ನ.19: ಕೇಬಿಯ ‘ದಕ್ಲಕಥಾ ದೇವಿಕಾವ್ಯ’ ನಾಟಕ

ತುಮಕೂರು: ಕವಿ ಕೆ.ಬಿ.ಸಿದ್ದಯ್ಯನವರ ಕಾವ್ಯ ಕುರಿತ ‘ದಕ್ಲಕಥಾ ದೇವಿಕಾವ್ಯ’ ನಾಟಕವನ್ನು ಕೇಬಿ ಬಳಗದಿಂದ ನವೆಂಬರ್ 19ರ ಶನಿವಾರ ಸಂಜೆ 6ಗಂಟೆಗೆ ತುಮಕೂರಿನ ಡಾ.ಗುಬ್ಬಿವೀರಣ್ಣ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ತುಮಕೂರಿನ ರಾಜ್ಯ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮತಿ, ತುಮಕೂರು ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜಾತ್ಯತೀತ ಯುವ ವೇದಿಕೆ, ಜನಪರ ಚಳಿವಳಿಗಳ ಒಕ್ಕೂಟ, ದರೈಸ್ತ್ರೀ ಕಲ್ಚರಲ್ ಟ್ರಸ್ಟ್, ಆದರ್ಶ ಫೌಂಡೇಷನ್ ಸಹಕಾರದೊಂದಿಗೆ ನಾಟಕವನ್ನು ಅಯೋಜಿಸಿದ್ದು, ಪ್ರವೇಶ ಉಚಿತವಾಗಿರುತ್ತದೆ.

ಬೆಂಗಳೂರಿನ ಜಂಗಮ ಕಲೆಕ್ಟಿವ್ ತಂಡದ ಲಕ್ಷ್ಮಣ್.ಕೆ.ಪಿ. ನಾಟಕ ರಚನೆ ಮತ್ತು ನಿರ್ದೇಶನವನ್ನು ಮಾಡಿದ್ದು, ಸಹನಿರ್ದೇಶನ ಸ್ಕಂದ ಘಾಟಿ ಮತ್ತು ಶೀಹರ್ಷ ಜಿ.ಎನ್., ಡ್ರಮಟರ್ಜಿ ಮೋಹಿತ್ ವಿಕೆಸಿ, ಬೆಳಕಿನ ವಿನ್ಯಾಸ ಮಂಜು ನಾರಾಯಣ್, ವಸ್ತ್ರ ವಿನ್ಯಾಸ ಶ್ವೇತಾರಾಣಿ ಎಚ್.ಕೆ. ಮಾಡಿದ್ದಾರೆ.

ಬಿಂದು ರಕ್ಷಿದಿ, ರಮಿಕ ಚೈತ್ರ, ಸಂತೋಷ್ ದಿಂಡ್ಗೂರು, ನರಸಿಂಹರಾಜು ಬಿ.ಕೆ. ಮತ್ತು ಭರತ್ ಡಿಂಗ್ರಿ ಪಾತ್ರದಾರಿಗಳಾಗಿದ್ದಾರೆ.

Leave a Reply

Your email address will not be published. Required fields are marked *