ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಕೇಂದ್ರ ಸರ್ಕಾರ ಎನ್.ಟಿ.ಎ.ವಿರುದ್ದ ಏಕೆ ಕ್ರಮವಿಲ್ಲ, ಇದರ ಹಿಂದೆ ಯಾರಿದ್ದಾರೆ ತನಿಕೆಗೆ ಒಳಪಡಿಸಿ -ಇಕ್ಬಾಲ್ ಅಹಮದ್ ಒತ್ತಾಯ

ತುಮಕೂರು : ರಾಷ್ಟ್ರೀಯ ಟೆಸ್ಟ್ ಏಜೆನ್ಸಿಯ ಅಧ್ಯಕ್ಷರಾಗಿರುವ ಪ್ರದೀಪಕುಮಾರ್ ಜೋಷಿ, ಹಿಂದೆ ಮಧ್ಯ ಪ್ರದೇಶದಲ್ಲಿ ಇದ್ದಾಗಲೂ ಇದೇ ರೀತಿಯ ಕತ್ಯಗಳು ನಡೆದಿದ್ದವು. ಅಲ್ಲದೆ 2024ರಲ್ಲಿ ಇದೇ ರೀತಿಯ ಪ್ರಕರಣ ನಡೆದಾಗ,ಸುಪ್ರಿಂಕೋರ್ಟಿನ ಆದೇಶದಂತೆ ಪತ್ರಿಕೆ ಸೋರಿಕೆಯಾದ ಪಾಟ್ನಾದಲ್ಲಿ ಮಾತ್ರ ಮರು ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ಬಾರಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾಡಿ, ಚೆನ್ನಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆತ್ಮಹತ್ಯೆ ದಾರಿ ಹಿಡಿಯುವಂತೆ ಮಾಡಿದೆ. ಆದರೆ ಇದುವರೆಗೂ ಎನ್.ಟಿ.ಎ ಮುಖ್ಯಸ್ಥರ ವಿರುದ್ದ ಕೇಂದ್ರ ಸರಕಾರ ಯಾವ ಕ್ರಮವನ್ನು ಕೈಗೊಂಡಿಲ್ಲ. ಪದೇ ಪದೇ ಈ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ, ರಾಷ್ಟ್ರದ ಅಭಿವೃದ್ದಿಗೂ ಮಾರಕವಾಗಲಿದೆ ಎಂದು ಇಕ್ಬಾಲ್ ಅಹಮದ್ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಒಂದು ವರ್ಷ, ಎರಡು ವರ್ಷ ಕಾಯ್ದು, ವೈದ್ಯನಾಗಲೇ ಬೇಕೆಂಬ ಹಂಬಲದಲ್ಲಿ ವಿದ್ಯಾರ್ಥಿಗಳು ಶ್ರಮ ಹಾಕಿ ಪರೀಕ್ಷೆ ಬರೆದಿದ್ದಾರೆ.ಆದರೆ ಪ್ರಶ್ನೆ ಪತ್ರಿಕೆ ಲೀಕ್ ಆಗುವಂತೆ ನಿರ್ಲಕ್ಷ ವಹಿಸಿ,ಪರೀಕ್ಷೆ ಬರೆದ 23 ಲಕ್ಷ ವಿಧ್ಯಾರ್ಥಿಗಳ ಭವಿಷ್ಯವನ್ನೇ ಕತ್ತಲೆಯಲ್ಲಿಟ್ಟಿದೆ ಎಂದು ಆರೋಪಿಸಿದರು.

ಪದೇ ಪದೇ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಮೂಲಕ ಕೇಂದ್ರ ಸರಕಾರ ವಿದ್ಯಾರ್ಥಿಗಳ ಜೀವನದ ಜೊತೆ ಚಲ್ಲಾಟವಾಡುತ್ತಿದೆ.ಎನ್.ಟಿ.ಎ ರದ್ದು ಮಾಡಿ, ಈ ಹಿಂದಿನಂತೆ ರಾಜ್ಯಗಳೇ ಸಿಇಟಿ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಒಂದು ವರ್ಷ, ಎರಡು ವರ್ಷ ಕಾಯ್ದು, ವೈದ್ಯನಾಗಲೇ ಬೇಕೆಂಬ ಹಂಬಲದಲ್ಲಿ ವಿದ್ಯಾರ್ಥಿಗಳು ಶ್ರಮ ಹಾಕಿ ಪರೀಕ್ಷೆ ಬರೆದಿದ್ದಾರೆ.ಆದರೆ ಪ್ರಶ್ನೆ ಪತ್ರಿಕೆ ಲೀಕ್ ಆಗುವಂತೆ ನಿರ್ಲಕ್ಷ ವಹಿಸಿ,ಪರೀಕ್ಷೆ ಬರೆದ 23 ಲಕ್ಷ ವಿಧ್ಯಾರ್ಥಿಗಳ ಭವಿಷ್ಯವನ್ನೇ ಕತ್ತಲೆಯಲ್ಲಿಟ್ಟಿದೆ ಎಂದು ಆರೋಪಿಸಿದರು.

ನೀಟ್‍ನಂತಹ ಒಂದು ಪರೀಕ್ಷೆ ನಡೆಸಲು ಕನಿಷ್ಠ 300-400 ಕೋಟಿ ರೂ ಖರ್ಚಾಗುತ್ತದೆ.ಈಗ ಮರುಪರೀಕ್ಷೆ ಎಂದರೆ ಇದುವರೆಗೂ ಆಗಿರುವ ನಷ್ಟವನ್ನು ತುಂಬಿ ಕೊಡುವವರು ಯಾರು, ಯಾರಿಂದ ಈ ನಷ್ಟವನ್ನು ಭರಿಸಲಾಗುತ್ತದೆ ಎಂದು ಸರಕಾರ ಸ್ಪಷ್ಟಪಡಿಸಬೇಕು. ಇದು ಜನರ ತೆರಿಗೆ ಹಣ.ಇದು ಕೇವಲ ಅರ್ಥಿಕ ದೃಷ್ಠಿಯಿಂದ ನೋಡದೆ,ಶೈಕ್ಷಣಿಕವಾಗಿಯೂ ದೇಶದ ಯುವಜನರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಕೊಂಡು, ವಾಮ ಮಾರ್ಗದಿಂದ ಪರೀಕ್ಷೆ ಬರೆದು ವೈದ್ಯನಾಗುವ ವ್ಯಕ್ತಿಯಿಂದ ಗುಣಮಟ್ಟದ ಚಿಕಿತ್ಸೆ ನಿರೀಕ್ಷಿಸಲು ಸಾಧ್ಯವೇ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಪ್ರಶ್ನಿಸಿದರು.

ಪರೀಕ್ಷೆ ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜೇಬುಗಳಿಲ್ಲದ ಬಟ್ಟೆ ಧರಿಸಿ,ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಲ್ಲದೆ, ಕುಡಿಯುವ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗದೆ ಕಷ್ಟಪಟ್ಟು ಪರೀಕ್ಷೆ ಬರೆದಿದ್ದಾರೆ.ಇಂತಹ ಸಂದರ್ಭದಲ್ಲಿ ಮರು ಪರೀಕ್ಷೆ ಎಂದರೆ ವಿದ್ಯಾರ್ಥಿಗಳ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಮೊದಲು ಆಲೋಚಿಸಬೇಕು.ಸರಕಾರ ಪದೇ ಪದೇ ಇಂತಹ ಪ್ರಕರಣಗಳು ಮರುಕಳುಹಿಸದಂತೆ ಕ್ರಮ ವಹಿಸಿ, ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ.ಹಾಗೆಯೇ ಸಿಇಟಿ ಬಗ್ಗೆ ಇಡೀ ದೇಶದಲ್ಲಿಯೇ ಮೆಚ್ಚುಗೆ ಇದೆ. ಹಾಗಾಗಿ ಎನ್.ಟಿ.ಎ ರದ್ದು ಮಾಡಿ, ಸಿಇಟಿ ಮಾದರಿ ಪರೀಕ್ಷೆಗೆ ಅವಕಾಶ ಮಾಡಿಕೊಡುಬೇಕು ಎಂದು ಇಕ್ಬಾಲ್ ಅಹಮದ್ ಒತ್ತಾಯಿಸಿದರು.

ಸರಕಾರ ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಸಂಕೇತಗಳನ್ನು ಧರಿಸಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ. ಸ್ವಾತಂತ್ರ ಬಂದಾಗಿನಿಂದಲೂ ಹಿಬಾಜ್ ಧರಿಸಲು ಅವಕಾಶವಿತ್ತು.ಆದರೆ 2022ರಲ್ಲಿ ಹಿಜಾಬ್ ವಿರುದ್ದ ಕೇಸರಿ ಶಾಲು ಧರಿಸಿ, ವಿದ್ಯಾರ್ಥಿಗಳಲ್ಲಿಯೇ ಹಿಂದೂ, ಮುಸ್ಲಿಂ ಎಂಬ ದ್ವೇಷ ಹರಿಡಿದ್ದು ಬಿಜೆಪಿ ಸರಕಾರ. ಆಗಿದ್ದ ತಪ್ಪನ್ನು ಸರಕಾರ ಸರಿಪಡಿಸಿದೆ.ಓಟ್ ಬ್ಯಾಂಕ್ ರಾಜಕಾರಣಕ್ಕೆ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕರ್ನಾಟಕದಲ್ಲಿ ಈ ರೀತಿಯ ಯುವಜನರ ನಡುವೆ ದ್ವೇಷ ಹುಟ್ಟಿಸುವ ಕೆಲಸವನ್ನು ಬಿಜೆಪಿ ಬಿಡಲಿ ಎಂದರು.

ಹಿರಿಯರಾದ ಕೆಂಚಮಾರಯ್ಯ ಮಾತನಾಡಿ,ಬಡವರ ಮಕ್ಕಳು ವೈದ್ಯರಾಗುವ ಕನಸಿಗೆ ರೆಕ್ಕೆ ಬಂದತೆ ವೀರಪ್ಪ ಮೋಹಿಲಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಿಇಟಿ ಜಾರಿಗೆ ತಂದರು.ಇಡೀ ದೇಶವ ಮೆಚ್ಚುಗೆ ವ್ಯಕ್ತಪಡಿಸಿತ್ತು. ದ್ವಿತಿಯ ಪಿಯುಸಿ ಶೇ50 ಅಂಕ ಮತ್ತು ಸಿಇಟಿ ಶೇ50 ಸಮೀಕರಿಸಿ ರ್ಯಾಂಕ್ ಲೀಸ್ಟ್ ಸಿದ್ದಪಡಿಸಲಾಗುತ್ತಿತ್ತು. ಆದರೆ ಎನ್.ಟಿ.ಎಯಲ್ಲಿ ಕೇವಲ ಟೆಸ್ಟ್ ನಲ್ಲಿ ಬಂದ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಇದರಿಂದ ದ್ವಿತೀಯ ಪಿಯು ನಲ್ಲಿ ಶೇ99 ಅಂಕ ಪಡೆದವರು ನೀಟ್ ಪರೀಕ್ಷೆಯಲ್ಲಿ ಒಳ್ಳೆಯ ರ್ಯಾಂಕ್ ಪಡೆಯಲು ಆಗುತ್ತಿಲ್ಲ. ಕೋಚಿಂಗ್ ಸೆಂಟರ್‍ಗಳ ಹಾವಳಿಗೆ ವಿದ್ಯಾರ್ಥಿಗಳ ಜೀವನವೇ ಹಾಳಾಗುತ್ತಿದೆ. ಇದೇ ನಿಮ್ಮ ದೇಶ ಭಕ್ತಿಯೇ ಎಂದು ಪ್ರಶ್ನಿಸಿದ ಅವರು,ಬೇರೆ ಸಂದರ್ಭಗಳಲ್ಲಿ ಬೀದಿಗಿಳಿಯುವ ಬಿಜೆಪಿ ಸಂಸದರು, ಶಾಸಕರು, ಎಬಿವಿಪಿಯವರ ಬಾಯಿ ಬಿಡುತ್ತಿಲ್ಲ. ಕ್ಷಲ್ಲಕ ವಿಚಾರಗಳಿಗೆ ಜನರ ದಿಕ್ಕು ತಪ್ಪಿಸುವ ಇವರಿಗೆ ಇಂತಹ ದೊಡ್ಡ ಹಗರಣ ಕಾಣುತ್ತಿಲ್ಲವೇ?ಎಬಿವಿಪಿ ಒಂದು ವಿದ್ಯಾರ್ಥಿ ಸಂಘಟನೆಯಾಗಿದ್ದರೆ, ನೀಟ್ ಹಗರಣದ ಬಗ್ಗೆ ಬೀದಿಗಿಳಿದು ಹೋರಾಟ ಮಾಡಲಿ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ, ನೀಟ್ ಹಗರಣಕ್ಕೆ ಕೇಂದ್ರದ ಶಿಕ್ಷಣ ಸಚಿವರು ಕಾರಣ ಹಾಗಾಗಿ ಶಿಕ್ಷಣ ಸಚಿವರ ರಾಜೀನಾಮೆ ಪಡೆಯಬೇಕು. ಇಲ್ಲವೇ ಈ ಎಲ್ಲಾ ಹಗರಣದ ಹೊಣೆ ಹೊತ್ತು ಪ್ರಧಾನಮಂತ್ರಿಗಳೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹ್ಮದ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಕೆಂಚಮಾರಯ್ಯ, ಮಹೇಶ್, ಮಂಜುನಾಥ್, ಗುರುಪ್ರಸಾದ್, ಕುಮಾರಸ್ವಾಮಿ, ಲಿಂಗರಾಜು, ಷಣ್ಮಕಪ್ಪ, ಇರ್ಫಾನ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *