ಸೆ. 21ರಿಂದ ರಾಜ್ಯದ ಗ್ರಾಮ ಪಂಚಾಯತಿ ಸದಸ್ಯರಿಗೆ, ಹಾಗೂ ಪಿಡಿಒ ಮತ್ತು ಕಾರ್ಯದರ್ಶಿ ಗಳಿಗೆ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಮೂರು ದಿನಗಳ ತರಬೇತಿಯನ್ನು 40 ಜನರ ಒಂದು ಗುಂಪಿನಂತೆ ತಾಲ್ಲೂಕಿನ ಸಾಮರ್ಥ್ಯ ಸೌಧಗಳಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದ್ದಾರೆ.
.
ದೂರದೃಷ್ಟಿ ಯೋಜನೆ ಎಂದರೆ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಇರುವ ಮೂಲಭೂತ ಸೌಕರ್ಯಗಳು ಹಾಗೂ ಅವಶ್ಯಕತೆಯಿರುವ ಸೌಕರ್ಯಗಳು ಏನು ಅವುಗಳನ್ನೂ ಮುಂದಿನ ಐದು ವರ್ಷಗಳಲ್ಲಿ ಹೇಗೆ ಗ್ರಾಮ ಪಂಚಾಯತಿ ಒದಗಿಸಬೇಕು ಅದಕ್ಕಾಗಿ ಬೇಕಾಗಿರುವ ಹಣ ಎಷ್ಟು ,ಹಣದ ಮೂಲ ಯಾವುದು ಎಂದು ಗುರುತಿಸಿಕೊಳ್ಳುವ ಒಂದು ಬಹಳ ಮುಖ್ಯ ವಾದ ಪ್ರಕ್ರಿಯೆ ಎಂದು ತಿಳಿಸಿದ್ದಾರೆ.
ಯೋಜನೆಯನ್ನು ಹೇಗೆ ತಯಾರಿಸ ಬೇಕು, ಯಾರು ಯಾರು ಭಾಗವಹಿಸ ಬೇಕು, ಯಾರ ಜವಬ್ದಾರಿ ಏನು . ಯೋಜನೆ ತಯಾರಿಕೆಯಿಂದಾಗುವ ಉಪಯೋಗ, ಈ ವಿಷಯಗಳನ್ನು ಮೂರು ದಿನದ ತರಬೇತಿಯಲ್ಲಿ ತಿಳಿಸಿ ಕೊಡಲಾಗುವುದು.
ಆದ್ದರಿಂದ ದಯಮಾಡಿ ಎಲ್ಲಾ ಗ್ರಾಮ ಪಂಚಾಯತಿ ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತು ಸದಸ್ಯರು ತಮ್ಮ ಪಿಡಿಒ, ಹಾಗೂ ಕಾರ್ಯದರ್ಶಿ ಗಳೊಂದಿಗೆ ಒಂದು ದಿನವೂ ತಪ್ಪದೇ ಭಾಗವಹಿಸಿ ತಮ್ಮ ಗ್ರಾಮ ಪಂಚಾಯತಿಯ ದೂರದೃಷ್ಟಿ ಯೋಜನೆಯನ್ನು ರಚಿಸಿ ಎಂದಿದ್ದಾರೆ.
ತರಬೇತಿಗೆ ಭಾಗವಹಿಸಿದವರಿಗೆ ದಿನವೊಂದಕ್ಕೆ 300 ರೂಗಳನ್ನು ದಿನ ಭತ್ಯೆಯಾಗಿ ಕೊಡಲಾಗುವುದು. ಅಂದರೆ ಮೂರು ದಿನಗಳಿಗೆ 900 ರೂಪಾಯಿಗಳನ್ನು ಪಡೆಯಿರಿ.ಜೋತೆಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ 7 ಪುಸ್ತಕಗಳನ್ನು ಕೊಡುತ್ತಾರೆ ಕೇಳಿ ಪಡೆಯಿರಿ.ಯಾವುದೇ ಕಾರಣಕ್ಕೂ ತರಬೇತಿಗೆ ತಪ್ಪಿಸಿಕೊಳ್ಳಬೇಡಿ. ಈ ವಿಷಯವನ್ನು ಇತರೆ ಗ್ರಾಮ ಪಂಚಾಯತಿ ಸದಸ್ಯರಿಗೆ ತಿಳಿಸಿ ತರಬೇತಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ. ಪಂಚಾಯತ್ ರಾಜ್ ಬಲಗೊಳಿಸಿ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದ್ದಾರೆ.