ಸಿದ್ದರಾಮಯ್ಯನವರ ಅಹಿಂದದಿಂದ ಕಾಂಗ್ರೆಸ್ ಅಧಿಕಾರದ ಸಖ್ಯಾ ತುಮಕೂರಿನಲ್ಲೇ ಆರಂಭ-ಅಂತ್ಯ-ಇದೊಂದು ಕಾಕತಾಳಿಯವಿರಬಹುದೇ -ತುಮಕೂರಿನಲ್ಲಿ ಕೊನೆಯದಾಗಿ ಕೈ ಮುಗಿದು ಕೃತಜ್ಞತೆಯಿಂದ ನಿರ್ಗಮಿಸಿದ್ದ ಸಿದ್ದು

ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 3ನೇ ವರ್ಷದ ಸಾಧನೆಯ ಸಮಾವೇಶದಲ್ಲಿ ಮುಖ್ಯಮಂತ್ರಿಯಾಗಿ ಕೊನೆಯ ಭಾಷಣ ಮಾಡಿ ತುಂಬಿದ ಜನತೆಯತ್ತ ಕೈ ಮುಗಿದು ಕೈ ಬೀಸಿ ನಡೆದ ಸಿದ್ದರಾಮಯ್ಯನವರ ಕೊನೆಯ ಸಮಾರಂಭ ಎಂಬುದು ಅವರಿಗೆ ತಿಳಿದಿದ್ದರಿಂದ ಈ ರೀತಿ ಕೈ ಮುಗಿದು ಹೋದರೆ.

ತುಮಕೂರಿಗೂ-ರಾಜಕೀಯಕ್ಕೂ ಏನೋ ಒಂದು ಕಾಕತಾಳೀಯ ಇದ್ದು, ಇಲ್ಲಿಂದ ರಾಜಕೀಯ ಅಡಿಗಲ್ಲು ಇಟ್ಟವರು ಅಧಿಕಾರದ ಗದ್ದುಗೆಯನ್ನು ಹಿಡಿದಿದ್ದಾರೆ, ಆದರೆ ಆ ಭಾಗ್ಯ ತುಮಕೂರು ಜಿಲ್ಲೆಯ ರಾಜಕಾರಣಿಗಳಿಗೆ ಲಭಿಸಿಲ್ಲ.

ಒಮ್ಮೆ ತುಮಕೂರು ರಾಜಕೀಯ ಮಣ್ಣಿನ ಹಿನ್ನೆಲೆಯನ್ನು ಅವಲೋಕಿಸುತ್ತಾ ಹೋದರೆ ರಾಷ್ಟç-ರಾಜ್ಯದ ರಾಜಕಾರಣಿಗಳಿಗೆ ರಾಜಕೀಯದ ಮರುಜನ್ಮ ನೀಡಿ ಅಧಿಕಾರದ ಗದ್ದುಗೆಯನ್ನು ನೀಡಿರುವುದು ಕಂಡು ಬರುತ್ತದೆ.

ಕೈ ಬೀಸಿ ನಡೆದ ಸಿದ್ದರಾಮಯ್ಯನವರ ಕೊನೆಯ ಸಮಾರಂಭ 

ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ಸಮಾಜವಾದಿ ಜನತಾ ಪಕ್ಷದಿಂದ ತುಮಕೂರು ಕ್ಷೇತ್ರದಿಂದ ಕುಣಿಗಲ್ ನ ವರ್ಣರಂಜಿತ ರಾಜಕಾರಣಿ, ಹೇಮಾವತಿ ಹರಿಕಾರ ವೈ.ಕೆ.ರಾಮಯ್ಯ ಅವರು ದೇವೆಗೌಡರ ವಿರುದ್ಧ ಸಿಡಿದು ಅಂದು ಸಮಾಜವಾದಿ ಜನತಾ ಪಕ್ಷದಿಂದ 1991ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದರು, ವೈ.ಕೆ.ರಾಮಯ್ಯನವರ ಪರವಾಗಿ ಸಮಾಜವಾದಿ ಜನತಾ ಪಕ್ಷದ ರಾಷ್ಟçಧಯಕ್ಷರಾಗಿದ್ದ ಚಂದ್ರಶೇಖರ್ ಅವರು ತುಮಕೂರಿನ ಗ್ರಂಥಾಲಯದ ಆವರಣದಲ್ಲಿ ಪ್ರಚಾರ ಭಾಷಣ ಮಾಡಿದ್ದರು, ಆಗಿನ ಲೋಕಸಭೆಯ ಚುನಾವಣೆಯಲ್ಲಿ ಸಮಾಜವಾದಿ ಜನತಾ ಪಾರ್ಟಿಯಿಂದ ಚಂದ್ರಶೇಖರ್ ಗೆದ್ದಿದ್ದ ಚಂದ್ರಶೇಖರ್ ಅವರು, ಮಂಡಲ್ ವರದಿ ಜಾರಿಗೆ ತಂದಿದ್ದರಿAದ ವಿ.ಪಿ.ಸಿಂಗ್ ಪ್ರಧಾನಿ ಹುದ್ದಗೆ ರಾಜೀನಾಮೆ ನೀಡಿದ್ದರಿಂದ ಚಂದ್ರಶೇಖರ್ ಪ್ರಧಾನಿಯಾದರು, ಆದರೆ ವೈ.ಕೆ.ರಾಮಯ್ಯ ಸೋತಿದ್ದರಿಂದ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗುವ ಯೋಗ ಕಳೆದುಕೊಂಡರು.

ಚAದ್ರಶೇಖರ್ ಅವರು 10 ನವೆಂಬರ್ 1990ರಿಂದ ಜೂನ್ 1991ರವರೆಗೆ ಭಾರತದ ಪ್ರಧಾನ ಮಂತ್ರಿಗಳಾಗಿದ್ದರು.

ಆ ನಂತರ ರಾಮಕೃಷ್ಣ-ಹೆಗಡೆ ಮತ್ತು ದೇವೇಗೌಡರು 1994ರಲ್ಲಿ ರಾಜ್ಯ ಚುನಾವಣೆ ನಡೆದಾಗ ಮೊದಲ ಚುನಾವಣಾ ರ‍್ಯಾಲಿಯನ್ನು ತುಮಕೂರಿನ ಟೌನ್ ಹಾಲ್ ಸರ್ಕಲ್‌ನಲ್ಲಿ ಬಾರಿ ಬಹಿರಂಗ ಸಭೆ ನಡೆಸುವ ಮೂಲಕ ಇಡೀ ರಾಜ್ಯದಲ್ಲಿ ಅಂದಿನ ರಾಜಕೀಯದಲ್ಲಿ ಒಂದು ಸಂಚಲನವನ್ನೇ ಮೂಡಿಸಿದ್ದರು. ತುಮಕೂರು ಜಿಲ್ಲೆಯಿಂದ ಜೆಡಿಎಸ್‌ನಿಂದ 9 ಶಾಸಕರು ಆಯ್ಕೆಯಾಗಿದ್ದರು. ಆಗ ರಾಜ್ಯದಲ್ಲಿ ಜನತಾ ಪಕ್ಷವು ಅಭೂತಪೂರ್ವ ಜಯಗಳಿಸಿ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾದರು.

;

1999ರಲ್ಲಿ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ತುಮಕೂರಿನ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಶಂಖನಾದ (ಪಾಂಚ್ಯಜನ್ಯ ಶಂಖ ಊದುವ ಮೂಲಕ) ಅಂದಿನ ವಿಧಾನಸಭಾ ಚುನಾವಣೆಯ ಮೊದಲ ಚುನಾವಣಾ ಪ್ರಚಾರ ಮತ್ತು ಸಮಾವೇಶವನ್ನು ಮಾಡಿ, ಕೆಪಿಸಿಸಿ ಅಧ್ಯಕ್ಷರಾಗಿಯೂ ನೇಮಕವಾಗಿ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದರು.

2006 ರಲ್ಲಿ ಸಿದ್ದರಾಮಯ್ಯನವರನ್ನು ಜಾತ್ಯತೀತ ಜನತಾದಳದಿಂದ ಉಚ್ಛಾಟನೆ ಮಾಡಿದಾಗ ತುಮಕೂರಿನಲ್ಲಿ 21 ಆಗಸ್ಟ್ 2006ರಂದು ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ಸುಮಾರು 3ಲಕ್ಷ ಜನರನ್ನು ಸೇರಿಸುವ ಮೂಲಕ ರಾಜ್ಯ-ರಾಷ್ಟçದ ನಾಯಕರ ಗಮನ ಸೆಳೆದಿದ್ದರು, ಈ ಹಿನ್ನೆಲೆಯನ್ನು ಗಮನಿಸಿದ್ದ ಗುಜರಾತಿನ ಅಂದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಹ್ಮದ್ ಪಟೇಲ್ ಅವರು ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಕಕ್ಕೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶದ ಮೂಲಕ ಸೇರ್ಪಡೆಗೊಳಿಸಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದರು.

ಆಗ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರನ್ನು ಕೆಳಗಿಳಿಸಲು ತುಂಬಾ ಲೆಕ್ಕಚಾರದೊಂದಿಗೆ ಪ್ಲಾನ್ ಮಾಡಿದ್ದ ಹೆಚ್.ಡಿ.ಕುಮಾರಸ್ವಾಮಿಯವರು ತುಮಕೂರಿನಲ್ಲಿ ಜೆಡಿಎಸ್‌ನ ಬೃಹತ್ ಸಮಾವೇಶ ಮಾಡಿದರು. ಅಂದು ಧರ್ಮಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಶಿರಾದ ಬಿ.ಎಸ್.ಸತ್ಯನಾರಾಯಣ ಅವರು ನನ್ನನ್ನು ಅಜ್ಞಾತ ಸ್ಥಳವೊಂದಕ್ಕೆ ಕರೆಸಿಕೊಂಡು ನಾಳೆ ತುಮಕೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದ ಬಗ್ಗೆ ಪತ್ರಿಕಾಗೋಷ್ಠಿಯನ್ನು ಕುಮಾರಸ್ವಾಮಿಯವರು ಮಾಡಲಿದ್ದು, ಇನ್ನೊಂದು ವಾರದಲ್ಲಿ ಯಡಿಯೂರಪ್ಪನವರ ಜೊತೆಗೂಡಿ ಮುಖ್ಯಮಂತ್ರಿಯಾಗಲಿದ್ದಾರೆ, ಇದು ನಿಜಾನಾ ಎಂದು ಪ್ರಶ್ನಿಸು ಎಂದು ನನಗೆ ಕಿವಿಯೂದಿದರು.

ಕುಮಾರಸ್ವಾಮಿಯವರು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನೀವು ಮುಂದಿನ ವಾರ ಮುಖ್ಯಮಂತ್ರಿಯಾಗಲಿದ್ದೀರಿ ಎಂಬ ವದಂತಿ ಇದೆಯಲ್ಲಾ ಎಂದು ನಾನು ಪ್ರಶ್ನಿಸಿದಾಗ ತಬ್ಬಿಬಾದ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯನ್ನೇ ಭರಕಾಸ್ತುಗೊಳಿಸಿ ನನ್ನನ್ನು ಕರೆದು ನನ್ನೊಬ್ಬ್ಬನನ್ನೇ ಕೂರಿಸಿಕೊಂಡು ಈ ಮಾಹಿತಿ ಎಲ್ಲಿಂದ ಬಂತು ಎಂದು ಒಂದು ಗಂಟೆಗೂ ಹೆಚ್ಚು ಕಾಲ ನನ್ನ ಪ್ರಶ್ನಿಸಿದರು, ನಿನ್ನ ನನ್ನ ಜೊತೆ ಇಟ್ಟುಕೊಳ್ಳುತ್ತೇನೆ, ಯಾರು ಮಾಹಿತಿ ಕೊಟ್ಟರು, ಎಲ್ಲಿಂದ ಸಿಕ್ಕಿತು ಹೇಳಿ ಎಂದು ಎಲ್ಲತರಹದ ಆಯಾಮಗಳಲ್ಲಿ ನನ್ನ ವಿಚಾರಣೆ ಮಾಡಿದರೂ, ನಾನು ಸುದ್ದಿಯ ಮೂಲ ಯಾವುದೇ ಕಾರಣಕ್ಕೂ ಹೇಳುವುದಿಲ್ಲ ಎಂದು ಪಟ್ಟು ಹಿಡಿದು ಒಬ್ಬ ಪತ್ರಕರ್ತನನ್ನು ಕೊಠಡಿಯಲ್ಲಿ ಕೂಡಿ ಹಾಕಲು ನಿಮಗೇನು ಅಧಿಕಾರವಿದೆ ಎಂದು ಪ್ರಶ್ನಿಸಿದಾಗ ಹೊರ ಕಳಿಸಿ, ಅವರ ಗನ್ ಮ್ಯಾನ್ ನಾನು ಎಲ್ಲಿಗೆ ಹೋಗುತ್ತೇನೆಂದು ಹಿಂಬಾಲಿಸುವAತೆ ಕಳಿಸಿದ್ದರು, ನಾನು ಸೊಗಡು ಪತ್ರಿಕಾ ಕಛೇರಿಗೆ ಹೋದಾಗ ಆ ಗನ್ ಮ್ಯಾನ್ ಕಾಣೆಯಾದ.

ತುಮಕೂರಿನಲ್ಲಿ ಜೆಡಿಎಸ್ ಸಮಾವೇಶ ನಡೆದ ಒಂದೇ ವಾರದಲ್ಲಿ ಕುಮಾರಸ್ವಾಮಿ ಬಿ.ಎಸ್.ಯಡಿಯೂರಪ್ಪನವರ ಬಿಜೆಪಿ ಸಖ್ಯಾ ಬೆಳಸಿ 20 ತಿಂಗಳು ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡದೆ ಚುನಾವಣೆಗೆ ಹೋಗಿ ಸೋಲನ್ನನುಭಿಸಿದರು.

ಮತ್ತೆ ಕುಮಾರಸ್ವಾಮಿಯವರು 2018ರಲ್ಲಿ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಗಳಿಸಿ ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂದು 2017ರ ಡಿಸೆಂಬರ್‌ನಲ್ಲಿ ಜೆಡಿಎಸ್ ಪಕ್ಷದಿಂದ ಬೃಹತ್ ಅಲ್ಪಸಂಖ್ಯಾತರ ಸಮಾವೇಶ ಮಾಡಿದರು. ಅಂದಿನ ಸಮಾವೇಶದಲ್ಲಿ ಹೆಚ್.ಡಿ.ದೇವೇಗೌಡರು ಮುಂದಿನ ಜನ್ಮವಿದ್ದರೆ ಮುಸಲ್ಮಾನನಾಗಿ ಹುಟ್ಟಲಿ ಎಂದು ಅವೇಶದ ಭಾಷಣ ಮಾಡಿದ್ದರು, ಅದೇನು ಕಾಕ ತಾಳಿಯೋ 2006ರಲ್ಲಿ ಅದೇ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಜೆಡಿಎಸ್ ಸಮಾವೇಶ ಮಾಡಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 2017ರಲ್ಲಿ ಅಲ್ಪಸಂಖ್ಯಾತರ ಜೆಡಿಎಸ್ ಸಮಾವೇಶ ಮಾಡಿ 40 ಶಾಸಕರನ್ನು ಗೆದ್ದಿದ್ದರಿಂದ ಕಾಂಗ್ರೆಸ್‌ಗೆ ಬಹುಮತ ಸಿಗದ ಕಾರಣ ದೇವೇಗೌಡರ ಕುಟುಂಬಕ್ಕೆ ಬದ್ಧ ವೈರಿಯಾಗಿ ಕಾಣಿಸುತ್ತಿದ್ದ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕುಮಾರಸ್ವಾಮಿಯವರನ್ನು ಕರೆ ತಂದು ಮುಖ್ಯಮಂತ್ರಿ ಮಾಡಿದರು, ಆದರೆ ಬಿಜೆಪಿಯ ಆಪರೇಷನ್ ಕಮಲದಿಂದ 10 ತಿಂಗಳಲ್ಲಿ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು.

2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಎದುರು ಸೋತು ಸುಣ್ಣವಾಗಿದ್ದ ವಿ.ಸೋಮಣ್ಣ ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ತುಮಕೂರು ಲೋಕಸಭಾ ಚುನಾವಣೆಗೆ ನಿಂತು ತುಮಕೂರನ್ನು ವಾರಣಾಸಿ ಮಾಡುವುದಾಗಿ ಹೇಳಿದರು, ಅದೇನು ಅದೃಷ್ಠವೂ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದು ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿರಾಗಿಯೂ ಮೋದಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂತಹ ಅಧಿಕಾರ ನೀಡುವ ಕಲ್ಪವೃಕ್ಷ ಮಣ್ಣಿನ ಗುಣವಿರುವ ತುಮಕೂರು ಜಿಲ್ಲೆಯ ನಾಯಕರಿಗೆ ಮಾತ್ರ ಅಧಿಕಾರದ ಗದ್ದುಗೆ ಲಭಿಸಿಲ್ಲ, ಜಿಲ್ಲೆಯ ಗಟಾನುಗಟಿ ರಾಜಕಾರಣಿಗಳಾದ ಹುಚ್ಚುಮಾಸ್ತೇಗೌಡ, ವೈ.ಕೆ.ರಾಮಯ್ಯ, ಟಿ.ಬಿ.ಜಯಚಂದ್ರ, ಜಿ.ಎಸ್.ಬಸವರಾಜು ಅವರುಗಳಿಗೆ ಮುಖ್ಯಮಂತ್ರಿಯಾಗುವ ಯೋಗ್ಯತೆ ಇದ್ದರೂ ಯೋಗ ಬರಲಿಲ್ಲ.

2006ಲ್ಲಿ ತುಮಕೂರಿನಲ್ಲಿ ಅಹಿಂದ ಸಮಾವೇಶದಿಂದ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕರಾಗಿ 2ಬಾರಿ ವಿರೋಧ ಪಕ್ಷದ ನಾಯಕರಾಗಿ, ಎರಡು ಬಾರಿ ಮುಖ್ಯಮಂತ್ರಿಯಾಗಿ 2933ದಿನ ಮುಖ್ಯಮಂತ್ರಿಯಾಗಿ ದೇವರಾಜು ಅರಸ್ಸು ಅವರ ದಾಖಲೆ ಮುರಿದು , 17 ಬಾರಿ ಹಣಕಾಸು ಮಂತ್ರಿಯಾಗಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ ರಾಜ್ಯದ ಸಮಾಜವಾದಿ, ಸಮ ಸಮಾಜದ ಕನಸ್ಸು ಕಂಡಿದ್ದ, ಮೌಢ್ಯಕ್ಕೆಂದೂ ಆಧ್ಯತೆ ನೀಡದ ಅವರೇ ಹೇಳಿದಂತೆ ಸಂವಿಧಾನವೇ ನನ್ನ ಧರ್ಮ, ಮತದಾರರೇ ನನ್ನ ಅಭಿಮಾನಿ ದೇವರುಗಳು, ನಾನು ಒಂದು ಸಿದ್ಧಾಂತಕ್ಕೆ ಒಳಪಟ್ಟು ಬಡ ಜನರ ಪರವಾಗಿ ಕೆಲಸ ನಿರ್ವಹಿಸಿ ವಿನಮ್ರವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆಯುತ್ತಿದ್ದೇನೆ ಎಂದು ಭಾವುಕರಾಗಿ ಹೇಳಿದ್ದು ಬಹುಕಾಲ ಈ ರಾಜ್ಯದ ಜನರನ್ನು ಕಾಡಲಿದೆ.

ತುಮಕೂರಿನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಅಧಿಕಾರ ಹಿಡಿದಿದ್ದ ಸಿದ್ದರಾಮಯ್ಯ ಕಳೆದ ವಾರ ಅಂದರೆ ಮೇ 19ರ ಮಂಗಳವಾರ ತುಮಕೂರಿನಲ್ಲಿ ಎರಡನೇ ಅವಧಿಯಲ್ಲಿ 3 ವರ್ಷ ತುಂಬಿದ್ದರಿAದ ತುಮಕೂರಿನಲ್ಲಿ 3ನೇ ವರ್ಷದ ಸಾಧನೆಯ ಸಮರ್ಪಣಾ ಸಮಾವೇಶವನ್ನು ಸುಮಾರು 3ಲಕ್ಷ ಜನರನ್ನು ಕರೆಸಿ ಬೃಹತ್ ಪೆಂಡಾಲಿನಲ್ಲಿ ಸಿದ್ದರಾಮಯ್ಯ ತುಂಬಾ ಉರುಪಿನಿಂದ ಭಾಷಣ ಮಾಡಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ವರ್ಣಿಸಿದ್ದರು.

ಇದಾದ ಒಂದೇ ವಾರಕ್ಕೆ ಅಂದರೆ ಮೇ26ರಂದು ಸಂಪುಟ ಪುನಾರಚನೆಗೆ ಪಟ್ಟಿ ಹಿಡಿದು ದೆಹಲಿಗೆ ಹೋಗಿದ್ದ ಸಿದ್ದರಾಂಯ್ಯನವರಿಗೆ ರಾಹುಲ್ ಗಾಂಧಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ತಾಕೀತು ಮಾಡಿ ಕಳಿಸಿದ್ದರು.

ದೆಹಲಿಯಿಂದ ಬಂದ ಸಿದ್ದರಾಂಯ್ಯ ಮೌನಕ್ಕೆ ಜಾರಿ, ಮೇ 28ರ ಗುರುವಾರದ ಬಕ್ರೀದ್ ಹಬ್ಬದಂದೇ ರಾಜೀನಾಮೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಿದರು.

ಕಾಕತಾಳಿಯವೆಂದರೆ ತುಮಕೂರಿನಿಂದ 2006ಲ್ಲಿ ಅಹಿಂದ ಸಮಾವೇಶ ಮಾಡಿ ರಾಜಕೀಯ ಭಿವಿಷ್ಯದ ಎರಡನೇ ಅವಧಿಯನ್ನು ಯಾವ ವೇದಿಕೆಯ ಸ್ಥಳದಿಂದ ಸಿದ್ದರಾಮಯ್ಯ, 20 ವರ್ಷಗಳ ನಂತರ ಮುಖ್ಯಮಂತ್ರಿಯಾಗಿ ಸಾಧನೆಯ ಸಮಾವೇಶವನ್ನು ಅದೇ ತುಮಕೂರಿನ ಜೂನಿಯಾರ್ ಕಾಲೇಜಿನ ಅದೇ ಸ್ಥಳದ ವೇದಿಕೆಯಿಂದ ತಮ್ಮ ಮುಖ್ಯಮಂತ್ರಿಯ ಕೊನೆಯ ಭಾಷಣ ಮಾಡಿ ನಿರ್ಗಮಿಸಿದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಸುಧೀರ್ಘ ರಾಜಕೀಯ ಅಧಿಕಾರವನ್ನು ಅಂತ್ಯಗೊಳಿಸಿದರು.

ಈಗ ಯಾವ ತುಮಕೂರಿನಿಂದ ತಮ್ಮ ರಾಜಕೀಯ ಸಖ್ಯಾ ಆರಂಭಿಸಿದ್ದರೋ ಅದೇ ನೆಲದಿಂದ ರಾಜಕೀಯ ಅಧಿಕಾರದ ಅಂತ್ಯವೂ ಆಗಿರುವುದು ಅಚ್ಚರಿಯನ್ನು ತಂದಿದೆ.

ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 3ನೇ ವರ್ಷದ ಸಾಧನೆಯ ಸಮಾವೇಶದಲ್ಲಿ ಮುಖ್ಯಮಂತ್ರಿಯಾಗಿ ಕೊನೆಯದಾಗಿ ಭಾವುಕತೆಯಿಂದ ಜನಸ್ತೋಮದತ್ತ ನಿಮ್ಮ ಋಣ ತೀರಿಸಲಾಗದೆಂದು ಕೈ ಮುಗಿದು ಕೃತಜ್ಞತೆಯಿಂದ ನಿರ್ಗಮಿಸಿದರೆ ಸಿದ್ದರಾಮಯ್ಯ ಎಂದು ಈಗ ಅನ್ನಿಸುತ್ತಾ ಇದೆ.

ಇನ್ನೊAದು ವಿಶೇಷವೆಂದರೆ ಇದೇ ವೇದಿಕೆಯಲ್ಲಿ ಸರ್ಕಾರದ ಸಾಧನೆಯನ್ನು ವರ್ಣಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಯೋಗ ಕೂಡಿ ಬಂದಿದ್ದರೆ, ಮುಖ್ಯಮಂತ್ರಿಯಾಗಬೇಕೆAದು ತುಂಬಾ ಆಶಾಭಾವದಿಂದ ಟೊಂಕ ಕಟ್ಟಿ 3ವರ್ಷದ ಸರ್ಕಾರದ ಸಾಧನೆಯ ಸಂಭ್ರಮ ಸಮಾವೇಶ ಮಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಯೋಗ್ಯತೆಯಿದ್ದರೂ ಯೋಗ ಕೂಡಿ ಬರದ ಕಾರಣ ಈ ಬಾರಿಯೂ ಮುಖ್ಯಮಂತ್ರಿ ಸ್ಥಾನ ಧಕ್ಕುವುದಿಲ್ಲ ಎನ್ನಲಾಗಿದೆ, ಇದಕ್ಕೆ ತುಮಕೂರಿನ ಕಲ್ಪತರು ನಾಡಿನ ರಾಜಕಾರಿಗಳು ಒಬ್ಬನೊಬ್ಬರು ಕಾಲೆಳೆಯುವ, ಸಹಿಷ್ಣತೆ, ಬೆಳಸುವ ಗುಣ ಇರದಿರುವುದು, ಒಬ್ಬರನೊಬ್ಬರನ್ನು ತೆರೆಮರೆಯಲ್ಲೇ ರಾಜಕೀಯ ಪಟ್ಟುಗಳ ಮೂಲಕ ಮುಗಿಸುವ ತಂತ್ರಗಾರಿಕೆಯಿAದ ಮುಖ್ಯಮಂತ್ರಿಯಾಗುವ ಯೋಗ ತುಮಕೂರು ಜಿಲ್ಲೆಯ ಹಲವರಿಗಿದ್ದರೂ ಅದು ಸಾಧಯವಾಗುತ್ತಿಲ್ಲ, ಯಾವಾಗಲೂ ತುಮಕೂರು ಜಿಲ್ಲೆಯಲ್ಲಿ ಉತ್ತರ-ದಕ್ಷಣ ರಾಜಕೀಯದಿಂದ ಯಾವ ದೃವವೂ ಸೇರದಂತೆ, ರಾಜಕೀಯದಲ್ಲೂ ಒಬ್ಬರನೊಬ್ಬರು ರಾಜಕೀಯವಾಗಿ ಸೇರದಂತೆ ದೂರದ ದೃವಗಳಾಗಿಯೇ ಉಳಿದು ಮುಖ್ಯಮಂತ್ರಿಯಾಗುವ ಯೋಗ ಬಂದಿಲ್ಲ ಎನ್ನಲಾಗುತ್ತಿದ್ದೆ.

ಕಲ್ಪತರು ಮಣ್ಣು ತುಮಕೂರು ಜಿಲ್ಲೆಯ ಯಾವ ರಾಜಕಾರಣಿಯಾದರೂ ಸರಿ ಒಮ್ಮೆ ಮುಖ್ಯಮಂತ್ರಿಯಾಗುವ ಯೋಗ ನೀಡಲಿಯೆಂಬುದು ನಮ್ಮ ಪತ್ರಿಕೆಯ ಆಶಯವಾಗಿದೆ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *