
ಕೊರಟಗೆರೆ : ಕ್ಷೇತ್ರದ 6 ಹೋಬಳಿಗಳಲ್ಲಿ ಕಾರ್ಯಕರ್ತರು ಮತ್ತು ಮುಖಂಡರು, ಗ್ರಾಮಂತರ ಪ್ರದೇಶ ಹಾಗೂ ಪಟ್ಟಣದಲ್ಲಿ ಮನೆ-ಮನೆಗೆ ತೆರಳಿ ಕಾಂಗ್ರೇಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ ರವರ ಪರವಾಗಿ ಮತಯಾಚಿಸಿದರೆ,ಕೊರಟಗೆರೆ ಪಟ್ಟಣದ 15 ವಾರ್ಡಗಳಲ್ಲಿ ಪಟ್ಟಣಪಂಚಾಯಿತ್ತಿ ಸದಸ್ಯರು ಪ್ರತಿ ಮನೆಗೆ ಕರಪತ್ರ ಹಂಚಿ ಮತ ಬೇಟೆ ನಡೆಸಿದರು.
ಬಿಹಿರಂಗ ಪ್ರಚಾರ ನೆನ್ನೆ ಮುಕ್ತಾಯಗೊಂಡಿದ್ದು, ಇಂದು ಬೆಳಗ್ಗೆ ಮಾರುಕಟ್ಟೆ, ಬಸ್ ನಿಲ್ದಾಣ, ರಸ್ತೆಯ ಅಕ್ಕ-ಪಕ್ಕದ ಅಂಗಡಿಗಳಿಗೆ ಸೇರಿದಂತ್ತೆ ಕ್ಷೇತ್ರ ಕುಗ್ರಾಮಗಳಿಗೆ ತೆರಳಿ ಡಾ.ಜಿ.ಪರಮೇಶ್ವರ ಮತಯಾಚನೆ ಮಾಡಿದರು.
ಡಾ.ಜಿ.ಪರಮೇಶ್ವರ ಕೊರಟಗೆರೆ ಪಟ್ಟಣದಲ್ಲಿ ವಾರ್ಡಗಳಲ್ಲಿ ಮತಯಾಚಿಸುವ ವೇಳೆ ಸುದ್ದಿಗಾರರೊಂದಿಗೆ ಮತನಾಡಿ, ಕ್ಷೇತ್ರದ ಸರ್ವಂಗಿಣ ಅಭಿವೃದ್ದಿಗೆ ನನಗೆ ಹೆಚ್ಚಿನ ಮತ ನಿಡಿ ಗೆಲ್ಲಿಸಿದರೆ, ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ ಯೋಜನೆಗಳು ಮತ್ತು ರೈತರ ಅಭಿವೃದ್ದಿಯ ಕಡೆ ಅದ್ಯತೆ ನೀಡುವುದೆ ನನ್ನ ಧ್ಯೇಯ ಎಂದರು.

ಗ್ಯಾರೆಂಟಿ ಕಾರ್ಡ್ಗಳನ್ನು ಕೊರಟಗೆರೆ ಕ್ಷೇತ್ರದ ಮನೆಮನೆಗೆ ತಲುಪಿಸಿದ್ದೇವೆ. ಬಡವರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ, ರೈತರ ಸಾಲಮನ್ನಾ ಮಾಡುತ್ತೇವೆ,ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಮನೆ-ಮನೆಗಳಿಗೆ ತೆರಳಿ ಮತಯಾಚನೆ ಮಾಡಲಾಗುತ್ತಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಮಿಟ್ರಹಳ್ಳಿ, ಮಮಚಿಹಳ್ಳಿಯಲ್ಲಿ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದ ನಂತರ ರಾಹುತನಹಳ್ಳಿ ಗ್ರಾಮದಲ್ಲಿ ಊರಿನ ಪ್ರಮುಖರೊಂದಿಗೆ ಡಾ ಜಿ ಪರಮೇಶ್ವರ ಸಮಾಲೋಚಿಸಿದರು. ವಾಲೆ ಚಂದ್ರಯ್ಯ, ರಾಯಸಂದ್ರ ರವಿ ಮತ್ತಿತರ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಪಾಲ್ಗೊಂಡಿದ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರರಾದ ಮುರಳೀಧರ ಹಾಲಪ್ಪ ಅವರು ಕೋಳಾಲ ಹೋಬಳಿಯ ಮಲಗೋನಹಳ್ಳಿ, ಗೋಪೇನಹಳ್ಳಿ, ಯಲಚಿಗೆರೆ, ಕಾಟೇನಹಳ್ಳಿ, ಚಿನ್ನಹಳ್ಳಿ, ಇರಕಸಂದ್ರ ಕಾಲೋನಿ ಗ್ರಾಮಗಳ್ಳಿ ಮನೆ-ಮನೆ ತೆರಳಿ ಮತಯಾಚನೆ ನಡೆಸಿದರು. ಮುಖಂಡರಾದ ಜಗದೀಶ್, ಲಿಂಗಣ್ಣ ಹಾಜರಿದ್ದರು.