ಕಾರು ಡಿಕ್ಕಿ ಟಿ.ವಿ.ಎಸ್. ಸವಾರ ಸಾವು

ತುಮಕೂರು: ಹೊಂಡೈ ಕಾರು ಅತಿವೇಗ ಮತ್ತು ಅಜಾಗರುಕತೆಯಿಂದ ಟಿವಿಎಸ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಇಂದು ಬೆಳಿಗ್ಗೆ 8.30ರ ಸಮಯದಲ್ಲಿ ತುಮಕೂರು ರಿಂಗ್ ರಸ್ತೆಯ ಹೆಚ್,ಬಿ.ಪೆಟ್ರೋಲ್ ಬಂಕ್ ಸಮೀಪ ಟಿವಿಎಸ್ ಸೂಪರ್ ಎಕ್ಸ್‍ಲ್‍ನಲ್ಲಿ ಹೋಗುತ್ತಿದ್ದ ತುಮಕೂರಿನ ಸಿ.ಎಂ.ಬಡಾವಣೆಯ ನಿವೃತ್ತ ನೌಕರ 72 ವರ್ಷದ ಸಿ.ವೀರನಾಗಪ್ಪನವರಿಗೆ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸಳದಲ್ಲೇ ಮೃತ ಪಟ್ಟಿದ್ದಾರ
ಈ ಸಂಬಂಧ ಸಂಚಾರಿ ಪೊಲೀಸರು ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *