ಎಸ್.ಕೆ.ಭಗವಾನ್ ಅವರ ನಿಧನವು ಕನ್ನಡ ಚಿತ್ರಲೋಕಕ್ಕೆ ಬಹು ದೊಡ್ಡ ನಷ್ಟ- ಬರಗೂರು ರಾಮಚಂದ್ರಪ್ಪ ಕಂಬನಿ

ತುಮಕೂರು : ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಎಸ್.ಕೆ.ಭಗವಾನ್ ಅವರ ನಿಧನವು ಕನ್ನಡ ಚಿತ್ರಲೋಕಕ್ಕೆ ಬಹು ದೊಡ್ಡ ನಷ್ಟವುಂಟಾಗಿದೆ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪನವರು ಕಂಬನಿ ಮಿಡಿದಿದ್ದಾರೆ.

ಎಸ್.ಕೆ.ಭಗವಾನ್ ಅವರು ವೈಯಕ್ತಿಕವಾಗಿ ನನ್ನ ಬಗ್ಗೆ ಅಪಾರ ಪ್ರೀತಿ ವಿಶ್ವಾಸ ಹೊಂದಿದ್ದರು, ಅವರ ನಿಧನದಿಂದ ತುಂಬಾ ನೋವಾಗಿರುವುದಾಗಿ ತಿಳಿಸಿರುವ ರಾಮಚಂದ್ರಪ್ಪನವರು, ಬಹುಮುಖ್ಯವಾಗಿ ಸಿನಿಮಾ ಸಂಸ್ಕøತಿಗೆ ಭಗವಾನ್ ಅವರ ಕೊಡುಗೆ ಅಪಾರವಾದದ್ದು, ಅವರು ಚಿತ್ರರಂಗದಲ್ಲಿ ಸದಭಿರುಚಿಯ ಸಾರ್ಥಕ ಸಂಕೇತವಾಗಿದ್ದರು, ಅನೇಕ ಜನಪ್ರಿಯ ಕಾದಂಬರಿಗಳನ್ನು ಅಚ್ಚುಕಟ್ಟಾದ ಜನಪ್ರಿಯ ಸಿನಿಮಾಗಳನ್ನಾಗಿ ರೂಪಾಂತರಿಸಿದ ಅವರು, ಸಾಹಿತ್ಯ ಮತ್ತು ಸಿನಿಮಾದ ಸೇತು ಸಂಬಂಧಿಯಾಗಿದ್ದರು ಎಂದಿದ್ದಾರೆ.

ಡಾ.ರಾಜಕುಮಾರ್ ಅವರ ನಿಕಟವರ್ತಿಯಾಗಿದ್ದ ಎಸ್.ಕೆ.ಭಗವಾನ್ ಅವರು, ರಾಜ್ ಅವರನ್ನು ನಾಯಕ ಪಾತ್ರದಲ್ಲಿ ತೊಡಗಿಸಿ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಕನ್ನಡದಲ್ಲಿ ಡಾ.ರಾಜ್ ಅವರು ಅಭಿನಯಿಸಿದ “ಜೇಡರ ಬಲೆ”ಯನ್ನು ನಿರ್ದೇಶಿಸುವ ಮೂಲಕ ದೊರೆ-ಭಗವಾನ್ ಜೋಡಿ ಕನ್ನಡಕ್ಕೆ ಜೇಮ್ಸ್‍ಬಾಂಡ್ ಶೈಲಿಯ ಮೊದಲ ಸಿನಿಮಾ ನೀಡಿದ ಹೆಗ್ಗಳಿಕೆಗೆ ಪಾತ್ರರಾದರು ಎಂದಿದ್ದಾರೆ.

ಎಲ್ಲಾ ವರ್ಗದ ಎಲ್ಲ ವಯೋಮಾನದ ಪ್ರೇಕ್ಷಕರು ನೋಡುವಂತಹ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ ಭಗವಾನ್ ಅವರು ಸ್ವಯಂ ಸ್ವತಂತ್ರ ಮಾದರಿಯಾಗಿದ್ದಾರೆಂದು ಎಸ್.ಕೆ.ಭಗವಾನ್ ಅವರಿಗೆ ಬರಗೂರು ರಾಮಚಂದ್ರಪ್ಪನವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *