
ತುಮಕೂರು : ಇಲ್ಲಿನ ವಿನಾಯಕನಗರದ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿಯ 47ನೇ ವರ್ಷದ ಗಣಪತಿ ಪ್ರತಿಷ್ಠಾಪನೆ ಮಹೋತ್ಸವ ಸೆ.18ರಿಂದ ಅ.18ರವರೆಗೆ 30 ದಿನಗಳ ಕಾಲ ನಡೆಯಲಿದ್ದು, ಈ ಬಾರಿ ಭಕ್ತ ಮಾರ್ಕಂಡೇಯ ಅಥವಾ ಶ್ರೀ ಸಿದ್ಧಿವಿನಾಯಕ ವೈಭವ ಸಂಗೀತ ದೃಶ್ಯ ರೂಪಕವನ್ನು ಏರ್ಪಡಿಸಲಾಗಿದೆ ಎಂದು ಮಂಡಳಿ ಉಪಾಧ್ಯಕ್ಷ ನಾಗೇಶ್ ತಿಳಿಸಿದರು.
ನಗರದ ಶ್ರೀ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 30ದಿನಗಳ ಕಾಲ ಗಣಪತಿ ಉತ್ಸವ ನಡೆಯಲಿದ್ದು, ಪ್ರತಿದಿನ ಸಂಜೆ ದೃಶ್ಯರೂಪಕದ ಪ್ರದರ್ಶನದೊಂದಿಗೆ ಜಿಲ್ಲೆ ಹಾಗೂ ರಾಜ್ಯದ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಹೇಳಿದರು.

ಸೆ.18 ರಂದು ಸಂಜೆ 6ಕ್ಕೆ ಗಣೇಶೋತ್ಸವದ ಉದ್ಘಾಟನೆ ನೆರವೇರಲಿದ್ದು, ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭವನ್ನು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಭಕ್ತರ್ಮಾಂಡೇಯ ಅಥವಾ ಸಿದ್ಧಿವಿನಾಯಕ ವೈಭವ ದೃಶ್ಯಾವಳಿಯನ್ನು ಗೃಹಸಚಿವ ಡಾ. ಜಿ.ಪರಮೇಶ್ವರ್ ಉದ್ಘಾಟಿಸುವರು. ಮಂಡಳಿ ಅಧ್ಯಕ್ಷ ಜಿ.ಹೆಚ್.ಪರಮಶಿವಯ್ಯ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮೇಯರ್ ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಎಸ್ಪಿ ಕೆ.ವಿ. ಅಶೋಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪಾಲಿಕೆ ಸದಸ್ಯೆ ನಾಸಿರಾಬಾನು, ಬೆಸ್ಕಾಂ ಮುಖ್ಯ ಅಭಿಯಂತರ ಕೆ.ಜಿ. ಗೋವಿಂದಪ್ಪ, ಟೂಡಾ ಆಯುಕ್ತ ಗೋಪಾಲ್ ಜಾದವ್ ವಿಶೇಷ ಆಹ್ವಾನಿತರಾಗಿರುವರು ಎಂದರು.
ಸಿದ್ದಿವಿನಾಯಕ ಮಹೋತ್ಸವ ಸಾಂಸ್ಕøತಿಕ ಕಾರ್ಯಕ್ರಮ ಉಪಸಮಿತಿಯ ಅಧ್ಯಕ್ಷ ಟಿ.ಎಚ್.ಪ್ರಸನ್ನಕುಮಾರ್ ಮಾತನಾಡಿ ಪ್ರತಿದಿನ ಸಂಜೆ ಸುಗಮ ಸಂಗೀತ, ಜಾನಪದ ಗೀತೆಗಳು, ವೈವಿಧ್ಯಮಯ ನೃತ್ಯಗಳು, ಭರತನಾಟ್ಯ, ಜಾನಪದ ನೃತ್ಯ ಹಾಗೂ ನೃತ್ಯರೂಪಕ ಪುಣ್ಯಕೋಟಿ, ಆಡೋಣ ಬಾರಾ ಜಾನಪದ ಗೀತೆಗಳ ನೃತ್ಯ ಸಂಭ್ರಮ, ಆರ್ಕೆಸ್ಟ್ರಾ, ಜಾನಪದ, ಚಲನಚಿತ್ರ ನೃತ್ಯಗಳ ಸಂಭ್ರಮ, ನೃತ್ಯ ಸೌರಭ, ನೃತ್ಯ ರಂಜಿನಿ, ನೃತ್ಯ ರೂಪಕ, ಹಾಸ್ಯ ರಸಮಂಜರಿ ವಿಶೇಷ ನೃತ್ಯಗಳ ಕಾರ್ಯಕ್ರಮಗಳು ನೆರವೇರಲಿವೆ ಎಂದು ತಿಳಿಸಿದರು.
30 ದಿನಗಳ ಅವಧಿಯಲ್ಲಿ ವಿಶೇಷವಾಗಿ ಅ.1ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಅ.2 ರಂದು ಸಾಮೂಹಿಕ ಸಂಕಷ್ಟಹರ ಗಣಪತಿ ಪೂಜೆ, ಅ.4ರಂದು ಅಯ್ಯಪ್ಪಸ್ವಾಮಿ ಪೂಜೆ ಏರ್ಪಡಿಸಿದ್ದು, ಅ.8ರಂದು ಸ್ಥಳದಲ್ಲೇ ಗಣಪತಿ, ನಂದಿನಿ ಹಾಲಿನ ಲಾಂಛನ ಹಸುವಿನ ಚಿತ್ರ ರಚಿಸುವ ಸ್ಪರ್ಧೆಯನ್ನು ನಂದಿನಿ ಹಾಲುಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಲಾಗಿದೆ ಎಂದರು.
ಅ.18ರಂದು ನಗರದ ಪ್ರಮುಖ ಬೀದಿಗಳಲ್ಲಿ ಸಿದ್ಧಿವಿನಾಯಕಸ್ವಾಮಿಯ ವೈಭವದ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಗುವುದು ಎಂದು ವಿವರಿಸಿದರು. ಇದೇ ವೇಳೆ ಎನ್.ಕೃಷ್ಣಮೂರ್ತಿ ಭಕ್ತ ಮಾರ್ಕಂಡೇಯ ಅಥವಾ ಶ್ರೀ ಸಿದ್ದಿವಿನಾಯಕ ವೈಭವ ದೃಶ್ಯ ರೂಪಕದ ಕಥಾನಕವನ್ನು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದಿವಿನಾಯಕ ಸೇವಾ ಮಂಡಲಿ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ ರಾವ್, ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ, ಖಜಾಂಚಿ ಎಸ್.ಬಿ.ಪ್ರಭು, ನಿರ್ದೇಶಕರಾದ ಟಿ.ಎಂ.ಲಿಂಗಪ್ಪ, ಟಿ.ಹೆಚ್.ಪ್ರಸನ್ನ ಕುಮಾರ್, ಜಿ.ಎಸ್.ಸಿದ್ಧರಾಜು, ಕೆ.ನರಸಿಂಹಮೂರ್ತಿ, ಟಿ.ಆರ್.ನಟರಾಜ್, ಜಿ.ಸಿ.ವಿರೂಪಾಕ್ಷ, ಡಾ.ಎನ್.ವೆಂಕಟೇಶ್, ಡಾ.ಅನುಸೂಯ ರುದ್ರಪ್ರಸಾದ್, ಇಂದ್ರಾಣಿ ಪ್ರಕಾಶ್, ಮುಂತಾದವರು ಹಾಜರಿದ್ದರು.