ತುಮಕೂರಿಗೆ 2023ರಲ್ಲಿ ನಾನೇ ಎಂ.ಎಲ್.ಎ-ಅಟ್ಟಿಕಾ ಬಾಬು

ತುಮಕೂರು : ಮುಂಬರುವ 2023ರ ಚುನಾವಣೆಯಲ್ಲಿ ತುಮಕೂರಿಗೆ ನಾನೇ ಎಂ.ಎಲ್.ಎ. ಎಂದು ಬೊಮ್ಮನಹಳ್ಳಿ ಬಾಬು ಅಲಿಯಾಸ್ ಅಟ್ಟಿಕಾ ಬಾಬು ಘಂಟಾ ಘೋಷವಾಗಿ ಹೇಳಿದರು.

ಅವರಿಂದು ನಗರದ ಖಾಸಗಿ ಹೋಟೆಲೊಂದರಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತುಮಕೂರು ನನಗೆ ತುಂಬಾ ಇಷ್ಟವಾದ ಊರು, 2023ರಲ್ಲಿ ತುಮಕೂರು ಜನರ ಪ್ರೀತಿಯಿಂದ ಎಂಎಲ್‍ಎ ಆಗಲಿದ್ದೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ, ಹೆಚ್.ಡಿ.ಕುಮಾರಣ್ಣನವರೇ ನನಗೆ ನಾಯಕರು, ನಾನು ತುಮಕೂರು ನಗರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವುದು ಖಚಿತ ಎಂದು ಹೇಳಿದರು.

ಈಗಾಗಲೇ ಜೆಡಿಎಸ್‍ನಿಂದ ಅಭ್ಯರ್ಥಿಯನ್ನು ಘೋಷಣೆ ಮಾಡಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಘೋಷಣೆಯಾಗಲಿ ಇನ್ನೂ ಏಪ್ರಿಲ್ ತನಕ ಅವಕಾಶವಿದೆ, ಮಂಜುನಾಥಸ್ವಾಮಿ ಮೇಲೆ ಆಣೆ ನಾನು ತುಮಕೂರಿನಲ್ಲಿ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದರು.

ಚುನಾವಣೆಯ ವೇಳೆಗೆ ಏನು ಬೇಕಾದರೂ ಆಗಬಹುದು, ನನಗೆ ತುಮಕೂರಿನ ವಾತವರಣ, ತುಮಕೂರಿನ ಜನ ಇಷ್ಟವಾಗಿದೆ, ನಾನು ಹಣ ಮಾಡಲು ಬರುವುದಿಲ್ಲ, ಸೇವೆ ಮಾಡಲು ಬರುತ್ತೇನೆ ಎಂದು ಹೇಳಿದ ಅಟ್ಟಿಕಾ ಬಾಬು, ತುಮಕೂರು ಜನರ ಆಶೀರ್ವಾದ ನನಗೆ ಸಿಗಲಿದೆ ಎಂದರು. ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಪಂಚರತ್ನ ಯಾತ್ರೆಯ ಎಲ್ಲಾ ಖರ್ಚು ನನ್ನದೇ ಎಂದು ಹೇಳಿದರು.

Leave a Reply

Your email address will not be published. Required fields are marked *