ನಂದಿಹಳ್ಳಿ-ಮಲ್ಲಸಂದ್ರ- ವಸಂತನರಸಾಪುರ ಔಟರ್ ರಿಂಗ್ ರೋಡ್ ವಿರೋಧಿ ಹೋರಾಟ ಸಮಿತಿಗೆ ಅವಕಾಶ ಕಲ್ಪಿಸಬೇಕು-ಎ.ಗೋವಿಂದರಾಜು

ತುಮಕೂರು:ಪ್ರಸ್ತಾಪಿತ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಬೈಪಾಸ್ ರಸ್ತೆ ಭೂಸ್ವಾದೀನಕ್ಕೆ ಸರಕಾರ ಹೊರಡಿಸಿರುವ ವಿರೋಧಿ ಹೋರಾಟ ಸಮಿತಿ ಹಾಗೂ16-03-2026ರ ಅಧಿಸೂಚನೆಯನ್ನು ಹಿಂಪಡೆಯಬೇಕು,ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕುಸ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗು ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರೈತರೊಂದಿಗೆ ಮಾತುಕತೆ ನಡೆಸದೆ, ರೈತರ ಒಪ್ಪಿಗೆ ಇಲ್ಲದೆ ಅಧಿಸೂಚನೆ ಹೊರಡಿಸಿ, ಆಕ್ಷೆಪಣೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ಸರಕಾರದ ಈ ಸರ್ವಾಧಿಕಾರಿ ಧೋರಣೆಯನ್ನು ರೈತ ಸಂಘ ಹಾಗೂ ಯೋಜನೆಯಿಂದ ಸಂತಸ್ಥರಾಗುವ ರೈತರು ತೀವ್ರವಾಗಿ ಖಂಡಿಸುತ್ತೇವೆ. ಸರಕಾರದ ಈ ಸರ್ವಾಧಿಕಾರಿ ಧೋರಣೆ ಯಿಂದ ರೈತರಿಗೆ ಆಗುವ ತೊಂದರೆಯನ್ನು ಮೇ.19 ರಂದು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲು, ನಂದಿಹಳ್ಳಿ-ಮಲ್ಲಸಂದ್ರ- ವಸಂತನರಸಾಪುರ ಔಟರ್ ರಿಂಗ್ ರೋಡ್ ವಿರೋಧಿ ಹೋರಾಟ ಸಮಿತಿಗೆ ಅವಕಾಶ ಕಲ್ಪಿಸಬೇಕು ಎಂದರು.

ಪ್ರಸ್ತಾಪಿಸಿರುವ ನಂದಿಹಳ್ಳಿಯಿಂದ ಮಲ್ಲಸಂದ್ರ ಮಾರ್ಗವಾಗಿ ವಸಂತನರಸಾಪುರದವರೆಗೆ ನಾಲ್ಕು ಪಥಗಳ ಬೈಪಾಸ್ ರಸ್ತೆ ನಿರ್ಮಾಣಕ್ಕೆ ರೈತರನ್ನು ಕತ್ತಲಲ್ಲಿ ಇಟ್ಟು ಭೂಸ್ವಾಧೀನದಕ್ಕೆ ಮುಂದಾಗಿರುವ ಸರಕಾರದ ವಿರುದ್ಧ ತಮ್ಮ ಭೂಮಿ ಮತ್ತು ತೋಟಗಾರಿಕಾ ಬೆಳೆ ಸೇರಿದಂತೆ ಕಟ್ಟಡಗಳ ಉಳಿಗಾಗಿ ಚಳುವಳಿ ನಡೆಸುತ್ತಿದ್ದರೂ ಲೆಕ್ಕಿಸದೆ 166.7452 ಹೆಕ್ಟೇರ್ ರೈತರ ಭೂಮಿಯನ್ನು ಮೊದಲ ಹಂತದ ವರ್ತುಲ ರಸ್ತೆಗೆ ಮುಂದಾಗಿದೆ.ರೈತರು ಭೂಮಿ ನೀಡುವುದಿಲ್ಲ ಎಂದು ಆಕ್ಷೆಪಣಾ ಪತ್ರ ಸಲ್ಲಿಸಿದ್ದರೂ ಸಹ, ಅಧಿಕಾರಿಗಳನ್ನು ಅದನ್ನು ಮುಚ್ಚಿಟ್ಟು, ಯಾವ ಆಕ್ಷೆಪಣೆಗಳು ಇಲ್ಲ ಎಂದು ಸರಕಾರಕ್ಕೆ ವರದಿ ನೀಡಿ, ರೈತರನ್ನು ವಂಚಿಸಲು ಮುಂದಾಗಿದ್ದಾರೆ ಎಂದರು.

ಈ ಹಿಂದೆ ರೈತರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ 10-01-2026 ರಂದು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸÀ್ಥಳ ಪರಿಶೀಲೀಸುವ ಭರವಸೆ ನೀಡಿದ್ದರು. ಇದುವರೆಗೂ ಅವರು ಸ್ಥಳ ಪರಿಸೀಲಿಸದೆ ಇರುವುದು ರೈತ ವಿರೋಧಿಯಾಗಿzಸೀ ಹಿಂದೆ ಜಿಲ್ಲೆಗೆ ಮುಖ್ಯಮಂತ್ರಿಗಳು ಬಂದಾಗ ಸದರಿ ವಿಚಾರವಾಗಿ ಮನವಿ ಸಲ್ಲಿಸಲು ಮುಂದಾಗಿತ್ತು.ಆದರೆ ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಭೇಟಿ ಸಾಧ್ಯವಾಗಿಲ್ಲ.ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸ್ಥಳ ಪರಿಶೀಲನೆ ಮಾಡಿ, ರೈತರೊಂದಿಗೆ ಮಾತುಕತೆ ನಡೆಸಬೇಕೆಂಬುದು ರೈತರ ಆಗ್ರಹವಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.

ಸರಕಾರ 16-03-2026ರ ಅಧಿಸೂಚನೆ ಹಿಂಪಡೆಯಬೇಕು, ನಗರೀಕರಣದ ಫಲವಾಗಿ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳ ಜನರಿಂದ ಅನಗತ್ಯವಾಗಿ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಕೈಬಿಡಬೇಕು.ನಗರದ ವಾಹನ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ರೈತರು, ಸಾರ್ವಜನಿಕರು, ತಜ್ಞರ ಸಮಿತಿಯ ಜೊತೆ ಚರ್ಚಿಸಿ ಕೈಗೊಳ್ಳಬೇಕು.ಸರಕಾರ ಉದ್ಯಮ ಸ್ನೇಹಿ ಆಗುವ ಭರದಲ್ಲಿ ರೈತರ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆ ಬಲಿ ನೀಡಬಾರದು. ಕರ್ನಾಟಕ ಸರಕಾರ ಭೂಬಳಕೆ ಮತ್ತು ಭೂ ಹೊದಿಕೆ ನೀತಿಯನ್ನು ಜಾರಿಗೊಳಿಸುವ ಮೂಲಕ ಇಡೀ ದೇಶಕ್ಕೆ ಇಂದು ವಿನೂತನ ಮಾರ್ಗದ ಪ್ರವರ್ತಕರಾಗಬೇಕು. ಸರಿಸೃಪ, ಜಲಚರ, ಪ್ರಾಣಿಗಳು, ಅಂತರಜಲ ಸಂರಕ್ಷಿಸಬೇಕಿದೆ.ಸರಕಾರ ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸಲಿದ್ದಾರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎ.ಗೋವಿಂದರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಎ.ಗೋವಿಂದರಾಜು,ಸಂಯುಕ್ತ ಹೋರಾಟದ ಸಂಚಾಲಕರಾದ ಸಿ.ಯತಿರಾಜು,ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಉಮೇಶ್, ಎಐಕೆಎಸ್‍ನ ಕಂಬೇಗೌಡ,ಸಂತ್ರಸ್ಥರ ರೈತರಾದ ನಿಂಗರಾಜು, ಮೋಹನಕುಮಾರ್, ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *