ವಿದ್ಯಾವಂತ ಇಡೀ ವಿಶ್ವದಲ್ಲೇ ಗೌರವ ಪಡೆಯುತ್ತಾನೆ-ಶ್ರೀ ಸಿದ್ಧಲಿಂಗ ಸ್ವಾಮೀಜಿ

ತುಮಕೂರು- ರಾಜ ತನ್ನ ದೇಶದಲ್ಲಿ ಮಾತ್ರ ಗೌರವವನ್ನು ಹೊಂದಿರುತ್ತಾನೆ. ಆದರೆ ವಿದ್ಯಾವಂತನಾದ ಜ್ಞಾನಿಯು ಇಡೀ ವಿಶ್ವದಲ್ಲೇ ಗೌರವವನ್ನು ಹೊಂದುವಂತನಾಗುತ್ತಾನೆ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ತುಮಕೂರಿನ ಕಿಶೋರ ಭಾರತಿ, ಚೈತನ್ಯ ಭಾರತಿ ಮತ್ತು ವಿಕಾಸ ಭಾರತಿ ಕ್ಯಾಂಪಸ್ ಸಭಾಂಗಣಗಳ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.

ವಿದ್ಯಾವಂತ ಜ್ಞಾನಿಯು ನಮ್ಮ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ತನ್ನ ಜ್ಞಾನಮಟ್ಟಕ್ಕೆ ತಕ್ಕಂತೆ ಗೌರವ ಹೊಂದಿರುತ್ತಾನೆ. ಆದ್ದರಿಂದಲೇ ನ ಹಿ ಜ್ಞಾನೇನ ಸದೃಶಂ ಎಂಬ ಮಾತು ಬಂದಿರುವುದು ಎಂದು ಅವರು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಪೆÇೀಷಕರು ಶಾಲೆಗಳನ್ನು ಪರಿಶೀಲಿಸಿ, ಅಲ್ಲಿನ ವ್ಯವಸ್ಥೆಯನ್ನು ನೋಡಿದ ಬಳಿಕವಷ್ಟೇ ಮಕ್ಕಳನ್ನು ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಸುಸಜ್ಜಿತವಾದ ಸಭಾಂಗಣವನ್ನು ನಿರ್ಮಿಸಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವಿವೇಕಾನಂದರು ವಿದೇಶದಿಂದ ಮರಳಿದಾಗ ನಮ್ಮ ದೇಶದ ಅಭಿವೃದ್ಧಿಗೆ ತಮ್ಮ ಸಲಹೆ ಏನು ಎಂದು ಕೇಳಿದ ಸಂದರ್ಭದಲ್ಲಿ ಅವರು ಶಿಕ್ಷಣವೊಂದರಿಂದಲೇ ಅದು ಸಾಧ್ಯ ಎಂದು ಹೇಳಿದ್ದರು. ಇಂದಿನ ಶಿಕ್ಷಣವು ಮೌಲ್ಯ ರಹಿತವಾಗಿದ್ದು, ಅದು ಕೇವಲ ಹೊರಗಡೆ ಹೊಸ ಬಟ್ಟೆಯನ್ನು ಧರಿಸುವ ವ್ಯಕ್ತಿಗಳ್ನು ನಿರ್ಮಾಣ ಮಾಡುವುದರಲ್ಲೇ ನಿರತವಾಗಿದೆ ಎಂದು ವಿಷಾದಿಸಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸರ್ಕಾರ ಕೊಡುವ ಸೌಲಭ್ಯಕ್ಕೆ ಕೈ ಚಾಚುವಂತಾಗಿದೆ. ಕೇವಲ ಪ್ರಜೆಗಳ ಉತ್ಪಾದಕರಷ್ಟೇ ನಾವಾಗದೆ ಸ್ವತಂತ್ರವಾದ ಜೀವನ ನಿರ್ವಹಣೆಗೆ ಬೇಕಾದ ಶಿಕ್ಷಣವನ್ನು ಪಡೆದು ನಾವು ಸ್ವಾವಲಂಬಿಗಳಾಗಬೇಕು. ವಿವೇಕಾನಂದರ ಚಿಂತನೆಗಳು ಸಹಕಾರಿ ಹಾಗೂ ಪ್ರೇರಣಾದಾಯಿಯಾಗಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೆ ಪಿ. ಕೃಷ್ಣ ಅವರು, ನಮ್ಮ ಸಂಸ್ಥೆಯ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ವಿಭಾಗಗಳ ಸಭಾಂಗಣದ ಉದ್ಘಾಟನೆಯು ಮೂರು ಕಡೆಗಳಲ್ಲಿ ಒಂದೇ ದಿನ ನೆರವೇರಿರುವುದು ಸಂತಸ ತಂದಿದೆ ಎಂದರು.

ತುಮಕೂರಿನಲ್ಲಿ ಎರಡೂವರೆ ಸಾವಿರ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಶಿಕ್ಷಣ ನೀಡುತ್ತಿದೆ. ಈ ಭವನದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ನಮ್ಮ ಶಾಲೆಯ ಮತ್ತು ಕಾರ್ಯಕ್ರಮದ ಯಶಸ್ಸು ಪ್ರಾಂಶುಪಾಲರಾದ ನಂದಾರಾಜು ಅವರಿಗೆ ಸಲ್ಲಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಧ್ಯಕ್ಷರಾದ ಎನ್. ಪಂಡಿತಾರಾಧ್ಯ ಮಾತನಾಡಿ, ನಮ್ಮ ಸಂಸ್ಥೆಯು ಉತ್ತಮ ಹೆಸರು ಸಂಪಾದಿಸಿದ್ದು, ಅದನ್ನು ಉಳಿಸಿ ಬೆಳೆಸುವಲ್ಲಿ ಶಿಕ್ಷಮಕರು, ಮಕ್ಕಳು ಹಾಗೂ ಪೆÇೀಷಕರ ಸಹಕಾರ ಅತ್ಯಂತ ಪ್ರಮುಖವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ನಂದಾರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *