ರಾಜ್ಯದಲ್ಲಿ ಹುಸಿ ಸಮೀಕ್ಷೆಗಳು ತಲೆಕೆಳಗಾಗಲಿವೆ-ಹೆಚ್.ಡಿ.ಕುಮಾರಸ್ವಾಮಿ,ಮಾಜಿ ಶಾಸಕ ಎಸ್.ಷಫಿ ಅಹಮದ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ತುಮಕೂರು : ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಅಧಿಕಾರ ಹಿಡಿಯುವುದು ಸ್ಪಷ್ಟವಾಗಿರುವುದರಿಂದ ಕೆಲವರು ಸುಳ್ಳು ‘ಸುಳ್ಳು’ ಹಬ್ಬಿಸುತ್ತಿದ್ದಾರೆ, ನಾಳೆಯೇ ಅಂತಹ ಹತ್ತಾರು ಸಮೀಕ್ಷೆ ಗಳನ್ನು ಮಾಡಿಸುವುದು ನಮಗೂ ತಿಳಿದಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

ಅವರಿಂದು ಜೆಡಿಎಸ್ ಕಚೇರಿ ಯಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಎಸ್.ಷಫಿ ಅಹಮದ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

“ಸಿ” ರಿಪೋಟ್ ಎಂಬುದೇ ನಕಲಿ ಸರ್ವೆ, ದುಡ್ಡು ಕೊಟ್ಟು ಇಂತಹ ಹತ್ತಾರು ಸಮೀಕ್ಷಗಳನ್ನು ನಾವು ಮಾಡಿಸಬಹುದು, ಇವೆಲ್ಲಾ ಜನರಿಗೆ ಗೊತ್ತಿದೆ, ನಮ್ಮ ಪಕ್ಷ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಈ ರೀತಿಯ ಹುಸಿ ಸಮೀಕ್ಷೆಗಳನ್ನು ಹಬ್ಬಿಸಲಾಗುತ್ತಿದೆ ಇಂತಹ ಹುಸು ಸಮೀಕ್ಷೆಗಳು ತಲೆಕೆಳಗಾಗಲಿವೆ ಎಂದರು.

ಎಸ್.ಷಫಿ ಅಹಮದ್ ಅವರು ಕುಮಾರಸ್ವಾಮಿಯವರಿಗೆ ನನ್ನ ಕಂಡಿಷನ್ (ಬೇಡಿಕೆ) ಗೊತ್ತಲ್ಲ ಎಂದು ಹೇಳುವಂತಿದೆ.

ಈ ರಾಜ್ಯದ ಇತಿಹಾಸದಲ್ಲಿ ಯಾರಾದರೂ ನಾಯಕರು ಜಾತ್ಯತೀತವಾಗಿ ಅಧಿಕಾರ ನೀಡಿದ ಯಾವುದಾದರೂ ಪಕದಿದ್ದರೆ ಅದು ಜೆಡಿಎಸ್ ಪಕ್ಷ ಎಂದು ಹೇಳಿದ ಕುಮಾರಸ್ವಾಮಿಯವರು, ದೇವೇಗೌಡರು ಕಟ್ಟಿ ಬೆಳೆಸಿರುವ ಜನತಾದಳಕ್ಕೆ ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಒಬ್ಬ ದಲಿತ ಹೆಣ್ಣು ಮಗಳಾದ ಕಮಲಗಂಗಹನುಮಯ್ಯ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಲಾಯಿತು ಎಂದರು.

1994ರಲ್ಲಿ ರಾಜ್ಯದಲ್ಲಿ ಹೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಾಗ ನಿಗಮಕ್ಕೆ ಅಧ್ಯಕ್ಷರನ್ನಾಗಿ ಮಾಡಿ ಎಂದು ಬಂದ ಕುರುಬ ಸಮಾಜದ ಸಿ.ಎನ್.ಭಾಸ್ಕರಪ್ಪನವರನ್ನು ಲೋಕಸಭೆ ಸದಸ್ಯರನ್ನಾಗಿ ಮಾಡಲಾಯಿತು ಯಾವಾಗಲೂ ಜನತಾದಳಕ್ಕೆ ದೇವೇಗೌಡರು, ಎಲ್ಲಾ ಜಾತಿಗೆ ಗೌರವವನ್ನು ಸಲ್ಲಿಸಿದಂತವರು, ದೇವೇಗೌಡರು ಅವರ ರಾಜಕೀಯ ಜೀವನದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಭಾಸ್ಕರಪ್ಪನವರು ಸೇರಿದಂತೆ 9 ಜನ ಜೆಡಿಎಸ್ ಶಾಸಕರಿದ್ದರು, ಆ ದಿನಗಳನ್ನು ನೆನಪಿಸಿಕೊಳ್ಳಲಿಕ್ಕೆ ಬಯಸುತ್ತೇನೆ ಎಂದರು.

ಒಂದು ಸಮಾಜಕ್ಕೆ ಗೌರವ ತರುವಂತಹ ವಿಷಯಗಳಲ್ಲಿ ಯಾವ ಯಾವ ರೀತಿ ಯಾವ ಯಾವ ಸಮಾಜದವರನ್ನು ಬೆಳೆಸಲಿಕ್ಕೆ ಯಾವ ರೀತಿಯಲ್ಲಿ ಬೇರೆಯ ಪಕ್ಞದವರು ಕೇವಲ ಮತ ಪಡಯಲಿಕ್ಕೋಸ್ಕರವಾಗಿ ಸಮಾಜಗಳ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಹೊರಟಿದ್ದಾರೆ, ಅವರಿಗೆ ಓಡಾಡಲಿಕ್ಕೆ ಆಗದೆ ಇರತಕ್ಕಂಥ ವಯಸ್ಸು ಇದೆಲ್ಲವನ್ನು ದೊಡ್ಡ ವಿಷಯಗಳು ಚರ್ಚೆ ಮಾಡಲಿ ಎಂದರು.

ಯಡಿಯೂರಪ್ಪನವರು ನಮ್ಮ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಉಳಿಸಿಕೊಂಡಿಲ್ಲ, 2005ರಲ್ಲಿ ಜೆಡಿಎಸ್‍ಗೆ ಬರುತ್ತೇನೆ ನನ್ನನ್ನು ಮಂತ್ರಿ ಮಾಡಿ ಎಂದು ಬಂದವರು, 2013ರಲ್ಲಿ ಕೆಜೆಪಿ ಕಟ್ಟಿ ಬಿಜೆಪಿ ಸೋಲಿಸಿದವರು ಯಾರು, ಯಡಿಯೂರಪ್ಪನವರು ಹೇಳುತ್ತಾರೆ ಕೆಜೆಪಿ ಮಾಡಿದ್ದು ತಪ್ಪಾಯ್ತು ಕೆಜೆಪಿ ಮಾಡಬಾರದಾಗಿತ್ತು ಎಂದು, ಇವರಿಗೆ ಅನ್ಯಾವಾದರೆ ಪಕ್ಷ ಕಟ್ಟಬಹುದು, ಜಗದೀಶ್ ಶೆಟ್ಟರ್‍ಗೆ ಅನ್ಯಾಯವಾದರೆ ಸೋಲಿಸಲು ರಕ್ತವನ್ನೂ ಕೊಡುತ್ತಾರಂತೆ ಲಿಂಗಾಯಿತರನ್ನು ಮುಗಿಸಿತ್ತಿರುವವರು ಯಾರು ಎಂದು ಪ್ರಶ್ನಿಸಿದರು.

ಯಾವುದೇ ರೀತಿಯಲ್ಲೂ ಆತಂಕ ಬೇಡ ಇವತ್ತು ಷಫಿ ಅಹಮದ್ ಸೇರ್ಪಡೆ ಪಕ್ಷಕ್ಕೆ ಉತ್ತಮವಾತಾವರಣ ನಿರ್ಮಾಣ ಆಗಿದೆ ಜನತಾದಳಕ್ಕೆ ಬೆಂಬಲವನ್ನು ಕೊಡಬೇಕುÉುಂಬ ದೃಷ್ಟಿಯಿಂದ ಇವತ್ತು ಷಫಿ ಅಹಮದ್ ಸಾಹೇಬರು, ಅವರ ಜೊತೆ ಹಲವಾರು ಅಲ್ಪಸಂಖ್ಯಾತ ಬಂಧುಗಳು ನಮ್ಮ ಮುಖಂಡರು ಇವತ್ತು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಪಕ್ಷ ಅಧಿಕಾರಕ್ಕೆ ಬರುವ ದಿಕ್ಸೂಚಿಯಾಗಿದೆ ಎಂದರು.

ಮುಂದಿನ 2023 ಮುಂದಿನ 10 ನೇ ತಾರೀಕು ಮತದಾನ ಯಾವ ರೀತಿ ಆಗಬಹುದು ಅಂತ ನನಗೆ ಗೊತ್ತಿದೆ, ಉತ್ತರ ಕರ್ನಾಟಕ ಭಾಗದಲ್ಲಿ 20 ರಿಂದ 35 ಸ್ಥಾನದವರೆಗೆ ನಮ್ಮ ಅಭ್ಯರ್ಥಿಗಳು ಗೆಲ್ಲತಕ್ಕಂತಹ ವಾತಾವರಣವಿದ್ದು ಜಿಲ್ಲೆಯಲ್ಲಿ 11ಕ್ಕೆ 11 ಜನತಾದಳದ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು ಎಂದರು.
ಪಂಚರತ್ನ ಯಾತ್ರೆಯಲ್ಲಿ ತುಮಕೂರು ಜನತೆ ನನಗೆ ಆಶೀರ್ವಾದ ಮಾಡಿದ್ದೀರಿ ನನ್ನ ರೈತ ಬಂಧುಗಳಿಗೆ ಎಲ್ಲಾ ಸಮಾಜದ ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ಬಿಜೆಪಿಯವರು ಭ್ರಷ್ಟಚಾರ ಜಗಜಾಹೀರಾಗಿದೆ, ಜೆಡಿಎಸ್ ಪಕ್ಷದ ಬಗ್ಗೆ,ಭ್ರಷ್ಟಚಾರದ ಬಗ್ಗೆ ಮಾತನಾಡುವುದಕ್ಕೆ ನೈತಿಕತೆಯನ್ನು ಇಟ್ಟುಕೊಂಡಿಲ್ಲ, ರೈತರಿಗೆ 26 ಲಕ್ಷ ರೈತ ಕುಟುಂಬಗಳಿಗೆ ಸಾಲ ಮನ್ನಾ ಮಾಡಿಕೊಡುತಕ್ಕಂಥ ಯೋಜನೆ ಅಂತ ಕೊಟ್ಟೆ, ಅದೇ 25000 ಕೋಟಿ ಹಣ ಹೆಸರು ಬರುತ್ತದೆ ಎಂದು 25,000 ಕೋಟಿಗೆ ಸಾಲ ಮನ್ನ ಮಾಡಿದ್ದು ನೆನೆಪಿಸಿಕೊಳ್ಳಲಿಲ್ಲ 40% ಕಮಿಷನ್ ರಾಜ್ಯದಲ್ಲಿ ರಾಜಾರೋಷವಾಗಿ ನಡೆದಿದೆ ಎಂದರು.

ಇಂದು ಪ್ರಧಾನ ಮಂತ್ರಿ ನರೇಂದ್ರಮೋದಿಯವರು ವರ್ಚೂಯಲ್ ಮೀಟಿಂಟ್ ಮಾಡಿದ್ದು, ಯಾವ ಪುರುಷಾರ್ಥಕ್ಕೆ ಮಾಡಿದರು ಎಂಬುದು ತಿಳಿಯುತ್ತಿಲ್ಲ, ಮೋದಿ, ಯೋಗಿ ಎಂಬ ಇಬ್ಬರು ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುತ್ತಾರಂತೆ, ಹಾಗಾದರೆ ಇಲ್ಲಿಯ ಬಿಜೆಪಿ ನಾಯಕರು ಯಾರ ಅಡಿಯಾಳಾಗಿದ್ದಾರೆ ಎಂಬುದನ್ನು ಹೇಳಿಲಿ ಎಂದು ಕುಟುಕಿದರು.

ಮೋದಿಯವರು ಹೇಳುತ್ತಾರೆ 2013ರಲ್ಲಿ ಒಂದು ಮನೆ ಕಟ್ಟಲು 200 ದಿನಗಳಾಗುತ್ತಿದ್ದವು, ಈಗ 100 ದಿನಗಳಿಗೆ ಕಟ್ಟಲಾಗುತ್ತಿದೆ ಎಂದು ಹೇಳುತ್ತಾರೆ, ಇವರು ಎಷ್ಟು ಜನಕ್ಕೆ ಮನೆ ಕೊಟ್ಟಿದ್ದೇ ಎಂಬುದನ್ನು ಹೇಳಲಿ ಎಂದು ಸವಾಲಾಕಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ ಕಾಂಗ್ರೆಸ್ ಆಡಳಿತದಲ್ಲಿ ಗುಲಾಭ್ ನಭಿ ಅಜಾದ್ ಮತ್ತು ಜಾಫರ್ ಷರೀಫ್ ಅವರನ್ನು ಮೂಲೆಗುಂಪು ಮಾಡಿದರು. ಅಂಧವರನ್ನೇ ಬಿಡದ ಕಾಂಗ್ರೆಸ್ ಇನ್ನು ನಿಮ್ಮನ್ನು ಬಿಡುತ್ತಾರಾ ಎಂದು ಆರೋಪಿಸಿದರು.

ಇಂದು ಮುಸ್ಲೀಂ ಸಮಾಜದ ಶೇ70ರಷ್ಟು ಮಂದಿ ಹುಷಾರಾಗಿದೆ. ಅದೊಂದು ಕಾಲವಿತ್ತು. ಹಿಂದೆ ಮುಸ್ಲೀಮರು, ದಲಿತರ ಮೇಲೆ ದಾಳಿ ನಡೆಯುತ್ತಿತ್ತು. ಇದು ಈಗ ಕಡಿಮೆಯಾಗಿದ್ದು ಇಂದಿನ ಜನ ಮೊಬೈಲ್ ನಲ್ಲಿ, ದೃಶ್ಯಮಾಧ್ಯಮದ ಮೂಲಕ ಜಗತ್ತನ್ನು ಕೆಲವೇ ನಿಮಿಷಗಳಲ್ಲಿ ನೋಡುತ್ತಿದೆ ಎಂದರು.

ಜೆಡಿಎಸ್ ಒಂದು ಪಕ್ಷ. ಇಲ್ಲಿ ನಮಗಾಗಿ ಏನು ಮಾಡಿದೆಯೋ ಎನ್ನುವುದು ಮುಖ್ಯವಲ್ಲ. ನಾವು ಪಕ್ಷಕ್ಕೆ ಏನು ಮಾಡಿದೆ ಎಂಬುದು ಮುಖ್ಯ. ಹಾಗಾಗಿ ಪಕ್ಷಕ್ಕಾಗಿ ನಾವು ಕೆಲಸ ಮಾಡಬೇಕು. ಟಿಕೆಟ್ ಗಾಗಿ ದೆಹಲಿಗೆ ಅಲೆಯಬೇಕಾಗಿಲ್ಲ. ಕಾಯಬೇಕಾಗಿಲ್ಲ. ಟಿಕೆಟ್ ಗಾಗಿ ಕಪ್ಪ ಕೊಡಬೇಕಾಗಿಲ್ಲ. ಜನತಾ ದಳ ಏನು ತೀರ್ಮಾನ ಮಾಡುತ್ತೋ ಅದೇ ಮುಖ್ಯ ಎಂದು ಹೇಳಿದರು.

ಬಹಳ ಹಿಂದೇಯೇ ಷಫೀ ಅಹಮದ್ ಅವರಿಗೆ ಹೇಳಿದ್ದೆ. ಜನತಾ ದಳಕ್ಕೆ ಬರುವಂತೆ ಕರೆದಿದ್ದೆ. ಈಗ ಬಂದಿದ್ದಾರೆ. ಅವರ ಸ್ನೇಹಿತರು ಬೆಂಬಲಿಗರು ಬಂದಿದ್ದಾರೆ. ನಮ್ಮದು ರೈತರ ಪಕ್ಷ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ತುಮಕೂರಿಗೆ ಕೆರೆತಂದು ಸೋಲಿಸಿದರು. ಸೋಲಿಸಿದವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಟ ಕಲಿಸಲಿದ್ದಾರೆ. ನಮ್ಮ ಪಕ್ಷ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಷಫಿ ಅಹಮದ್ ಜೊತೆ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.

Leave a Reply

Your email address will not be published. Required fields are marked *