ತುಮಕೂರು : ಕನ್ನಡದ ಕಲಾತ್ಮಕ ಅಥವಾ ಪರ್ಯಾಯ ಮಾದರಿಯ ಚಲನಚಿತ್ರಗಳು ಜನರಿಗೆ ತಲುಪಿಸುವ ಸಲುವಾಗಿ ಸಮುದಾಯದತ್ತ ಸಿನಿಮಾ ಚಿತ್ರಯಾತ್ರೆಯ ಮೂಲಕ ಹತ್ತು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಐದು ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಅಮೃತಮತಿ ಚಲನಚಿತ್ರವನ್ನು 2023 ಮಾರ್ಚ್ 28 ,ಮಂಗಳವಾರ ಸಂಜೆ 5 ಗಂಟೆಗೆ ತುಮಕೂರಿನ ಅಮಾನಿಕೆರೆ ಬಳಿ ಇರುವ ಕನ್ನಡ ಭವನದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಡಾ. ಬೂವನಹಳ್ಳಿ ನಾಗರಾಜು ಉದ್ಘಾಟಿಸುವರು ಮುಖ್ಯಅತಿಥಿಗಳಾಗಿ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾಬಸವರಾಜು, ಚಿಂತಕರಾದ ಪ್ರೊ. ಕೆ.ದೊರೈರಾಜ್, ಡಾ. ಓ. ನಾಗರಾಜು, ಡಾ. ನಾಗಭೂಷಣ ಬಗ್ಗನಡು ಭಾಗವಹಿಸುವರು.
ಹದಿಮೂರನೇ ಶತಮಾನದಲ್ಲಿ ಕನ್ನಡದ ಜನ್ನ ಕವಿಯಿಂದ ರಚಿತವಾದ ಯಶೋಧರ ಚರಿತೆಯಲ್ಲಿನ ಅಮೃತಮತಿ ಪ್ರಸಂಗವನ್ನು ಪ್ರಮುಖವಾಗಿ ಆಧರಿಸಿ ಕೆಲವು ಬದಲಾವಣೆಗಳೊಂದಿಗೆ ಸಿನಿಮಾರೂಪಕ್ಕೆ ಅಳವಡಿಸಲಾಗಿದೆ. ಕನ್ನಡದ ಯಶೋಧರ ಚರಿತೆಗೆ ಮುಂಚೆ ಇದೇ ವಸ್ತುವಿನ ಕೃತಿಗಳು ಪ್ರಾಕೃತ ಮತ್ತು ಸಂಸ್ಕøತದಲ್ಲಿ ಬಂದಿರುವುದನ್ನು ಗಮನಿಸಲಾಗಿದೆ. ಅಮೃತಮತಿ ಸಿನಿಮಾವು ಮೂಲ ಕಥನದ ಮರುಸೃಷ್ಠಿಯಾಗಿದೆ. 28ರಂದು ನಡೆಯುವ ಅಮೃತಮತಿ ಚಲನಚಿತ್ರಕ್ಕೆ ಪ್ರೋತ್ಸಾಹ ಧನವಾಗಿ 250 ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರ 100 ಕ್ಕೆ ಟಿಕೆಟ್ಗಳು ದೊರೆಯುತ್ತವೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಲು ಸಂಚಾಲಕರಾದ ಡಾ. ಓ. ನಾಗರಾಜು 9448659646 ಡಾ. ನಾಗಭೂಷಣ ಬಗ್ಗನಡು 9964852518 ಸಂಪರ್ಕಿಸಲು ಕೋರಿದೆ.