ಮೇ 19ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮ : ವಾಹನ ಮಾರ್ಗ ಬದಲಾವಣೆ

  ತುಮಕೂರು :  ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮೇ 19ರಂದು ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಶಿಲಾನ್ಯಾಸ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆಯ ಸಾರ್ವಜನಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಮಾರ್ಗ ಬದಲಾವಣೆ ಮತ್ತು ವಾಹನಗಳ ನಿಲುಗಡೆ ಮಾಡದಂತೆ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಅಶೋಕ್ ಕೆ.ವಿ. ಆದೇಶಿಸಿದ್ದಾರೆ. 

ಆದೇಶದನ್ವಯ ಮೇ 19ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಪ್ರವೇಶಿಸುವ ಎಲ್ಲಾ ಲಘು ವಾಹನಗಳು ನವೀನ್ ರೆಜೆನ್ಸಿ- ಹನುಮಂತಪುರ ಬ್ರಿಡ್ಜ್-ಕೋತಿತೋಪು ರಸ್ತೆ ಮೂಲಕ ಸಾಗಿ, ತುಮಕೂರು ನಗರ ಪ್ರವೇಶಿಸುವಂತೆ, ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಪ್ರವೇಶಿಸುವ ಎಲ್ಲಾ ಭಾರಿ ವಾಹನಗಳು ನವೀನ್ ರೆಜೆನ್ಸಿ ಹನುಮಂತಪುರ ಬ್ರಿಡ್ಜ್- ಸತ್ಯಮಂಗಲ ರಸ್ತೆ ಮೂಲಕ- ಶಿರಾಗೇಟ್ ಸರ್ಕಲ್ ಶಿರಾಗೇಟ್ 80 ಅಡಿ ರಸ್ತೆ- ದಿಬ್ಬರು ಸರ್ಕಲ್- ಮೂಲಕವಾಗಿ ತುಮಕೂರು ನಗರ ಪ್ರವೇಶಿಸಬೇಕು.

ಬೆಂಗಳೂರು ಕಡೆಗೆ ಹೋಗುವ ಭಾರಿ ವಾಹನಗಳು ಕೋಡಿ ಸರ್ಕಲ್-ಶಿರಾಗೇಟ್ ಸರ್ಕಲ್ ಸತ್ಯಮಂಗಲ ರಸ್ತೆ– ಎನ್.ಹೆಚ್-48 ರಸ್ತೆ ಮೂಲಕ ಬೆಂಗಳೂರು ಕಡೆಗೆ ಹೋಗುವಂತೆ, ಬೆಂಗಳೂರು ಕಡೆಗೆ ಹೋಗುವ ಲಘು ವಾಹನಗಳು ಕೋಡಿ ಸರ್ಕಲ್-ಕೋತಿತೋಪು ಸರ್ಕಲ್, ಹನುಮಂತಪುರ ಅಂಡರ್ ಬ್ರಿಡ್ಜ್-ಎನ್.ಹೆಚ್-48 ರಸ್ತೆ ಮೂಲಕ ಬೆಂಗಳೂರು ಕಡೆಗೆ ಹೋಗುವಂತೆ, ಕುಣಿಗಲ್ ಕಡೆಯಿಂದ ಮಧುಗಿರಿ/ಶಿರಾ ಕಡೆಗೆ ಹೋಗುವ ಭಾರಿ ವಾಹನಗಳು ಕುಣಿಗಲ್ ಜಂಕ್ಷನ್-ಗುಬ್ಬಿ ರಿಂಗ್ ರಸ್ತೆ – ದಿಬ್ಲೂರು ಸರ್ಕಲ್ ಶಿರಾ ಗೇಟ್ 80 ಅಡಿ ರಸ್ತೆ- ಮೂಲಕ ಮಧುಗಿರಿ/ಶಿರಾ ಕಡೆಗೆ ತೆರಳುವಂತೆ, ಮಧುಗಿರಿ/ಶಿರಾ ಕಡೆಯಿಂದ ಗುಬ್ಬಿ/ತಿಪಟೂರು/ಕುಣಿಗಲ್/ಮದ್ದೂರು ಕಡೆಗೆ ಹೋಗುವ ಭಾರಿ ವಾಹನಗಳು ಶಿರಾಗೇಟ್ 80 ಅಡಿ ರಸ್ತೆ- ದಿಬ್ಬೂರು ಸರ್ಕಲ್- ಗುಬ್ಬಿರಿಂಗ್ ರಸ್ತೆ ಜಂಕ್ಷನ್ ಮೂಲಕ ಸಾಗಬೇಕು.

ತುಮಕೂರು ನಗರದ ಬಿಹೆಚ್ ರಸ್ತೆಯ (ಬಟವಾಡಿ ಯಿಂದ ಗುಬ್ಬಿರಿಂಗ್ ರಸ್ತೆ ಜಂಕ್ಷನ್ ವರೆಗೆ) ಎರಡೂ ಬದಿಗಳಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಮತ್ತು ಸದರಿ ಸಮಯದಂದು ಭಾರಿ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿμÉೀಧಿಸಿ ಆದೇಶಿಸಲಾಗಿದೆ.

ಸಾರ್ವಜನಿಕರು ಹಾಗೂ ವಾಹನ ಚಾಲಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಿದೆ. ತಪ್ಪಿದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *