ತುಮುಲ್ ಅಧ್ಯಕ್ಷ ಚುನಾವಣೆ : ಜಾಲತಾಣದಲ್ಲಿ ಕೆ.ಎನ್.ರಾಜಣ್ಣ ತೇಜೋವಧೆ -ಅಹಿಂದದಿಂದ ಖಂಡನೆ

ತುಮಕೂರು : ತುಮಕೂರುಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆ ನಂತರಗುಬ್ಬಿ ಶಾಸಕರ ಬೆಂಬಲಿಗರು ಸಹಕಾರ ಸಚಿವಕೆ.ಎನ್.ರಾಜಣ್ಣ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಪೋಸ್ಟ್‍ಗಳನ್ನು ಹಾಕುತ್ತಿರುವುದು, ಅವಮಾನಕಾರಿ ಹೇಳಿಕೆ ನೀಡುತ್ತಿರುವುದನ್ನು ಅಹಿಂದ ವರ್ಗಗಳ ಮುಖಂಡರು ತೀವ್ರವಾಗಿ ಖಂಡಿಸಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸಮಾಜಗಳ ಮುಖಂಡರು, ಗುಬ್ಬಿ ಶಾಸಕರ ಬೆಂಬಲಿರುತೇಜೋವಧೆ ಮಾಡುವಚಟುವಟಿಕೆಯನ್ನುಇಲ್ಲಿಗೇ ನಿಲ್ಲಿಸಬೇಕುಎಂದು ಒತ್ತಾಯಿಸಿದರು.

ಬಲಿಜ ಸಮಾಜದ ಮುಖಂಡ ಆಡಿಟರ್‍ಟಿ.ಆರ್.ಆಂಜನಪ್ಪ ಮಾತನಾಡಿ, ನಮ್ಮ ಸಮಾಜಕ್ಕೆಕೆ.ಎನ್.ರಾಜಣ್ಣನವರು ಹೆಚ್ಚು ಸಹಾಯ ಮಾಡಿದ್ದಾರೆ.ಅವರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿ, ಅವಮಾನ ಮಾಡುವುದನ್ನು ನಿಲ್ಲಿಸಬೇಕು.ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದುಅಸಮಾಧಾನ ವ್ಯಕ್ತಪಡಿಸಿದರು.

1996ರಿಂದ ಹಿಂದುಳಿದ ವರ್ಗಗಗಳು, ದಲಿತರರಿಗೆಯಾವುದೇರೀತಿಯ ಘಾಸಿಯಾಗುವಂತಹ ಪ್ರಕರಣ ನಡೆದಾಗ ಹಿಂದುಳಿದ ವರ್ಗಗಳ ಒಕ್ಕೂಟಅವರಬೆಂಬಲಕ್ಕೆ ನಿಂತುಧ್ವನಿ ಮಾಡಿದೆ.ಹಿಂದುಳಿದ ವರ್ಗಗಳ ಅಂಗಗಳಾದ ಯಾವುದೇ ಸಣ್ಣಪುಟ್ಟಜಾತಿಗೆಅನ್ಯಾಯವಾದಾಗಒಕ್ಕೂಟಅವರ ಪರವಾಗಿಹೋರಾಟ ಮಾಡಿಕೊಂಡು ಬಂದಿದೆ.ನಾವು ಒಟ್ಟಾಗಿದ್ದೇವೆ ಎಂಬ ಸಂದೇಶ ನೀಡುತ್ತೇವೆಎಂದರು.

ತುಮಕೂರು ಹಾಲು ಒಕ್ಕೂಟದಅಧ್ಯಕ್ಷಚುನಾವಣೆ ವಿಚಾರವಾಗಿಜಿಲ್ಲಾ ಮಂತ್ರಿಡಾ.ಪರಮೇಶ್ವರ್, ಸಹಕಾರ ಮಂತ್ರಿಕೆ.ಎನ್.ರಾಜಣ್ಣಅವರು ಸಂಬಂಧಿಸಿದ ಎಲ್ಲರಅಭಿಪ್ರಾಯ ಪಡೆದುಅದರಂತೆ ನಿರ್ಧಾರಕೈಗೊಂಡಿದ್ದಾರೆ. ಈಗ ಒಬ್ಬರುಒಕ್ಕೂಟದಅಧ್ಯಕ್ಷರಾಗಿದ್ದಾರೆ.ಮುಂದೆ ಮತ್ತೊಬ್ಬರುಆಗುತ್ತಾರೆ.ಅವಕಾಶ ಬರುವವರೆಗೆಕಾಯಬೇಕಾಗುತ್ತದೆ.ಆದರೆಇದೇ ನೆಪ ಮಾಡಿಕೊಂಡು ಸಚಿವಕೆ.ಎನ್.ರಾಜಣ್ಣಅವರನ್ನುತೇಜೋವಧೆ ಮಾಡುವುದನ್ನು ಸಹಿಸಲಾಗುವುದಿಲ್ಲ. ಗುಬ್ಬಿ ಶಾಸಕರ ಬೆಂಬಲಿಗರುಇನ್ನುಮೇಲಾದರೂಕೆ.ಎನ್.ಆರ್ ವಿರುದ್ಧ ಸಾಮಾಜಿಕಜಾಲತಾಣದಲ್ಲಿ ಅವಹೇಳನಾಕಾರಿ ಪ್ರತಿಕ್ರಿಯೆ ನೀಡುವುದನ್ನುನಿಲ್ಲಿಸಲಿ ಎಂದುಟಿ.ಆರ್.ಆಂಜನಪ್ಪ ಹೇಳಿದರು.

ನೇಕಾರ ಸಮಾಜದ ಮುಖಂಡಧನಿಯಾಕುಮಾರ್ ಮಾತನಾಡಿ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಬೆಂಬಲಿಗರು ಸಚಿವರಾದಕೆ.ಎನ್.ರಾಜಣ್ಣಹಾಗೂ ಡಾ.ಜಿ.ಪರಮೇಶ್ವರ್‍ಅವರನ್ನುತೇಜೋವಧೆ ಮಾಡುವುದನ್ನು ಬಿಡಬೇಕು. ಈ ಎಲ್ಲಾ ನಾಯಕರುಒಂದೇ ಪಕ್ಷದವರಾಗಿದ್ದು, ಒಟ್ಟಾಗಿ ಹೋಗಬೇಕು.ಆಗ ಜಿಲ್ಲೆಯಅಭಿವೃದ್ಧಿಗೆ ಸಹಕಾರಿಯಾಗುತ್ತದೆ.ಸಚಿವರಾಜಣ್ಣನವರುಒಂದುಜಾತಿಗೆ ಸೀಮಿತವಾದ ನಾಯಕರಲ್ಲ, ಎಲ್ಲಾಜಾತಿಯವರ ಪರವಾಗಿದ್ದಾರೆ.ಡಿಸಿಸಿ ಬ್ಯಾಂಕಿನಲ್ಲಿಎಲ್ಲಾಜಾತಿಯವರಿಗೂಉದ್ಯೋಗದೊರೆಕಿಸಲು ನೆರವಾಗಿದ್ದಾರೆಎಂದರು.

ಡಿಎಸ್‍ಎಸ್ ಮುಖಂಡಕೊಟ್ಟ ಶಂಕರ್ ಮಾತನಾಡಿ, ಗುಬ್ಬಿ ಶಾಸಕರ ಹಿಂಬಾಲಕರು ಸಚಿವಕೆ.ಎನ್.ರಾಜಣ್ಣಅವರ ವಿರುದ್ಧ ಸಾಮಾಜಿಕಜಾಲತಾಣದಲ್ಲಿಕಿಡಿ ಹಚ್ಚುತ್ತಿರುವುದಕ್ಕೆ ನಾವು ಪ್ರತಿಕ್ರಿಯೆ ನೀಡಿ ಮತ್ತೊಂದುಕಿಡಿ ಹಚ್ಚುವ ಕೆಲಸ ಮಾಡುವುದಿಲ್ಲ. ಕೆ.ಎನ್.ಆರ್. ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಬಾರದುಎಂದುಗುಬ್ಬಿ ಶಾಸಕರುತಮ್ಮ ಬೆಂಬಲಿಗರಿಗೆ ಮನವರಿಕೆ ಮಾಡಿಕೊಡಬೇಕುಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಯಾವ ರೀತಿಯೋ ಜಿಲ್ಲೆಗೆ ಕೆ.ಎನ್.ರಾಜಣ್ಣನವರು ಅದೇ ರೀತಿ. ಸಣ್ಣಪುಟ್ಟ ಜಾತಿಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರು ಸಾಮಾಜಿಕವಾಗಿ ಮೇಲೆ ಬರಲು ನೆರವಾಗುತ್ತಿದ್ದಾರೆ.ಅವರ ಬಗ್ಗೆ ವೈಯಕ್ತಿಕ ನಿಂದನೆ ಮಾಡುವುದನ್ನು ಸಹಿಸಿಕೊಳ್ಳಲಾಗದು.ಗುಬ್ಬಿ ಶಾಸಕರ ಬೆಂಬಲಿಗರು ತಮ್ಮ ವರ್ತನೆಯನ್ನು ಇಲ್ಲಿಗೇ ನಿಲ್ಲಿಸಬೇಕು ಎಂದರು.

ವಾಲ್ಮೀಕಿ ಸಮಾಜದ ಮುಖಂಡಸಿಂಗದಹಳ್ಳಿ ರಾಜ್‍ಕುಮಾರ್ ಮಾತನಾಡಿ,ಕೆ.ಎನ್.ರಾಜಣ್ಣನವರುತಮ್ಮ 50 ವರ್ಷಗಳ ರಾಜಕಾರಣದಲ್ಲಿಎಲ್ಲಾ ವರ್ಗದ ಬಡವರ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸಹಕಾರಿ ಕ್ಷೇತ್ರದ ಧುರೀಣರಾದ ಇವರ ತೇಜೋವಧೆಯನ್ನು ಸಹಿಸಲಾಗುವುದಿಲ್ಲ. ಗುಬ್ಬಿ ಶಾಸಕರ ಬೆಂಬಲಿಗರು ಸಚಿವರಾದ ಕೆ.ಎನ್.ರಾಜಣ್ಣ, ಡಾ.ಪರಮೇಶ್ವರ್ ಅವರನ್ನು ಅವಮಾನ ಮಾಡುತ್ತಿದ್ದಾರೆಂದರೆ ಅದು ಹಿಂದುಳಿದ ವರ್ಗದವರು, ದಲಿತರನ್ನು ಅವಮಾನ ಮಾಡಿದಂತೆ ಎಂದು ಭಾವಿಸಬೇಕಾಗುತ್ತದೆ ಎಂದರು.

ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಪಕ್ಷಾಂತರ ಮಾಡುವಾಗ ಮೊದಲಿಗೆ ಕೆ.ಎನ್.ರಾಜಣ್ಣನವರ ಮನೆಯಲ್ಲೇ ನಿರ್ಧಾರ ಮಾಡಿದರು, ಅವರು ಕೆ.ಎನ್.ರಾಜಣ್ಣನವರ ಬೆಂಬಲದಿಂದಲೇ ಗುಬ್ಬಿ ಕ್ಷೇತ್ರದಲ್ಲಿ ಚುನಾವಣೆ ಗೆದ್ದರು. ಈಗ ಅವರ ಬೆಂಬಲಿಗರು ಕೆ.ಎನ್.ರಾಜಣ್ಣನವರ ತೇಜೋವಧೆ ಮಾಡುತ್ತಿರುವುದು ಖಂಡನೀಯ, ಈ ಚಟುವಟಿಕೆ ಮುಂದುವರೆಸಿದರೆ ಅದುಅವರಿಗೇ ಮಾರಕವಾಗುತ್ತದೆ. ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

ವಿವಿಧ ಸಮಾಜಗಳ ಮುಖಂಡರಾದ ಗಂಗಣ್ಣ, ಎಂ.ನಾಗರಾಜು, ಪಿ.ಮೂರ್ತಿ, ಮಂಜೇಶ್ ಒಲಿಂಪಿಕ್, ಶಾಂತಕುಮಾರ್, ನಾಗಮ್ಮ, ಡಮರುಗೇಶ್, ಮಲ್ಲಸಂದ್ರ ಶಿವಣ್ಣ, ಗುರುರಾಘವೇಂದ್ರ, ಎಂ.ಡಿ.ಸತೀಶ್, ಚಂದ್ರಕಲಾ, ರಾಘವೇಂದ್ರಸ್ವಾಮಿ, ನಟೇಶ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *