Post

ಮೋದಿ ವಿರುದ್ಧ ವಾಗ್ದಾಳಿ -ಸಚಿವ ಶ್ರೀರಾಮುಲುರನ್ನು ಪೆದ್ದ ಎಂದ ಸಿದ್ದರಾಮಯ್ಯ

ಬಳ್ಳಾರಿ : ದೇಶ, ಜಾತಿ, ಧರ್ಮ, ವರ್ಗದ ಆಧಾರದ ಮೇಲೆ, ಭಾಷೆ ಆದಾರದ ಮೇಲೆ ಜನರನ್ನು ಒಡಯುವ ಕೆಲಸ ಮಾಡುತ್ತಿದ್ದಾರೆ, ಜನರ…

ರಾಜ್ಯ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಬಿರುದು – ರಾಹುಲ್ ಗಾಂಧಿ ವಾಗ್ಧಾಳಿ

ಬಳ್ಳಾರಿ: ರಾಜ್ಯದಲ್ಲಿ ನೀವು ಪೊಲೀಸ್ ಇಲಾಖೆ ಸೇರಬೇಕಾದರೆ, 80 ಲಕ್ಷ ಲಂಚ ನೀಡಬೇಕು. ಹಣವಿದ್ದರೆ ಸರ್ಕಾರಿ ಹುದ್ದೆ ಖರೀದಿಸಬಹುದು. ಹಣವಿಲ್ಲದಿದ್ದರೆ ಜೀವನಪೂರ್ತಿ…

ಕೈ ಗಳಿಗೆ ಮುತ್ತಿಡಲೇ -ನಿಮ್ಮವ ನಲ್ಲ ರೂಪು

ನನ್ನ (ಯಜಮಾನತಿಯ ತಮ್ಮನ ಹೆಂಡತಿ) sister in law ಅವರಿಗೆ ತೆರೆದ ಹೃದಯ ಚಿಕಿತ್ಸೆ (open heart surgery) ಆಗಿ, ಆಸ್ಪತ್ರೆಯಿಂದ…

ಕನ್ನಡದಲ್ಲಿ ನಾಮಫಲಕ ಅಳವಡಿಸದಿದ್ದಲ್ಲಿ ಪರವಾನಗಿ ರದ್ದು: ಜಿಲ್ಲಾಧಿಕಾರಿ

ತುಮಕೂರು : ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟುಗಳು, ಕಾರ್ಖಾನೆಗಳು, ಕಂಪನಿಗಳು ಅಕ್ಟೋಬರ್ ಅಂತ್ಯದೊಳಗಾಗಿ ಕನ್ನಡದಲ್ಲಿ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು.ತಪ್ಪಿದಲ್ಲಿ ಪರವಾನಗಿ ರದ್ದುಪಡಿಸಲಾಗುವುದು…

ನವೆಂಬರ್ 12ರಂದು ಹಿಮಾಚಲ ಪ್ರದೇಶದಲ್ಲಿ ಒಂದೇ ಹಂತದಲ್ಲಿ ಚುನಾವಣೆ

ನವದೆಹಲಿ ಅಕ್ಟೋಬರ್ 14: ಭಾರತೀಯ ಚುನಾವಣಾ ಆಯೋಗ ಇಂದು (ಅಕ್ಟೋಬರ್ 14) ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಗುಜರಾತ್ ಪ್ರದೇಶದ ವಿಧಾನಸಭಾ ಚುನಾವಣೆಯ…

ಲೋಪವಿಲ್ಲದಂತೆ ಭಾರತ ಜೋಡೋ ಯಾತ್ರೆಗೆ ಭದ್ರತಾ ವ್ಯವಸ್ಥೆ :ಎಸ್.ಪಿ.ರಾಹುಲ್‍ಕುಮಾರ್ ಶಹಪೂರ್‍ವಾಡ್‍ಗೆ ಮೆಚ್ಚಿಗೆ ಹಗಲು-ರಾತ್ರಿ ಜೋಡೋ ಯಾತ್ರೆ ಯಶಸ್ಸಿಗೆ ಶ್ರಮಿಸಿದ ಕಾಂಗ್ರೆಸ್ ಯುವ ನಾಯಕರು

ತುಮಕೂರು :ರಾಷ್ಟ್ರ ನಾಯಕರು ಬರುತ್ತಾರೆ ಎಂದರೆ ಮೊದಲು ತಲೆದೋರುವುದೇ ಅವರಿಗೆ ಭದ್ರತೆ ಹೇಗೆ ಎಂಬುದು, ರಾಹುಲ್‍ಗಾಂಧಿಯು ಭಾರತ ಜೋಡೋ ಯಾತ್ರೆಯ ಮೂಲಕ…

ಹಿಜಾಬ್ : ವಿಭಜಿತ ತೀರ್ಪು : ಮೇಲ್ಮನವಿ ಅರ್ಜಿಯನ್ನು ವಜಾ- ಹೈಕೋರ್ಟ್ ತೀರ್ಪು ರದ್ದು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ವರ್ಗಾ.

ದೆಹಲಿ: ಇಡೀ ವಿಶ್ವ ಕಾತರದಿಂದ ಎದುರು ನೋಡುತ್ತಿದ್ದ ಹಿಜಾಬ್ ವಿವಾದ (Hijab Controversy) ಕುರಿತು ಸುಪ್ರೀಂಕೋರ್ಟ್ (Supreme Court of India) ಗುರುವಾರ…

ಹಾಸ್ಯದಿಂದ ಮನಸ್ಸಿನ ಉದ್ವೇಘ ಕಡಿಮೆ ಮಾಡಿ ನೆಮ್ಮದಿ ಜೀವನ ಸಾಧ್ಯ-ಶುಭಾ ದೀದಿ

ತುಮಕೂರು : ಹಾಸ್ಯ ಭರಿತ ದೃಶ್ಯಗಳನ್ನು ನೋಡುವುದರ ಮೂಲಕ ನಿಮ್ಮ ಮನಸ್ಸಿನ ಉದ್ವೇಗವನ್ನು ದೂರ ಮಾಡಲು ಸಾಧ್ಯ. ನೀವೇ ನಿಮ್ಮ ಮನಸ್ಸಿನ…

ಬಾಲಕನೊಂದಿಗೆ ರಾಹುಲ್ ಪಾದಯಾತ್ರೆ ಮಧ್ಯೆ ರಸ್ತೆಯಲ್ಲಿಯೇ ಪುಶ್ ಅಫ್

ತುಮಕೂರು: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹಲವು ವೈರಲ್ ಫೋಟೋ ವಿಡಿಯೋಗಳಿಗೆ ಸಾಕ್ಷಿಯಾಗುತ್ತಿದೆ. ಅದೇ ರೀತಿ ಈಗ ರಾಹುಲ್…

ರಾಗಾ ಯಾತ್ರೆ ಕಲಾಕೃತಿಗಳ ಮೆರಗು ಸಿ.ಬಿ.ಶಶಿಧರ್ ನೇತೃತ್ವದಲ್ಲಿ ವಿನೂತನ ಪ್ರಯತ್ನ 

ತುಮಕೂರು: ರಾಹುಲ್ ಗಾಂಧಿ ನೇತೃತ್ವದ ಐಕ್ಯತಾ ನಡಿಗೆ ಕಲ್ಪತರು ನಾಡಿನಲ್ಲಿ ಸಂಚರಿಸುತ್ತಿದ್ದು, ತಿಪಟೂರು ಕಾಂಗ್ರೆಸ್ ಮುಖಂಡ, ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ (ಟುಡಾ ಶಶಿಧರ್) ಯಾತ್ರೆಗೆ ಕಲಾಕೃತಿಗಳ ಅರ್ಥಪೂರ್ಣ ಮೆರಗು ನೀಡಿದ್ದಾರೆ. ಸಿ.ಬಿ.ಶಶಿಧರ್ ಬೆಂಗಳೂರಿನ ಬಿ.ಕಲ್ಚರ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಐಕ್ಯತಾ ಯಾತ್ರಾ ವಿಷಯಾಧಾರಿತ ಕಲಾಕೃತಿಗಳ ಪ್ರದರ್ಶನ ಗಮನ ಸೆಳೆದಿದೆ.‌ ಸೋಮವಾರ ಹುಳಿಯಾರಿನ ಕೆಂಚಮ್ಮದೇವಸ್ಥಾನ ಕಟ್ಟೆಯಲ್ಲಿ  ರಾಹುಲ್ ಗಾಂಧಿ ಈ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದರು. ಕಲಾಕೃತಿಗಳ ಪ್ರದರ್ಶನದ ಬಗ್ಗೆ ಮಾತನಾಡಿದ ಶಶಿಧರ್, ಕರ್ನಾಟಕವನ್ನು ಪ್ರವೇಶಿಸಿರುವ ಯಾತ್ರೆಗೆ ಸಾಂಸ್ಕೃತಿಕ ಪ್ರಜ್ಞೆಯ ನೆಲೆಯಲ್ಲಿ ಚಿತ್ರಕಲಾವಿದರು ಸ್ಪಂದಿಸುತ್ತಿರುವುದು ಹೆಮ್ಮೆಯ ವಿಷಯ. ಭಾರತ್ ಜೋಡೋ ಯಾತ್ರೆಯ ವಿಷಯದ ಮೇಲೆ ಚಿತ್ರಕಲಾವಿದರಿಂದ ಕಲಾಕೃತಿಗಳನ್ನು ರೂಪಿಸಿ ಅವುಗಳ ಪ್ರದರ್ಶನ ನಡೆಸುವುದು ನಮ್ಮ ಸಾಮಾಜೊ- ಧಾರ್ಮಿಕ ಜವಬ್ದಾರಿ ಎಂದು ಹೇಳಿದರು. ರಾಜಕೀಯ ಭಯೋತ್ಪಾದನೆಯು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿದೆ. ನಾಗರಿಕರು ಅಜೆಂಡಾಗಳು ಮತ್ತು ಪಿತೂರಿಗಳಿಗೆ ಬಲಿಯಾಗಿದ್ದಾರೆ. ಸಮುದಾಯಗಳನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ದೇಶವಾಸಿಗಳ ಮನಸ್ಸು ಮತ್ತು ಹೃದಯಗಳನ್ನು ಒಂದುಗೂಡಿಸುವುದು ಇಂದಿನ ಅಗತ್ಯವಾಗಿದೆ. ‘ಭಾರತ್ ಜೋಡೋ ಯಾತ್ರೆ’ ದೇಶಾದ್ಯಂತ ವ್ಯಾಪಕವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ, ಇದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು. ಇದೀಗ ರಾಜಕೀಯ, ಸಾಮಾಜಿಕ ಮತ್ತು ಮುಖ್ಯವಾಗಿ ಸಾಂಸ್ಕೃತಿಕ ಬದಲಾವಣೆಗಳು ನವಜಾಗರಣಕ್ಕೆ ಸಜ್ಜಾಗಬೇಕಿದೆ. ಈಗ ನಡೆಯುತ್ತಿರುವ “ಭಾರತ್ ಜೋಡೋ ಯಾತ್ರೆ” ನವಜಾಗರಣ ಯುಗಕ್ಕೆ ಉತ್ತಮ ಆರಂಭ ಒದಗಿಸಿದೆ. ಈ ಪ್ರಯತ್ನದಲ್ಲಿ ಈ ಒಂದು ಹೆಜ್ಜೆ “ದ ರಿನಾಯಸೆನ್ಸ್” ಮನಸುಗಳ ಬೆಸೆಯಲು ನಾಡಿನ ಚಿತ್ರಕಲಾವಿದರ ಸ್ಪಂದನೆ ಸಿಕ್ಕಿರುವುದು ಸಂತಸದ ವಿಷಯವೆಂದರು. ರಾಹುಲ್ ಗಾಂಧಿ ಮೂಲಕ ಈ ಪ್ರದರ್ಶನಕ್ಕೆ ಚಾಲನೆ ಸಿಕ್ಕಿರುವುದು ಸಾರ್ಥಕಭಾವ ಮೂಡಿಸಿದೆ. ಕಲಾಕೃತಿಗಳ ಪ್ರದರ್ಶನವನ್ನು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಆಯೋಜಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು.