ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ

ತುಮಕೂರು:ರಾಜ್ಯದಕಾಂಗ್ರೆಸ್ ಸರ್ಕಾರದಜನ ವಿರೋಧಿ ಆಡಳಿತ ಖಂಡಿಸಿ ಜಿಲ್ಲಾಜೆಡಿಎಸ್‍ಗುರುವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಜಿಲ್ಲಾಜೆಡಿಎಸ್‍ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯತ್ರೆಯಲ್ಲಿ ಆಗಮಿಸಿದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಯಾವುದೇಅಭಿವೃದ್ಧಿಕೆಲಸ ಮಾಡದಕಾಂಗ್ರೆಸ್ ಸರ್ಕಾರ, ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಮಾಡಿಜನಸಾಮಾನ್ಯರಿಗೆ ಹೊರೆ ಹೇರಿದೆ.ಚುನಾವಣೆ ವೇಳೆ ಘೋಷಿಸಿದ ಐದುಗ್ಯಾರಂಟಿ ಯೋಜನೆಗಳು ಚುನಾವಣೆಗೆಲ್ಲುವ ಅಸ್ತ್ರ ಮಾಡಿಕೊಂಡಿದೆ.ಗ್ಯಾರಂಟಿ ಯೋಜನೆಗಳಿಗಾಗಿ ಎಸ್.ಸಿ, ಎಸ್.ಟಿ. ಸಮುದಾಯದಅಭಿವೃದ್ಧಿಗೆ ಬಳಸಬೇಕಾದ ಹಣ ಬಳಸಿಕೊಂಡು ಆ ಸಮುದಾಯಗಳಿಗೆ ಅನ್ಯಾಯ ಮಾಡಿದೆ.ಪ್ರತಿ ತಿಂಗಳು ನೀಡಬೇಕಾದ ಗ್ಯಾರಂಟಿ ಯೋಜನೆ ಹಣವನ್ನು ಚುನಾವಣೆ ಸಂದರ್ಭದಲ್ಲಿ ಕೊಟ್ಟುಕಾಂಗ್ರೆಸ್ ನಾಯಕರುಅಧಿಕಾರ ಹಿಡಿಯುವ ಹುನ್ನಾರ ಮಾಡಿಕೊಂಡು ಬರುತ್ತಿದ್ದಾರೆ.ಶಕ್ತಿ ಯೋಜನೆಯಲ್ಲಿ ಹೆಣ್ಣು ಮಕ್ಕಳಿಗೆ ಬಸ್ ಪ್ರಯಾಣಉಚಿತಎಂದು ಘೋಷಿಸಿ, ಮತ್ತೊಂದೆಡೆ ಬಸ್ ಪ್ರಯಾಣದರ ಹೆಚ್ಚು ಮಾಡಿಗಂಡಸರನ್ನು ಸುಲಿಗೆ ಮಾಡುತ್ತಿದ್ದಾರೆಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷಅಧಿಕಾರಕ್ಕೆ ಬಂದಾಗಿನಿಂದಅಭಿವೃದ್ಧಿ ಕೆಲಸ, ಜನಪರ ಕಾರ್ಯಗಳನ್ನು ಮರೆತುಅಧಿಕಾರ, ಭ್ರಷ್ಟಾಚಾರಕ್ಕೆಒತ್ತುಕೊಟ್ಟಿದೆ.ರಾಜ್ಯದಲ್ಲಿ ಶಾಂತಿಸುವ್ಯವಸ್ಥೆ ಹಾಳಾಗಿದೆ. ಪೊಲೀಸರ ಮೇಲೆಯೇ ದಾಳಿ ಮಾಡುವ ಪ್ರಕರಣಗಳೂ ನಡೆಯುತ್ತಿವೆ. ಜನಸಾಮಾನ್ಯರಿಗೆರಕ್ಷಣೆಇಲ್ಲದಂತಾಗಿದೆ.ಇಂತಹಕೆಟ್ಟ ಸರ್ಕಾರತೊಲಗಬೇಕು.ರಾಜ್ಯಪಾಲರು ಸರ್ಕಾರಕ್ಕೆ ಚಾಟಿ ಬೀಸಿ ಸರಿಯಾದ ದಿಕ್ಕಿನಲ್ಲಿ ನಡೆಯಲುಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ರಾಜ್ಯಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ ರಾಜ್ಯಾದ್ಯಂತಜೆಡಿಎಸ್ ಹೋರಾಟ ಮಾಡುತ್ತಿದೆ.ಚುನಾವಣೆಗೆಲ್ಲಲುಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‍ನವರುಇದರ ಹೊರತಾಗಿಯಾವುದೇಜನಪರ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಕೊಟ್ಟ ಮಾತಿನಂತೆ ಪ್ರತಿ ತಿಂಗಳು ಗ್ಯಾರಂಟಿ ಯೋಜನೆಗಳ ಹಣವನ್ನು ಫಲಾನುಭವಿಗಳಿಗೆ ತಲುಪಿಸುತ್ತಿಲ್ಲ, ಸಂಪೂರ್ಣ ವಿಫಲವಾಗಿರುವ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಕಾಂಗ್ರೆಸ್‍ನವರು ಜನರ ಕಣ್ಣಿಗೆ ಮಂಕುಬೂದಿ ಎರೆಚುತ್ತಿದ್ದಾರೆಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ.ಇದೂವರೆಗೂಬಜೆಟ್‍ನಲ್ಲಿ ಘೋಷಿಸಿದ ಕಾರ್ಯಕ್ರಮಗಳು ಕಾಗದದಲ್ಲೇ ಉಳಿದಿವೆ ಹೊರತು ಅನುಷ್ಟಾನಕ್ಕೆ ಬಂದಿಲ್ಲ. ಇದುಕಾಂಗ್ರೆಸ್ ಆಡಳಿತದ ವೈಖರಿ.ಸರ್ಕಾರದ ದುರಾಡಳಿತದ ವಿರುದ್ಧಜನಬೇಸತ್ತು ಶಾಪ ಹಾಕುತ್ತಿದ್ದಾರೆ.ಮುಂಬರುವ ಚುನಾವಣೆಗಳಲ್ಲಿ ಜನಕಾಂಗ್ರೆಸ್‍ಗೆತಕ್ಕ ಪಾಠ ಕಲಿಸುತ್ತಾರೆಎಂದರು.

ಜಿಲ್ಲಾಜೆಡಿಎಸ್‍ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, ಪದಾರ್ಥಗಳ ಬೆಲೆ ಏರಿಕೆ, ಬಸ್ ಪ್ರಯಾಣದರ, ವಿದ್ಯುತ್‍ದರಏರಿಕೆ ಮಾಡಿರುವಕಾಂಗ್ರೆಸ್ ಸರ್ಕಾರದಿಂದರಾಜ್ಯದಜನರುಉತ್ತಮ ಆಡಳಿತವನ್ನು ನಿರೀಕ್ಷೆ ಮಾಡುವಂತಿಲ್ಲ, ಎಲ್ಲಾ ರಂಗಗಳಲ್ಲೂ ವಿಫಲವಾಗಿರುವ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿಗಳ ಆಡಳಿತ ಜಾರಿ ಮಾಡಬೇಕುಎಂದು ಮನವಿ ಮಾಡಿದರು.

ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್, ಜೆಡಿಎಸ್‍ರಾಜ್ಯ ಎಸ್ಟಿ ಮೋರ್ಚಾಉಪಾಧ್ಯಕ್ಷ ಸೋಲಾರ್‍ಕೃಷ್ಣಮೂರ್ತಿ, ಮುಂಡರಾದತಿಮ್ಮಾರೆಡ್ಡಿ, ಹೆಚ್.ಡಿ.ಕೆ.ಮಂಜುನಾಥ್, ಧರಣೇಂದ್ರಕುಮಾರ್,ಯೋಗಾನಂದಕುಮಾರ್,ಟಿ.ಎಲ್.ಕುಂಭಯ್ಯ, ಮುದಿಮಡುರಂಗಶಾಮಯ್ಯ, ಶ್ರೀನಿವಾಸಪ್ರಸಾದ್, ಟಿ.ಹೆಚ್.ಜಯರಾಮ್, ಗಂಗಣ್ಣ, ಪಾವಗಡ ಶ್ರೀರಾಮ್, ಗೋವಿಂದರಾಜು, ಗಣೇಶ್, ಕುಸುಮಾಜಗನ್ನಾಥ್, ತಾಹೇರಾಕುಲ್ಸಂ, ಲೀಲಾವತಿ, ಕೊರಟಗೆರೆಕಾಮರಾಜು, ದೊಡೇರಿ ಬಸವರಾಜು, ಉಪ್ಪಾರಹಳ್ಳಿ ಕುಮಾರ್, ಮಧುಗೌಡ, ನಾಗೇಶ್ ಸೇರಿದಂತೆ ವಿವಿಧ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಶ್ರದ್ಧಾಂಜಲಿ ಸಭೆ
ಇದಕ್ಕೂ ಮೊದಲುಇತ್ತೀಚೆಗೆ ನಿಧನರಾದಜೆಡಿಎಸ್‍ನ ಹಿರಿಯ ಮುಖಂಡಎಂ.ಎನ್.ಚೆಲುವರಾಜುಅವರಿಗೆಜಿಲ್ಲಾಜೆಡಿಎಸ್‍ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಜಿಲ್ಲಾಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಹಲವಾರು ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದ ಚೆಲುವರಾಜುಅವರ ನಿಧನದು:ಖತಂದಿದೆ, ಪಕ್ಷಕ್ಕೆಅಪಾರ ನಷ್ಟವಾಗಿದೆ. ಕಾರ್ಮಿಕಘಟಕ, ಪ್ರಚಾರ ಸಮಿತಿಯಲ್ಲಿ ಪ್ರಮುಖ ಸ್ಥಾನ ಹೊಂದಿ ಪಕ್ಷದ ಬೆಳವಣಿಗೆಗೆ ದುಡಿದಿದ್ದಚೆಲುವರಾಜು ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದರುಎಂದು ಹೇಳಿದರು.
ವಿವಿಧ ಮುಖಂಡರುಚೆಲುವರಾಜು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *