೂ, ಅವರು ಮಾಡಿ ಹೋಗಿರುವ ಕೆಲಸ ಕಾರ್ಯಗಳು ಆಫೀಸ್‍ನಲ್ಲಿ ತಮ್ಮದೇ ಆದ ವಿಶೇಷ ಛಾಪನ್ನು ಮೂಡಿಸಿವೆ ಎಂದು ಬಣ್ಣಿಸಿದರು.

ರಾಜ್ಯ ವಾಹನ ಚಾಲನಾ ತರಬೇತಿ ಶಾಲೆಗಳ ಗೌರವಾಧ್ಯಕ್ಷರಾದ ಸದಾಶಿವಯ್ಯ ಅವರು ಮಾತನಾಡಿ ಸರಕಾರಿ ಅಧಿಕಾರಿಗಳಿಗೆ ನಿವೃತ್ತಿ ಎಂಬುದು ಸ್ವಾಭಾವಿಕ ಪ್ರಕ್ರಿಯೆ. ಎ. ವಿ. ಪ್ರಸಾದ್ ಅವರು ಕಳೆದ ಎರಡು ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಸಾರಿಗೆ ಇಲಾಖೆಯ ಮೂಲಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಸರಕಾರ ರೂಪಿಸುವ ಕಾನೂನುಗಳನ್ನು ಅಧಿಕಾರಿಗಳು ಜಾರಿಗೆ ತರಬೇಕಾಗುತ್ತದೆ. ಕಟ್ಟುನಿಟ್ಟಾಗಿ ಕಾನೂನು ಜಾರಿಗೊಳಿಸುವಾಗ ಸಾರ್ವಜನಿಕರಿಂದ ಆರಂಭದಲ್ಲಿ ವಿರೋಧ ವ್ಯಕ್ತವಾಗುವುದು ಸಾಮಾನ್ಯ, ಆದರೆ ಅಂತಿಮವಾಗಿ ಅದು ಸಮಾಜದ ಒಳಿತಿಗೇ ಕಾರಣವಾಗುತ್ತದೆ. ಪ್ರಸಾದ್ ಅವರು ಜನಹಿತವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಅಧಿಕಾರವನ್ನು ಸರಿಯಾಗಿ ಚಲಾಯಿಸಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ.

ಜಂಟಿ ಸಾರಿಗೆ ಆಯುಕ್ತರಾದ ಗಾಯಿತ್ರಿ ದೇವಿ ಅವರು ತುಮಕೂರು ಜಿಲ್ಲೆಯ ಹೆಣ್ಣುಮಗಳಾಗಿದ್ದು, ತಮ್ಮ ಜಿಲ್ಲೆಗೆ ಏನಾದರೂ ಒಳ್ಳೆಯದು ಮಾಡಬೇಕೆಂಬ ಸದುದ್ದೇಶದಿಂದ ಶ್ರಮಿಸುತ್ತಿದ್ದಾರೆ. ಈ ಕೆಲಸಕ್ಕೆ ಎ. ವಿ. ಪ್ರಸಾದ್ ಅವರು ಉತ್ತಮ ಸಾಥ್ ನೀಡಿದ್ದರು,
ನೂತನವಾಗಿ ಬಂದಿರುವ ಹೇಮಾವತಿ ಮೇಡಂ ಅವರೂ ಸಹ ತುಮಕೂರು ಜಿಲ್ಲೆಯವರೇ ಆಗಿರುವುದರಿಂದ, ಇಲಾಖೆಯ ಅಧಿಕಾರಿಗಳು ಇದೇ ರೀತಿ ಸಹಕಾರ ನೀಡಿ ತುಮಕೂರು ಜಿಲ್ಲೆಯ ಜನತೆಗೆ ಒಳ್ಳೆಯದನ್ನು ತಲುಪಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ವಾಹನ ಚಾಲನಾ ತರಬೇತಿ ಶಾಲೆಗಳ ಅಧ್ಯಕ್ಷ ಶಿವಕುಮಾರ್, ಹೊಸ ಆರ್‍ಟಿಓ ಅಧಿಕಾರಿ ಹೇಮಾವತಿ, ನರಸಿಂಹಮೂರ್ತಿ, ದಿನೇಶ್, ಜಯರಾಮು ,ನಾರಾಯಣಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *