ತುಮಕೂರು : ಜನ ಸಾಮಾನ್ಯರಿಗೆ ಅಗತ್ಯವಾಗಿರುವ ಆರೋಗ್ಯಕಾಗಿ ಆಯುಷ್ಮಾನ್, ಕುಡಿಯುವ ನೀರಿಗಾಗಿ ಜಲಜೀವನ್ ಮತ್ತು ರೈತರಿಗಾಗಿ ಕಿಸಾನ್ ಸಮ್ಮಾನ್ನಂತಹ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿ ಜನರ ಬದುಕನ್ನು ಹಸನು ಮಾಡಿದ್ದು, ಮತ್ತೊಮ್ಮೆ ರಾಜ್ಯ ದೇಶದಲ್ಲಿ ಬಿಜೆಪಿ ಸರ್ಕಾರಗಳು ಬರಲಿವೆ ಎಂದು ಕೇಂದ್ರ ಸರ್ಕಾರದ ರಾಜ್ಯ ಕೃಷಿ ಸಚಿವರಾದ ಶೋಭ ಕರಂದ್ಲಾಜೆ ಹೇಳಿದರು.

ಅವರಿಂದು ತಾಲೂಕಿನ ಬಳ್ಳಗೆರೆ ಬಳಿ ನಡೆದ ಬಿಜೆಪಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಮಹಿಳೆಯರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವುದನ್ನು ಕಂಡು ಪ್ರತಿ ಮನೆಗೂ ನೀರು ಕೊಡುವಂತಹ ಜಲಜೀವನ್ ಯೋಜನೆ, ಕ್ಯಾನ್ಸರ್, ಹೃದ್ರೋಗದಂತಹ ಕಾಯಿಲೆಗಳಿಗೆ ಬಡವರು ಹಣ ಭರಿಸಲು ಸಾಧ್ಯವಾಗದಿರುವುದನ್ನು ಕಂಡು ಆಯುಷ್ಮಾನ್ ಭಾರತ್ ವಿಮಾ ಯೋಜನೆಯಡಿ 5ಲಕ್ಷ ರೂ.ಗಳ ಆರೋಗ್ಯ ವಿಮೆ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಗಳು ಈ ದೇಶದ ಅಭಿವೃದ್ಧಿ ದೃಷ್ಠಿಯಿಟ್ಟುಕೊಂಡು ಪ್ರಧಾನಿಯವರು ಮಾಡಿದ್ದಾರೆ ಎಂದರು.
ದೇಶದ ಜನತೆಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡುವುದರ ಮೂಲಕ ಜನರ ಪ್ರಾಣವನ್ನು ಕಾಪಾಡಿದ್ದಾರೆ ಇದೆಲ್ಲಾ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಮಾಡಲು ಸಾಧ್ಯವಾಯಿತು, ಈ ಯೋಜನೆಗಳನ್ನು ಯಾವುದೇ ಧರ್ಮ, ಜಾತಿ ನೋಡಿ ತಂದಿಲ್ಲ ಪ್ರತಿಯೊಬ್ಬ ಭಾರತೀಯರಿಗೆ ಸಿಗಬೇಕೆಂದು ಈ ಯೋಜನೆಗಳನ್ನು ತರಲಾಗಿದೆ ಎಂದರು.

ಬಿ.ಎಸ್. ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾದಾಗ ವಿಧವೆ ವೇತನವನ್ನು 200ರೂ.ಗಳಿಂದ 600ರೂ.ಗಳಿಗೆ , ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್, ವೃದ್ದರಿಗೆ ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷ ಮುಂತಾದ ಯೋಜನೆಗಳನ್ನು ಕೊಟ್ಟರು, ಯಡಿಯೂರಪ್ಪನವರು ಮಹಿಳೆಯರಲ್ಲಿಯೇ ಅವರ ತಾಯಿಯನ್ನು ಕಂಡವರು, ಇಂತಹ ಯೋಜನೆಗಳನ್ನು ಬಿಜೆಪಿ ಸರ್ಕಾರಗಳಿಂದ ಮಾತ್ರ ಕೊಡಲು ಸಾಧ್ಯ, ಬೇರೆ ಸರ್ಕಾರಗಳು ಇಂತಹ ಯೋಜನೆಗಳ ಬಗ್ಗೆ ಯೋಚನೆಯನ್ನೂ ಮಾಡಲಾರವು ಎಂದರು.
ನಾನು ವಿದ್ಯುತ್ ಮಂತ್ರಿಯಾಗಿದ್ದಾಗ ಬಿ.ಸುರೇಶ್ಗೌಡ ಅವರು ನನ್ನ ಕ್ಷೇತ್ರದ ರೈತರಿಗೆ ನಿರಂತರ ವಿದ್ಯುತ್ಗಾಗಿ ಟ್ರಾನ್ಸ್ಫಾರ್ಮರ್ಗಳನ್ನು ನೀಡುವಂತೆ ಕೇಳಿದಾಗ 500 ಕೋಟಿ ಹಣ ನೀಡಿ 20 ಸಾವಿರ ಟಿಸಿಗಳನ್ನು ರೈತರಿಗೆ ನೀಡದ್ದಲ್ಲದೆ, ಗ್ರಾಮಾಂತರ ಕ್ಷೇತ್ರದಲ್ಲಿ ಹೆಬ್ಬೂರು ಏತ ನೀರಾವರಿಗೂ ಆದ್ಯತೆ ನೀಡಿದರು, ಸಿಸಿ ರಸ್ತೆಗಳನ್ನು ಮಾಡಿಸಿದರು,ಶಾಲೆಗಳÀನ್ನು ಕಂಪ್ಯೂಟರೀಕರಣಗೊಳಿಸಿದರು, ಈ ಕ್ಷೇತ್ರದ ಜನರಿಗಾಗಿ ವಿಧಾನಸೌಧದಲ್ಲಿ ಸಚಿವರೊಂದಿಗೆ ಜಗಳವಾಡಿ ಯೋಜನೆಗಳನ್ನು ತರುತ್ತಿದ್ದರು, ಇಷ್ಟೆಲ್ಲಾ ಕೆಲಸ ಮಾಡಿದ ಶಾಸಕರನ್ನು ಸೋಲಿಸಿ ಅಭಿವೃದ್ಧಿ ಮಾಡುವ ಶಾಸಕರನ್ನು ಸೋಲಿಸಿದ ಜನ ನೀವಾಗಿದ್ದೀರಿ, 2023ರಲ್ಲಿ ಸುರೇಶ್ಗೌಡರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಿದರೆ ರೈತರ ತರಕಾರಿಗಳನ್ನು ವಿದೇಶಗಳಿಗೆ ರಫ್ತು ಮಾಡಲು ಕೋಲ್ಡ್ ಸ್ಟೋರೇಜ್ಗಳ ಪ್ರಾರಂಭ, ಮಹಿಳಾ ಪದವಿ ಕಾಲೇಜನ್ನು ತರೆಯಲಿದ್ದಾರೆ, ಈ ಹಿನ್ನಲೆಯಲ್ಲಿ ಸುರೇಶ್ಗೌಡರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಲು ತುಮಕೂರು ಗ್ರಾಮಾಂತರ ತಾಯಂದಿರು ಕಾರಣರಾಗಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಬಿ.ಸುರೇಶ್ಗೌಡ ಮಾತನಾಡಿ ಇಡೀ ದೇಶದಲ್ಲಿ ಯಾರೂ ಮಾಡಿರದಷ್ಟು ಕೆಲಸಗಳನ್ನು ಮಾಡಿದರೂ ನನ್ನನ್ನು ಸೋಲಿಸಿದ್ದೀರಿ, ನಾನು ಶಾಸಕನಾಗಿದ್ದ 10 ವರ್ಷದಲ್ಲಿ ತಿಳಿಯದೆಯೋ, ಆಥವಾ ಯಾವುದೋ ಸಂದರ್ಭದಲ್ಲಿ ದುಡಿಕಿ ಸಿಟ್ಟಿನಿಂದ ಬೈಯ್ದಿದ್ದರೆ, ಗದರಿದ್ದರೆ ತಾಯಂದಿರಾದ ನೀವು ನನ್ನನ್ನು ಕ್ಷಮಿಸಿ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿದರೆ ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಲ್ಲದೆ, ರೈತರು ಬೆಳೆದ ತರಕಾರಿ ಶೇಖರಿಸಲು ಕೋಲ್ಡ್ ಸ್ಟೋರೇಜ್ಗಳ ಪ್ರಾರಂಭ, ಮಹಿಳಾ ಪದವಿ ಕಾಲೇಜುನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾತನಾಡಿದರು. ಗ್ರಾಮಾಂತರ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಮ್ಮ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಅಂಭಿಕಾ ಹುಲಿನಾಯ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.