ಪಠ್ಯದೊಂದಿಗೆ ಸಂಸ್ಖೃತಿಯ ಸಮ್ಮೀಳಿತವಾಗಲಿ : ಡಾ.ರವಿ ಪ್ರಕಾಶ್

ತುಮಕೂರು: ಪಠ್ಯದ ಜೊತೆಗೆ ಸಂಸ್ಕøತಿಯ ಸಮ್ಮಿಳಿತವಾದಗಲೇ ವಿದ್ಯಾರ್ಥಿಗಳ ಅಧ್ಯಯನ ಪರಿಪೂರ್ಣವಾಗುವುದು ಎಂದು ಎಸ್‍ಎಸ್‍ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ್ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಲೆ ಮತ್ತು ಸಂಸೃತಿಯ ಪ್ರತೀಕವಾದ ಕಲೋತ್ಸವ-2023 ಅಂತರ್ ಕಾಲೇಜು ಸ್ಪರ್ಧೆಗಳಿಗೆ ಜ್ಯೋತಿ ಬೆಳಗುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.

ನಂತರ ಮಾತನಾಡಿದ ಅವರು, ಕಾಲೇಜು ಪಾಠಗಳ ಜೊತೆಗೆ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಿ ಅವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷವೂ ಕಲೋತ್ಸವ ಕಾರ್ಯಕ್ರಮ ಆಯೋಜಿಸಲಾಗುತಿತ್ತು, ಈ ವರ್ಷ ಬಹಳಷ್ಟು ಸದಾಭಿರುಚಿಯ ಕಲೆಗಳ ಸಮ್ಮಿಲನದೊಂದಿಗೆ ರೂಪುಗೊಳ್ಳುವ ಮೂಲಕ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಮುಖದಲ್ಲಿ ಹಸನಾದ ನಗು ತಂದಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಪಿಹೆಚ್‍ಡಿ ಪದವಿಗೆ ಭಾಜನರಾಗಿರುವ ಎಸ್‍ಎಸ್ ಐಟಿ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು, ಮಧ್ಯಾಹ್ನದ ನಂತರ ವಿವಿಧ ಸ್ಪರ್ಧೆಗಳು ನಡೆದವು.

‘ಕಲೋತ್ಸವ-2023’ ಕಾಲೇಜಿನ ವಿದ್ಯಾರ್ಥಿಗಳಿಗೆಂದೇ ಮೆಹೆಂದಿ, ಚರ್ಚಾ, ಚಿತ್ರ ಬಿಡಿಸುವ ಸ್ಪರ್ಧೆ, ರಸಪ್ರಶ್ನೆ, ಮ್ಯಾಡ್‍ಆ್ಯಡ್, ಫ್ಯಾಷನ್ ಶೋ, ಮಿಮಿಕ್ರಿ, ಕಿರುಚಿತ್ರ, ಬೀದಿ ನಾಟಕ, ಭಾರತೀಯ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಫೋಟೊಗ್ರಫಿ ಸೇರಿದಂತೆ ಸುಮಾರು 37ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *